ETV Bharat / state

ಯಶವಂತಪುರ ಉಪಸಮರದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ! - ಯಶವಂತಪುರ ಉಪಸಮರ ಲೆಟೆಸ್ಟ್ ನ್ಯೂಸ್​

ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದು, ಈ ವೇಳೆ  ತನಗೆ ದುಡ್ಡು ಕೊಟ್ಟಿಲ್ಲ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.

Yeshwanthpur constituency
Yeshwanthpur constituency
author img

By

Published : Dec 5, 2019, 2:08 PM IST

ಬೆಂಗಳೂರು: ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದು, ಈ ವೇಳೆ ತನಗೆ ದುಡ್ಡು ಕೊಟ್ಟಿಲ್ಲ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.

ಯಶವಂತಪುರ ಉಪಸಮರದಲ್ಲಿ ಕುಣಿಯುತ್ತಿದೆ ಕಾಂಚಾಣ!

ಮತ ಚಲಾವಣೆ ಸಂದರ್ಭದಲ್ಲಿ ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾಗ ಬಂದ ಮಹಿಳೆಯೊಬ್ಬರು ತನಗೂ ಹಣ ನೀಡುವಂತೆ ಕೇಳಿದ್ದಾರೆ. ಆದರೆ, ಕಾರ್ಯಕರ್ತರು ನಿರಾಕರಿಸಿದ ಪರಿಣಾಮ ಬೇರೆಯವರಿಗೆ ಹಣ ನೀಡಿದ್ದಾರೆ. ತನಗೆ ಹಣ ನೀಡಿಲ್ಲ ಎಂದು ಮಹಿಳೆ ಕಣ್ಣೀರು ಹಾಕುತ್ತಾ ಮತ ಚಲಾಯಿಸದೆ ಹಿಂತಿರುಗಿದ್ದಾರೆ. ಈ ವೇಳೆ ಅವರ ಸ್ನೇಹಿತೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.

ಮೂಲಗಳ ಪ್ರಕಾರ ಕೇವಲ ಒಂದು ಮತಕ್ಕೆ ಹಣ ನೀಡುತ್ತಿಲ್ಲ. ಆದರೆ ಕುಟುಂಬ ಸಮೇತ ಬಂದು ಮತಚಲಾವಣೆ ಮಾಡಿದರೆ ಒಂದು ವೋಟಿಗೆ ₹ 1000 ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಗ್ಗಲಿಪುರದಲ್ಲಿ ಹಣ ಹಂಚಿಕೆ?: ಇದೇ ಕ್ಷೇತ್ರದ ಕಗ್ಗಲೀಪುರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕರ್ತನೊಬ್ಬ ಬೈಕ್​ನಲ್ಲಿ ಬಂದು ಮತದಾರರಿಗೆ ಹಣ ಹಂಚಿಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬೆಂಗಳೂರು: ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದು, ಈ ವೇಳೆ ತನಗೆ ದುಡ್ಡು ಕೊಟ್ಟಿಲ್ಲ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.

ಯಶವಂತಪುರ ಉಪಸಮರದಲ್ಲಿ ಕುಣಿಯುತ್ತಿದೆ ಕಾಂಚಾಣ!

ಮತ ಚಲಾವಣೆ ಸಂದರ್ಭದಲ್ಲಿ ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾಗ ಬಂದ ಮಹಿಳೆಯೊಬ್ಬರು ತನಗೂ ಹಣ ನೀಡುವಂತೆ ಕೇಳಿದ್ದಾರೆ. ಆದರೆ, ಕಾರ್ಯಕರ್ತರು ನಿರಾಕರಿಸಿದ ಪರಿಣಾಮ ಬೇರೆಯವರಿಗೆ ಹಣ ನೀಡಿದ್ದಾರೆ. ತನಗೆ ಹಣ ನೀಡಿಲ್ಲ ಎಂದು ಮಹಿಳೆ ಕಣ್ಣೀರು ಹಾಕುತ್ತಾ ಮತ ಚಲಾಯಿಸದೆ ಹಿಂತಿರುಗಿದ್ದಾರೆ. ಈ ವೇಳೆ ಅವರ ಸ್ನೇಹಿತೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.

ಮೂಲಗಳ ಪ್ರಕಾರ ಕೇವಲ ಒಂದು ಮತಕ್ಕೆ ಹಣ ನೀಡುತ್ತಿಲ್ಲ. ಆದರೆ ಕುಟುಂಬ ಸಮೇತ ಬಂದು ಮತಚಲಾವಣೆ ಮಾಡಿದರೆ ಒಂದು ವೋಟಿಗೆ ₹ 1000 ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಗ್ಗಲಿಪುರದಲ್ಲಿ ಹಣ ಹಂಚಿಕೆ?: ಇದೇ ಕ್ಷೇತ್ರದ ಕಗ್ಗಲೀಪುರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕರ್ತನೊಬ್ಬ ಬೈಕ್​ನಲ್ಲಿ ಬಂದು ಮತದಾರರಿಗೆ ಹಣ ಹಂಚಿಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Intro:Body:ಯಶವಂತಪುರ ಉಪಸಮರದಲ್ಲಿ ಕುಣಿಯುತ್ತಿದೆ ಕಾಂಚಾಣ; ಒಂದು ವೋಟಿಗೆ ಇಲ್ಲ ದುಡ್ಡು ಫ್ಯಾಮಿಲಿ ಸಮೇತ ಬಂದರೆ ಕೈತುಂಬಾ ನೋಟು


ಬೆಂಗಳೂರು: ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂಬ ಶಂಕೆ ಉದ್ಭವವಾಗಿದೆ. ಮಹಿಳೆಯೊಬ್ಬರು ಮತ ಚಲಾಯಿಸಿದರೂ ತನಗೆ ದುಡ್ಡು ಕೊಟ್ಟಿಲ್ಲ ಅಂತ ಆರೋಪ ಮಾಡಿದ್ದಾರೆ.
ಮತ ಚಲಾವಣೆ ಮಾಡಿ ಕಾರ್ಯಕರ್ತರ ಬಳಿ ಹೋಗಿ ಹಣ ಕೇಳಿದಾಗ, ತನಗೆ ಮಾತ್ರ ದುಡ್ಡು ಕೊಡಲು ನಿರಾಕರಿಸಿ ಬೇರೆಯವರಿಗೆ ಹಣ ನೀಡಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಹಿಂತಿರುಗಿದರು.
ಹೆಸರು ಹೇಳದ ಈ ಮಹಿಳೆ ಪೂರ್ಣ ಮಾಹಿತಿ ನೀಡುವ ಸಂದರ್ಭದಲ್ಲಿ ಅವರ ಸ್ನೇಹಿತೆ ಅವರನ್ನು ಹೋಗೋಣ ಬಾ ಎಂದು ಒತ್ತಾಯ ಮಾಡಿ ಕರೆದೊಯ್ದ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಕೇವಲ ಒಂದು ಮತಕ್ಕೆ ಹಣ ನೀಡುತ್ತಿಲ್ಲ ಆದರೆ ಕುಟುಂಬ ಸಮೇತ ಬಂದು ಮತಚಲಾವಣೆ ಮಾಡಿದರೆ ಒಂದು ವೋಟಿಗೆ ₹1000 ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಕಗ್ಗಲಿಪುರದಲ್ಲಿ ಹಣ ಹಂಚಿಕೆ?
ಇದೆ ವೇಳೆ ಪಕ್ಷ ಒಂದರ ಕಾರ್ಯಕರ್ತರು ಯಶವಂತಪುರ ಕ್ಷೇತ್ರದ ಕಗ್ಗಲೀಪುರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕರ್ತನೊಬ್ಬ ಬೈಕ್ನಲ್ಲಿ ಬಂದು ಮತದಾರರಿಗೆ ಹಣಹಂಚಿಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.