ETV Bharat / state

ಬೆಳಗಾವಿಯಲ್ಲಿ ಕೊರೊ‌ನಾ 'ಮಹಾ' ಅಬ್ಬರ : ಗಡಿಯಲ್ಲಿ ನಿರ್ಲಕ್ಷ್ಯ.. ಜನರಿಗೆ ಸಂಕಷ್ಟ

author img

By

Published : Mar 21, 2021, 6:52 AM IST

Updated : Mar 21, 2021, 10:14 AM IST

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್, ಕಾಗವಾಡ ಚೆಕ್​ ಪೋಸ್ಟ್​ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರು ಬಿಂದಾಸ್ ಆಗಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಕಾಗವಾಡ ಚೆಕ್‌ಪೋಸ್ಟ್ ಬಳಿ ಗಡಿಯವರೆಗೆ ಆಟೋ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್​ನಲ್ಲಿ ಬಂದು ಅಲ್ಲಿಂದ ಚೆಕ್‌ಪೋಸ್ಟ್ ಬಳಿ ನಡೆದುಕೊಂಡು ಬರುತ್ತಿದ್ದಾರೆ.

Increasing corona infection in Belgavi district
ಕುಂದಾನಗರಿಯಲ್ಲಿ ಕೊರೊ‌ನಾ 'ಮಹಾ'ಅಬ್ಬರ

ಬೆಳಗಾವಿ : ಮಹಾರಾಷ್ಟ್ರದಲ್ಲಿ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೊನಾ ರಾಜ್ಯಕ್ಕೆ ಅಂಟದಿರಲಿ ಎಂದು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿ, ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹಿಡಿದು ಬನ್ನಿ ಅಂತ ಹೇಳಿದರೂ ಜನ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದು ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಭೀತಿ ಶುರುವಾಗಿದೆ.‌

ಬೆಳಗಾವಿಯಲ್ಲಿ ಕೊರೊ‌ನಾ 'ಮಹಾ' ಅಬ್ಬರ

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್, ಕಾಗವಾಡ ಚೆಕ್​ಪೋಸ್ಟ್​ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರು ಬಿಂದಾಸ್ ಆಗಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಕಾಗವಾಡ ಚೆಕ್‌ಪೋಸ್ಟ್ ಬಳಿ ಗಡಿಯವರೆಗೆ ಆಟೋ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್​ನಲ್ಲಿ ಬಂದು ಅಲ್ಲಿಂದ ಚೆಕ್‌ಪೋಸ್ಟ್ ಬಳಿ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 37 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ‌‌. ಅದರಲ್ಲೂ ನಗರದ ವಿಶ್ವೇಶ್ವರಯ್ಯ ನಗರದಲ್ಲಿ ಒಂದೇ ಕುಟುಂಬ ಹಾಗೂ ಆ ಕುಟುಂಬದ ಸಂಬಂಧಿಕರಲ್ಲಿ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ವಿಶ್ವೇಶ್ವರಯ್ಯ ನಗರದ ಪ್ರತ್ಯೇಕ ಎರಡು ಕಡೆ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಸೋಂಕಿತರ ನಿವಾಸದ ಸುತ್ತ 50 ಮೀಟರ್ ವ್ಯಾಪ್ತಿ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಲಾಗಿದ್ದು, ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ ಅನಗೋಳ ಪ್ರದೇಶದಲ್ಲಿ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಘೋಷಿಸಲಾಗಿದೆ.

ಇನ್ನು ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದ ನೂರಾರು ವ್ಯಾಪಾರಸ್ಥರು ಆಗಮಿಸುತ್ತಾರೆ. ಇಲ್ಲಿ ಯಾವುದೇ ರೀತಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ಕಟ್ಟುನಿಟ್ಟಾದ ನಿಯಮ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಮತ್ತೊಂದೆಡೆ ಬೆಳಗಾವಿಯ ಮಾರುಕಟ್ಟೆಗಳಲ್ಲೂ ಜನ ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಗಣಪತಿ ಬೀದಿಯ ಮಾರ್ಕೆಟ್​ನಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಡ್ರೈವ್ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರಿಗೆ 100 ರೂ. ದಂಡ ವಿಧಿಸಲಾಗುತ್ತಿದೆ. ಇನ್ನು ಸಾರ್ವಜನಿಕರನ್ನು ಕೇಳಿದರೆ ಮಾಸ್ಕ್ ಧರಿಸಬೇಕಿತ್ತು ಅರ್ಜೆಂಟ್‌ನಲ್ಲಿ ಮರೆತು ಬಂದ್ವಿ, ಮಾಸ್ಕ್ ಜೇಬಿನಲ್ಲೇ ಇತ್ತು ಆದರೆ ಹಾಕಿಕೊಳ್ಳೋದು ಮರೆತು ಬಿಟ್ಟೆ ಅಂತ ನಿರ್ಲಕ್ಷ್ಯ ಮಾತುಗಳನ್ನಾಡುತ್ತಿದ್ದಾರೆ.

ಓದಿ : 8ನೇ ತರಗತಿಗೆ ಶಾಲೆ ಬಿಟ್ಟಿದ್ದವನಿಂದ ಸಿಸೇರಿಯನ್ ಹೆರಿಗೆ... ಉತ್ತರ ಪ್ರದೇಶದಲ್ಲಿ ತಾಯಿ-ಮಗು ದಾರುಣ ಸಾವು

ಒಟ್ಟಿನಲ್ಲಿ ಸರ್ಕಾರವೇನೊ ಟಫ್ ರೂಲ್ಸ್ ಜಾರಿಗೆ ತಂದು ಜನರ ರಕ್ಷಣೆಗೆ ಮುಂದಾಗಿದ್ದರೂ, ಜನ ಮಾತ್ರ ಸರ್ಕಾರದ ರೂಲ್ಸ್ ರೆಗ್ಯೂಲೇಷನ್​ಗೂ ನಮಗೂ ಸಂಬಂಧವೇ ಇಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನರ ನಿಷ್ಕಾಳಜಿ ಹೀಗೆ ಮುಂದುವರೆದರೆ ಬೆಳಗಾವಿಗೆ ಮುಂದೊಂದು ದಿನ ಅಪಾಯ ಎದುರಾಗಬಹುದು.

ಬೆಳಗಾವಿ : ಮಹಾರಾಷ್ಟ್ರದಲ್ಲಿ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೊನಾ ರಾಜ್ಯಕ್ಕೆ ಅಂಟದಿರಲಿ ಎಂದು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿ, ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹಿಡಿದು ಬನ್ನಿ ಅಂತ ಹೇಳಿದರೂ ಜನ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದು ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಭೀತಿ ಶುರುವಾಗಿದೆ.‌

ಬೆಳಗಾವಿಯಲ್ಲಿ ಕೊರೊ‌ನಾ 'ಮಹಾ' ಅಬ್ಬರ

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್, ಕಾಗವಾಡ ಚೆಕ್​ಪೋಸ್ಟ್​ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರು ಬಿಂದಾಸ್ ಆಗಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಕಾಗವಾಡ ಚೆಕ್‌ಪೋಸ್ಟ್ ಬಳಿ ಗಡಿಯವರೆಗೆ ಆಟೋ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್​ನಲ್ಲಿ ಬಂದು ಅಲ್ಲಿಂದ ಚೆಕ್‌ಪೋಸ್ಟ್ ಬಳಿ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 37 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ‌‌. ಅದರಲ್ಲೂ ನಗರದ ವಿಶ್ವೇಶ್ವರಯ್ಯ ನಗರದಲ್ಲಿ ಒಂದೇ ಕುಟುಂಬ ಹಾಗೂ ಆ ಕುಟುಂಬದ ಸಂಬಂಧಿಕರಲ್ಲಿ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ವಿಶ್ವೇಶ್ವರಯ್ಯ ನಗರದ ಪ್ರತ್ಯೇಕ ಎರಡು ಕಡೆ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಸೋಂಕಿತರ ನಿವಾಸದ ಸುತ್ತ 50 ಮೀಟರ್ ವ್ಯಾಪ್ತಿ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಲಾಗಿದ್ದು, ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ ಅನಗೋಳ ಪ್ರದೇಶದಲ್ಲಿ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಘೋಷಿಸಲಾಗಿದೆ.

ಇನ್ನು ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದ ನೂರಾರು ವ್ಯಾಪಾರಸ್ಥರು ಆಗಮಿಸುತ್ತಾರೆ. ಇಲ್ಲಿ ಯಾವುದೇ ರೀತಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ಕಟ್ಟುನಿಟ್ಟಾದ ನಿಯಮ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಮತ್ತೊಂದೆಡೆ ಬೆಳಗಾವಿಯ ಮಾರುಕಟ್ಟೆಗಳಲ್ಲೂ ಜನ ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಗಣಪತಿ ಬೀದಿಯ ಮಾರ್ಕೆಟ್​ನಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಡ್ರೈವ್ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರಿಗೆ 100 ರೂ. ದಂಡ ವಿಧಿಸಲಾಗುತ್ತಿದೆ. ಇನ್ನು ಸಾರ್ವಜನಿಕರನ್ನು ಕೇಳಿದರೆ ಮಾಸ್ಕ್ ಧರಿಸಬೇಕಿತ್ತು ಅರ್ಜೆಂಟ್‌ನಲ್ಲಿ ಮರೆತು ಬಂದ್ವಿ, ಮಾಸ್ಕ್ ಜೇಬಿನಲ್ಲೇ ಇತ್ತು ಆದರೆ ಹಾಕಿಕೊಳ್ಳೋದು ಮರೆತು ಬಿಟ್ಟೆ ಅಂತ ನಿರ್ಲಕ್ಷ್ಯ ಮಾತುಗಳನ್ನಾಡುತ್ತಿದ್ದಾರೆ.

ಓದಿ : 8ನೇ ತರಗತಿಗೆ ಶಾಲೆ ಬಿಟ್ಟಿದ್ದವನಿಂದ ಸಿಸೇರಿಯನ್ ಹೆರಿಗೆ... ಉತ್ತರ ಪ್ರದೇಶದಲ್ಲಿ ತಾಯಿ-ಮಗು ದಾರುಣ ಸಾವು

ಒಟ್ಟಿನಲ್ಲಿ ಸರ್ಕಾರವೇನೊ ಟಫ್ ರೂಲ್ಸ್ ಜಾರಿಗೆ ತಂದು ಜನರ ರಕ್ಷಣೆಗೆ ಮುಂದಾಗಿದ್ದರೂ, ಜನ ಮಾತ್ರ ಸರ್ಕಾರದ ರೂಲ್ಸ್ ರೆಗ್ಯೂಲೇಷನ್​ಗೂ ನಮಗೂ ಸಂಬಂಧವೇ ಇಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನರ ನಿಷ್ಕಾಳಜಿ ಹೀಗೆ ಮುಂದುವರೆದರೆ ಬೆಳಗಾವಿಗೆ ಮುಂದೊಂದು ದಿನ ಅಪಾಯ ಎದುರಾಗಬಹುದು.

Last Updated : Mar 21, 2021, 10:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.