ETV Bharat / state

ಉಗಾರ-ಕುಡಚಿ ಸೇತುವೆ ಜಲಾವೃತ: ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸ್ಥಬ್ಧ

ಉಗಾರ - ಕುಡಚಿ ಸೇತುವೆ ಮಹಾರಾಷ್ಟ್ರ-ಕರ್ನಾಟಕದ ಸಂಪರ್ಕ ಕೊಂಡಿಯಾಗಿದ್ದು ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಭಾರಿ ಮಳಎಯ ಕಾರಣ ಸೇತುವೆ ಮೇಲೆಲ್ಲಾ ನೀರು ಹರಿಯುತ್ತಿದ್ದು ಈ ಮಾರ್ಗ ಬಂದ್​ ಆಗಿದೆ. ಹಾಗಾಗಿ ಸದ್ಯ ಮಹಾರಾಷ್ಟ್ರಕ್ಕೆ ಹೋಗುವುದಕ್ಕೆ ಇದ್ದ ಏಕೈಕ ಸಂಪರ್ಕ ಕಡಿತಗೊಂಡಿದೆ.

author img

By

Published : Sep 7, 2019, 1:19 PM IST

ಕುಡಚಿ ಸೇತುವೆ

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಡಚಿ ಸೇತುವೆ ಜಲಾವೃತವಾಗಿದೆ. ಪರಿಣಾಮ ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಬಂದ್‌ ಆಗಿದೆ.

ಬೆಳಗಾವಿ ಜಿಲ್ಲೆಯ ಕಾಗಾವಾಡ ತಾಲೂಕಿನ ಕುಡಚಿ ಸೇತುವೆ ಹಾಗು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.

ಕುಡಚಿ ಸೇತುವೆ ಜಲಾವೃತ

ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ :

ಬಾಗಲಕೋಟ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳನ್ನು ಸಂಪರ್ಕಿಸಿ ವ್ಯಾಪಾರ ವಹಿವಾಟು ನಡೆಸಲು ಈ ರಸ್ತೆ ಅತ್ಯಂತ ಅನುಕೂಲವಾಗಿತ್ತು. ಈ ಮಾರ್ಗ ಕಡಿತಗೊಂಡ ಹಿನ್ನೆಲೆಯಲ್ಲಿ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೊದಗಿದ್ದು ಜನರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.

ಈ ಉಗಾರ - ಕುಡಚಿ ಸೇತುವೆ ಮಹಾ-ಕರ್ನಾಟಕದ ಕೊಂಡಿಯಾಗಿ ಸಂಚರಿಸುವ ಏಕೈಕ ಮಾರ್ಗವಾಗಿದ್ದು‌ ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ಮಾರ್ಗ ಬಂದ್​ ಆಗಿದ್ದು ಈಗ ಮಹಾರಾಷ್ಟ್ರಕ್ಕೆ ಹೋಗಬೇಕಾದ ಸಂಪರ್ಕ ಇಲ್ಲದಂತಾಗಿದೆ.

ಈ ಮಾರ್ಗದ ಮೂಲಕ ಬಾಗಲಕೋಟ, ಜಮಖಂಡಿ, ಮುಧೋಳ ನಿವಾಸಿಗಳು ಮಹಾರಾಷ್ಟ್ರದ ಮೀರಜ್ ಪಟ್ಟಣಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದ್ರೀಗ ಈ ಸಂಪರ್ಕ ಸ್ಥಗಿತಗೊಂಡಿದ್ದು ಈ ಭಾಗದ ಜನ ಪರದಾಡುವಂತಾಗಿದೆ.

ಸೇತುವೆಯನ್ನು ಮೇಲ್ದರ್ಜೆಗೇರಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಸಹ ಜನ ಪ್ರತಿನಿಧಿಗಳು ಕಾಳಜಿವಹಿಸಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಡಚಿ ಸೇತುವೆ ಜಲಾವೃತವಾಗಿದೆ. ಪರಿಣಾಮ ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಬಂದ್‌ ಆಗಿದೆ.

ಬೆಳಗಾವಿ ಜಿಲ್ಲೆಯ ಕಾಗಾವಾಡ ತಾಲೂಕಿನ ಕುಡಚಿ ಸೇತುವೆ ಹಾಗು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.

ಕುಡಚಿ ಸೇತುವೆ ಜಲಾವೃತ

ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ :

ಬಾಗಲಕೋಟ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳನ್ನು ಸಂಪರ್ಕಿಸಿ ವ್ಯಾಪಾರ ವಹಿವಾಟು ನಡೆಸಲು ಈ ರಸ್ತೆ ಅತ್ಯಂತ ಅನುಕೂಲವಾಗಿತ್ತು. ಈ ಮಾರ್ಗ ಕಡಿತಗೊಂಡ ಹಿನ್ನೆಲೆಯಲ್ಲಿ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೊದಗಿದ್ದು ಜನರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.

ಈ ಉಗಾರ - ಕುಡಚಿ ಸೇತುವೆ ಮಹಾ-ಕರ್ನಾಟಕದ ಕೊಂಡಿಯಾಗಿ ಸಂಚರಿಸುವ ಏಕೈಕ ಮಾರ್ಗವಾಗಿದ್ದು‌ ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ಮಾರ್ಗ ಬಂದ್​ ಆಗಿದ್ದು ಈಗ ಮಹಾರಾಷ್ಟ್ರಕ್ಕೆ ಹೋಗಬೇಕಾದ ಸಂಪರ್ಕ ಇಲ್ಲದಂತಾಗಿದೆ.

ಈ ಮಾರ್ಗದ ಮೂಲಕ ಬಾಗಲಕೋಟ, ಜಮಖಂಡಿ, ಮುಧೋಳ ನಿವಾಸಿಗಳು ಮಹಾರಾಷ್ಟ್ರದ ಮೀರಜ್ ಪಟ್ಟಣಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದ್ರೀಗ ಈ ಸಂಪರ್ಕ ಸ್ಥಗಿತಗೊಂಡಿದ್ದು ಈ ಭಾಗದ ಜನ ಪರದಾಡುವಂತಾಗಿದೆ.

ಸೇತುವೆಯನ್ನು ಮೇಲ್ದರ್ಜೆಗೇರಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಸಹ ಜನ ಪ್ರತಿನಿಧಿಗಳು ಕಾಳಜಿವಹಿಸಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.

Intro:ಕುಡಚಿ ಸೇತುವೆ ಜಲಾವೃತ : ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಖಡಿತ
Body:
ಚಿಕ್ಕೋಡಿ :

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಗೆ ಕುಡಚಿ ಸೇತುವೆ ಜಲಾವೃತಗೊಂಡಿದ್ದು ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಖಡಿತವಾಗಿದೆ

ಬೆಳಗಾವಿ ಜಿಲ್ಲೆಯ ಕಾಗಾವಾಡ ತಾಲೂಕಿನ ಕುಡಚಿ ಸೇತುವೆ, ಕೃಷ್ಣಾ ನದಿಗೆ ಅಡ್ಡಲಾಗಿರುವ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.

ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ :

ಬಾಗಲಕೋಟ, ಜಮಖಂಡಿ, ಮುಧೋಳ, ಮಹಾಲಿಂಗಪೂರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳಿಂದ ವ್ಯಾಪಾರ ವಹಿವಾಟುಗಳಿಗೆ ಈ ರಸ್ತೆ ಬಹಳ ಅನುಕೂಲವಾಗಿದ್ದು, ಈ ಮಾರ್ಗ ಕಡಿತಗೊಂಡಿರುವುದರಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೋದಗಿದ್ದು ಗುಡ್ಡ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.

ಈ ಉಗಾರ - ಕುಡಚಿ ಸೇತುವೆ ಮಹಾ-ಕರ್ನಾಟಕದ ಕೊಂಡಿಯಾಗಿ ಸಂಚರಿಸುವ ಏಕೈಕ ಮಾರ್ಗವಾಗಿದ್ದು‌ ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಈ ಮಾರ್ಗ ಬಂದ ಆಗಿದ್ದು ಈಗ ಮಹಾರಾಷ್ಟ್ರಕ್ಕೆ ಹೋಗಬೇಕಾದರೆ ಸಂಪರ್ಕ ಇಲ್ಲದಂತಾಗಿದೆ.

ಈ ಮಾರ್ಗದಲ್ಲಿ ಬಾಗಲಕೋಟ, ಜಮಖಂಡಿ, ಮುಧೋಳ ಮಾರ್ಗದ ಜನರು‌ ಮಹಾರಾಷ್ಟ್ರದ ಮಿರಜ ಪಟ್ಟಣಕ್ಕೆ ದಿನಂಪ್ರತಿ ನೂರಾರು ಜನ ಆಸ್ಪತ್ರೆಗೆ ತೋರಿಸಿಕೊಳ್ಳಲು ಬರುತ್ತಿದ್ದರು. ಆದರೆ, ಈಗ ಈ ಸಂಪರ್ಕ ಕಡಿತವಾಗಿರೊದರಿಂದ ಈಗ ಈ ಭಾಗದ ಜನ ಪರದಾಡುವಂತಾಗಿದೆ.

ಈ ಮಾರ್ಗದ ಸೇತುವೆಯನ್ನು ಮೇಲ್ದರ್ಜೆಗೆ ಎರಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಸಹ ಇಲ್ಲಿನ ಜನ ಪ್ರತಿನಿಧಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದರು.


Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.