ETV Bharat / state

ಅಜ್ಮೀರ್​ನಿಂದ ರಾಜ್ಯಕ್ಕೆ ಬಂದ 30 ಜನರಲ್ಲಿ ಸೋಂಕು: ಇವರ ಪ್ರಾಥಮಿಕ ಸಂಪರ್ಕ ಹುಡುಕುವುದೇ ಸವಾಲು

author img

By

Published : May 10, 2020, 6:52 PM IST

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್‌ಗೆ ಮೇ 2‌ ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಇವರು ಬರೋಬ್ಬರಿ 8 ಗಂಟೆಗಳ ಕಾಲ ಅದೇ ಚೇಕ್ ಪೋಸ್ಟ್​ ಬಳಿ ನಿಂತಿದ್ದರು ಎನ್ನುವ ಆತಂಕಕಾರಿ ಸುದ್ದಿ ದೊರೆತಿದೆ.

ajmir-pilgrims
30 ಜನರಲ್ಲಿ ಕೊರೊನಾ ಸೋಂಕು ದೃಢ

ಬೆಳಗಾವಿ: ರಾಜಸ್ಥಾನದ ಅಜ್ಮೀರ್‌ಗೆ ತೆರಳಿ ರಾಜ್ಯಕ್ಕೆ ಮರಳಿದ 38 ಯಾತ್ರಾರ್ಥಿಗಳ ಪೈಕಿ 30 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಪುಣೆ-ಬೆಂಗಳೂರು ಎನ್‌ಎಚ್‌-4 ಮಾರ್ಗವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು.

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್‌ಗೆ ಮೇ 2‌ ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಇವರು ಬರೋಬ್ಬರಿ 8 ಗಂಟೆಗಳ ಕಾಲ ಅದೇ ಚೇಕ್ ಪೋಸ್ಟ್​ ಬಳಿ ನಿಂತಿದ್ದರಂತೆ. ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಾ ಕಾಲಹರಣ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಇವರು ಪೊಲೀಸರು ಹಾಗೂ ವಾಹನ ಸವಾರರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ.

ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಊಟದ ಹಾಲ್​ನಲ್ಲಿ 100ಕ್ಕೂ ಅಧಿಕ ಜನರ ಜೊತೆಗೆ ಕುಳಿತು ಇದೇ ಮಂದಿ ಊಟ ಮಾಡಿದ್ದರು. ಊಟ ಮುಗಿಸಿದ ಯಾತ್ರಿಕರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಇದೀಗ ಈ 38 ಜನರ ಪ್ರಾಥಮಿಕ ಸಂಪರ್ಕ ಹುಡುಕುವುದೇ ಸವಾಲಾಗಿದೆ.

ರಾಜ್ಯ ಪ್ರವೇಶಿಸಲು ಅನುಮತಿ ನೀಡದೇ ಇದ್ದಾಗ ಇವರಲ್ಲಿ ಕೆಲವರು ಮಹಾರಾಷ್ಟ್ರದ ಕಾಗಲ್‌ಗೆ ವಾಪಸ್ ತೆರಳಿದ್ದಾರೆ. ಪೊಲೀಸರು ಪಾಸ್​ ಇದ್ದರೂ ಅನುಮತಿ ನೀಡುತ್ತಿಲ್ಲವೆಂದು ಕಾಗಲ್‌ಗೆ ಹೋಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬೆಳಗಾವಿ: ರಾಜಸ್ಥಾನದ ಅಜ್ಮೀರ್‌ಗೆ ತೆರಳಿ ರಾಜ್ಯಕ್ಕೆ ಮರಳಿದ 38 ಯಾತ್ರಾರ್ಥಿಗಳ ಪೈಕಿ 30 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಪುಣೆ-ಬೆಂಗಳೂರು ಎನ್‌ಎಚ್‌-4 ಮಾರ್ಗವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು.

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್‌ಗೆ ಮೇ 2‌ ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಇವರು ಬರೋಬ್ಬರಿ 8 ಗಂಟೆಗಳ ಕಾಲ ಅದೇ ಚೇಕ್ ಪೋಸ್ಟ್​ ಬಳಿ ನಿಂತಿದ್ದರಂತೆ. ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಾ ಕಾಲಹರಣ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಇವರು ಪೊಲೀಸರು ಹಾಗೂ ವಾಹನ ಸವಾರರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ.

ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಊಟದ ಹಾಲ್​ನಲ್ಲಿ 100ಕ್ಕೂ ಅಧಿಕ ಜನರ ಜೊತೆಗೆ ಕುಳಿತು ಇದೇ ಮಂದಿ ಊಟ ಮಾಡಿದ್ದರು. ಊಟ ಮುಗಿಸಿದ ಯಾತ್ರಿಕರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಇದೀಗ ಈ 38 ಜನರ ಪ್ರಾಥಮಿಕ ಸಂಪರ್ಕ ಹುಡುಕುವುದೇ ಸವಾಲಾಗಿದೆ.

ರಾಜ್ಯ ಪ್ರವೇಶಿಸಲು ಅನುಮತಿ ನೀಡದೇ ಇದ್ದಾಗ ಇವರಲ್ಲಿ ಕೆಲವರು ಮಹಾರಾಷ್ಟ್ರದ ಕಾಗಲ್‌ಗೆ ವಾಪಸ್ ತೆರಳಿದ್ದಾರೆ. ಪೊಲೀಸರು ಪಾಸ್​ ಇದ್ದರೂ ಅನುಮತಿ ನೀಡುತ್ತಿಲ್ಲವೆಂದು ಕಾಗಲ್‌ಗೆ ಹೋಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.