ETV Bharat / state

ಮಹಾರಾಷ್ಟ್ರದಲ್ಲಿ ಕನ್ನಡದ ಶಿಲ್ಪಕಲೆಗಾರ... ಹುಟ್ಟೂರಿಗೆ ಕರೆಸಿಕೊಳ್ಳುವಂತೆ ಕೈಮುಗಿದು ಮನವಿ

author img

By

Published : May 2, 2020, 7:53 PM IST

ಲಾಕ್​​ಡೌನ್​​ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿರುವ ಕರ್ನಾಟಕದ ಶಿಲ್ಪಕಲೆಗಾರ ರಮೇಶ್​​ ಕಾಂಬಳೆ ತಮ್ಮನ್ನು ಹುಟ್ಟೂರು ಚಿಕ್ಕೋಡಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

kannadiga ramesh lockdown in maharashtra
ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡ ಕನ್ನಡದ ಶಿಲ್ಪಕಲೆಗಾರ ರಮೇಶ್

ಚಿಕ್ಕೋಡಿ: ಹೊರರಾಜ್ಯಗಳಿಗೆ ದುಡಿಯಲು ಹೋದ ರಾಜ್ಯದ ಜನರ ಪರಿಸ್ಥಿತಿ ಲಾಕ್​ಡೌನ್​​ನಿಂದಾಗಿ ಹೇಳತೀರದಾಗಿದೆ.

ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡ ಕನ್ನಡದ ಶಿಲ್ಪಕಲೆಗಾರ ರಮೇಶ್
ಕನ್ನಡದ ಶಿಲ್ಪಕಲೆಗಾರ ರಮೇಶ್​​ ಕಾಂಬಳೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದವರಾದ ಇವರು ಮಹಾರಾಷ್ಟ್ರದ ಅಮರಾವತಿ ನಗರದ ವಡಾಯಿ ಎಂಬ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆಯುವ ಪ್ರವಾಸೋದ್ಯಮ ಅಭಿವೃದ್ಧಿಯ ಗಾರ್ಡನ್​ನಲ್ಲಿ ವಿವಿಧ ಶಿಲ್ಪಕಲೆಗಳ ಕೆಲಸಕ್ಕೆ ತೆರಳಿದ್ದರು.
ಈ ವೇಳೆ ದೇಶಾದ್ಯಂತ ಕೊರೊನಾ ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಕಳೆದ 40 ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದು, ರಾಜ್ಯಕ್ಕೆ ಆಗಮಿಸಲು ಸರ್ಕಾರ ಅನುಕೂಲ ಕಲ್ಪಿಸಬೇಕು ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಮನೆಯಲ್ಲಿರುವ ವೃದ್ಧ ತಂದೆ-ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಆಗಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಮಹಾರಾಷ್ಟ್ರದ ಕಮಿಷನರ್ ಜೊತೆ ಮಾತನಾಡಿ ನನಗೆ ಮಜಲಟ್ಟಿ ಗ್ರಾಮದ ಕಡೆ ಬರಲು ಅನಕೂಲ‌ ಮಾಡಿ ಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.

ಚಿಕ್ಕೋಡಿ: ಹೊರರಾಜ್ಯಗಳಿಗೆ ದುಡಿಯಲು ಹೋದ ರಾಜ್ಯದ ಜನರ ಪರಿಸ್ಥಿತಿ ಲಾಕ್​ಡೌನ್​​ನಿಂದಾಗಿ ಹೇಳತೀರದಾಗಿದೆ.

ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡ ಕನ್ನಡದ ಶಿಲ್ಪಕಲೆಗಾರ ರಮೇಶ್
ಕನ್ನಡದ ಶಿಲ್ಪಕಲೆಗಾರ ರಮೇಶ್​​ ಕಾಂಬಳೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದವರಾದ ಇವರು ಮಹಾರಾಷ್ಟ್ರದ ಅಮರಾವತಿ ನಗರದ ವಡಾಯಿ ಎಂಬ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆಯುವ ಪ್ರವಾಸೋದ್ಯಮ ಅಭಿವೃದ್ಧಿಯ ಗಾರ್ಡನ್​ನಲ್ಲಿ ವಿವಿಧ ಶಿಲ್ಪಕಲೆಗಳ ಕೆಲಸಕ್ಕೆ ತೆರಳಿದ್ದರು.
ಈ ವೇಳೆ ದೇಶಾದ್ಯಂತ ಕೊರೊನಾ ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಕಳೆದ 40 ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದು, ರಾಜ್ಯಕ್ಕೆ ಆಗಮಿಸಲು ಸರ್ಕಾರ ಅನುಕೂಲ ಕಲ್ಪಿಸಬೇಕು ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಮನೆಯಲ್ಲಿರುವ ವೃದ್ಧ ತಂದೆ-ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಆಗಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಮಹಾರಾಷ್ಟ್ರದ ಕಮಿಷನರ್ ಜೊತೆ ಮಾತನಾಡಿ ನನಗೆ ಮಜಲಟ್ಟಿ ಗ್ರಾಮದ ಕಡೆ ಬರಲು ಅನಕೂಲ‌ ಮಾಡಿ ಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.