ETV Bharat / state

ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಕುಟುಂಬ ಆತ್ಮಹತ್ಯೆ: ಸುಳ್ಳು ಸುದ್ದಿಗೆ ಅಥಣಿ ದಂಗು

ಖಾಸಗಿ ವಾಹಿನಿಯೊಂದು ತನ್ನ ಪೇಸ್ ಬುಕ್ ಪೇಜ್‌ನಲ್ಲಿ ಲಾಕ್ ಡೌನ್ ನಿಂದ ಅಥಣಿಯಲ್ಲಿ ಊಟವಿಲ್ಲದೆ ಕುಟುಂಬದ ಮೂರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಜೊತೆಗೆ ವಿಡಿಯೋ ಪೋಸ್ಟ್​ ಮಾಡಿತ್ತು. ಆದರೆ, ಈ ಬಗ್ಗೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಅವರನ್ನು ವಿಚಾರಿಸಿದಾಗ ಅಥಣಿಯಲ್ಲಿ ಈ ರೀತಿ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

author img

By

Published : May 2, 2020, 12:59 PM IST

Updated : May 2, 2020, 6:29 PM IST

Family suicide by hunger strike: Fake news
ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಕುಟುಂಬ ಆತ್ಮಹತ್ಯೆ: ಸುಳ್ಳು ಸುದ್ದಿಗೆ ಅಥಣಿ ದಂಗು..

ಅಥಣಿ(ಬೆಳಗಾವಿ): ಸಾಮಾಜಿಕ ಜಾಲತಾಣಗಳಲ್ಲಿ ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಎಂಬ ಸುದ್ದಿ ಮತ್ತು ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗಿ ಅಥಣಿ ಜನತೆಯನ್ನು ಬೆಚ್ಚಿಬೀಳಿಸಿತ್ತು.

ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಕುಟುಂಬ ಆತ್ಮಹತ್ಯೆ: ಸುಳ್ಳು ಸುದ್ದಿಗೆ ಅಥಣಿ ದಂಗು..

ಹೌದು, ಖಾಸಗಿ ವಾಹಿನಿಯೊಂದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಲಾಕ್ ಡೌನ್ ನಿಂದ ಅಥಣಿಯಲ್ಲಿ ಊಟವಿಲ್ಲದೆ ಕುಟುಂಬದ ಮೂರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಜೊತೆಗೆ ವಿಡಿಯೋ ಪೋಸ್ಟ್​ ಮಾಡಿತ್ತು. ವಿಡಿಯೋವನ್ನು ಮೇಲ್ನೋಟಕ್ಕೆ ಗಮನಿಸಿದಾಗ, ಒಬ್ಬಳು ಗೃಹಿಣಿ ಎರಡು ಜನ ಮಕ್ಕಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇರುವ ದೃಶ್ಯ ಕಂಡುಬರುತ್ತಿದ್ದು, ಮನಕಲುಕುವಂತಿತ್ತು.

ಈ ಸಂಬಂಧ ದೂರವಾಣಿ ಮೂಲಕ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಅವರನ್ನು ವಿಚಾರಿಸಿದಾಗ ಅಥಣಿಯಲ್ಲಿ ಈ ರೀತಿ ಯಾವುದೇ ಘಟನೆ ಸಂಭವಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮೇಲಾಧಿಕಾರಿಗಳು ಕೂಡ ಕರೆ ಮಾಡಿ ವಿಚಾರ ಮಾಡಿದ್ದಾರೆ. ಇದುವರೆಗೆ ನಿರ್ದಿಷ್ಟವಾಗಿ ಎಲ್ಲಿಯ ಘಟನೆ ಎಂಬುದು ಕಂಡು ಬಂದಿಲ್ಲ. ನಾವು ಪರಿಶೀಲನೆ ಮಾಡುತ್ತೆವೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.

ಅಷ್ಟೇ ಅಲ್ಲದೆ, ಈ ಬಗ್ಗೆ ಐಗಳಿ ಠಾಣೆಯ ಪಿಎಸ್ಐ ಕೆ. ಎಸ್. ‌ಕೋಚರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ ಇದುವರೆಗೆ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಅಥಣಿ(ಬೆಳಗಾವಿ): ಸಾಮಾಜಿಕ ಜಾಲತಾಣಗಳಲ್ಲಿ ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಎಂಬ ಸುದ್ದಿ ಮತ್ತು ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗಿ ಅಥಣಿ ಜನತೆಯನ್ನು ಬೆಚ್ಚಿಬೀಳಿಸಿತ್ತು.

ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಕುಟುಂಬ ಆತ್ಮಹತ್ಯೆ: ಸುಳ್ಳು ಸುದ್ದಿಗೆ ಅಥಣಿ ದಂಗು..

ಹೌದು, ಖಾಸಗಿ ವಾಹಿನಿಯೊಂದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಲಾಕ್ ಡೌನ್ ನಿಂದ ಅಥಣಿಯಲ್ಲಿ ಊಟವಿಲ್ಲದೆ ಕುಟುಂಬದ ಮೂರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಜೊತೆಗೆ ವಿಡಿಯೋ ಪೋಸ್ಟ್​ ಮಾಡಿತ್ತು. ವಿಡಿಯೋವನ್ನು ಮೇಲ್ನೋಟಕ್ಕೆ ಗಮನಿಸಿದಾಗ, ಒಬ್ಬಳು ಗೃಹಿಣಿ ಎರಡು ಜನ ಮಕ್ಕಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇರುವ ದೃಶ್ಯ ಕಂಡುಬರುತ್ತಿದ್ದು, ಮನಕಲುಕುವಂತಿತ್ತು.

ಈ ಸಂಬಂಧ ದೂರವಾಣಿ ಮೂಲಕ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಅವರನ್ನು ವಿಚಾರಿಸಿದಾಗ ಅಥಣಿಯಲ್ಲಿ ಈ ರೀತಿ ಯಾವುದೇ ಘಟನೆ ಸಂಭವಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮೇಲಾಧಿಕಾರಿಗಳು ಕೂಡ ಕರೆ ಮಾಡಿ ವಿಚಾರ ಮಾಡಿದ್ದಾರೆ. ಇದುವರೆಗೆ ನಿರ್ದಿಷ್ಟವಾಗಿ ಎಲ್ಲಿಯ ಘಟನೆ ಎಂಬುದು ಕಂಡು ಬಂದಿಲ್ಲ. ನಾವು ಪರಿಶೀಲನೆ ಮಾಡುತ್ತೆವೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.

ಅಷ್ಟೇ ಅಲ್ಲದೆ, ಈ ಬಗ್ಗೆ ಐಗಳಿ ಠಾಣೆಯ ಪಿಎಸ್ಐ ಕೆ. ಎಸ್. ‌ಕೋಚರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ ಇದುವರೆಗೆ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

Last Updated : May 2, 2020, 6:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.