ETV Bharat / state

ಉಪಚುನಾವಣೆ LIVE UPDATES: ಬೈ ಎಲೆಕ್ಷನ್​ನಲ್ಲಿ ನೀರಸ ಮತದಾನ... ಮನೆಯಿಂದ ಹೊರ ಬಾರದ ಜನ

author img

By

Published : Apr 17, 2021, 6:43 AM IST

Updated : Apr 17, 2021, 7:42 PM IST

by election
by election

19:07 April 17

ಶೇ.46.70 ರಷ್ಟು ಮತದಾನ

ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್
ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್

ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಮತಚಲಾಯಿಸಿದ್ದಾರೆ. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಪುತ್ರ ಅಮರ್​ನಾಥ್ ಜಾರಕಿಹೊಳಿ ಜಾರಕಿಹೊಳಿ ಇಲ್ಲಿನ ಗೋಕಾಕ್​​ ಕ್ಷೇತ್ರದಲ್ಲಿ ಪಿಪಿಇ ಕಿಟ್ ಧರಿಸಿ ಮತಚಲಾಯಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸಹೋದರ ಲಖನ್ ಜಾರಕಿಹೊಳಿ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ. 

18:37 April 17

ಶೇ.46.70 ರಷ್ಟು ಮತದಾನ

ಸಂಜೆ 5ರವರೆಗೆ ಶೇ.46.07 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶಕುಮಾರ್ ‌ಮಾಹಿತಿ ನೀಡಿದ್ದಾರೆ. 

ಅರಬಾಂವಿ ಶೇ.43.39

ಗೋಕಾಕ್​ ಶೇ.50.55

ಬೆಳಗಾವಿ ಉತ್ತರ ಶೇ. 41.57

ಬೆಳಗಾವಿ ‌ದಕ್ಷಿಣ ಶೇ.42.53

ಬೆಳಗಾವಿ ‌ಗ್ರಾಮೀಣ ಶೇ.55.15

ಬೈಲಹೊಂಗಲ ಶೇ. 46.15

ಸವದತ್ತಿ ಶೇ. 47.05

ರಾಮದುರ್ಗ ಶೇ. 46.89

16:41 April 17

ಬೆಳಗಾವಿ ಲೋಕಸಭಾ ಉಪಕದನ: ಈವರೆಗೆ ಶೇ. 36.97ರಷ್ಟು ಮತದಾನ

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 36.97ರಷ್ಟು ಮತದಾನವಾಗಿದೆ. ಇದರ ಜೊತೆ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಈವರೆಗೆ ಶೇ.37.73ರಷ್ಟು ಮತದಾನವಾಗಿದ್ದರೆ, ಇತ್ತ ಮಸ್ಕಿ ಕ್ಷೇತ್ರದಲ್ಲಿ ಶೇ. 62ರಷ್ಟು  ಮತದಾನವಾಗಿದೆ. 

15:33 April 17

ಮಧ್ಯಾಹ್ನ 3ರವರೆಗೆ ಶೇ.33.55 ರಷ್ಟು ಮತದಾನ

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 33.55ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

  • ಅರಂಬಾವಿಯಲ್ಲಿ ಶೇ.28.08
  • ಗೋಕಾಕ್ ಶೇ.42.31
  • ಬೆಳಗಾವಿ ಉತ್ತರ ಶೇ. 32.5
  • ಬೆಳಗಾವಿ ‌ದಕ್ಷಿಣ ಶೇ.31.95
  • ಬೆಳಗಾವಿ ‌ಗ್ರಾಮೀಣ ಶೇ.52.74
  • ಬೈಲಹೊಂಗಲ ಶೇ. 33.45
  • ಸವದತ್ತಿ ಶೇ. 36
  • ರಾಮದುರ್ಗ ಶೇ. 25.03

14:21 April 17

ಮತ ಹಾಕುವ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮ‌ಸ್ಕಿ: ಉಪಚುನಾವಣೆಯಲ್ಲಿ ಮತದಾರನೋರ್ವ ತಾನು ಮತ ಹಾಕಿರುವ ದೃಶ್ಯವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿರುವ ಘಟನೆ ವಟಗಲ್ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ್​ಗೆ ಮತ ಹಾಕುವುದನ್ನು ವಿಡಿಯೋ ಮಾಡಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.

14:16 April 17

ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌

  • ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌
  • ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ರಮೇಶ್ ಜಾರಕಿಹೊಳಿ‌
  • ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗ

13:17 April 17

ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ ಆರೋಪ:

ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ
ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ

ರಾಯಚೂರು: ಮಸ್ಕಿಯ ಹಾಲಾಪುರ ಗ್ರಾಮದ ಮತಗಟ್ಟೆ ಕೇಂದ್ರ ಬಳಿ ಜನರು ಗುಂಪಾಗಿರುವುದನ್ನು ಕಂಡು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗರಂ ಆಗಿದ್ದಾರೆ.  

ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಭಾವ ಚಿತ್ರವಿರುವ ಮತದಾರರ ಚೀಟಿ ಹಂಚಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಮತಗಟ್ಟೆಗೆ ಆಗಮಿಸುತ್ತಿದ್ದ ಮತದಾರರ ಬಳಿ ಕಾಂಗ್ರೆಸ್ ಚಿಹ್ನೆಯಿರುವ ಮತದಾರರ ಚೀಟಿ ಪತ್ತೆಯಾಗಿದೆ. ಈ ಕುರಿತು ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾದೆ ಎನ್ನಲಾಗಿದೆ.

13:03 April 17

ಮತದಾನ ಮರೆತು ಲಸಿಕೆ ಹಾಕಿಸಿಕೊಳ್ಳಲು ಮುಂದಾದ ಜನ

ಗೋಕಾಕ್​: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಮರೆತು ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಜನ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ.

ಗೋಕಾಕ್​ ಕ್ಷೇತ್ರದಲ್ಲಿ ಬಹುತೇಕ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದು, ಜನರು ಜೀವಕ್ಕೆ ಹೆದರಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಲಸಿಕೆ ಹಾಕಿಸಿಕೊಳ್ಳುವ ವೇಳೆ ಸಾಮಾಜಿಕ ಅಂತರವನ್ನು ಮರೆತಿದ್ದಾರೆ.

12:38 April 17

ಪೊಲೀಸರೊಂದಿಗೆ ಕೈ ಕಾರ್ಯಕರ್ತೆ ವಾಗ್ವಾದ:

ಪೊಲೀಸರೊಂದಿಗೆ ಕಾಂಗ್ರೆಸ್​ ಕಾರ್ಯಕರ್ತೆ ವಾಗ್ವಾದ
ಪೊಲೀಸರೊಂದಿಗೆ ಕಾಂಗ್ರೆಸ್​ ಕಾರ್ಯಕರ್ತೆ ವಾಗ್ವಾದ

ಮಸ್ಕಿ: ಕುರುಕುಂದಾ ಗ್ರಾಮದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತೆ ವಾಗ್ವಾದ ನಡೆಸಿರುವ ಪ್ರಸಂಗ ನಡೆಯಿತು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕುರುಕುಂದಾ ಗ್ರಾಮದ ಮತಗಟ್ಟೆ ಹತ್ತಿರ ಬಿಜೆಪಿ ಕಾರ್ಯಕರ್ತರನ್ನು ಬಿಡುತ್ತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿ, ಬಿಜೆಪಿ ಕಾರ್ಯಕರ್ತರಿಗೆ ಮತಗಟ್ಟೆ ಹತ್ತಿರ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

12:30 April 17

ಬೆಳಗಾವಿ: ಮತದಾನ ಮಾಡುತ್ತಿರುವ ವಿಡಿಯೋ ವೈರಲ್ ಮಾಡಿದ ಪುಂಡರು

ಎಂಇಎಸ್ ಅಭ್ಯರ್ಥಿಗೆ ಮತ ಹಾಕುವ ವಿಡಿಯೋ ವೈರಲ್

ಎಂಇಎಸ್ ಅಭ್ಯರ್ಥಿ ಶುಭಂ ಶೇಳಕೆಗೆ ಮತದಾನ ಮಾಡ್ತಿರುವ ವಿಡಿಯೋ ವೈರಲ್

12:30 April 17

ಅಭ್ಯರ್ಥಿಗಳಿಂದ ಮತದಾನ

ಅಭ್ಯರ್ಥಿಗಳಿಂದ ಮತದಾನ
ಅಭ್ಯರ್ಥಿಗಳಿಂದ ಮತದಾನ

ಬೀದರ್: ಬಸವಕಲ್ಯಾಣ ಉಪಚುನಾವಣೆ ಕಣದಲ್ಲಿರುವ 12 ಜನ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ್‌ ರೈತ ಭವನದಲ್ಲಿ ಮತದಾನದ ಹಕ್ಕು ಚಲಾಯಿಸಿದರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರು ​ತಮ್ಮ ಮಗ ಗೌತಮರೊಂದಿಗೆ ತ್ರಿಪುರಾಂತ ಭಾಗದ ರೇಷ್ಮೆ ಇಲಾಖೆ ಕಚೇರಿ ಬಳಿಯಿರುವ ಮತಗಟ್ಟೆಗೆ ಬಂದು ವೋಟ್​ ಹಾಕಿದರು. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರು ಬಸವಕಲ್ಯಾಣ ನಗರದ ಹಜರತ್​ ದರ್ಗಾ ಬಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

12:03 April 17

ಮತ ಚಲಾಯಿಸಿದ ರಮೇಶ್ ಜಾರಕಿಹೊಳಿ ಪುತ್ರ

ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರ ಪತ್ನಿ ಅಂಬಿಕಾ
ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರ ಪತ್ನಿ ಅಂಬಿಕಾ

ಗೋಕಾಕ್​: ಬೆಳಗಾವಿ ಜಿಲ್ಲೆಯ ಗೋಕಾಕ್​ ನಗರದ ನ್ಯೂ ಇಂಗ್ಲೀಷ್ ಸ್ಕೂಲ್​ನಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರು ಪತ್ನಿ ಅಂಬಿಕಾ ಜೊತೆ ಬಂದು ಮತ ಚಲಾಯಿಸಿದರು.

ಮತಗಟ್ಟೆ ಸಂಖ್ಯೆ 135 ಮತದಾನ ಮಾಡಿದ ಸಂತೋಷ​, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

11:53 April 17

ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಶೇ 19.48  ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ 13.13 % ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್​ ಕುಮಾರ್ ಮಾಹಿತಿ ನೀಡಿದರು.

11 ರ ವರೆಗಿನ ಶೇಕಡಾವಾರು ವೋಟಿಂಗ್:

  • ಅರಬಾವಿ- 9.23%
  • ಗೋಕಾಕ್​ - 18.17%
  • ಬೆಳಗಾವಿ ಉತ್ತರ- 14.13%
  • ಬೆಳಗಾವಿ ‌ದಕ್ಷಿಣ - 12.22%
  • ಬೆಳಗಾವಿ ‌ಗ್ರಾಮೀಣ - 19.48 %
  • ಬೈಲಹೊಂಗಲ - 12.59%
  • ಸವದತ್ತಿ - 8.16 %
  • ರಾಮದುರ್ಗ- 9.19% ಮತದಾನವಾಗಿದೆ.

11:45 April 17

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ ಶೇ 19.30 ರಷ್ಟು ಮತದಾನವಾಗಿದೆ.

11:44 April 17

ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ
ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ

ಸವದತ್ತಿ ತಾಲೂಕಿನ ಬೈಲಹೊಂಗಲ ಮತ ಕ್ಷೇತ್ರದ ಹೊಸೂರ ಸರ್ಕಾರಿ ಶಾಲೆಯ ಬೂತ್​ನಲ್ಲಿ ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ ಮತದಾನ ಮಾಡಿದರು.

11:16 April 17

ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ‌: ವಿ‌.ಸೋಮಣ್ಣ

ಮೈಸೂರು: ಅನಿರೀಕ್ಷಿತವಾಗಿ ಬಂದ ಉಪ ಚುನಾವಣೆ ಇದು, ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ‌ ಎಂದು ವಸತಿ ಸಚಿವ ಸೋಮಣ್ಣ ಮೈಸೂರಿನಲ್ಲಿ ಹೇಳಿದರು.

ಇಂದು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ವಸತಿ ಸಚಿವ ವಿ‌.ಸೋಮಣ್ಣ ಮಾಧ್ಯಮದ ಜೊತೆ ಮಾತನಾಡಿ, ಅನಿರೀಕ್ಷಿತವಾಗಿ ಬಂದ ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆವನ್ನು ನಾವು ಗೆಲ್ಲುತ್ತೇವೆ. ಹಣ ಹಂಚಿಕೆ ಮಾಡಿ ಉಪಚುನಾವಣೆಯನ್ನು ಬಿಜೆಪಿಯವರು ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್​ನವರು ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ಈಗ ಇಲ್ಲ ಎಂದರು.

10:28 April 17

ಗೋಕಾಕ್​ನಲ್ಲಿ ಮತದಾನ ಮಾಡಲು ಹಿಂದೇಟು

ಮತಗಟ್ಟೆಯತ್ತ ಸುಳಿಯದ ಜನ
ಮತಗಟ್ಟೆಯತ್ತ ಸುಳಿಯದ ಜನ

ಗೋಕಾಕ್​ : ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗೋಕಾಕ್​ನಲ್ಲಿ ಮತದಾನ ಮಾಡಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್​ ಪಟ್ಟಣದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 100 ಹಾಗೂ 101 ರಲ್ಲಿ ಮತದಾನ ಮಾಡಲು ಯಾರು ಮುಂದಾಗುತ್ತಿಲ್ಲ. ಹೀಗಾಗಿ ಮತಗಟ್ಟೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೆನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಮತದಾರರನ್ನು ಮತಗಟ್ಟೆಗೆ ಕಳಿಸಲಾಗುತ್ತಿದೆ.

10:27 April 17

ಮತ ಚಲಾಯಿಸುವಂತೆ ಸಿಎಂ ಕರೆ:

ಸಿಎಂ ಬಿ.ಎಸ್​.ಯಡಿಯೂರಪ್ ಟ್ವೀಟ್​
ಸಿಎಂ ಬಿ.ಎಸ್​.ಯಡಿಯೂರಪ್ ಟ್ವೀಟ್​

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

ಟ್ವೀಟ್ ಮೂಲಕ ಕರೆ ನೀಡಿರುವ ಅವರು,  ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ಇಂದು ತಪ್ಪದೇ ಮತ ಚಲಾಯಿಸಿ. ಪ್ರಜಾಪ್ರಭುತ್ವದ ಆಧಾರವೇ ಮತದಾನ, ಅದು ನಮ್ಮ ಹಕ್ಕೂ ಕೂಡ ಹೌದು, ಕರ್ತವ್ಯವೂ ಹೌದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ಪ್ರಜಾತಂತ್ರವನ್ನು ಬಲಪಡಿಸಿ‌ ಎಂದು ಮನವಿ ಮಾಡಿದ್ದಾರೆ.

10:09 April 17

ಮತದಾನ ಮಾಡಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ
ಮತದಾನ ಮಾಡಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ

ಬೆಳಗಾವಿ:

  • ಮತ ಹಾಕಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ
  • ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ ಅವರಿಂದ ಮತದಾನ
  • ಮಾಧ್ವ ನಗರದಲ್ಲಿರುವ 12 ನೇ ನಂಬರ್ ಮರಾಠಿ ಶಾಲೆಯ 109 ನೇ ಮತಗಟ್ಟೆಯಲ್ಲಿ ವೋಟಿಂಗ್​

09:55 April 17

ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು:

ಮತದಾನ ಬಹಿಷ್ಕರಿಸಿದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
ಮತದಾನ ಬಹಿಷ್ಕರಿಸಿದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
  • ಬೆಳಗಾವಿ ಲೋಕಸಭಾ ಕ್ಷೇತ್ರದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
  • ಮತದಾನ ಬಹಿಷ್ಕರಿಸಿದ ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು
  • ನೆರೆ ಪ್ರವಾಹದಿಂದ ತತ್ತರಿಸಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
  • ಮಲಪ್ರಭಾ ನದಿ ತಟದಲ್ಲಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಗಳು
  • ಗ್ರಾಮ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಒತ್ತಾಯ
  • ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸದ ಹಿನ್ನಲೆ ಚುನಾವಣೆಗೆ ಬಹಿಷ್ಕಾರ.
  • ಗ್ರಾಮಗಳ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

09:37 April 17

ಬೆಳಗ್ಗೆ 9ರ ವರೆಗಿನ ಶೇಕಡಾವಾರು ವೋಟಿಂಗ್:

ಮತ ಹಾಕುತ್ತಿರುವ ಮತದಾರರು
ಮತ ಹಾಕುತ್ತಿರುವ ಮತದಾರರು

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ ಶೇ 11.23ರಷ್ಟು ಮತದಾನವಾಗಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇ 7.46 ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ 5.47% ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್​ ಕುಮಾರ್ ಮಾಹಿತಿ ನೀಡಿದರು.

ಬೆಳಗ್ಗೆ 9 ಗಂಟೆವರೆಗಿನ ಶೇಕಡಾವಾರು ಮತದಾನ:

  • ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ-2.69 %
  • ಬೆಳಗಾವಿ ದಕ್ಷಿಣ-2.60%
  • ಬೆಳಗಾವಿ ಗ್ರಾಮೀಣ-% 9.00%
  • ಬೈಲಹೊಂಗಲ - 5.5%
  • ಸವದತ್ತಿ- 6.89%
  • ರಾಮದುರ್ಗ - 6.46%
  • ಗೋಕಾಕ್- 5.84%
  • ಅರಭಾವಿ -3.12% ಮತದಾನವಾಗಿದೆ.

09:25 April 17

ಬಿರುಸಿನಿಂದ ಸಾಗಿದ ಮತದಾನ:

ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮತದಾರರು
ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮತದಾರರು

ಬೀದರ್: ಬಸವಕಲ್ಯಾಣದಲ್ಲಿ ಮತದಾನ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಸೈಯದ್ ಖಾದ್ರಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸೇರಿದಂತೆ ಒಟ್ಟು 12 ಜನ ಅಭ್ಯರ್ಥಿಗಳು ಮತದಾನ ಮಾಡಿದರು.

ಬೆಳೆಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಮತಗಟ್ಟೆ ಕೇಂದ್ರದತ್ತ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಹ ಬಿರುಸಿನಿಂದ ಮತದಾನ ಸಾಗುತ್ತಿದೆ.

ಒಟ್ಟು 326 ಮತಗಟ್ಟೆಗಳಲ್ಲಿ 2,39,782 ಜನ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, ಎರಡು ಸಖಿ ಮತಗಟ್ಟೆಗಳು, 172 ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.

08:50 April 17

ಮನೆ ಮಹಡಿಯಿಂದ ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್

ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್
ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಹೋಂ ಕ್ವಾರಂಟೈನ್​ನಲ್ಲಿದ್ದಾರೆ‌. ತಮ್ಮ ಮನೆಯ ಬಳಿಯಿರುವ ಮತಗಟ್ಟೆಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯನ್ನ ಮನೆಯ ಮಹಡಿಯಿಂದಲೇ ವೀಕ್ಷಿಸಿದರು.

ಕಳೆದ 11ನೇ ತಾರೀಕಿನಂದು ಪ್ರತಾಪಗೌಡ ಪಾಟೀಲ್​ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 

08:21 April 17

ಬೆಳಗಾವಿ:

ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
  • ಉತ್ಸಾಹದಿಂದ ಮತದಾನ ಮಾಡಿದ ವೃದ್ಧ ದಂಪತಿ
  • ಬೆಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ವೃದ್ಧ
  • 78 ವರ್ಷದ ಗಜಾನನ ಹೆಗಡೆ, 71 ವರ್ಷದ ಸಾವಿತ್ರಿ ಹೆಗಡೆಯಿಂದ ಮತದಾನ
  • ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆ 2 ರಲ್ಲಿ ಹಕ್ಕು ಚಲಾಯಿಸಿದ ವೃದ್ಧ ದಂಪತಿ
  • ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
  • ವೃದ್ಧನಿಗೆ ಕರ್ತವ್ಯ ನಿರತ ಪೊಲೀಸ್ ಪೇದೆಯಿಂದ ಸಹಾಯ

08:14 April 17

ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್
ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್

ಬೆಳಗಾವಿ: ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್ ಅವರು ಇಂದು‌ ಬೆಳಗ್ಗೆ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಈ ವೇಳೆ ಕೋವಿಡ್-19 ಮಾರ್ಗಸೂಚಿ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು.

08:13 April 17

ಮತದಾನಕ್ಕೂ ಮುನ್ನ ಟೆಂಪಲ್ ರನ್

ಮತ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ
ಮತ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ
  • ಮತದಾನಕ್ಕೂ ಮುನ್ನ ಟೆಂಪಲ್ ರನ್ ಪ್ರಾರಂಭಿಸಿದ ಕೈ ಅಭ್ಯರ್ಥಿ
  • ಬಸನಗೌಡ ತುರುವಿಹಾಳರಿಂದ ಟೆಂಪಲ್ ರನ್
  • ದೇವರ ದರ್ಶನ ನಂತರ ಮತದಾನ‌ ಮಾಡಿದ ಬಸನಗೌಡ
  • ಮತಗಟ್ಟೆ ಸಂಖ್ಯೆ 217 ರಲ್ಲಿ ಮತ ಹಾಕಿದ ಬಸನಗೌಡ
  • ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕುಟುಂಬಸ್ಥರಿಂದ ಟೆಂಪಲ್ ರನ್
  • ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮೂರು ಜನ ಮಕ್ಕಳು, ಇಬ್ಬರು ಸೊಸೆಯರು
  • ಮತಗಟ್ಟೆ ಸಂಖ್ಯೆ 88 ರಲ್ಲಿ ಹಕ್ಕು ಚಲಾಯಿಸಿದ ಪ್ರತಾಪಗೌಡ ಪಾಟೀಲ್

08:13 April 17

ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
  • ಮತದಾನ ಮಾಡಿದ ಬೆಳಗಾವಿ ದಕ್ಷಿಣ ‌ವಿಧಾನಸಭೆ ಕ್ಷೇತ್ರದ ‌ಶಾಸಕ ಅಭಯ ಪಾಟೀಲ್​
  • ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
  • ಶಹಾಪುರದ 8 ನೇ ಸರ್ಕಾರಿ ಶಾಲೆಯ 2ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಪಾಟೀಲ್​

07:39 April 17

  • ಮಸ್ಕಿಯಲ್ಲಿ ಮತಗಟ್ಟೆ ಸಂಖ್ಯೆ 88ರಲ್ಲಿ ಸರತಿ ಸಾಲಿನಲ್ಲಿ ನಿಂತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ ಕುಟುಂಬದವರಿಂದ ಮತದಾನ
  • ಪ್ರತಾಪ್ ಗೌಡ ಪಾಟೀಲ್ ಪುತ್ರಿ ಪ್ರೀತಿ ಹಾಗೂ ಪತ್ನಿ ಪದ್ಮಾವತಿಯಿಂದ ಮತದಾನ
  • ಕೊರೊನಾ ಹಿನ್ನೆಲೆ, ಇಂದು ಸಂಜೆ 6ರಿಂದ 7 ಗಂಟೆಯ ಸಮಯದಲ್ಲಿ ಮತದಾನ ಮಾಡಲಿರುವ ಪ್ರತಾಪ್ ಗೌಡ ಪಾಟೀಲ್
  • ಪ್ರತಾಪ್ ಗೌಡ ಪಾಟೀಲ್ ಮನೆ ಮುಂದೆ ಇರುವ ಮತಗಟ್ಟೆ ಸಂಖ್ಯೆ 88
  • ಮನೆಯ ಮಹಡಿ ಮೇಲಿಂದ ಮತಗಟ್ಟೆ ವೀಕ್ಷಣೆ ಮಾಡಿದ ಪ್ರತಾಪ್ ಗೌಡ ಪಾಟೀಲ್

07:24 April 17

ಮಸ್ಕಿಯಲ್ಲಿ ಮತದಾನ ಆರಂಭ

ಮಸ್ಕಿ ಪಟ್ಟಣದಲ್ಲಿ ತೆರೆದಿರುವ ಸಖಿ ಮತಗಟ್ಟೆ
ಮಸ್ಕಿ ಪಟ್ಟಣದಲ್ಲಿ ತೆರೆದಿರುವ ಸಖಿ ಮತಗಟ್ಟೆ

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದೆ. ಚುನಾವಣೆ ಅಖಾಡದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದು ಮತದಾನದ ವೇಳೆ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ.

ಮತದಾನಕ್ಕಾಗಿ ಒಟ್ಟು 305 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 62-ಸೂಕ್ಷ್ಮ, 7-ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ಒಟ್ಟು 2,309 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 2,06,429 ಮತದಾರರಿದ್ದು, 1,01,340 ಪುರುಷರು ಹಾಗೂ 1,05,076 ಮಹಿಳೆಯರು ಮತ್ತು 13 ಇತರೆ ಮತದಾರರಿದ್ದಾರೆ.  

ಮಸ್ಕಿ ಪಟ್ಟಣ ಮತ್ತು ತುರುವಿಹಾಳ ಪಟ್ಟಣದಲ್ಲಿ ಸಖಿ ಮತಗಟ್ಟೆ ತೆರಯಲಾಗಿದೆ. 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳಿವೆ. ಭದ್ರತೆಗಾಗಿ ಒಟ್ಟು 739 ಪೊಲೀಸರು, 71 ಎಎಸ್ಐ, 25 ಪಿಎಸ್ಐ, 7 ಸಿಪಿಐಗಳು, 3 ಡಿವೈಎಸ್​ಪಿ ಸೇರಿದಂತೆ ಒಟ್ಟು 847 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಮೂರು ಸಿಆರ್​ಪಿಎಫ್, ಹೆಚ್ಚುವರಿಯಾಗಿ ಕೇಂದ್ರ ಮೀಸಲು ಪಡೆ, ಕೆಎಸ್ಆರ್​ಪಿ ತಂಡಗಳನ್ನು ಚುನಾವಣಾ ಸ್ಥಳದಲ್ಲಿ ನಿಯೋಜನೆ ಮಾಡಲಾದೆ. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಮತದಾನಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 

07:18 April 17

ಬೆಳಗಾವಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ:

ಮತದಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ
ಮತದಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತದಾನಕ್ಕೆ ಆಗಮಿಸಿದ್ದು, ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಎರಡರಲ್ಲಿ ಮತದಾನ ಮಾಡಿದ್ದಾರೆ.

ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಮತದಾರರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಂಗಳಾ ಅವರು, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈ ವೇಳೆ ಮಂಗಳಾ ಅಂಗಡಿಗೆ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಸಾಥ್ ನೀಡಿದರು. 

06:35 April 17

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:

ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಈ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಬೆಳಗಾವಿ ಕ್ಷೇತ್ರ:

  • ಬಿಜೆಪಿ - ಮಂಗಳಾ ಅಂಗಡಿ
  • ಕಾಂಗ್ರೆಸ್ -‌ ಸತೀಶ್‌ ಜಾರಕಿಹೊಳಿ

ಮಸ್ಕಿ ಕ್ಷೇತ್ರ:

  • ಬಿಜೆಪಿ - ಪ್ರತಾಪಗೌಡ ಪಾಟೀಲ್‌
  • ಕಾಂಗ್ರೆಸ್‌ - ಬಸನಗೌಡ ತುರುವಿಹಾಳ

ಬಸವಕಲ್ಯಾಣ ಕ್ಷೇತ್ರ:

  • ಬಿಜೆಪಿ - ಶರಣು ಸಲಗರ್‌
  • ಕಾಂಗ್ರೆಸ್‌ - ಮಾಲಾ ನಾರಾಯಣ ರಾವ್‌
  • ಜೆಡಿಎಸ್ -‌ ಸೈಯದ್‌ ಯಶ್ರಬ್‌ ಅಲಿ ಖಾದ್ರಿ
  • ಪಕ್ಷೇತರ - ಮಲ್ಲಿಕಾರ್ಜುನ ಖೂಬಾ

06:18 April 17

ಮೂರು ಕ್ಷೇತ್ರಗಳ ಉಪಚುನಾವಣೆ:

ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,821,614 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 2,566 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 16 ಸಖಿ ಬೂತ್​​ಗಳಾಗಿವೆ.

ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ, 239,981 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 326 ಮತಗಟ್ಟೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಎರಡು ಸಖಿ ಬೂತ್ ಗಳು ಇರಲಿವೆ.

ಶಾಸಕ ಸ್ಥಾನಕ್ಕೆ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 206,443 ಮತದಾರರು ಹಕ್ಕು ಚಲಾಯಿಸಲಿದ್ದು. ಕ್ಷೇತ್ರದಲ್ಲಿ ಮತದಾನಕ್ಕೆ 305 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಎರಡು ಸಖಿ ಬೂತ್​ಗಳಿವೆ.

ಒಟ್ಟು ಮೂರೂ ಕ್ಷೇತ್ರಗಳಿಂದ 30 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಇಂದು ಇವಿಎಂ ಯಂತ್ರದಲ್ಲಿ ಭದ್ರವಾಗಲಿದೆ. ಇಂದು ಚುನಾವಣೆ ನಡೆದರೂ ಮೇ 2 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶಕ್ಕಾಗಿ ಅಭ್ಯರ್ಥಿಗಳು 15 ದಿನ ಕಾಯಬೇಕಿದೆ.

19:07 April 17

ಶೇ.46.70 ರಷ್ಟು ಮತದಾನ

ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್
ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್

ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಮತಚಲಾಯಿಸಿದ್ದಾರೆ. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಪುತ್ರ ಅಮರ್​ನಾಥ್ ಜಾರಕಿಹೊಳಿ ಜಾರಕಿಹೊಳಿ ಇಲ್ಲಿನ ಗೋಕಾಕ್​​ ಕ್ಷೇತ್ರದಲ್ಲಿ ಪಿಪಿಇ ಕಿಟ್ ಧರಿಸಿ ಮತಚಲಾಯಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸಹೋದರ ಲಖನ್ ಜಾರಕಿಹೊಳಿ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ. 

18:37 April 17

ಶೇ.46.70 ರಷ್ಟು ಮತದಾನ

ಸಂಜೆ 5ರವರೆಗೆ ಶೇ.46.07 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶಕುಮಾರ್ ‌ಮಾಹಿತಿ ನೀಡಿದ್ದಾರೆ. 

ಅರಬಾಂವಿ ಶೇ.43.39

ಗೋಕಾಕ್​ ಶೇ.50.55

ಬೆಳಗಾವಿ ಉತ್ತರ ಶೇ. 41.57

ಬೆಳಗಾವಿ ‌ದಕ್ಷಿಣ ಶೇ.42.53

ಬೆಳಗಾವಿ ‌ಗ್ರಾಮೀಣ ಶೇ.55.15

ಬೈಲಹೊಂಗಲ ಶೇ. 46.15

ಸವದತ್ತಿ ಶೇ. 47.05

ರಾಮದುರ್ಗ ಶೇ. 46.89

16:41 April 17

ಬೆಳಗಾವಿ ಲೋಕಸಭಾ ಉಪಕದನ: ಈವರೆಗೆ ಶೇ. 36.97ರಷ್ಟು ಮತದಾನ

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 36.97ರಷ್ಟು ಮತದಾನವಾಗಿದೆ. ಇದರ ಜೊತೆ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಈವರೆಗೆ ಶೇ.37.73ರಷ್ಟು ಮತದಾನವಾಗಿದ್ದರೆ, ಇತ್ತ ಮಸ್ಕಿ ಕ್ಷೇತ್ರದಲ್ಲಿ ಶೇ. 62ರಷ್ಟು  ಮತದಾನವಾಗಿದೆ. 

15:33 April 17

ಮಧ್ಯಾಹ್ನ 3ರವರೆಗೆ ಶೇ.33.55 ರಷ್ಟು ಮತದಾನ

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 33.55ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

  • ಅರಂಬಾವಿಯಲ್ಲಿ ಶೇ.28.08
  • ಗೋಕಾಕ್ ಶೇ.42.31
  • ಬೆಳಗಾವಿ ಉತ್ತರ ಶೇ. 32.5
  • ಬೆಳಗಾವಿ ‌ದಕ್ಷಿಣ ಶೇ.31.95
  • ಬೆಳಗಾವಿ ‌ಗ್ರಾಮೀಣ ಶೇ.52.74
  • ಬೈಲಹೊಂಗಲ ಶೇ. 33.45
  • ಸವದತ್ತಿ ಶೇ. 36
  • ರಾಮದುರ್ಗ ಶೇ. 25.03

14:21 April 17

ಮತ ಹಾಕುವ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮ‌ಸ್ಕಿ: ಉಪಚುನಾವಣೆಯಲ್ಲಿ ಮತದಾರನೋರ್ವ ತಾನು ಮತ ಹಾಕಿರುವ ದೃಶ್ಯವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿರುವ ಘಟನೆ ವಟಗಲ್ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ್​ಗೆ ಮತ ಹಾಕುವುದನ್ನು ವಿಡಿಯೋ ಮಾಡಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.

14:16 April 17

ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌

  • ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌
  • ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ರಮೇಶ್ ಜಾರಕಿಹೊಳಿ‌
  • ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗ

13:17 April 17

ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ ಆರೋಪ:

ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ
ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ

ರಾಯಚೂರು: ಮಸ್ಕಿಯ ಹಾಲಾಪುರ ಗ್ರಾಮದ ಮತಗಟ್ಟೆ ಕೇಂದ್ರ ಬಳಿ ಜನರು ಗುಂಪಾಗಿರುವುದನ್ನು ಕಂಡು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗರಂ ಆಗಿದ್ದಾರೆ.  

ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಭಾವ ಚಿತ್ರವಿರುವ ಮತದಾರರ ಚೀಟಿ ಹಂಚಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಮತಗಟ್ಟೆಗೆ ಆಗಮಿಸುತ್ತಿದ್ದ ಮತದಾರರ ಬಳಿ ಕಾಂಗ್ರೆಸ್ ಚಿಹ್ನೆಯಿರುವ ಮತದಾರರ ಚೀಟಿ ಪತ್ತೆಯಾಗಿದೆ. ಈ ಕುರಿತು ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾದೆ ಎನ್ನಲಾಗಿದೆ.

13:03 April 17

ಮತದಾನ ಮರೆತು ಲಸಿಕೆ ಹಾಕಿಸಿಕೊಳ್ಳಲು ಮುಂದಾದ ಜನ

ಗೋಕಾಕ್​: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಮರೆತು ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಜನ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ.

ಗೋಕಾಕ್​ ಕ್ಷೇತ್ರದಲ್ಲಿ ಬಹುತೇಕ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದು, ಜನರು ಜೀವಕ್ಕೆ ಹೆದರಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಲಸಿಕೆ ಹಾಕಿಸಿಕೊಳ್ಳುವ ವೇಳೆ ಸಾಮಾಜಿಕ ಅಂತರವನ್ನು ಮರೆತಿದ್ದಾರೆ.

12:38 April 17

ಪೊಲೀಸರೊಂದಿಗೆ ಕೈ ಕಾರ್ಯಕರ್ತೆ ವಾಗ್ವಾದ:

ಪೊಲೀಸರೊಂದಿಗೆ ಕಾಂಗ್ರೆಸ್​ ಕಾರ್ಯಕರ್ತೆ ವಾಗ್ವಾದ
ಪೊಲೀಸರೊಂದಿಗೆ ಕಾಂಗ್ರೆಸ್​ ಕಾರ್ಯಕರ್ತೆ ವಾಗ್ವಾದ

ಮಸ್ಕಿ: ಕುರುಕುಂದಾ ಗ್ರಾಮದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತೆ ವಾಗ್ವಾದ ನಡೆಸಿರುವ ಪ್ರಸಂಗ ನಡೆಯಿತು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕುರುಕುಂದಾ ಗ್ರಾಮದ ಮತಗಟ್ಟೆ ಹತ್ತಿರ ಬಿಜೆಪಿ ಕಾರ್ಯಕರ್ತರನ್ನು ಬಿಡುತ್ತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿ, ಬಿಜೆಪಿ ಕಾರ್ಯಕರ್ತರಿಗೆ ಮತಗಟ್ಟೆ ಹತ್ತಿರ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

12:30 April 17

ಬೆಳಗಾವಿ: ಮತದಾನ ಮಾಡುತ್ತಿರುವ ವಿಡಿಯೋ ವೈರಲ್ ಮಾಡಿದ ಪುಂಡರು

ಎಂಇಎಸ್ ಅಭ್ಯರ್ಥಿಗೆ ಮತ ಹಾಕುವ ವಿಡಿಯೋ ವೈರಲ್

ಎಂಇಎಸ್ ಅಭ್ಯರ್ಥಿ ಶುಭಂ ಶೇಳಕೆಗೆ ಮತದಾನ ಮಾಡ್ತಿರುವ ವಿಡಿಯೋ ವೈರಲ್

12:30 April 17

ಅಭ್ಯರ್ಥಿಗಳಿಂದ ಮತದಾನ

ಅಭ್ಯರ್ಥಿಗಳಿಂದ ಮತದಾನ
ಅಭ್ಯರ್ಥಿಗಳಿಂದ ಮತದಾನ

ಬೀದರ್: ಬಸವಕಲ್ಯಾಣ ಉಪಚುನಾವಣೆ ಕಣದಲ್ಲಿರುವ 12 ಜನ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ್‌ ರೈತ ಭವನದಲ್ಲಿ ಮತದಾನದ ಹಕ್ಕು ಚಲಾಯಿಸಿದರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರು ​ತಮ್ಮ ಮಗ ಗೌತಮರೊಂದಿಗೆ ತ್ರಿಪುರಾಂತ ಭಾಗದ ರೇಷ್ಮೆ ಇಲಾಖೆ ಕಚೇರಿ ಬಳಿಯಿರುವ ಮತಗಟ್ಟೆಗೆ ಬಂದು ವೋಟ್​ ಹಾಕಿದರು. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರು ಬಸವಕಲ್ಯಾಣ ನಗರದ ಹಜರತ್​ ದರ್ಗಾ ಬಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

12:03 April 17

ಮತ ಚಲಾಯಿಸಿದ ರಮೇಶ್ ಜಾರಕಿಹೊಳಿ ಪುತ್ರ

ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರ ಪತ್ನಿ ಅಂಬಿಕಾ
ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರ ಪತ್ನಿ ಅಂಬಿಕಾ

ಗೋಕಾಕ್​: ಬೆಳಗಾವಿ ಜಿಲ್ಲೆಯ ಗೋಕಾಕ್​ ನಗರದ ನ್ಯೂ ಇಂಗ್ಲೀಷ್ ಸ್ಕೂಲ್​ನಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ​ ಅವರು ಪತ್ನಿ ಅಂಬಿಕಾ ಜೊತೆ ಬಂದು ಮತ ಚಲಾಯಿಸಿದರು.

ಮತಗಟ್ಟೆ ಸಂಖ್ಯೆ 135 ಮತದಾನ ಮಾಡಿದ ಸಂತೋಷ​, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

11:53 April 17

ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಶೇ 19.48  ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ 13.13 % ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್​ ಕುಮಾರ್ ಮಾಹಿತಿ ನೀಡಿದರು.

11 ರ ವರೆಗಿನ ಶೇಕಡಾವಾರು ವೋಟಿಂಗ್:

  • ಅರಬಾವಿ- 9.23%
  • ಗೋಕಾಕ್​ - 18.17%
  • ಬೆಳಗಾವಿ ಉತ್ತರ- 14.13%
  • ಬೆಳಗಾವಿ ‌ದಕ್ಷಿಣ - 12.22%
  • ಬೆಳಗಾವಿ ‌ಗ್ರಾಮೀಣ - 19.48 %
  • ಬೈಲಹೊಂಗಲ - 12.59%
  • ಸವದತ್ತಿ - 8.16 %
  • ರಾಮದುರ್ಗ- 9.19% ಮತದಾನವಾಗಿದೆ.

11:45 April 17

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ ಶೇ 19.30 ರಷ್ಟು ಮತದಾನವಾಗಿದೆ.

11:44 April 17

ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ
ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ

ಸವದತ್ತಿ ತಾಲೂಕಿನ ಬೈಲಹೊಂಗಲ ಮತ ಕ್ಷೇತ್ರದ ಹೊಸೂರ ಸರ್ಕಾರಿ ಶಾಲೆಯ ಬೂತ್​ನಲ್ಲಿ ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ ಮತದಾನ ಮಾಡಿದರು.

11:16 April 17

ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ‌: ವಿ‌.ಸೋಮಣ್ಣ

ಮೈಸೂರು: ಅನಿರೀಕ್ಷಿತವಾಗಿ ಬಂದ ಉಪ ಚುನಾವಣೆ ಇದು, ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ‌ ಎಂದು ವಸತಿ ಸಚಿವ ಸೋಮಣ್ಣ ಮೈಸೂರಿನಲ್ಲಿ ಹೇಳಿದರು.

ಇಂದು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ವಸತಿ ಸಚಿವ ವಿ‌.ಸೋಮಣ್ಣ ಮಾಧ್ಯಮದ ಜೊತೆ ಮಾತನಾಡಿ, ಅನಿರೀಕ್ಷಿತವಾಗಿ ಬಂದ ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆವನ್ನು ನಾವು ಗೆಲ್ಲುತ್ತೇವೆ. ಹಣ ಹಂಚಿಕೆ ಮಾಡಿ ಉಪಚುನಾವಣೆಯನ್ನು ಬಿಜೆಪಿಯವರು ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್​ನವರು ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ಈಗ ಇಲ್ಲ ಎಂದರು.

10:28 April 17

ಗೋಕಾಕ್​ನಲ್ಲಿ ಮತದಾನ ಮಾಡಲು ಹಿಂದೇಟು

ಮತಗಟ್ಟೆಯತ್ತ ಸುಳಿಯದ ಜನ
ಮತಗಟ್ಟೆಯತ್ತ ಸುಳಿಯದ ಜನ

ಗೋಕಾಕ್​ : ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗೋಕಾಕ್​ನಲ್ಲಿ ಮತದಾನ ಮಾಡಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್​ ಪಟ್ಟಣದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 100 ಹಾಗೂ 101 ರಲ್ಲಿ ಮತದಾನ ಮಾಡಲು ಯಾರು ಮುಂದಾಗುತ್ತಿಲ್ಲ. ಹೀಗಾಗಿ ಮತಗಟ್ಟೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೆನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಮತದಾರರನ್ನು ಮತಗಟ್ಟೆಗೆ ಕಳಿಸಲಾಗುತ್ತಿದೆ.

10:27 April 17

ಮತ ಚಲಾಯಿಸುವಂತೆ ಸಿಎಂ ಕರೆ:

ಸಿಎಂ ಬಿ.ಎಸ್​.ಯಡಿಯೂರಪ್ ಟ್ವೀಟ್​
ಸಿಎಂ ಬಿ.ಎಸ್​.ಯಡಿಯೂರಪ್ ಟ್ವೀಟ್​

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.

ಟ್ವೀಟ್ ಮೂಲಕ ಕರೆ ನೀಡಿರುವ ಅವರು,  ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ಇಂದು ತಪ್ಪದೇ ಮತ ಚಲಾಯಿಸಿ. ಪ್ರಜಾಪ್ರಭುತ್ವದ ಆಧಾರವೇ ಮತದಾನ, ಅದು ನಮ್ಮ ಹಕ್ಕೂ ಕೂಡ ಹೌದು, ಕರ್ತವ್ಯವೂ ಹೌದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ಪ್ರಜಾತಂತ್ರವನ್ನು ಬಲಪಡಿಸಿ‌ ಎಂದು ಮನವಿ ಮಾಡಿದ್ದಾರೆ.

10:09 April 17

ಮತದಾನ ಮಾಡಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ
ಮತದಾನ ಮಾಡಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ

ಬೆಳಗಾವಿ:

  • ಮತ ಹಾಕಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ
  • ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ ಅವರಿಂದ ಮತದಾನ
  • ಮಾಧ್ವ ನಗರದಲ್ಲಿರುವ 12 ನೇ ನಂಬರ್ ಮರಾಠಿ ಶಾಲೆಯ 109 ನೇ ಮತಗಟ್ಟೆಯಲ್ಲಿ ವೋಟಿಂಗ್​

09:55 April 17

ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು:

ಮತದಾನ ಬಹಿಷ್ಕರಿಸಿದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
ಮತದಾನ ಬಹಿಷ್ಕರಿಸಿದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
  • ಬೆಳಗಾವಿ ಲೋಕಸಭಾ ಕ್ಷೇತ್ರದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
  • ಮತದಾನ ಬಹಿಷ್ಕರಿಸಿದ ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು
  • ನೆರೆ ಪ್ರವಾಹದಿಂದ ತತ್ತರಿಸಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
  • ಮಲಪ್ರಭಾ ನದಿ ತಟದಲ್ಲಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಗಳು
  • ಗ್ರಾಮ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಒತ್ತಾಯ
  • ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸದ ಹಿನ್ನಲೆ ಚುನಾವಣೆಗೆ ಬಹಿಷ್ಕಾರ.
  • ಗ್ರಾಮಗಳ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

09:37 April 17

ಬೆಳಗ್ಗೆ 9ರ ವರೆಗಿನ ಶೇಕಡಾವಾರು ವೋಟಿಂಗ್:

ಮತ ಹಾಕುತ್ತಿರುವ ಮತದಾರರು
ಮತ ಹಾಕುತ್ತಿರುವ ಮತದಾರರು

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ ಶೇ 11.23ರಷ್ಟು ಮತದಾನವಾಗಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇ 7.46 ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ 5.47% ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್​ ಕುಮಾರ್ ಮಾಹಿತಿ ನೀಡಿದರು.

ಬೆಳಗ್ಗೆ 9 ಗಂಟೆವರೆಗಿನ ಶೇಕಡಾವಾರು ಮತದಾನ:

  • ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ-2.69 %
  • ಬೆಳಗಾವಿ ದಕ್ಷಿಣ-2.60%
  • ಬೆಳಗಾವಿ ಗ್ರಾಮೀಣ-% 9.00%
  • ಬೈಲಹೊಂಗಲ - 5.5%
  • ಸವದತ್ತಿ- 6.89%
  • ರಾಮದುರ್ಗ - 6.46%
  • ಗೋಕಾಕ್- 5.84%
  • ಅರಭಾವಿ -3.12% ಮತದಾನವಾಗಿದೆ.

09:25 April 17

ಬಿರುಸಿನಿಂದ ಸಾಗಿದ ಮತದಾನ:

ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮತದಾರರು
ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮತದಾರರು

ಬೀದರ್: ಬಸವಕಲ್ಯಾಣದಲ್ಲಿ ಮತದಾನ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಸೈಯದ್ ಖಾದ್ರಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸೇರಿದಂತೆ ಒಟ್ಟು 12 ಜನ ಅಭ್ಯರ್ಥಿಗಳು ಮತದಾನ ಮಾಡಿದರು.

ಬೆಳೆಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಮತಗಟ್ಟೆ ಕೇಂದ್ರದತ್ತ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಹ ಬಿರುಸಿನಿಂದ ಮತದಾನ ಸಾಗುತ್ತಿದೆ.

ಒಟ್ಟು 326 ಮತಗಟ್ಟೆಗಳಲ್ಲಿ 2,39,782 ಜನ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, ಎರಡು ಸಖಿ ಮತಗಟ್ಟೆಗಳು, 172 ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.

08:50 April 17

ಮನೆ ಮಹಡಿಯಿಂದ ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್

ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್
ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಹೋಂ ಕ್ವಾರಂಟೈನ್​ನಲ್ಲಿದ್ದಾರೆ‌. ತಮ್ಮ ಮನೆಯ ಬಳಿಯಿರುವ ಮತಗಟ್ಟೆಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯನ್ನ ಮನೆಯ ಮಹಡಿಯಿಂದಲೇ ವೀಕ್ಷಿಸಿದರು.

ಕಳೆದ 11ನೇ ತಾರೀಕಿನಂದು ಪ್ರತಾಪಗೌಡ ಪಾಟೀಲ್​ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 

08:21 April 17

ಬೆಳಗಾವಿ:

ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
  • ಉತ್ಸಾಹದಿಂದ ಮತದಾನ ಮಾಡಿದ ವೃದ್ಧ ದಂಪತಿ
  • ಬೆಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ವೃದ್ಧ
  • 78 ವರ್ಷದ ಗಜಾನನ ಹೆಗಡೆ, 71 ವರ್ಷದ ಸಾವಿತ್ರಿ ಹೆಗಡೆಯಿಂದ ಮತದಾನ
  • ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆ 2 ರಲ್ಲಿ ಹಕ್ಕು ಚಲಾಯಿಸಿದ ವೃದ್ಧ ದಂಪತಿ
  • ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
  • ವೃದ್ಧನಿಗೆ ಕರ್ತವ್ಯ ನಿರತ ಪೊಲೀಸ್ ಪೇದೆಯಿಂದ ಸಹಾಯ

08:14 April 17

ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್
ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್

ಬೆಳಗಾವಿ: ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​ ಕುಮಾರ್ ಅವರು ಇಂದು‌ ಬೆಳಗ್ಗೆ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಈ ವೇಳೆ ಕೋವಿಡ್-19 ಮಾರ್ಗಸೂಚಿ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು.

08:13 April 17

ಮತದಾನಕ್ಕೂ ಮುನ್ನ ಟೆಂಪಲ್ ರನ್

ಮತ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ
ಮತ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ
  • ಮತದಾನಕ್ಕೂ ಮುನ್ನ ಟೆಂಪಲ್ ರನ್ ಪ್ರಾರಂಭಿಸಿದ ಕೈ ಅಭ್ಯರ್ಥಿ
  • ಬಸನಗೌಡ ತುರುವಿಹಾಳರಿಂದ ಟೆಂಪಲ್ ರನ್
  • ದೇವರ ದರ್ಶನ ನಂತರ ಮತದಾನ‌ ಮಾಡಿದ ಬಸನಗೌಡ
  • ಮತಗಟ್ಟೆ ಸಂಖ್ಯೆ 217 ರಲ್ಲಿ ಮತ ಹಾಕಿದ ಬಸನಗೌಡ
  • ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕುಟುಂಬಸ್ಥರಿಂದ ಟೆಂಪಲ್ ರನ್
  • ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮೂರು ಜನ ಮಕ್ಕಳು, ಇಬ್ಬರು ಸೊಸೆಯರು
  • ಮತಗಟ್ಟೆ ಸಂಖ್ಯೆ 88 ರಲ್ಲಿ ಹಕ್ಕು ಚಲಾಯಿಸಿದ ಪ್ರತಾಪಗೌಡ ಪಾಟೀಲ್

08:13 April 17

ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
  • ಮತದಾನ ಮಾಡಿದ ಬೆಳಗಾವಿ ದಕ್ಷಿಣ ‌ವಿಧಾನಸಭೆ ಕ್ಷೇತ್ರದ ‌ಶಾಸಕ ಅಭಯ ಪಾಟೀಲ್​
  • ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್​
  • ಶಹಾಪುರದ 8 ನೇ ಸರ್ಕಾರಿ ಶಾಲೆಯ 2ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಪಾಟೀಲ್​

07:39 April 17

  • ಮಸ್ಕಿಯಲ್ಲಿ ಮತಗಟ್ಟೆ ಸಂಖ್ಯೆ 88ರಲ್ಲಿ ಸರತಿ ಸಾಲಿನಲ್ಲಿ ನಿಂತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ ಕುಟುಂಬದವರಿಂದ ಮತದಾನ
  • ಪ್ರತಾಪ್ ಗೌಡ ಪಾಟೀಲ್ ಪುತ್ರಿ ಪ್ರೀತಿ ಹಾಗೂ ಪತ್ನಿ ಪದ್ಮಾವತಿಯಿಂದ ಮತದಾನ
  • ಕೊರೊನಾ ಹಿನ್ನೆಲೆ, ಇಂದು ಸಂಜೆ 6ರಿಂದ 7 ಗಂಟೆಯ ಸಮಯದಲ್ಲಿ ಮತದಾನ ಮಾಡಲಿರುವ ಪ್ರತಾಪ್ ಗೌಡ ಪಾಟೀಲ್
  • ಪ್ರತಾಪ್ ಗೌಡ ಪಾಟೀಲ್ ಮನೆ ಮುಂದೆ ಇರುವ ಮತಗಟ್ಟೆ ಸಂಖ್ಯೆ 88
  • ಮನೆಯ ಮಹಡಿ ಮೇಲಿಂದ ಮತಗಟ್ಟೆ ವೀಕ್ಷಣೆ ಮಾಡಿದ ಪ್ರತಾಪ್ ಗೌಡ ಪಾಟೀಲ್

07:24 April 17

ಮಸ್ಕಿಯಲ್ಲಿ ಮತದಾನ ಆರಂಭ

ಮಸ್ಕಿ ಪಟ್ಟಣದಲ್ಲಿ ತೆರೆದಿರುವ ಸಖಿ ಮತಗಟ್ಟೆ
ಮಸ್ಕಿ ಪಟ್ಟಣದಲ್ಲಿ ತೆರೆದಿರುವ ಸಖಿ ಮತಗಟ್ಟೆ

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದೆ. ಚುನಾವಣೆ ಅಖಾಡದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದು ಮತದಾನದ ವೇಳೆ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ.

ಮತದಾನಕ್ಕಾಗಿ ಒಟ್ಟು 305 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 62-ಸೂಕ್ಷ್ಮ, 7-ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ಒಟ್ಟು 2,309 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 2,06,429 ಮತದಾರರಿದ್ದು, 1,01,340 ಪುರುಷರು ಹಾಗೂ 1,05,076 ಮಹಿಳೆಯರು ಮತ್ತು 13 ಇತರೆ ಮತದಾರರಿದ್ದಾರೆ.  

ಮಸ್ಕಿ ಪಟ್ಟಣ ಮತ್ತು ತುರುವಿಹಾಳ ಪಟ್ಟಣದಲ್ಲಿ ಸಖಿ ಮತಗಟ್ಟೆ ತೆರಯಲಾಗಿದೆ. 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳಿವೆ. ಭದ್ರತೆಗಾಗಿ ಒಟ್ಟು 739 ಪೊಲೀಸರು, 71 ಎಎಸ್ಐ, 25 ಪಿಎಸ್ಐ, 7 ಸಿಪಿಐಗಳು, 3 ಡಿವೈಎಸ್​ಪಿ ಸೇರಿದಂತೆ ಒಟ್ಟು 847 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಮೂರು ಸಿಆರ್​ಪಿಎಫ್, ಹೆಚ್ಚುವರಿಯಾಗಿ ಕೇಂದ್ರ ಮೀಸಲು ಪಡೆ, ಕೆಎಸ್ಆರ್​ಪಿ ತಂಡಗಳನ್ನು ಚುನಾವಣಾ ಸ್ಥಳದಲ್ಲಿ ನಿಯೋಜನೆ ಮಾಡಲಾದೆ. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಮತದಾನಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 

07:18 April 17

ಬೆಳಗಾವಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ:

ಮತದಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ
ಮತದಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತದಾನಕ್ಕೆ ಆಗಮಿಸಿದ್ದು, ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಎರಡರಲ್ಲಿ ಮತದಾನ ಮಾಡಿದ್ದಾರೆ.

ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಮತದಾರರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಂಗಳಾ ಅವರು, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈ ವೇಳೆ ಮಂಗಳಾ ಅಂಗಡಿಗೆ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಸಾಥ್ ನೀಡಿದರು. 

06:35 April 17

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:

ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಈ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಬೆಳಗಾವಿ ಕ್ಷೇತ್ರ:

  • ಬಿಜೆಪಿ - ಮಂಗಳಾ ಅಂಗಡಿ
  • ಕಾಂಗ್ರೆಸ್ -‌ ಸತೀಶ್‌ ಜಾರಕಿಹೊಳಿ

ಮಸ್ಕಿ ಕ್ಷೇತ್ರ:

  • ಬಿಜೆಪಿ - ಪ್ರತಾಪಗೌಡ ಪಾಟೀಲ್‌
  • ಕಾಂಗ್ರೆಸ್‌ - ಬಸನಗೌಡ ತುರುವಿಹಾಳ

ಬಸವಕಲ್ಯಾಣ ಕ್ಷೇತ್ರ:

  • ಬಿಜೆಪಿ - ಶರಣು ಸಲಗರ್‌
  • ಕಾಂಗ್ರೆಸ್‌ - ಮಾಲಾ ನಾರಾಯಣ ರಾವ್‌
  • ಜೆಡಿಎಸ್ -‌ ಸೈಯದ್‌ ಯಶ್ರಬ್‌ ಅಲಿ ಖಾದ್ರಿ
  • ಪಕ್ಷೇತರ - ಮಲ್ಲಿಕಾರ್ಜುನ ಖೂಬಾ

06:18 April 17

ಮೂರು ಕ್ಷೇತ್ರಗಳ ಉಪಚುನಾವಣೆ:

ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,821,614 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 2,566 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 16 ಸಖಿ ಬೂತ್​​ಗಳಾಗಿವೆ.

ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ, 239,981 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 326 ಮತಗಟ್ಟೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಎರಡು ಸಖಿ ಬೂತ್ ಗಳು ಇರಲಿವೆ.

ಶಾಸಕ ಸ್ಥಾನಕ್ಕೆ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 206,443 ಮತದಾರರು ಹಕ್ಕು ಚಲಾಯಿಸಲಿದ್ದು. ಕ್ಷೇತ್ರದಲ್ಲಿ ಮತದಾನಕ್ಕೆ 305 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಎರಡು ಸಖಿ ಬೂತ್​ಗಳಿವೆ.

ಒಟ್ಟು ಮೂರೂ ಕ್ಷೇತ್ರಗಳಿಂದ 30 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಇಂದು ಇವಿಎಂ ಯಂತ್ರದಲ್ಲಿ ಭದ್ರವಾಗಲಿದೆ. ಇಂದು ಚುನಾವಣೆ ನಡೆದರೂ ಮೇ 2 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶಕ್ಕಾಗಿ ಅಭ್ಯರ್ಥಿಗಳು 15 ದಿನ ಕಾಯಬೇಕಿದೆ.

Last Updated : Apr 17, 2021, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.