ಬೆಳಗಾವಿ/ಚಿಕ್ಕೋಡಿ: ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲೇ ಇಲ್ಲ. ಅವರು ಸಾಂದರ್ಭಿಕ ಶಿಶುವಾಗಿಯೇ ಕಾಲ ಕಳೆದರು ಎಂದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.
ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ನನ್ನ ಕ್ಷೇತ್ರಕ್ಕೆ ₹ 500 ಕೋಟಿ ಅನುದಾನವನ್ನು ಬಿ.ಎಸ್. ಯಡಿಯೂರಪ್ಪನವರು ಕೊಟ್ಟಿದ್ದಾರೆ. ಅದರಲ್ಲಿ 10 ಪರ್ಸೆಂಟ್ ಅಂದ್ರು ಕೂಡ 50 ಕೋಟಿ ಬರುತ್ತದೆ. ಹೀಗಿರುವಾಗ ಶಾಸಕರು 25 ಕೋಟಿಗೆ ಯಾಕೆ ಸೇಲ್ ಆಗ್ತಾರೆ ಎಂದು ಪ್ರಶ್ನಿಸಿದ್ರು. ಸುಮ್ಮನೆ 25 ಕೋಟಿಗೆ ಶಾಸಕರು ಸೇಲ್ ಆಗಿದ್ದಾರೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ ಎಂದರು.
ಇನ್ನು ಇದೇ ವೇಳೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದ ಅವರು, ಕೆಲವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ನಾನು ಮಹೇಶ್ ಕುಮಟಳ್ಳಿ ಗೆ ಕೇಳಿದೆ, ನಿಮಗೆ ಎಷ್ಟು ಮಕ್ಕಳು ಎಂದು. ಅವರು ಇಬ್ಬರು ಮಕ್ಕಳು ಎಂದರು. ಎರಡು ಮಕ್ಕಳು ಇದ್ದರೇ ಸಾಕಲ್ಲವೇ ಗಂಡಸು ಅಂತ ಹೇಳಲು ಎಂದು ಪರೋಕ್ಷವಾಗಿ ಲಕ್ಷೀ ಹೆಬ್ಬಾಳ್ಕರ್ಗೆ ಟಾಂಗ್ ನೀಡಿದರು.
ಇನ್ನು ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ ಇಬ್ಬರು ಸಚಿವರಾಗುತ್ತಾರೆ. ನಾನು ಎಮ್ಎಲ್ಎ ಆಗಿಯೇ ಉಳಿಯುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.