ETV Bharat / state

ನ.6ರಂದು ಚುನಾವಣೆ.. ಬೆಳಗಾವಿ ಡಿಸಿಸಿ ಬ್ಯಾಂಕ್ ರೆಸಾರ್ಟ್ ಪಾಲಿಟಿಕ್ಸ್..

author img

By

Published : Nov 4, 2020, 7:05 PM IST

ಡಿಸಿಸಿ ಬ್ಯಾಂಕ್ ಚುನಾವಣೆ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು, ಇಬ್ಬರು ಅಭ್ಯರ್ಥಿಗಳು ಮತದಾರರನ್ನು ತಮ್ಮೊಟ್ಟಿಗಿಟ್ಟುಕೊಂಡು ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ನವೆಂಬರ್ 6ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತ್ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ..

meeting
ಸಭೆ

ಬೆಳಗಾವಿ: ರಾಜಕಾರಣ ಅಂದರೇನೆ ಹಾಗೇನೆ. ಯಾವುದೇ ಚುನಾವಣೆ ಇದ್ದರೂ ಅದು ಚುನಾವಣೆಯಾಗಿ ನಡೆಯುವುದಿಲ್ಲ. ಬದಲಿಗೆ ಪ್ರತಿಷ್ಠೆಯಾಗಿರುತ್ತವೆ. ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದರೆ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಒಗ್ಗಟ್ಟಿನ ಮಂತ್ರ ಪಠಿಸಿದ್ದ ಬಿಜೆಪಿ ನಾಯಕರು ಇದೀಗ ಅದೊಂದು ಕ್ಷೇತ್ರದಲ್ಲಿ ತೆರೆಮರೆಯ ಆಟ ಶುರುವಿಟ್ಟುಕೊಂಡಿದ್ದಾರೆ. ಗೆಲ್ಲಲೇಬೇಕು ಅಂತಿರುವ ಬಿಜೆಪಿಗೆ ಕೈ ಶಾಸಕಿ ಅಂಜಲಿ ಶಾಕ್ ಕೊಟ್ಟಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗಿದೆ.

ಜಿಲ್ಲಾ ರಾಜಕಾರಣದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯ. ಪಕ್ಷ ಒಂದೇ ಇದ್ದರೂ ಪ್ರತಿಷ್ಠೆಯಾಗಿ ಮಾರ್ಪಡುತ್ತದೆ. ಈ ಹಿಂದೆ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯೇ ಇದಕ್ಕೆ ನಿದರ್ಶನ. ಇದೀಗ ನವೆಂಬರ್ 6ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕೂಡ ಸೇರ್ಪಡೆಯಾಗಿದ್ದು, ಸದ್ಯ ಬಿಜೆಪಿಯಲ್ಲೇ ಶುರುವಾಗಿದ್ದ ಬಣ ರಾಜಕೀಯ ಹೈಕಮಾಂಡ್ ಖಡಕ್ ಸೂಚನೆಯಿಂದ ಒಟ್ಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 16 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ 13 ಸ್ಥಾನಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆದರೆ, ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘ, ರಾಮದುರ್ಗ ಮತ್ತು ಕುರಿ ಉಣ್ಣೆ ನಿಗಮ ಈ ಮೂರು ಸ್ಥಾನಗಳಿಗೆ ನ.6ರಂದು ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಮಾತ್ರ ರಂಗು ಪಡೆದುಕೊಂಡಿದ್ದು, ಇಲ್ಲಿ ರೆಸಾರ್ಟ್ ರಾಜಕಾರಣ ಕೂಡ ಆರಂಭವಾಗಿದೆ. ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದು, ಒಂದು ಹಾಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಇನ್ನೊಂದು ಎಂಇಎಸ್​​​ನ ಮಾಜಿ ಶಾಸಕ ಅರವಿಂದ್ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.

ಈ ಇಬ್ಬರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿರುವ ಚುನಾವಣೆ ಇದೀಗ ಗೆಲ್ಲಲೇಬೇಕು ಅಂದುಕೊಂಡು 50 ಪಿಕೆಪಿಎಸ್ ಸೊಸೈಟಿಯ ಮತದಾನ ಹಕ್ಕು ಹೊಂದಿರುವ 50 ಸದಸ್ಯರು ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ. 28 ಮತದಾರರನ್ನು ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದ ಪುಣೆಯ ಹೊರ ವಲಯದಲ್ಲಿರುವ ಆ್ಯಂಬಿವ್ಯಾಲಿ ರೆಸಾರ್ಟ್​​​​ಗೆ ಕಳುಹಿಸಿಕೊಟ್ಟಿದ್ದರೆ, ಇತ್ತ ಮಾಜಿ ಶಾಸಕ ಅರವಿಂದ ಪಾಟೀಲ್ 22ಜನರನ್ನು ಮಹರಾಷ್ಟ್ರದ ಸಾವಂತವಾಡಿಯಲ್ಲಿರುವ ಬೀಚ್ ರೆಸಾರ್ಟ್​​​​ಗೆ ಶಿಪ್ಟ್ ಮಾಡಿದ್ದಾರೆ.

ರೆಸಾರ್ಟ್ ಪಾಲಿಟಿಕ್ಸ್ ಕುರಿತು ಅಭಿಪ್ರಾಯಗಳು

ಈ ಮೂಲಕ ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್​​​ನ ಚುನಾವಣೆಗೆ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕು ಅಂತಾ ಇಬ್ಬರು ಅಭ್ಯರ್ಥಿಗಳು ನಾನಾ ತಂತ್ರ ಹೆಣೆಯುತ್ತಿದ್ದಾರೆ.‌ ರೆಸಾರ್ಟ್ ಪಾಲಿಟಿಕ್ಸ್ ಕುರಿತು ಮಾತನಾಡಿರುವ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಸಹಕಾರ ರಂಗದಲ್ಲಿ ಪಕ್ಷ ಬರಲ್ಲ.‌ ಪಕ್ಷಾತೀತವಾಗಿ ಅಲ್ಲಿ ಚುನಾವಣೆ ನಡೆಯುತ್ತದೆ. ಯಾವುದೇ ಚುನಾವಣೆ ‌ನಡೆದರೂ ರೆಸಾರ್ಟ್ ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ‌.

ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಎಂಇಎಸ್ ನಾಯಕ ಮಾಜಿ ಶಾಸಕ ಅರವಿಂದ್ ಪಾಟೀಲ್ ಬೆನ್ನಿಗೆ ಬಿಜೆಪಿ ನಿಂತಿದ್ದು, ಇತ್ತ ಶಾಸಕಿ ಅಂಜಲಿ ನಿಂಬಾಳ್ಕರ್ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ನಿಂತಿದ್ದಾರೆ. ಡಿಸಿಸಿ ಬ್ಯಾಂಕ್​​ನಲ್ಲಿ ಹಿಡಿತ ಸಾಧಿಸಲು ಸತೀಶ್ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಬಿಜೆಪಿಗರ ಕನಸಿಗೆ ಅಂಜಲಿ ಮೂಲಕ ತಣ್ಣಿರೆರಚುವ ಕೆಲಸವನ್ನು ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ.

ಇತ್ತ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್​​​ನ ಸಭೆಯಲ್ಲಿ ಅರವಿಂದ್ ಪಾಟೀಲ್ ಕೂಡ ಭಾಗಿಯಾಗಿದ್ದು, ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಅದರಲ್ಲೂ ಎಂಇಎಸ್​​​ನ ಅರವಿಂದ್ ಪಾಟೀಲ್​​​​ಗೆ ಬಿಜೆಪಿಗರು ಬೆಂಬಲ ನೀಡಿದ್ದು, ನಾಚಿಕೆಯ ಸಂಗತಿ.

ರಾಜಕಾರಣಕ್ಕೆ ವೋಟ್ ಪಾಲಿಟಿಕ್ಸ್​​​​ಗಾಗಿ ಬಿಜೆಪಿ ನಾಯಕರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಇದನ್ನು ಪ್ರತಿಯೊಬ್ಬ ಕನ್ನಡಿಗರು ಖಂಡಿಸುತ್ತಾರೆ ಎಂದು ಕನ್ನಡಪರ ಸಂಘಟನೆ ಮುಖಂಡರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು, ಇಬ್ಬರು ಅಭ್ಯರ್ಥಿಗಳು ಮತದಾರರನ್ನು ತಮ್ಮೊಟ್ಟಿಗಿಟ್ಟುಕೊಂಡು ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ನವೆಂಬರ್ 6ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತ್ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ.

ಬೆಳಗಾವಿ: ರಾಜಕಾರಣ ಅಂದರೇನೆ ಹಾಗೇನೆ. ಯಾವುದೇ ಚುನಾವಣೆ ಇದ್ದರೂ ಅದು ಚುನಾವಣೆಯಾಗಿ ನಡೆಯುವುದಿಲ್ಲ. ಬದಲಿಗೆ ಪ್ರತಿಷ್ಠೆಯಾಗಿರುತ್ತವೆ. ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದರೆ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಒಗ್ಗಟ್ಟಿನ ಮಂತ್ರ ಪಠಿಸಿದ್ದ ಬಿಜೆಪಿ ನಾಯಕರು ಇದೀಗ ಅದೊಂದು ಕ್ಷೇತ್ರದಲ್ಲಿ ತೆರೆಮರೆಯ ಆಟ ಶುರುವಿಟ್ಟುಕೊಂಡಿದ್ದಾರೆ. ಗೆಲ್ಲಲೇಬೇಕು ಅಂತಿರುವ ಬಿಜೆಪಿಗೆ ಕೈ ಶಾಸಕಿ ಅಂಜಲಿ ಶಾಕ್ ಕೊಟ್ಟಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗಿದೆ.

ಜಿಲ್ಲಾ ರಾಜಕಾರಣದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯ. ಪಕ್ಷ ಒಂದೇ ಇದ್ದರೂ ಪ್ರತಿಷ್ಠೆಯಾಗಿ ಮಾರ್ಪಡುತ್ತದೆ. ಈ ಹಿಂದೆ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯೇ ಇದಕ್ಕೆ ನಿದರ್ಶನ. ಇದೀಗ ನವೆಂಬರ್ 6ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕೂಡ ಸೇರ್ಪಡೆಯಾಗಿದ್ದು, ಸದ್ಯ ಬಿಜೆಪಿಯಲ್ಲೇ ಶುರುವಾಗಿದ್ದ ಬಣ ರಾಜಕೀಯ ಹೈಕಮಾಂಡ್ ಖಡಕ್ ಸೂಚನೆಯಿಂದ ಒಟ್ಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 16 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ 13 ಸ್ಥಾನಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆದರೆ, ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘ, ರಾಮದುರ್ಗ ಮತ್ತು ಕುರಿ ಉಣ್ಣೆ ನಿಗಮ ಈ ಮೂರು ಸ್ಥಾನಗಳಿಗೆ ನ.6ರಂದು ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಮಾತ್ರ ರಂಗು ಪಡೆದುಕೊಂಡಿದ್ದು, ಇಲ್ಲಿ ರೆಸಾರ್ಟ್ ರಾಜಕಾರಣ ಕೂಡ ಆರಂಭವಾಗಿದೆ. ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದು, ಒಂದು ಹಾಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಇನ್ನೊಂದು ಎಂಇಎಸ್​​​ನ ಮಾಜಿ ಶಾಸಕ ಅರವಿಂದ್ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.

ಈ ಇಬ್ಬರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿರುವ ಚುನಾವಣೆ ಇದೀಗ ಗೆಲ್ಲಲೇಬೇಕು ಅಂದುಕೊಂಡು 50 ಪಿಕೆಪಿಎಸ್ ಸೊಸೈಟಿಯ ಮತದಾನ ಹಕ್ಕು ಹೊಂದಿರುವ 50 ಸದಸ್ಯರು ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ. 28 ಮತದಾರರನ್ನು ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದ ಪುಣೆಯ ಹೊರ ವಲಯದಲ್ಲಿರುವ ಆ್ಯಂಬಿವ್ಯಾಲಿ ರೆಸಾರ್ಟ್​​​​ಗೆ ಕಳುಹಿಸಿಕೊಟ್ಟಿದ್ದರೆ, ಇತ್ತ ಮಾಜಿ ಶಾಸಕ ಅರವಿಂದ ಪಾಟೀಲ್ 22ಜನರನ್ನು ಮಹರಾಷ್ಟ್ರದ ಸಾವಂತವಾಡಿಯಲ್ಲಿರುವ ಬೀಚ್ ರೆಸಾರ್ಟ್​​​​ಗೆ ಶಿಪ್ಟ್ ಮಾಡಿದ್ದಾರೆ.

ರೆಸಾರ್ಟ್ ಪಾಲಿಟಿಕ್ಸ್ ಕುರಿತು ಅಭಿಪ್ರಾಯಗಳು

ಈ ಮೂಲಕ ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್​​​ನ ಚುನಾವಣೆಗೆ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕು ಅಂತಾ ಇಬ್ಬರು ಅಭ್ಯರ್ಥಿಗಳು ನಾನಾ ತಂತ್ರ ಹೆಣೆಯುತ್ತಿದ್ದಾರೆ.‌ ರೆಸಾರ್ಟ್ ಪಾಲಿಟಿಕ್ಸ್ ಕುರಿತು ಮಾತನಾಡಿರುವ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಸಹಕಾರ ರಂಗದಲ್ಲಿ ಪಕ್ಷ ಬರಲ್ಲ.‌ ಪಕ್ಷಾತೀತವಾಗಿ ಅಲ್ಲಿ ಚುನಾವಣೆ ನಡೆಯುತ್ತದೆ. ಯಾವುದೇ ಚುನಾವಣೆ ‌ನಡೆದರೂ ರೆಸಾರ್ಟ್ ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ‌.

ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಎಂಇಎಸ್ ನಾಯಕ ಮಾಜಿ ಶಾಸಕ ಅರವಿಂದ್ ಪಾಟೀಲ್ ಬೆನ್ನಿಗೆ ಬಿಜೆಪಿ ನಿಂತಿದ್ದು, ಇತ್ತ ಶಾಸಕಿ ಅಂಜಲಿ ನಿಂಬಾಳ್ಕರ್ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ನಿಂತಿದ್ದಾರೆ. ಡಿಸಿಸಿ ಬ್ಯಾಂಕ್​​ನಲ್ಲಿ ಹಿಡಿತ ಸಾಧಿಸಲು ಸತೀಶ್ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಬಿಜೆಪಿಗರ ಕನಸಿಗೆ ಅಂಜಲಿ ಮೂಲಕ ತಣ್ಣಿರೆರಚುವ ಕೆಲಸವನ್ನು ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ.

ಇತ್ತ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್​​​ನ ಸಭೆಯಲ್ಲಿ ಅರವಿಂದ್ ಪಾಟೀಲ್ ಕೂಡ ಭಾಗಿಯಾಗಿದ್ದು, ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಅದರಲ್ಲೂ ಎಂಇಎಸ್​​​ನ ಅರವಿಂದ್ ಪಾಟೀಲ್​​​​ಗೆ ಬಿಜೆಪಿಗರು ಬೆಂಬಲ ನೀಡಿದ್ದು, ನಾಚಿಕೆಯ ಸಂಗತಿ.

ರಾಜಕಾರಣಕ್ಕೆ ವೋಟ್ ಪಾಲಿಟಿಕ್ಸ್​​​​ಗಾಗಿ ಬಿಜೆಪಿ ನಾಯಕರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಇದನ್ನು ಪ್ರತಿಯೊಬ್ಬ ಕನ್ನಡಿಗರು ಖಂಡಿಸುತ್ತಾರೆ ಎಂದು ಕನ್ನಡಪರ ಸಂಘಟನೆ ಮುಖಂಡರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು, ಇಬ್ಬರು ಅಭ್ಯರ್ಥಿಗಳು ಮತದಾರರನ್ನು ತಮ್ಮೊಟ್ಟಿಗಿಟ್ಟುಕೊಂಡು ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ನವೆಂಬರ್ 6ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತ್ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.