ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ ಹಾಗೂ 2 ಬೈಕುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ದುಷ್ಕರ್ಮಿಗಳು ತಡರಾತ್ರಿ ವಿಕೃತಿ ಮೆರೆದು ಪರಾರಿಯಾಗಿದ್ದಾರೆ. ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಎಂಬುವರಿಗೆ ಸೇರಿದ ಬೈಕ್ಗಳು ಸುಟ್ಟು ಕರಕಲಾಗಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು, ಬುಲೆರೋ ಅರ್ಧ ಭಾಗ ಸುಟ್ಟು, ಬೈಕ್ಗಳು ಸಂಪೂರ್ಣ ಭಸ್ಮವಾಗಿವೆ.
ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.