ETV Bharat / state

ಅಥಣಿಯಲ್ಲಿ 'ಕೈ'ಗೆ ಶಾಕ್​: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಾಜಿ ಶಾಸಕ - Former MLA contested as congress rebel candidate in Atani news

ಉಪ ಚುನಾವಣೆ ಘೋಷಣೆಯಾಗಿರುವ ಅಥಣಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್​ ಟಿಕೆಟ್​ಗಾಗಿ ಜಟಾಪಟಿ ಮುಂದುವರೆದಿದೆ. ಇನ್ನೊಂದೆಡೆ ಕಾಂಗ್ರೆಸ್​ನ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕರೊಬ್ಬರು ಕಣಕ್ಕಿಳಿದಿದ್ದಾರೆ.

ಅಥಣಿಯಲ್ಲಿ 'ಕೈ'ಗೆ ಶಾಕ್​...
author img

By

Published : Nov 16, 2019, 3:30 PM IST

ಬೆಳಗಾವಿ/ಅಥಣಿ: ಅಥಣಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ್‌ ಕಣಕ್ಕಿಳಿದಿದ್ದು, ಕಾಂಗ್ರೆಸ್​ಗೆ ಶಾಕ್​ ನೀಡಿದ್ದಾರೆ.

ಈ ಮೊದಲೇ ಇಬ್ಬರು ಸೂಚಕರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಶಹಜಾನ್​, ಇಂದು ಮತ್ತೆ 11 ಜನ ಸೂಚಕರ ಜೊತೆಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದಾರೆ. ಅಥಣಿ ನಗರದ ಸಿದ್ದೇಶ್ವರ ದೇಗುಲದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನೂರಕ್ಕೂ ಅಧಿಕ ಕಾರ್ಯಕರ್ತರ ಜೊತೆಗೆ ಬೈಕ್‌ ಮೂಲಕ ತೆರಳಿ ಚುನಾವಣಾಧಿಕಾರಿ ಜೆಲಾನಿ ಮೊಕಾಶಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಅಥಣಿಯಲ್ಲಿ 'ಕೈ'ಗೆ ಶಾಕ್​...

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಹಜಹಾನ್‌ ಡೊಂಗರಾಂವ್‌, ನಾನು ಬಂಡಾಯವಾಗಿ ಕಣಕ್ಕೆ ಇಳಿಯುತ್ತಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರ ಒತ್ತಾಯದ ಮೇರೆಗೆ ಕಣಕ್ಕೆ ಇಳಿಯುತ್ತಿದ್ದೇನೆ. ಪಕ್ಷ ಬಿ ಫಾರಂ ನೀಡುವ ವಿಶ್ವಾಸವಿದೆ. ಬಿ ಫಾರಂ ಸಿಗದೆ ಹೋದ್ರೆ, ಕಾರ್ಯಕರ್ತರು ಒಪ್ಪಿದರೇ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲು ಸಿದ್ಧ ಎಂದರು.

ಬೆಳಗಾವಿ/ಅಥಣಿ: ಅಥಣಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ್‌ ಕಣಕ್ಕಿಳಿದಿದ್ದು, ಕಾಂಗ್ರೆಸ್​ಗೆ ಶಾಕ್​ ನೀಡಿದ್ದಾರೆ.

ಈ ಮೊದಲೇ ಇಬ್ಬರು ಸೂಚಕರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಶಹಜಾನ್​, ಇಂದು ಮತ್ತೆ 11 ಜನ ಸೂಚಕರ ಜೊತೆಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದಾರೆ. ಅಥಣಿ ನಗರದ ಸಿದ್ದೇಶ್ವರ ದೇಗುಲದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನೂರಕ್ಕೂ ಅಧಿಕ ಕಾರ್ಯಕರ್ತರ ಜೊತೆಗೆ ಬೈಕ್‌ ಮೂಲಕ ತೆರಳಿ ಚುನಾವಣಾಧಿಕಾರಿ ಜೆಲಾನಿ ಮೊಕಾಶಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಅಥಣಿಯಲ್ಲಿ 'ಕೈ'ಗೆ ಶಾಕ್​...

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಹಜಹಾನ್‌ ಡೊಂಗರಾಂವ್‌, ನಾನು ಬಂಡಾಯವಾಗಿ ಕಣಕ್ಕೆ ಇಳಿಯುತ್ತಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರ ಒತ್ತಾಯದ ಮೇರೆಗೆ ಕಣಕ್ಕೆ ಇಳಿಯುತ್ತಿದ್ದೇನೆ. ಪಕ್ಷ ಬಿ ಫಾರಂ ನೀಡುವ ವಿಶ್ವಾಸವಿದೆ. ಬಿ ಫಾರಂ ಸಿಗದೆ ಹೋದ್ರೆ, ಕಾರ್ಯಕರ್ತರು ಒಪ್ಪಿದರೇ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲು ಸಿದ್ಧ ಎಂದರು.

Intro:ಅಥಣಿ ಮತಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಜಟಾಪಟಿ ಮುಂದುವರೆದಿದ್ರೆ, ಇತ್ತ ಮಾಜಿ ಶಾಸಕ ಕೈ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ್‌Body:ಅಥಣಿ ವರದಿ:
ಫಾರ್ಮ್ಯಾಟ್:ಎವಿಬಿ
*ಸ್ಲಗ್: ಅಥಣಿ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆದ ಬಂಡಾಯ*

Anchor: ಅಥಣಿ ಮತಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಜಟಾಪಟಿ ಮುಂದುವರೆದಿದ್ರೆ, ಇತ್ತ ಮಾಜಿ ಶಾಸಕ ಕೈ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ್‌ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೊದಲು ಇಬ್ಬರು ಸೂಚಕರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಶಹಜಹಾನ್‌ ಇಂದು ಮತ್ತೆ ೧೧ ಜನ ಸೂಚಕರ ಜೊತೆಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ನೀಡಿದ್ದಾರೆ. ಅಥಣಿ ನಗರದ ಸಿದ್ದೇಶ್ವರ ದೇಗುಲದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ನಂತ್ರ ನೂರಕ್ಕು ಅಧಿಕ ಕಾರ್ಯಕರ್ತರ ಜೊತೆಗೆ ಬೈಕ್‌ ಮೂಲಕ ತೆರಳಿ ಚುನಾವಣಾಧಿಕಾರಿ ಜೆಲಾನಿ ಮೊಕಾಶಿಗೆ ನಾಮಪತ್ರ ಸಲ್ಲಿಕೆ ಮಾಡಿದ್ರು.ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಹಜಹಾನ್‌ ಡೊಂಗರಾಂವ್‌ ನಾನು ಬಂಡಾಯವಾಗಿ ಕಣಕ್ಕೆ ಇಳಿಯುತ್ತಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರ ಒತ್ತಾಯದ ಮೇರೆಗೆ ಕಣಕ್ಕೆ ಇಳಿಯುತ್ತಿದ್ದೇನೆ,ಪಕ್ಷ ಬಿ ಫಾರಂ ನೀಡುವ ವಿಶ್ವಾಸವಿದೆ. ಬಿ ಫಾರಂ ಸಿಗದೆ ಹೋದ್ರೆ, ಕಾರ್ಯಕರ್ತರು ಒಪ್ಪಿದರೇ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲು ಸಿದ್ಧ ಎಂದ್ರು.

*ಬೈಟ್‌ : ಶಹಜಹಾನ್‌ ಡೊಂಗರಗಾಂವ್‌ (ಮಾಜಿ ಶಾಸಕ, ಕೈ ಮುಖಂಡ)*Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.