ಗೋಕಾಕ : ರಾಜ್ಯ ರಾಜಕೀಯದಲ್ಲಿ ಕೇಂದ್ರಬಿಂದುವಾಗಿರುವ ಗೋಕಾಕ್ ಮತಕ್ಷೇತ್ರದ ಉಪಚುನಾವಣೆ ದಿನೇದಿನೇ ಕುತೂಹಲ ಮೂಡಿಸುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವ ಕೆಲಸ ಶುರುವಾಗಿದೆ.
ಇಂದು ಮಧ್ಯಾಹ್ನ ಅಶೋಕ ಪೂಜಾರಿ ಅವರು ಕಾರ್ಯಕರ್ತರ ಸಭೆ ನಡೆಸುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕರಾದ ಎ ಎಸ್ ಪಾಟೀಲ್(ನಡಹಳ್ಳಿ), ವಿಶ್ವನಾಥ್ ಪಾಟೀಲ್ ಸೇರಿದಂತೆ ಇತರರು ಅವರ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.