ETV Bharat / state

ದೇಶ ಕಾಯೋ ಯೋಧರಿಗೆ ಇಲ್ಲಿ ಉಚಿತ ಊಟೋಪಹಾರ ಯಾಕೆ ಅಂತೀರಾ..? - Free meal for soldiers at Athani hotel

ದರೂರ ಗ್ರಾಮದ ಗುರುರಾಜ ಗಳತಗಿ ಎಂಬವವರು ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದು, ಇವರ ಹೊಟೇಲ್​ಗೆ ಯಾರೇ ಸೈನಿಕರು ಬಂದರೂ ಉಚಿತವಾಗಿ ಉಟೋಪಹಾರ ನೀಡುತ್ತಾರೆ. ಈ ಮೂಲಕ ಸೈನಿಕರ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ.

Athani Hotel, which offers free meals to soldiers
ದೇಶ ಕಾಯೋ ಯೋಧರಿಗೆ ಉಚಿತ ಊಟ
author img

By

Published : Dec 9, 2019, 8:02 AM IST

ಅಥಣಿ : ಕೇವಲ ಬಾಯಿ ಮಾತಿಗೆ ಮಾತ್ರ ಸೈನಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಜನರ ಮಧ್ಯೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮದ ವ್ಯಕ್ತಿಯೊಬ್ಬ ದೇಶ ಕಾಯೋ ಯೋಧರಿಗೆ ತನ್ನ ಹೊಟೇಲ್​ನಲ್ಲಿ ಉಚಿತ ಊಟ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ದೇಶ ಕಾಯೋ ಯೋಧರಿಗೆ ಉಚಿತ ಊಟ

ದರೂರ ಗ್ರಾಮದ ಗುರುರಾಜ ಗಳತಗಿ ಎಂಬುವವರು ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದು, ಇವರ ಹೋಟೆಲ್​​​​​​ಗೆ ಯಾರೇ ಸೈನಿಕರು ಬಂದರೂ ಉಚಿತವಾಗಿ ಉಟೋಪಹಾರ ನೀಡುತ್ತಾರೆ. ಈ ಮೂಲಕ ಸೈನಿಕರ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಈ ಬಗ್ಗೆ ಗುರುರಾಜ ಗಳತಗಿಯವರನ್ನು ಕೇಳಿದ್ರೆ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮಗೋಸ್ಕರ, ದೇಶಕ್ಕೋಸ್ಕರ ಹೋರಾಡುವ ಸೈನಿಕರಿಗೆ ನನ್ನ ಕಡೆಯಿಂದ ಸಣ್ಣದೊಂದು ಅಳಿಲು ಸೇವೆ ಮಾಡುತ್ತಿದ್ದೇನೆ, ಈ ಬಗ್ಗೆ ನನಗೆ ಖುಷಿಯಿದೆ ಎನ್ನುತ್ತಾರೆ.

ಅಥಣಿ : ಕೇವಲ ಬಾಯಿ ಮಾತಿಗೆ ಮಾತ್ರ ಸೈನಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಜನರ ಮಧ್ಯೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮದ ವ್ಯಕ್ತಿಯೊಬ್ಬ ದೇಶ ಕಾಯೋ ಯೋಧರಿಗೆ ತನ್ನ ಹೊಟೇಲ್​ನಲ್ಲಿ ಉಚಿತ ಊಟ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ದೇಶ ಕಾಯೋ ಯೋಧರಿಗೆ ಉಚಿತ ಊಟ

ದರೂರ ಗ್ರಾಮದ ಗುರುರಾಜ ಗಳತಗಿ ಎಂಬುವವರು ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದು, ಇವರ ಹೋಟೆಲ್​​​​​​ಗೆ ಯಾರೇ ಸೈನಿಕರು ಬಂದರೂ ಉಚಿತವಾಗಿ ಉಟೋಪಹಾರ ನೀಡುತ್ತಾರೆ. ಈ ಮೂಲಕ ಸೈನಿಕರ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಈ ಬಗ್ಗೆ ಗುರುರಾಜ ಗಳತಗಿಯವರನ್ನು ಕೇಳಿದ್ರೆ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮಗೋಸ್ಕರ, ದೇಶಕ್ಕೋಸ್ಕರ ಹೋರಾಡುವ ಸೈನಿಕರಿಗೆ ನನ್ನ ಕಡೆಯಿಂದ ಸಣ್ಣದೊಂದು ಅಳಿಲು ಸೇವೆ ಮಾಡುತ್ತಿದ್ದೇನೆ, ಈ ಬಗ್ಗೆ ನನಗೆ ಖುಷಿಯಿದೆ ಎನ್ನುತ್ತಾರೆ.

Intro:ದೇಶ ಕಾಯುವ ಸೈನಿಕರಿಗೆ ಉಚಿತ ಉಪಹಾರ ನೀಡುವ ದೇಶಭಕ್ತ ಗುರುರಾಜ,
ದೇಶ ಪ್ರೇಮದ ಜೋತೆಗೆ ಸೈನಿಕರ ಮೇಲೆ ಅಪಾರ ಗೌರವದಿಂದ ಕಾಣುತ್ತಿರುವ ಗುರುರಾಜ, ಅವರಿಗೆ ಸುತ್ತಮುತ್ತಲಿನ ಜನರಿಂದ ಪ್ರಶಂಸೆಗೆ ಕಾರಣವಾಗಿದ್ದಾರೆ Body:ಅಥಣಿ ವರದಿ:

ದೇಶ ಕಾಯುವ ಸೈನಿಕರಿಗೆ ಉಚಿತ ಉಪಹಾರ ನೀಡುವ ದೇಶಭಕ್ತ

ಅಥಣಿ : ಇವರು ಅಪ್ಪಟ ದೇಶಪ್ರೇಮಿ. ಬಡತನ ನೀಗಿಸಲು ಹೊಟೇಲ್ ನಡೆಸುವ ಇವರಿಗೆ ಸೈನಿಕರೇಂದರೆ ಅಚ್ಚುಮೆಚ್ಚು. ಮಾಜಿ ಸೈನಿಕರಿಗೆ ತಮ್ಮ ಹೊಟೇಲ್ ನಲ್ಲಿ ಉಚಿತ ಉಪಹಾರ ನೀಡುವ ಇವರ ಕಾಯಕ ಮಾತ್ರ ವಿಭಿನ್ನ.

ಹೌದು ಈ ದೇಶಭಕ್ತನ ಹೆಸರು ಗುರುರಾಜ ಗಳತಗಿ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಇವರು ಪಿಯುಸಿ ಮುಗಿಸಿದ್ದಾರೆ. ಕೆಲಸಕ್ಕಾಗಿ ಊರೂರು ಅಲೆಯದೆ ರಸ್ತೆ ಬದಿಯಲ್ಲಿ ತಮ್ಮದೇ ಒಂದು ಚಿಕ್ಕ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇವರು ಕೇವಲ ಹೊಟೇಲ್ ನಡೆಸುತ್ತಿದ್ದರೆ ಇದಕ್ಕೆ ಮಹತ್ವ ಇರುತ್ತಿರಲಿಲ್ಲ. ತಮ್ಮ ಚಿಕ್ಕ ಹೊಟೇಲ್ ನಲ್ಲಿ ದೇಶ ಕಾಯುವ ಸ್ನೇಹಿತರಿಗೆ ಉಚಿತ ಉಪಹಾರ ನೀಡುತಿದ್ದು ಇವರ ದೇಶಭಕ್ತಿ ಎಷ್ಟೆಂದು ತೋರಿಸುತ್ತದೆ.

ದೇಶ ಕಾಯುವ ಸೈನಿಕರಿಗೆ ಯಾಕೆ ಉಚಿತ ಉಪಹಾರ ನೀಡುತ್ತಿರಾ ಎಂದು ಕೇಳಿದರೆ. ದೇಶಕ್ಕಾಗಿ ತಮ್ಮ ಮನೆ ಮಠ ಬಿಟ್ಟು ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ ವೀರರಿಗಾಗಿ ನಾವು ಇಷ್ಟಾದರು ಮಾಡಬೇಕೆಂಬ ಹಂಬಲ ಹುಟ್ಟಿಕೊಂಡಿದೆ. ನಮಗಾಗಿ ಪ್ರಾಣ ನೀಡುವ ಸೈನಿಕರಿಗೆ ಈ ರೀತಿಯಲ್ಲಿ ಗೌರವ ಸೂಚಿಸುವ ಉದ್ದೇಶ ಅಷ್ಟೇ ಎನ್ನುತ್ತಾರೆ.

ಒಟ್ಟಿನಲ್ಲಿ ಕೇವಲ ತಮ್ಮ ಲಾಭಕ್ಕಾಗಿ ವ್ಯಾಪಾರ ಮಾಡುವ ಜನರ ಮಧ್ಯೆ ದೇಶದ ಗಡಿ ಕಾಯುವ ಸೈನಿಕರಿಗೆ ಉಚಿತ ಉಪಹಾರ ನೀಡುವ ಇಂತಹ ಯುವಕರ ನಡೆ ಅತ್ಯಂತ ವಿಭಿನ್ನ. ದೇಶ ಕಾಯುವ ಸೈನಿಕರನ್ನು ಈ ರೀತಿಯಲ್ಲಿ ಗೌರವಿಸಬಹುದು ಎಂಬುದು ದರೂರ ಗ್ರಾಮದ ಯುವಕ ಗುರುರಾಜ್ ತೋರಿಸಿಕೊಟ್ಟಿದ್ದಾರೆ.

ಬೈಟ್_ ಗುರುರಾಜ, ರಾಯಪ್ಪ, ದಳಗಿConclusion:ಅಥಣಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.