ETV Bharat / state

ಭರದ ನಡುವೆಯೂ ನೀರಿನಾಸರೆ! ಶಿರಗುಪ್ಪಿಯಲ್ಲಿ ಜರ್ಮನ್ ತಂತ್ರಜ್ಞಾನದ ಮೂಲಕ ನೀರು ಶುದ್ದೀಕರಣ - undefined

ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಜೊತೆಗೆ ಸುತ್ತಮುತ್ತಲಿನ ಗ್ರಾಮಕ್ಕೂ ಈ ಗ್ರಾಮ ಆಸರೆಯಾಗಿದೆ. ಜರ್ಮನ್​​ ತಂತ್ರಜ್ಞಾನದ ಮೂಲಕ ನೀರನ್ನು ಶುದ್ಧೀಕರಿಸಿ ನೀರು ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಿದೆ.

ಜರ್ಮನ್​​ ತಂತ್ರಜ್ಞಾನದ ಮೂಲಕ ಜೀವ ಜಲ
author img

By

Published : Jun 5, 2019, 1:43 PM IST

ಚಿಕ್ಕೋಡಿ : ಕಳೆದ ಮೂರು ತಿಂಗಳಿಂದ ಅಥಣಿ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಶಿರಗುಪ್ಪಿ ಗ್ರಾಮ ಜರ್ಮನ್​​ ತಂತ್ರಜ್ಞಾನದ ಮೂಲಕ ನೀರು ಶುದ್ಧೀಕರಿಸಿ ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಜೀವಿನಿಯಾಗಿದೆ.

ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದವರೆಗೆ ಬರುತ್ತಿದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್‌ ಜುಗೂಳ ಗ್ರಾಮದಲ್ಲಿದ್ದು, ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ.

ಇಲ್ಲಿ ಪ್ರತಿದಿನ ಸುಮಾರು 50 ಲಕ್ಷ ಲೀಟರ್‌ ನೀರನ್ನು ಜರ್ಮನ್​​ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ, ಇಂಗಳಿ, ಯಡೂರ, ಕಾಗವಾಡ, ಶೇಡಬಾಳ, ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ, ಬುಬನಾಳ, ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀ. ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ತಂಪಾಗಿರುವುದು ವಿಶೇಷ.

ಜರ್ಮನ್​​ ತಂತ್ರಜ್ಞಾನದ ಮೂಲಕ ಗ್ರಾಮಸ್ಥರಿಗೆ ಜೀವ ಜಲ ಸರಬರಾಜು

ಕೃಷ್ಣಾ ನದಿಯಿಂದ ಪಂಪ್‌ಸೆಟ್‌ ಮೂಲಕ ನೀರೆತ್ತಿ, ಆ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್‌ ತಂತ್ರಜ್ಞಾನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇದು ಸಂಪೂರ್ಣ ಆಟೋಮೆಟಿಕ್‌ ತಂತ್ರಜ್ಞಾನ ಹೊಂದಿದೆ. ಅದೇ ರೀತಿ ನೀರಿನ ಟ್ಯಾಂಕರುಗಳಲ್ಲಿ ನೀರು ಭರ್ತಿ ಆದ ಮೇಲೆ ನದಿ ತೀರದ ಮೋಟಾರ್​​ಗಳು ಸ್ವಯಂ​ ಬಂದ್ ಆಗುತ್ತವೆ. ಇನ್ನು, ನೀರು ಪೋಲಾಗದಂತೆ ನಿಗಾವಹಿಸಲು ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನೂ ಇಲ್ಲಿ ನೇಮಿಸಲಾಗಿದೆ.

ಚಿಕ್ಕೋಡಿ : ಕಳೆದ ಮೂರು ತಿಂಗಳಿಂದ ಅಥಣಿ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಶಿರಗುಪ್ಪಿ ಗ್ರಾಮ ಜರ್ಮನ್​​ ತಂತ್ರಜ್ಞಾನದ ಮೂಲಕ ನೀರು ಶುದ್ಧೀಕರಿಸಿ ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಜೀವಿನಿಯಾಗಿದೆ.

ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದವರೆಗೆ ಬರುತ್ತಿದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್‌ ಜುಗೂಳ ಗ್ರಾಮದಲ್ಲಿದ್ದು, ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ.

ಇಲ್ಲಿ ಪ್ರತಿದಿನ ಸುಮಾರು 50 ಲಕ್ಷ ಲೀಟರ್‌ ನೀರನ್ನು ಜರ್ಮನ್​​ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ, ಇಂಗಳಿ, ಯಡೂರ, ಕಾಗವಾಡ, ಶೇಡಬಾಳ, ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ, ಬುಬನಾಳ, ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀ. ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ತಂಪಾಗಿರುವುದು ವಿಶೇಷ.

ಜರ್ಮನ್​​ ತಂತ್ರಜ್ಞಾನದ ಮೂಲಕ ಗ್ರಾಮಸ್ಥರಿಗೆ ಜೀವ ಜಲ ಸರಬರಾಜು

ಕೃಷ್ಣಾ ನದಿಯಿಂದ ಪಂಪ್‌ಸೆಟ್‌ ಮೂಲಕ ನೀರೆತ್ತಿ, ಆ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್‌ ತಂತ್ರಜ್ಞಾನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇದು ಸಂಪೂರ್ಣ ಆಟೋಮೆಟಿಕ್‌ ತಂತ್ರಜ್ಞಾನ ಹೊಂದಿದೆ. ಅದೇ ರೀತಿ ನೀರಿನ ಟ್ಯಾಂಕರುಗಳಲ್ಲಿ ನೀರು ಭರ್ತಿ ಆದ ಮೇಲೆ ನದಿ ತೀರದ ಮೋಟಾರ್​​ಗಳು ಸ್ವಯಂ​ ಬಂದ್ ಆಗುತ್ತವೆ. ಇನ್ನು, ನೀರು ಪೋಲಾಗದಂತೆ ನಿಗಾವಹಿಸಲು ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನೂ ಇಲ್ಲಿ ನೇಮಿಸಲಾಗಿದೆ.

Intro:ಗಡಿಭಾಗದ ಗ್ರಾಮಗಳಿಗೆ ಆಸರೆಯಾದ ಶಿರಗುಪ್ಪಿ ಗ್ರಾಮ ಪಂಚಾಯತಿ
Body:ಚಿಕ್ಕೋಡಿ : 
ಪ್ಯಾಕೇಜ್

ಕಳೆದ ಮೂರು ತಿಂಗಳಿಂದ ಅಥಣಿ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಆದರೆ, ಇಲ್ಲೊಂದು ಗ್ರಾಮ ತನ್ನ ಗ್ರಾಮಕ್ಕೆ ಮಾತ್ರ ನೀರು ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರು ಸರಬರಾಜು ಮಾಡುವುದರ ಜೊತೆಗೆ ಇಲ್ಲಿನ ಗ್ರಾಮ ಪಂವಾಯತಿ ಸದಸ್ಯರು ನೀರು ಪೂರೈಸುವುದರ ಮೂಲಕ ಮಾನವೀಯತೆ ಮೇರದಿದ್ದಾರೆ.

ಹೌದು ಇಂತದೊಂದು ಗ್ರಾಮ ನೀವು ಸದ್ಯದ ಪರಸ್ಥಿತಿಯಲ್ಲಿ ನೋಡರಲಿಕ್ಕಿಲ್ಲ ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿ ಹಾಹಾಕಾರವಿಲ್ಲ. ಅದರ ಜೊತೆಗೆ ಸುತ್ತಮುತ್ತ ಗ್ರಾಮಕ್ಕೂ ಈ ಗ್ರಾಮ ಆಸರೆಯಾಗಿದೆ. ಹಾಗಾದರೆ ಈ ಗ್ರಾಮ ಯಾವುದಂತೀರಾ. ಅದುವೇ ಕಾಗವಾಡ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ.

ಈ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿಗೆ ಸ್ವಲ್ಪವೂ ಸಮಸ್ಯೆಯೇ ಇಲ್ಲ. ಎಲ್ಲರಿಗೂ ಶುದ್ಧ ನೀರು ಸಿಗುತ್ತಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಕೆಲ ಹಳ್ಳಿಗಳ ಜನರೂ ಶಿರಗುಪ್ಪಿಯಿಂದ ಕುಡಿಯಲು ಶುದ್ಧ ನೀರು ಒಯ್ಯುವುದುಂಟು! 

ಈ ಭಾಗದ ಜೀವನದಿ ಕೃಷ್ಣಾ ಬತ್ತಿದ್ದರಿಂದ ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಈ ನೀರು ಶುದ್ಧವಾಗಿರದೇ ಇದ್ದರೂ ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ. ಹೀಗಿರುವಾಗ ಶಿರುಗುಪ್ಪಿ ಗ್ರಾಮದ ಚಿತ್ರಣವೇ ಬೇರೆಯಾಗಿದೆ.

ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದ ವರೆಗೆ ಬರುತ್ತದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್‌ ಜುಗೂಳ ಗ್ರಾಮದಲ್ಲಿದ್ದು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ. 

ಪ್ರತಿದಿನ ಸುಮಾರು 50 ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ, ಇಂಗಳಿ, ಯಡೂರ, ಕಾಗವಾಡ, ಶೇಡಬಾಳ, ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ, ಬುಬನಾಳ, ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀ. ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ಕೋಲ್ಡ್‌ ಆಗಿರುವುದು ವಿಶೇಷ.

ಅದರಂತೆ ಕರ್ನಾಟಕದ ಯಾವುದಾದರೂ ಗ್ರಾಮ ಪಂಚಾಯತಿಯಲ್ಲಿ ಕೋಲ್ಡ್ ನೀರು ಸರಬರಾಜು ಮಾಡುತ್ತಿದ್ದರೆ ಅದು ಕಾಗವಾಡ ತಾಲೂಕಿನ ಗ್ರಾಮ ಪಂಚಾಯತಿ ಎಂದು ಹೆಮ್ಮೆಯಿಂದ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯ ರಾಮಗೌಡಾ ಪಾಟೀಲ ಹೇಳುತ್ತಾರೆ.

ಕೃಷ್ಣಾ ನದಿಯಿಂದ ಪಂಪ್‌ಸೆಟ್‌ ಮೂಲಕ ನೀರೆತ್ತಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್‌ ದೇಶದಲ್ಲಿ ನಿರ್ಮಿಸಿದ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇಂದು ಸಂಪೂರ್ಣ ಆಟೋಮೆಟಿಕ್‌ ತಂತ್ರಜ್ಞಾನ ಹೊಂದಿದೆ. ಅದೇ ರೀತಿ ನೀರಿನ ಟ್ಯಾಂಕರಗಳಲ್ಲಿ ನೀರು ಭರ್ತಿ ಆದ ಮೇಲೆ ನದಿ ತೀರದ ಮೋಟರಗಳು ಅಟೋಮೆಟಿಕ ಬಂದ ಆಗತ್ತವೆ. ಅದರಂತೆ ನೀರನ್ನು ಪೋಲ ಆಗದಂತೆ ನೀಗಾವಹಿಸಲು ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಲಾಗಿದೆ.

ಈ ಭಾಗದ ಗ್ರಾಮಗಳಿಗೆ ಆಸರೆಯಾದ ಶಿರಗುಪ್ಪಿ ಗ್ರಾಮ ಪಂಚಾಯತಿ ಕಳೆದ ಮೂರು ತಿಂಗಳಿನಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದೆ ಅಲ್ಲಿಂದ ಇಲ್ಲಿಯವರೆಗೂ ಶಿರಗುಪ್ಪಿ ಗ್ರಾಮ ಪಂಚಾಯತಿ ನೀರಿನ ವ್ಯವಸ್ಥೆ ಮಾಡಿರುವುದು ಈ ಭಾಗದ ಗ್ರಾಮಗಳಿಗೆ ಶಿರಗುಪ್ಪಿ ಗ್ರಾಮ ಆಸರೆಯಾಗಿದೆ.


ಬೈಟ್ 1 : ಸಿದ್ದಗೌಡ ಭೂಪಾಲ ಮಗದುಮ್ಮ (ಇಂಗಳಿ ಗ್ರಾಮದ ಗ್ರಾಮಸ್ಥರು)

ಬೈಟ್ 2 : ರಾಮಗೌಡ ನಸಗೌಡ ಪಾಟೀಲ (ಶಿರಗುಪ್ಪಿ ಗ್ರಾಮ ಪಂಚಾಯತಿ ಸದಸ್ಯರು)

ವಿಡಿಯೋ 4 : ಜರ್ಮನಿ ತಂತ್ರಜ್ಞಾನವನ್ನು ನೀರಿನ ಶುದ್ದಿಕರಣ ಘಟಕ

ವಿಡಿಯೋ 5 : ಅಟೋಮಿಟಿಕ ನೀರು ಸರಬರಾಜ ಮಾಡುವ ಯಂತ್ರಾಂಶ

ಈ ಪ್ಯಾಕೇಜ್ ಗೆ ವೈಸ್ ಓವರ ನೀಡಿ.Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.