ಅಥಣಿ : ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವನ ಗೌಡ ಪಾಟೀಲ್ ಯತ್ನಾಳ್, ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ, ವಿಜಯಪುರದ ಇಬ್ಬರು ಮತ್ತು ಮೈಸೂರು ಭಾಗದ ಜೆಡಿಎಸ್ ಶಾಸಕರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ನಾನು ಸೇರಿದಂತೆ ನೂರು ಮಂದಿಯನ್ನು ಎಂಎಲ್ಸಿ ಮಾಡುತ್ತೇನೆ ಅಂತಾ ಹೆಚ್ಡಿಕೆ ಹೇಳಿದ್ದರು, ಇರೋದೇ 75 ಸ್ಥಾನ ಅದರಲ್ಲಿ ಅಷ್ಟು ಜನರಿಗೆ ದೇವೇಗೌಡರು ಭರವಸೆ ಕೊಟ್ಟಿದ್ದರು. ರೇವಣ್ಣ ನಿರುದ್ಯೋಗಿ ಆಗಿದ್ದಾರೆ, ಪುನಃ ಅವರನ್ನು ಲೋಕೋಪಯೋಗಿ ಸಚಿವರನ್ನು ಮಾಡಲು ಯೋಚಿಸ್ತಾ ಇದಾರೆ ಎಂದು ವ್ಯಂಗ್ಯವಾಡಿದರು.
ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನದ ಮಾತು ಹೇಳುವುದು ಸರಿಯಲ್ಲ. ಡ್ಯಾಷ್ ಡ್ಯಾಷ್ ಎನ್ನುವುದೂ ಸರಿಯಲ್ಲ. ಅದು ಏನು ಡ್ಯಾಷ್.. ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಮೊದಲು ಅವರು ಬಿಟ್ಟ ಸ್ಥಳ ತುಂಬಲಿ, ಆ ಬಳಿಕ ನಾವು ಡ್ಯಾಷ್.. ಡ್ಯಾಷ್ ತುಂಬುತ್ತೇವೆ ಎಂದು ವ್ಯಂಗ್ಯವಾಡಿದರು.