ETV Bharat / state

ಪ್ರವಾಹ ತಂದ ಸಂಕಷ್ಟ: ಟ್ರ್ಯಾಕ್ಟರ್​ ಟ್ರೈಲರ್​ನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ!

ಘಟಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಕುಟುಂಬವೊಂದು ಕಳೆದ ಐದು ದಿನಗಳಿಂದ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ವಾಸಿಸುತ್ತಿದೆ. ಆದರೆ ಇವರ ಸಂಕಷ್ಟಕ್ಕೆ ಇನ್ನೂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ತಿಳಿದುಬಂದಿದೆ.

author img

By

Published : Aug 20, 2020, 12:00 PM IST

Updated : Aug 20, 2020, 12:20 PM IST

ಟ್ರಾಕ್ಟರ್​ ಟೇಲರ್​ನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ
ಟ್ರಾಕ್ಟರ್​ ಟೇಲರ್​ನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ

ಗೋಕಾಕ್​(ಬೆಳಗಾವಿ): ಘಟಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಹಡಗಿನಹಾಳ ಗ್ರಾಮದ ಕುಟುಂಬವೊಂದು ರಸ್ತೆ ಬದಿ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ವಾಸಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದ್ದರೂ ಸಹ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಟ್ರ್ಯಾಕ್ಟರ್​ ಟ್ರೈಲರ್​ನಲ್ಲಿ ಜೀವನ ಸಾಗಿಸುತ್ತಿರುವ ಬಡ ಕುಟುಂಬ

ಗೋಕಾಕ್​ ತಾಲೂಕಿನ ಹಡಗಿನಾಳ ಗ್ರಾಮದ ಲಕ್ಷ್ಮಣ ತಳವಾರ ಎಂಬುವರ ಕುಟುಂಬ ಪ್ರವಾಹಕ್ಕೆ ತತ್ತರಿಸಿದೆ. ಈ ಕುಟಂಬಸ್ಥರು ಆಶ್ರಯಕ್ಕಾಗಿ ಬೇರೊಬ್ಬರ ಟ್ರ್ಯಾಕ್ಟರ್ ಟ್ರೈಲರ್ ಬಾಡಿಗೆ ತೆಗೆದುಕೊಂಡು ಕಳೆದ ಐದಾರು ದಿನಗಳಿಂದ ಅದರಲ್ಲೇ ವಾಸಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಟ್ರೈಲರ್​ನಲ್ಲಿಟ್ಟುಕೊಂಡು, ಕೆಳಗಿರುವ ಕಲ್ಲು ಹಾಸಿಗೆ ಮೇಲೆ ಪುಟ್ಟ ಮಕ್ಕಳೊಂದಿಗೆ ಜೀವನ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ಮನೆ ಕಳೆದುಕೊಂಡ ಈ ಕುಟುಂಬಕ್ಕೆ ಈವರೆಗೂ ಸರಿಯಾಗಿ ಪರಿಹಾರಧನ ಬಂದಿಲ್ಲ. ಹೀಗಾಗಿ ಮನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ನೆರೆಯಿಂದ ಬದುಕು ಕಳೆದುಕೊಂಡಿರುವ ಈ ನಿರಾಶ್ರಿತ ಕುಟುಂಬದ ನೆರವಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗೋಕಾಕ್​(ಬೆಳಗಾವಿ): ಘಟಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಹಡಗಿನಹಾಳ ಗ್ರಾಮದ ಕುಟುಂಬವೊಂದು ರಸ್ತೆ ಬದಿ ಟ್ರ್ಯಾಕ್ಟರ್ ಟ್ರೈಲರ್‌ನಲ್ಲಿ ವಾಸಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದ್ದರೂ ಸಹ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಟ್ರ್ಯಾಕ್ಟರ್​ ಟ್ರೈಲರ್​ನಲ್ಲಿ ಜೀವನ ಸಾಗಿಸುತ್ತಿರುವ ಬಡ ಕುಟುಂಬ

ಗೋಕಾಕ್​ ತಾಲೂಕಿನ ಹಡಗಿನಾಳ ಗ್ರಾಮದ ಲಕ್ಷ್ಮಣ ತಳವಾರ ಎಂಬುವರ ಕುಟುಂಬ ಪ್ರವಾಹಕ್ಕೆ ತತ್ತರಿಸಿದೆ. ಈ ಕುಟಂಬಸ್ಥರು ಆಶ್ರಯಕ್ಕಾಗಿ ಬೇರೊಬ್ಬರ ಟ್ರ್ಯಾಕ್ಟರ್ ಟ್ರೈಲರ್ ಬಾಡಿಗೆ ತೆಗೆದುಕೊಂಡು ಕಳೆದ ಐದಾರು ದಿನಗಳಿಂದ ಅದರಲ್ಲೇ ವಾಸಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಟ್ರೈಲರ್​ನಲ್ಲಿಟ್ಟುಕೊಂಡು, ಕೆಳಗಿರುವ ಕಲ್ಲು ಹಾಸಿಗೆ ಮೇಲೆ ಪುಟ್ಟ ಮಕ್ಕಳೊಂದಿಗೆ ಜೀವನ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ಮನೆ ಕಳೆದುಕೊಂಡ ಈ ಕುಟುಂಬಕ್ಕೆ ಈವರೆಗೂ ಸರಿಯಾಗಿ ಪರಿಹಾರಧನ ಬಂದಿಲ್ಲ. ಹೀಗಾಗಿ ಮನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ನೆರೆಯಿಂದ ಬದುಕು ಕಳೆದುಕೊಂಡಿರುವ ಈ ನಿರಾಶ್ರಿತ ಕುಟುಂಬದ ನೆರವಿಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Aug 20, 2020, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.