ETV Bharat / state

ಬೆಂಗಳೂರು: ನಡುರಸ್ತೆಯಲ್ಲಿ ಯುವಕರ ಪುಂಡಾಟ, ಬೈಕ್​ ಸವಾರನಿಗೆ ಥಳಿತ

author img

By

Published : Sep 20, 2022, 11:17 AM IST

Updated : Sep 20, 2022, 12:25 PM IST

ಬೈಕ್ ಸವಾರನಿಗೆ ನಡುರಸ್ತೆಯಲ್ಲಿಯೇ ಮೂವರು ಯುವಕರು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಡುರಸ್ತೆಯಲ್ಲಿ ಯುವಕರ ಪುಂಡಾಟ
ನಡುರಸ್ತೆಯಲ್ಲಿ ಯುವಕರ ಪುಂಡಾಟ

ಬೆಂಗಳೂರು: ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರ ಗುಂಪು ಪುಂಡಾಟ ನಡೆಸಿದೆ. ಸೋಮವಾರ ರಾತ್ರಿ ನಗರದ ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ಸರ್ಕಲ್​ನಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರನನ್ನು ಹಿಡಿದು ಥಳಿಸಿ, ಮೂವರು ಯುವಕರು ಎಸ್ಕೇಪ್ ಆಗಿದ್ದಾರೆ‌.

ನಡುರಸ್ತೆಯಲ್ಲಿ ಯುವಕರ ಪುಂಡಾಟ

ಹುಡುಗಿ ಜೊತೆಯಲ್ಲಿದ್ದಾಗಲೇ ಯುವಕನಿಗೆ ಥಳಿಸಲಾಗಿದೆ. ಅಲ್ಲದೇ ಓರ್ವ ಯುವಕ ತಲ್ವಾರ್​ನಿಂದ ಹಲ್ಲೆಗೆ ಮುಂದಾದಾಗ, ಜೊತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಅದನ್ನು ಕಸಿದು ಸಮಾಧಾನಪಡಿಸಿದ್ದಾನೆ. ರಾತ್ರಿ 10 ಗಂಟೆ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗ್ತಿದೆ.

ಯುವಕರ ಹುಚ್ಚಾಟ ಕಂಡು ವಾಹನ ಸವಾರರು ದಂಗಾಗಿದ್ದಾರೆ. ಸದ್ಯ ಘಟನೆಯ ವಿಡಿಯೋ ಆಧರಿಸಿ ಪರಾರಿಯಾದ ಯುವಕರಿಗಾಗಿ ವಿಧಾನಸೌಧ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ಆನೇಕಲ್​ನಲ್ಲಿ ಪುಡಿ ರೌಡಿಯಿಂದ ಮಾರಣಾಂತಿಕ ಹಲ್ಲೆ, ವೃದ್ಧ ಬಲಿ

ಬೆಂಗಳೂರು: ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರ ಗುಂಪು ಪುಂಡಾಟ ನಡೆಸಿದೆ. ಸೋಮವಾರ ರಾತ್ರಿ ನಗರದ ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ಸರ್ಕಲ್​ನಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರನನ್ನು ಹಿಡಿದು ಥಳಿಸಿ, ಮೂವರು ಯುವಕರು ಎಸ್ಕೇಪ್ ಆಗಿದ್ದಾರೆ‌.

ನಡುರಸ್ತೆಯಲ್ಲಿ ಯುವಕರ ಪುಂಡಾಟ

ಹುಡುಗಿ ಜೊತೆಯಲ್ಲಿದ್ದಾಗಲೇ ಯುವಕನಿಗೆ ಥಳಿಸಲಾಗಿದೆ. ಅಲ್ಲದೇ ಓರ್ವ ಯುವಕ ತಲ್ವಾರ್​ನಿಂದ ಹಲ್ಲೆಗೆ ಮುಂದಾದಾಗ, ಜೊತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಅದನ್ನು ಕಸಿದು ಸಮಾಧಾನಪಡಿಸಿದ್ದಾನೆ. ರಾತ್ರಿ 10 ಗಂಟೆ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗ್ತಿದೆ.

ಯುವಕರ ಹುಚ್ಚಾಟ ಕಂಡು ವಾಹನ ಸವಾರರು ದಂಗಾಗಿದ್ದಾರೆ. ಸದ್ಯ ಘಟನೆಯ ವಿಡಿಯೋ ಆಧರಿಸಿ ಪರಾರಿಯಾದ ಯುವಕರಿಗಾಗಿ ವಿಧಾನಸೌಧ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ಆನೇಕಲ್​ನಲ್ಲಿ ಪುಡಿ ರೌಡಿಯಿಂದ ಮಾರಣಾಂತಿಕ ಹಲ್ಲೆ, ವೃದ್ಧ ಬಲಿ

Last Updated : Sep 20, 2022, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.