ETV Bharat / state

ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸತ್ತ ಸ್ನೇಹಿತನನ್ನು ಪೊದೆಗೆ ಎಸದುಬಂದ ಭೂಪ... ಕಾರಣ?

ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ನೇಹಿತ ಸತ್ತ ನಂತರ ಆರೋಪ ತನ್ನ ಮೇಲೆ ಬರುತ್ತದೆ ಎಂದು ಯುವಕನೊಬ್ಬ ಶವವನ್ನು ಪೊದೆಯಲ್ಲಿ ಎಸೆದುಬಂದ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಬಾಬು ಮುಲ್ತಾನಿ ಮೃತ. ರಮೇಶ್ ಕುಗಟೋಳಿ ಪೊದೆಯಲ್ಲಿ ಶವ ಎಸೆದುಬಂದ ವ್ಯಕ್ತಿ.

author img

By

Published : Jan 9, 2020, 5:10 PM IST

a man trapped in a tractor wheel
ರಮೇಶ್ ಕುಗಟೋಳಿ ಪೊದೆಯಲ್ಲಿ ಶವ ಎಸೆದುಬಂದ ವ್ಯಕ್ತಿ

ಚಿಕ್ಕೋಡಿ: ತಾನು ಓಡಿಸುತ್ತಿದ್ದ ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ನೇಹಿತ ಸತ್ತ ನಂತರ ಆರೋಪ ತನ್ನ ಮೇಲೆ ಬರುತ್ತದೆ ಎಂದು ಯುವಕನೊಬ್ಬ ಶವವನ್ನು ಪೊದೆಯಲ್ಲಿ ಎಸೆದುಬಂದ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಬಾಬು ಮುಲ್ತಾನಿ (21) ಮೃತ. ರಮೇಶ್ ಕುಗಟೋಳಿ ಪೊದೆಯಲ್ಲಿ ಶವ ಎಸೆದುಬಂದ ವ್ಯಕ್ತಿ.ರೋಡ್​ ಹಂಪ್​ ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್​ನಿಂದ ಬಿದ್ದ ಬಾಬು, ಚಕ್ರದಡಿ ಸಿಲುಕಿ ಸಾವಿಗೀಡಾಗಿದ್ದಾನೆ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಬಗೆದು ರಮೇಶ ಶವವನ್ನು ಪೊದೆಯಲ್ಲಿ ಎಸೆದು ಬಂದಿದ್ದಾನೆ. ಆದರೂ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

a man trapped in a tractor wheel
ಬಾಬು ಮುಲ್ತಾನಿ ಮೃತ ಯುವಕ

ಆಗಿದ್ದೇನು?: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಕುಗಟೋಳಿ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಕಬ್ಬನ್ನು ಕಾರ್ಖಾನೆಯಲ್ಲಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.

ಬಾಬು ತೀರಿ ಹೋಗಿ ವಾರ ಕಳೆದರೂ ಮನೆಯವರಿಗೆ ರಮೇಶ್​ ವಿಷಯ ತಿಳಿಸಲಿಲ್ಲ. ಬಾಬು ಮನೆಗೆ ಬಾರದಿದ್ದರಿಂದ ಕುಟುಂಬದವರು ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ಪೊಲೀಸರು ಸತ್ಯಾಂಶ ಹೊರಗೆಳೆದಿದ್ದಾರೆ. ಉದ್ದೇಶಪೂರ್ವಕವಲ್ಲದಿದ್ದರೂ ಶವವನ್ನು ಪೊದೆಗೆ ಎಸೆದು ರಮೇಶ್​ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಚಿಕ್ಕೋಡಿ: ತಾನು ಓಡಿಸುತ್ತಿದ್ದ ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ನೇಹಿತ ಸತ್ತ ನಂತರ ಆರೋಪ ತನ್ನ ಮೇಲೆ ಬರುತ್ತದೆ ಎಂದು ಯುವಕನೊಬ್ಬ ಶವವನ್ನು ಪೊದೆಯಲ್ಲಿ ಎಸೆದುಬಂದ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಬಾಬು ಮುಲ್ತಾನಿ (21) ಮೃತ. ರಮೇಶ್ ಕುಗಟೋಳಿ ಪೊದೆಯಲ್ಲಿ ಶವ ಎಸೆದುಬಂದ ವ್ಯಕ್ತಿ.ರೋಡ್​ ಹಂಪ್​ ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್​ನಿಂದ ಬಿದ್ದ ಬಾಬು, ಚಕ್ರದಡಿ ಸಿಲುಕಿ ಸಾವಿಗೀಡಾಗಿದ್ದಾನೆ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಬಗೆದು ರಮೇಶ ಶವವನ್ನು ಪೊದೆಯಲ್ಲಿ ಎಸೆದು ಬಂದಿದ್ದಾನೆ. ಆದರೂ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

a man trapped in a tractor wheel
ಬಾಬು ಮುಲ್ತಾನಿ ಮೃತ ಯುವಕ

ಆಗಿದ್ದೇನು?: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಕುಗಟೋಳಿ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಕಬ್ಬನ್ನು ಕಾರ್ಖಾನೆಯಲ್ಲಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.

ಬಾಬು ತೀರಿ ಹೋಗಿ ವಾರ ಕಳೆದರೂ ಮನೆಯವರಿಗೆ ರಮೇಶ್​ ವಿಷಯ ತಿಳಿಸಲಿಲ್ಲ. ಬಾಬು ಮನೆಗೆ ಬಾರದಿದ್ದರಿಂದ ಕುಟುಂಬದವರು ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ಪೊಲೀಸರು ಸತ್ಯಾಂಶ ಹೊರಗೆಳೆದಿದ್ದಾರೆ. ಉದ್ದೇಶಪೂರ್ವಕವಲ್ಲದಿದ್ದರೂ ಶವವನ್ನು ಪೊದೆಗೆ ಎಸೆದು ರಮೇಶ್​ ಸಂಕಷ್ಟಕ್ಕೆ ಸಿಲುಕಿದ್ದಾನೆ.

Intro:ಸ್ನೇಹಿತನನ್ನು ಪೊದೆಯಲ್ಲಿ ಎಸೆದು ಮನೆಗೆ ಬಂದ ಭೂಪ
Body:
ಚಿಕ್ಕೋಡಿ :

ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ಯುವಕ, ಯುವಕನ ಶವ ಪೊದೆಯಲ್ಲಿ ಎಸೆದು ಮನೆಗೆ ಬಂದ ಭೂಪ ಇಂತದೊಂದು ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡದಿದೆ.

ರೋಡ್ ಹಂಪ ದಾಟುವಾಗ ಆಕಸ್ಮಿಕವಾಗಿ ಟ್ರಾಕ್ಟರ್ ನಿಂದ‌ ಬಿದ್ದ ಬಾಬು ಮುಲ್ತಾನಿ (21) ಟ್ರಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ ಯುವಕ, ಈ ಸಾವಿಗೆ ಕಾರಣವಾದ ರಮೇಶ ಕುಗಟೋಳಿ ಎಂಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಆಗಿದ್ದೇನು?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಕುಗಟೋಳಿ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಕಬ್ಬನ್ನು ಕಾರ್ಖಾನೆಯಲ್ಲಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.

ಬಾಬು ತೀರಿ ಹೋಗಿ ವಾರ ಕಳೆದರೂ ಮನೆಯವರಿಗೆ ವಿಷಯ ತಿಳಿಸದ ರಮೇಶ್, ಒಂದು ವಾರವಾದರೂ ಸಹ ಮನೆಗೆ ಬಾರದ ಮಗ ಬಾಬು ಕುರಿತಾಗಿ ಮಿಸ್ಸಿಂಗ್ ದೂರನ್ನು ಬಾಬು ಪೋಷಕರು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ನಂತರ ತನಿಖೆಯ ಬಳಿಕ ಸಂತ್ಯಾಂಶ ಬಯಲಿಗೆಳೆದ ಪೊಲೀಸರು. ಉದ್ದೇಶ ಪೂರ್ವಕವಲ್ಲದ ಸಾವನ್ನ ಮೃತ ದೇಹ ಪೊದೆಗೆ ಎಸೆದು ಮತ್ತಷ್ಟು ಸಂಕಷ್ಡಕ್ಕೆ ಸಿಲುಕಿದ ರಮೇಶ ಕುಗಟೋಳಿ.

ಕಳೆದ 7 ನೇ ತಾರೀಖಿನಂದು ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿದ್ದ ಬಾಬು ಪೋಷಕರು. ಎರಡೇ ದಿನದಲ್ಲಿ ತನಿಖೆ ಪೂರ್ಣಗೊಳೊಸಿ ಆರೋಪಿ ಹೆಡೆಮುರಿಕಟ್ಟಿದ ಪೊಲೀಸರು. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಟೋ 1 : ರಮೇಶ ಕುಗಟೋಳಿ - ಬಂಧಿತ ಆರೋಪಿ (ಕೋರಳಲ್ಲಿ ಟಾವೆಲ್ಲ ಹಾಕೊಂಡಿದ್ದಾರೆ)

ಪೋಟೋ 2 : ಬಾಬು ಮುಲ್ತಾನಿ - ಮೃತ ಯುವಕ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.