ಬೆಳಗಾವಿ : ಕುಂದಾನಗರಿಯಲ್ಲಿ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡ ಉತ್ತಮ ಆರಂಭ ಪಡೆದಿದೆ.
ಇಲ್ಲಿನ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಇಂದಿನಿಂದ ಭಾರತ-ಎ ಹಾಗೂ ಶ್ರೀಲಂಕಾ-ಎ ತಂಡಗಳ ಮಧ್ಯೆ ಪಂದ್ಯ ಆರಂಭವಾಗಿದೆ. ಭಾರತ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.
ಭೋಜನ ವಿರಾಮದ ಅಂತ್ಯಕ್ಕೆ ಭಾರತ ತಂಡ 25 ಒವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 113 ರನ್ ಪೇರಿಸಿದೆ. ಆರಂಭಿಕರಾದ ಅಭಿಮನ್ಯು (65) ಹಾಗೂ ಪ್ರಿಯಾಂಕ್ ಪಾಂಚಾಲ್ (42) ರನ್ ಪೇರಿಸಿದ್ದಾರೆ. ಭಾರತದ ರಕ್ಷಣಾತ್ಮಕ ಆಟದ ಮುಂದೆ ಲಂಕಾ ಬೌಲರ್ಗಳು ಹೈರಾಣಾದರು.