ETV Bharat / state

ಸುರೇಶ್​​ ಅಂಗಡಿಯವರಂತೆ ನಾನು ಕೂಡ ಉತ್ತಮ ಕೆಲಸ ಮಾಡುತ್ತೇನೆ: ಮಂಗಳಾ ಅಂಗಡಿ

author img

By

Published : Mar 25, 2021, 10:59 PM IST

Updated : Mar 26, 2021, 9:33 AM IST

ಕಾರ್ಯಕರ್ತರ ಆಶಯದಂತೆ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ. ಅಂಗಡಿಯವರಂತೆ ನಾನು ಕೂಡ ಉತ್ತಮ ಕೆಲಸ ಮಾಡುತ್ತೇನೆ. ಪತಿ ದಿ.ಸುರೇಶ್​ ಅಂಗಡಿಯವರ ಜವಾಬ್ದಾರಿ ನೀಗಿಸುವ ಶಕ್ತಿ ನನಗೆ ಸಿಕ್ಕಿದೆ‌.ಅದನ್ನು ನಾನು‌ ಸರಿಯಾಗಿ ನೀಗಿಸಿಕೊಂಡು ಹೋಗುತ್ತೇನೆ ಎಂದು ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಹೇಳಿದ್ದಾರೆ.

ಬೆಳಗಾವಿ ಬಿಜೆಪಿ ಟಿಕೆಟ್ ಅಭ್ಯರ್ಥಿ ಮಂಗಲಾ ಅಂಗಡಿ
ಬೆಳಗಾವಿ ಬಿಜೆಪಿ ಟಿಕೆಟ್ ಅಭ್ಯರ್ಥಿ ಮಂಗಲಾ ಅಂಗಡಿ

ಬೆಳಗಾವಿ: ದಿ. ಸುರೇಶ್​​ ಅಂಗಡಿಯವರು ಕಂಡ ಕನಸನ್ನು ಪೂರ್ತಿ ಮಾಡುತ್ತೇನೆ. ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿ ಮಾಡುವ ಕೆಲಸ ಮಾಡಿ, ಅಂಗಡಿಯವರ ಹೆಸರು ಉಳಿಸುತ್ತೇನೆ ಎಂದು ದಿ. ಸುರೇಶ ಅಂಗಡಿಯವರ ಪತ್ನಿ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಬೆಳಗಾವಿ ಬೈಎಲೆಕ್ಷನ್‍ಗೆ ನನಗೆ ಟಿಕೆಟ್ ನೀಡಿದ್ದಕ್ಕಾಗಿ ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ಎಲ್ಲ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅದರಂತೆ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಮಂಗಳಾ ಅಂಗಡಿ ಪ್ರತಿಕ್ರಿಯೆ

ಇದನ್ನೂ ಓದಿ: ಉಪಚುನಾವಣೆ: ಸುರೇಶ್​ ಅಂಗಡಿ ಪತ್ನಿಗೆ ಬೆಳಗಾವಿ ಟಿಕೆಟ್ ನೀಡಿದ ಬಿಜೆಪಿ

ಕಾರ್ಯಕರ್ತರ ಆಶಯದಂತೆ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ. ಅಂಗಡಿಯವರಂತೆ ನಾನು ಕೂಡ ಉತ್ತಮ ಕೆಲಸ ಮಾಡುತ್ತೇನೆ. ಪತಿ ದಿ.ಸುರೇಶ ಅಂಗಡಿಯವರ ಜವಾಬ್ದಾರಿ ನೀಗಿಸುವ ಶಕ್ತಿ ನನಗೆ ಸಿಕ್ಕಿದೆ‌.ಅದನ್ನು ನಾನು‌ ಸರಿಯಾಗಿ ನೀಗಿಸಿಕೊಂಡು ಹೋಗುತ್ತೇನೆ.ದುಃಖ ಖುಷಿ ಎರಡು ಸೇರಿ ಒಮ್ಮೆಲೆ ಬಂದಿದೆ. ಪತಿ ಕಂಡ ಕನಸನ್ನು ಪೂರ್ತಿ ಮಾಡುತ್ತೇನೆ.ಅವರಂತೆ ಕ್ಷೇತ್ರದಲ್ಲಿ ಹೆಸರು ಮಾಡುತ್ತೇನೆ. ಜೊತೆಗೆ ಕಾರ್ಯಕರ್ತರ ಜೊತೆಗೂಡಿ ಹೋಗುತ್ತೇನೆ. ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ‌ ಎಂದರು.

ಬೆಳಗಾವಿ: ದಿ. ಸುರೇಶ್​​ ಅಂಗಡಿಯವರು ಕಂಡ ಕನಸನ್ನು ಪೂರ್ತಿ ಮಾಡುತ್ತೇನೆ. ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿ ಮಾಡುವ ಕೆಲಸ ಮಾಡಿ, ಅಂಗಡಿಯವರ ಹೆಸರು ಉಳಿಸುತ್ತೇನೆ ಎಂದು ದಿ. ಸುರೇಶ ಅಂಗಡಿಯವರ ಪತ್ನಿ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಬೆಳಗಾವಿ ಬೈಎಲೆಕ್ಷನ್‍ಗೆ ನನಗೆ ಟಿಕೆಟ್ ನೀಡಿದ್ದಕ್ಕಾಗಿ ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ಎಲ್ಲ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅದರಂತೆ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಮಂಗಳಾ ಅಂಗಡಿ ಪ್ರತಿಕ್ರಿಯೆ

ಇದನ್ನೂ ಓದಿ: ಉಪಚುನಾವಣೆ: ಸುರೇಶ್​ ಅಂಗಡಿ ಪತ್ನಿಗೆ ಬೆಳಗಾವಿ ಟಿಕೆಟ್ ನೀಡಿದ ಬಿಜೆಪಿ

ಕಾರ್ಯಕರ್ತರ ಆಶಯದಂತೆ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ. ಅಂಗಡಿಯವರಂತೆ ನಾನು ಕೂಡ ಉತ್ತಮ ಕೆಲಸ ಮಾಡುತ್ತೇನೆ. ಪತಿ ದಿ.ಸುರೇಶ ಅಂಗಡಿಯವರ ಜವಾಬ್ದಾರಿ ನೀಗಿಸುವ ಶಕ್ತಿ ನನಗೆ ಸಿಕ್ಕಿದೆ‌.ಅದನ್ನು ನಾನು‌ ಸರಿಯಾಗಿ ನೀಗಿಸಿಕೊಂಡು ಹೋಗುತ್ತೇನೆ.ದುಃಖ ಖುಷಿ ಎರಡು ಸೇರಿ ಒಮ್ಮೆಲೆ ಬಂದಿದೆ. ಪತಿ ಕಂಡ ಕನಸನ್ನು ಪೂರ್ತಿ ಮಾಡುತ್ತೇನೆ.ಅವರಂತೆ ಕ್ಷೇತ್ರದಲ್ಲಿ ಹೆಸರು ಮಾಡುತ್ತೇನೆ. ಜೊತೆಗೆ ಕಾರ್ಯಕರ್ತರ ಜೊತೆಗೂಡಿ ಹೋಗುತ್ತೇನೆ. ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ‌ ಎಂದರು.

Last Updated : Mar 26, 2021, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.