ETV Bharat / state

ಶಶಿಕಲಾ ಜೊಲ್ಲೆ ಒಡೆತನದ ಜೋತಿ ಬಾ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು!!

author img

By

Published : Nov 9, 2020, 8:10 PM IST

ಸಚವೆ ಶಶಿಕಾಲಾ ಜೊಲ್ಲೆ ಒಡೆತನದಲ್ಲಿರುವ ಜ್ಯೋತಿ ಬಾ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಆಭರಣರಗಳು ಹಾಗೂ ಹುಂಡಿಯಲ್ಲಿರುವ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಜ್ಯೋತಿಬಾ ದೇವಸ್ಥಾನ
ಜ್ಯೋತಿಬಾ ದೇವಸ್ಥಾನ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ (ನನದಿ ಕ್ಯಾಂಪಸ್) ಆವರಣದಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ, ದೇವರ ಲಕ್ಷಾಂತರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸಚಿವೆ ಶಶಿಕಾಲಾ ಜೊಲ್ಲೆ ಒಡೆತನದಲ್ಲಿರುವ ಜ್ಯೋತಿ ಬಾ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಆಭರಣರಗಳು ಹಾಗೂ ಹುಂಡಿಯಲ್ಲಿರುವ ಹಣ ಹೀಗೆ ಸುಮಾರು 14,97,000 ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಸುಕಿನ ಜಾವದಲ್ಲಿ ಸ್ಥಳಕ್ಕೆ ಡಿವೈಎಸ್‌ಪಿ ಮನೋಜಕುಮಾರ, ಸಿಪಿಐಆರ್​ಆರ್ ಪಾಟೀಲ ಹಾಗೂ ಸದಲಗಾ ಪಿಎಸ್‌ಐಆರ್ ವಾಯ್ ಬಿಳಗಿ ಪೊಲೀಸರು ಭೇಟಿ ನೀಡಿದ್ದು, ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಅದಲ್ಲದೆ ಶ್ವಾನದಳ ಮತ್ತು ಬೆರಳು ಮುದ್ರೆಗಳಿಂದ ಪರಿಶೀಲಿಸಿದ್ದಾರೆ. ಈ ಪ್ರಕರಣದ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ (ನನದಿ ಕ್ಯಾಂಪಸ್) ಆವರಣದಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ, ದೇವರ ಲಕ್ಷಾಂತರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸಚಿವೆ ಶಶಿಕಾಲಾ ಜೊಲ್ಲೆ ಒಡೆತನದಲ್ಲಿರುವ ಜ್ಯೋತಿ ಬಾ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಆಭರಣರಗಳು ಹಾಗೂ ಹುಂಡಿಯಲ್ಲಿರುವ ಹಣ ಹೀಗೆ ಸುಮಾರು 14,97,000 ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಸುಕಿನ ಜಾವದಲ್ಲಿ ಸ್ಥಳಕ್ಕೆ ಡಿವೈಎಸ್‌ಪಿ ಮನೋಜಕುಮಾರ, ಸಿಪಿಐಆರ್​ಆರ್ ಪಾಟೀಲ ಹಾಗೂ ಸದಲಗಾ ಪಿಎಸ್‌ಐಆರ್ ವಾಯ್ ಬಿಳಗಿ ಪೊಲೀಸರು ಭೇಟಿ ನೀಡಿದ್ದು, ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಅದಲ್ಲದೆ ಶ್ವಾನದಳ ಮತ್ತು ಬೆರಳು ಮುದ್ರೆಗಳಿಂದ ಪರಿಶೀಲಿಸಿದ್ದಾರೆ. ಈ ಪ್ರಕರಣದ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.