ETV Bharat / state

ತಮ್ಮ ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ : ವೃದ್ದ ದಂಪತಿಯ ಗೋಳು ಕೇಳೋರ್ಯಾರು..

author img

By

Published : Feb 24, 2021, 5:32 PM IST

ಇದ್ದ ಒಬ್ಬ ಮಗನ ಬಾಳಾದರೂ ಒಳ್ಳೆಯದಾಗಲಿ ಎಂದು ಆ ವೃದ್ಧ ದಂಪತಿ ಆತನ ಮದುವೆ ಮಾಡಬೇಕೆಂಬ ಸಿದ್ಧತೆಯಲ್ಲಿದ್ದರು. ಇದ್ದ ಒಬ್ಬ ಮಗನು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನನ್ನು ಕೊಂದರೆ ಆಸ್ತಿ ಸಿಗುತ್ತೆ ಎಂದು ಸಂಬಂಧಿಗಳೇ ಈ ಕೃತ್ಯವೆಸಗಿದ್ದಾರೆಂದು ತಾಯಿ ಆರೋಪಿಸಿದ್ದಾರೆ..

brothers-sucide-and-murder-case
ತಮ್ಮ ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ

ಬೆಳಗಾವಿ : ತನ್ನ ತಮ್ಮನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಈಗ ಅಣ್ಣ ಕೊಲೆಯಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ತಮ್ಮನ ಆತ್ಮಹತ್ಯೆ.. ಈಗ ಅಣ್ಣನ ಕೊಲೆ.. ಹೆತ್ತವರಿಗೆ ಆಘಾತ

ಬೈಲಹೊಂಗಲ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿರುವ ಸಂಸ್ಕೃತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಕೊರಳಿಗೆ ಪ್ಲಾಸ್ಟಿಕ್ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇಂದು ಬೆಳಗ್ಗೆ ಖುಲ್ಲಾ ಜಾಗದಲ್ಲಿ ವ್ಯಕ್ತಿಯ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌

brothers-sucide-and-murder-case
ತಮ್ಮನು ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ..

ಓದಿ: ಹುಡುಗಿಯರನ್ನು ಇಂಪ್ರೆಸ್ ಮಾಡಲು ಬೈಕ್ ವ್ಹೀಲಿಂಗ್: ಇಬ್ಬರ ಬಂಧನ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಸಿಪಿಐ ಯು ಹೆಚ್ ಸಾತೇನಹಳ್ಳಿ ನೇತೃತ್ವದ ತಂಡ, ಪರಿಶೀಲನೆ ನಡೆಸಿ ಮೃತದೇಹವನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಕೊಲೆಯಾದ ವ್ಯಕ್ತಿ ಬಗ್ಗೆ ತನಿಖೆ ನಡೆಸಿದಾಗ ಆತ ಚನ್ನಮ್ಮ ನಗರ ನಿವಾಸಿ ಶಶಿಕಾಂತ್ ಮಿರಜಕರ್ ಎಂದು ಗೊತ್ತಾಗಿದೆ.

brothers-sucide-and-murder-case
ತಮ್ಮ ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ

34 ವರ್ಷದ ಶಶಿಕಾಂತ್ ಮಿರಜಕರ್ ಬೈಲಹೊಂಗಲ ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಈತನನ್ನು ದುಶ್ಚಟದಿಂದ ಬಿಡಿಸಲು ಪೋಷಕರು ಸಹ ಸಾಕಷ್ಟು ಪ್ರಯತ್ನ ಮಾಡಿದ್ದರು. ಕಳೆದ ವರ್ಷವಷ್ಟೇ ಕೊಲೆಯಾದ ಶ್ರೀಕಾಂತ್ ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಇದ್ದ ಒಬ್ಬ ಮಗನ ಬಾಳಾದರೂ ಒಳ್ಳೆಯದಾಗಲಿ ಎಂದು ಆ ವೃದ್ಧ ದಂಪತಿ ಆತನ ಮದುವೆ ಮಾಡಬೇಕೆಂಬ ಸಿದ್ಧತೆಯಲ್ಲಿದ್ದರು. ಇದ್ದ ಒಬ್ಬ ಮಗನು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನನ್ನು ಕೊಂದರೆ ಆಸ್ತಿ ಸಿಗುತ್ತೆ ಎಂದು ಸಂಬಂಧಿಗಳೇ ಈ ಕೃತ್ಯವೆಸಗಿದ್ದಾರೆಂದು ತಾಯಿ ಆರೋಪಿಸಿದ್ದಾರೆ.

ಕೊಲೆಯಾದ ಶಶಿಕಾಂತ್ ತಂದೆ ಟೈಲರಿಂಗ್ ಕೆಲಸ‌ ಮಾಡುತ್ತಿದ್ದರು. ನಿನ್ನೆ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ಶಶಿಕಾಂತ್, ಮಧ್ಯಾಹ್ನ 3ಗಂಟೆ ಸುಮಾರಿಗೆ ಬೈಲಹೊಂಗಲದ ಸಂಸ್ಕೃತಿ ಬಾರ್‌ಗೆ ಹೋಗಿ ಕುಡಿಯಲು ಶುರು ಮಾಡಿದ್ದಾನೆ. ಈ ವೇಳೆ ಈತನ ಜೊತೆ ಇಬ್ಬರು ಸ್ನೇಹಿತರು‌ ಇದ್ದರಂತೆ. ರಾತ್ರಿ ವೇಳೆ ಬಾರ್‌ನಿಂದ ಆಚೆ ಬಂದ ಈತ ಬಾರ್ ಬಳಿಯೇ ಇರುವ ಕಾಂಪ್ಲೆಕ್ಸ್ ಒಂದರ ಮೆಟ್ಟಿಲ ಮೇಲೆ ಕೂತಿದ್ದಾನೆ.

ಈ ವೇಳೆ ಯಾರೋ ದುಷ್ಕರ್ಮಿಗಳು ಕತ್ತಿಗೆ ಪ್ಲಾಸ್ಟಿಕ್ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಆತನ ಎಳೆದೊಯ್ದು ಖುಲ್ಲಾ ಜಾಗದಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.‌ ಇನ್ನು, ಶಶಿಕಾಂತ್ ಮದ್ಯ ಸೇವಿಸುತ್ತಿದ್ದನಾದರೂ ಯಾರ ತಂಟೆಗೂ ಹೋಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಬೆಳಗಾವಿ : ತನ್ನ ತಮ್ಮನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಈಗ ಅಣ್ಣ ಕೊಲೆಯಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ತಮ್ಮನ ಆತ್ಮಹತ್ಯೆ.. ಈಗ ಅಣ್ಣನ ಕೊಲೆ.. ಹೆತ್ತವರಿಗೆ ಆಘಾತ

ಬೈಲಹೊಂಗಲ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿರುವ ಸಂಸ್ಕೃತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಕೊರಳಿಗೆ ಪ್ಲಾಸ್ಟಿಕ್ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇಂದು ಬೆಳಗ್ಗೆ ಖುಲ್ಲಾ ಜಾಗದಲ್ಲಿ ವ್ಯಕ್ತಿಯ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌

brothers-sucide-and-murder-case
ತಮ್ಮನು ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ..

ಓದಿ: ಹುಡುಗಿಯರನ್ನು ಇಂಪ್ರೆಸ್ ಮಾಡಲು ಬೈಕ್ ವ್ಹೀಲಿಂಗ್: ಇಬ್ಬರ ಬಂಧನ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಸಿಪಿಐ ಯು ಹೆಚ್ ಸಾತೇನಹಳ್ಳಿ ನೇತೃತ್ವದ ತಂಡ, ಪರಿಶೀಲನೆ ನಡೆಸಿ ಮೃತದೇಹವನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಕೊಲೆಯಾದ ವ್ಯಕ್ತಿ ಬಗ್ಗೆ ತನಿಖೆ ನಡೆಸಿದಾಗ ಆತ ಚನ್ನಮ್ಮ ನಗರ ನಿವಾಸಿ ಶಶಿಕಾಂತ್ ಮಿರಜಕರ್ ಎಂದು ಗೊತ್ತಾಗಿದೆ.

brothers-sucide-and-murder-case
ತಮ್ಮ ಆತ್ಮಹತ್ಯೆ ಮಾಡಿಕೊಂಡ ವರ್ಷದಲ್ಲೇ ಅಣ್ಣನ ಕೊಲೆ

34 ವರ್ಷದ ಶಶಿಕಾಂತ್ ಮಿರಜಕರ್ ಬೈಲಹೊಂಗಲ ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಈತನನ್ನು ದುಶ್ಚಟದಿಂದ ಬಿಡಿಸಲು ಪೋಷಕರು ಸಹ ಸಾಕಷ್ಟು ಪ್ರಯತ್ನ ಮಾಡಿದ್ದರು. ಕಳೆದ ವರ್ಷವಷ್ಟೇ ಕೊಲೆಯಾದ ಶ್ರೀಕಾಂತ್ ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಇದ್ದ ಒಬ್ಬ ಮಗನ ಬಾಳಾದರೂ ಒಳ್ಳೆಯದಾಗಲಿ ಎಂದು ಆ ವೃದ್ಧ ದಂಪತಿ ಆತನ ಮದುವೆ ಮಾಡಬೇಕೆಂಬ ಸಿದ್ಧತೆಯಲ್ಲಿದ್ದರು. ಇದ್ದ ಒಬ್ಬ ಮಗನು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನನ್ನು ಕೊಂದರೆ ಆಸ್ತಿ ಸಿಗುತ್ತೆ ಎಂದು ಸಂಬಂಧಿಗಳೇ ಈ ಕೃತ್ಯವೆಸಗಿದ್ದಾರೆಂದು ತಾಯಿ ಆರೋಪಿಸಿದ್ದಾರೆ.

ಕೊಲೆಯಾದ ಶಶಿಕಾಂತ್ ತಂದೆ ಟೈಲರಿಂಗ್ ಕೆಲಸ‌ ಮಾಡುತ್ತಿದ್ದರು. ನಿನ್ನೆ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ಶಶಿಕಾಂತ್, ಮಧ್ಯಾಹ್ನ 3ಗಂಟೆ ಸುಮಾರಿಗೆ ಬೈಲಹೊಂಗಲದ ಸಂಸ್ಕೃತಿ ಬಾರ್‌ಗೆ ಹೋಗಿ ಕುಡಿಯಲು ಶುರು ಮಾಡಿದ್ದಾನೆ. ಈ ವೇಳೆ ಈತನ ಜೊತೆ ಇಬ್ಬರು ಸ್ನೇಹಿತರು‌ ಇದ್ದರಂತೆ. ರಾತ್ರಿ ವೇಳೆ ಬಾರ್‌ನಿಂದ ಆಚೆ ಬಂದ ಈತ ಬಾರ್ ಬಳಿಯೇ ಇರುವ ಕಾಂಪ್ಲೆಕ್ಸ್ ಒಂದರ ಮೆಟ್ಟಿಲ ಮೇಲೆ ಕೂತಿದ್ದಾನೆ.

ಈ ವೇಳೆ ಯಾರೋ ದುಷ್ಕರ್ಮಿಗಳು ಕತ್ತಿಗೆ ಪ್ಲಾಸ್ಟಿಕ್ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಆತನ ಎಳೆದೊಯ್ದು ಖುಲ್ಲಾ ಜಾಗದಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.‌ ಇನ್ನು, ಶಶಿಕಾಂತ್ ಮದ್ಯ ಸೇವಿಸುತ್ತಿದ್ದನಾದರೂ ಯಾರ ತಂಟೆಗೂ ಹೋಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.