ಬೆಳಗಾವಿ: ಬಿಸಿಲಿನ ಹೊಡೆತಕ್ಕೆ ರಿಲ್ಯಾಕ್ಸ್ ಆಗಲು ಖರೀದಿಸಿದ್ದ ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳು ಕಂಡು ಗ್ರಾಹಕರು ಕಂಗಾಲಾದ ಘಟನೆ ಕುಂದಾನಗರಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕುದುರೆಮನೆ ಗ್ರಾಮದ ನಿವಾಸಿ ಸವಿತಾ ಪಾಟೀಲ ಕುಟುಂಬ ಸದಸ್ಯರು ಜಿರಲೆ ಇದ್ದ ಬಾಟಲಿಯಲ್ಲಿನ ತಂಪು ಪಾನೀಯ ಸೇವೆಸಿದ್ದು, ಅದೃಷ್ಟವಶಾತ್ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ.
ನಗರದ ಪ್ರತಿಷ್ಠಿತ ಮಳಿಗೆಯೊಂದರಲ್ಲಿ ತಂಪು ಪಾನೀಯ ಖರೀದಿಸಿರುವ ಸವಿತಾ, ಮನೆಗೆ ಹೋಗಿ ಗ್ಲಾಸ್ಗಳಲ್ಲಿ ಜ್ಯೂಸ್ ಹಾಕುತ್ತಿದ್ದಂತೆ ಜಿರಲೆ ಮಾದರಿಯ ಹುಳು ಇರುವುದು ಪತ್ತೆಯಾಗಿದೆ. ಇದಕ್ಕೂ ಮುನ್ನ ಸವಿತಾ ಪಾಟೀಲ ಅವರ ಪುತ್ರ ಅರ್ಧ ಗ್ಲಾಸ್ ತಂಪು ಪಾನೀಯ ಸೇವಿಸಿದ್ದು, ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದಾನೆ. ಆಗ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಕಂಡುಬಂದಿವೆ. ಈ ಸಂಬಂಧ ಮಳಿಗೆಯ ಮ್ಯಾನೇಜರ್ಗೂ ಸವಿತಾ ದೂರು ಕೊಟ್ಟಿದ್ದಾರೆ.