ETV Bharat / state

'ದರ್ಶನ್​​​ಗೆ​ ಭಯಪಡಿಸಲು ನಾನು ಕಾರು ಚಲಾಯಿಸಿದೆ..' ಪೊಲೀಸರಿಗೆ ಪ್ರಿಯಾಂಕಾ ಹೇಳಿಕೆ

author img

By

Published : Jan 21, 2023, 12:00 PM IST

Updated : Jan 21, 2023, 2:32 PM IST

ಎರಡು ಕಾರುಗಳ ನಡುವೆ ಸಣ್ಣ ಪ್ರಮಾಣದ ಅಪಘಾತವಾಗಿದ್ದು, ಅಪಘಾತದ ನಂತರ ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಹೊತ್ತೊಯ್ದಿರುವ ಘಟನೆ ಶುಕ್ರವಾರ ನಡೆದಿತ್ತು.

Bangalore
ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕಿ
ಪ್ರಿಯಾಂಕಾ ಅವರ ಕಾರಿನ ಗಾಜು ಒಡೆದ ವಿಡಿಯೋ..

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯ ಮತ್ತಷ್ಟು ವಿಡಿಯೋಗಳು ಲಭ್ಯವಾಗಿವೆ. ಕಾರಿನ ಬಾನೆಟ್​ ಮೇಲೆ ಕುಳಿತಿದ್ದ ದರ್ಶನ್ ಎಂಬಾತನನನ್ನು ಸುಮಾರು ಎರಡು ಕಿ.ಮೀ ದೂರ ಎಳೆದೊಯ್ದ ಬಳಿಕ, ಆತನ ಸ್ನೇಹಿತರು ಚಾಲಕಿ ಪ್ರಿಯಾಂಕಾರ ಕಾರು ಅಡ್ಡಗಟ್ಟಿ ಕಾರಿನ ಗ್ಲಾಸುಗಳನ್ನು ಹೊಡೆದುಹಾಕಿದ್ದರು.

'ಭಯಪಡಿಸಲು ಕಾರು ಚಲಾಯಿಸಿದೆ....' ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪ್ರಿಯಾಂಕಾ ಪೊಲೀಸರಿಗೆ ಕೊಟ್ಟ ಹೇಳಿಕೆ ಹೀಗಿದೆ. ‘‘ಬೆಳಗ್ಗೆ ಆರ್.ಎಂ.ವಿ ಲೇಔಟ್​ನಿಂದ ಹೊರಟಿದ್ದ ಪ್ರಿಯಾಂಕಾ ಮತ್ತು ಆಕೆಯ ಪತಿ ಪ್ರಮೋದ್, ಉಲ್ಲಾಳ ಜಂಕ್ಷನ್ ಸಿಗ್ನಲ್ ಬಳಿ ಬಂದಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ದರ್ಶನ್ ಎಂಬವರ ಸ್ವಿಫ್ಟ್ ಕಾರು ಅಡ್ಡಲಾಗಿ ದಾರಿ ಬಿಡದೇ ನಿಂತಿತ್ತು. ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಡದೇ ಮೊಂಡಾಟ ಪ್ರದರ್ಶಿಸಿದ್ದರು. ನಂತರ ನಾವು ಅಲ್ಲಿಂದ ಹೊರಟು ಉಳ್ಳಾಲ ಕಡೆಗೆ ತೆರಳಿದೆವು. ಆದರೆ ದರ್ಶನ್​ ಅವರು​ ನಮ್ಮ ಕಾರನ್ನು ಹಿಂಬಾಲಿಸಿದರು‘‘ ಎಂದು ವಿವರಿಸಿದ್ದಾರೆ.

ಮುಂದುವರಿದು ಹೇಳಿಕೆ ನೀಡಿರುವ ಅವರು ‘‘ಗಾಬರಿಗೊಂಡ ನನ್ನ ಪತಿ 112ಕ್ಕೆ ಕರೆ ಮಾಡಿದರು. ಅಷ್ಟರಲ್ಲಿ ನಮ್ಮನ್ನು ಹಿಂಬಾಲಿಸಿ ಬಂದ ದರ್ಶನ್​ ಕಾರಲಿದ್ದವರು ಅಡ್ಡಗಟ್ಟಿ ಗಲಾಟೆ ಮಾಡಿ, ನನ್ನ ಪತಿಯ ಮೇಲೆ ಹಲ್ಲೆ ನಡೆಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಬರುವಂತೆ ಹೇಳಿದರು. ಆದರೆ, ದರ್ಶನ್ ನನ್ನ ಕಾರಿಗೆ ಅಡ್ಡ ಬಂದು ನಿಂತಿದ್ದ. ಆತನಿಗೆ ಭಯಪಡಿಸಲು ನಾನು ಕಾರನ್ನು ಮೂವ್ ಮಾಡಿದ್ದೆ. ಆಗ ಆತ ನನ್ನ ಕಾರಿನ ಬ್ಯಾನೆಟ್ ಮೇಲೆ ಹತ್ತಿ ಕುಳಿತಿದ್ದು ಸ್ವಲ್ಪ ದೂರ ಹೋದ್ರೆ ಇಳಿಯುತ್ತಾನೆ ಅಂತಾ ಮುಂದೆ ಚಲಾಯಿಸಿದ್ದೆ. ಬಳಿಕ ಶಾಂತಿನಿಕೇತನ ಬಳಿ ಕಾರನ್ನು ನಿಲ್ಲಿಸಿದೆ. ಆ ನಂತರದಲ್ಲೂ ಆತನ ಸ್ನೇಹಿತರು ಮತ್ತೆ ನಮ್ಮನ್ನು ಹಿಂಬಾಲಿಸಿದರು. ಕಾಲೇಜೊಂದರ ಬಳಿ ಕಾರು ತಡೆದು, ಏಕಾಏಕಿ ಕಲ್ಲುಗಳಿಂದ ನನ್ನ ಕಾರಿನ ಗ್ಲಾಸ್ ಒಡೆದರು. ಬಳಿಕ ನನ್ನ ಮಾನಕ್ಕೆ ಧಕ್ಕೆ ಆಗುವಂತೆ ವರ್ತಿಸಿದರು' ಎಂದು ಕಾರು ಚಾಲಕಿ ಪ್ರಿಯಾಂಕಾ ತಿಳಿಸಿದ್ದಾರೆ.

ದೂರಿನಲ್ಲಿ ದರ್ಶನ್​ ಹೇಳಿದ್ದೇನು? : ’’ನನ್ನ ಹೆಸರು ದರ್ಶನ್. ನ್ಯಾಚುರಲ್ ಐಸ್ ಕ್ರೀಂ ಹಾಗೂ ಪೆಟ್ ಶಾಪ್ ಇಟ್ಟುಕೊಂಡಿರುವೆ. ಇಂದು ಬೆಳಗ್ಗೆ ಉಲ್ಲಾಳದಲ್ಲಿ ಬರುವಾಗ ರೆಡ್ ಸಿಗ್ನಲ್ ಇದ್ದರೂ ಕಾರು ಚಾಲನೆ‌ ಮಾಡುತ್ತಿದ್ದ ಪ್ರಿಯಾಂಕಾ ಅವರ ಕಾರನ್ನು ಅಡ್ಡ ನಿಲ್ಲಿಸಿದ್ದೆ. ರೆಡ್ ಸಿಗ್ನಲ್ ಇರೋದು ನಿಮಗೆ ಕಾಣಿಸ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದೆ. ಈ ವೇಳೆ ಪ್ರಿಯಾಂಕಾ ದರ್ಪ ತೋರಿಸಿದ್ದರು. ಕೋಪಗೊಂಡು ನಾನು ಅವರ ಕಾರನ್ನು ಫಾಲೋ ಮಾಡಿ ಅಡ್ಡಗಟ್ಟಿ ಬೈದು ಕ್ಷಮೆ ಕೇಳುವಂತೆ ಹೇಳಿದೆ. ಈ ವೇಳೆ, ನಾನ್ಯಾಕೆ ಸಾರಿ ಕೇಳ್ಬೇಕು ಎಂದು ಪ್ರಶ್ನಿಸಿದ್ದರು. ಇದರಿಂದ ಇಷ್ಟೆಲ್ಲ ನಡೆಯಿತು' ಎಂದು ನಡೆದ ಘಟನಾವಳಿ ಬಗ್ಗೆ ದರ್ಶನ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳು ಇಂದು ಕೋರ್ಟ್​​ಗೆ ಹಾಜರು: ಪರಸ್ಪರ ಸಣ್ಣ ಸಾರಿ ಕೇಳಿದರೆ ಗಲಾಟೆ ಸುಖಾಂತ್ಯವಾಗುತ್ತಿತ್ತು. ಆದರೆ. ಸಾರಿ ಕೇಳದ ತಪ್ಪಿಗೆ ಕಾರು ಚಾಲಕಿ ಪ್ರಿಯಾಂಕಾ ಮತ್ತು ಆಕೆಯಿಂದ ಕ್ಷಮೆ ಕೇಳಿಸಲೇಬೇಕು ಎಂದು ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ತಪ್ಪಿಗೆ ದರ್ಶನ್ ಸೇರಿ ಆತನ ಮೂವರು ಸ್ನೇಹಿತರು ಆರೋಪಿಗಳ ಸ್ಥಾನದಲ್ಲಿ ನಿಂತಿದ್ದಾರೆ. ಸದ್ಯ ಜ್ಞಾನಭಾರತಿ ಠಾಣಾ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Watch.. ಬೆಂಗಳೂರಿನಲ್ಲಿ‌ ಮತ್ತೊಂದು ಅಪಘಾತ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕಿ

ಪ್ರಿಯಾಂಕಾ ಅವರ ಕಾರಿನ ಗಾಜು ಒಡೆದ ವಿಡಿಯೋ..

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದ ಘಟನೆಯ ಮತ್ತಷ್ಟು ವಿಡಿಯೋಗಳು ಲಭ್ಯವಾಗಿವೆ. ಕಾರಿನ ಬಾನೆಟ್​ ಮೇಲೆ ಕುಳಿತಿದ್ದ ದರ್ಶನ್ ಎಂಬಾತನನನ್ನು ಸುಮಾರು ಎರಡು ಕಿ.ಮೀ ದೂರ ಎಳೆದೊಯ್ದ ಬಳಿಕ, ಆತನ ಸ್ನೇಹಿತರು ಚಾಲಕಿ ಪ್ರಿಯಾಂಕಾರ ಕಾರು ಅಡ್ಡಗಟ್ಟಿ ಕಾರಿನ ಗ್ಲಾಸುಗಳನ್ನು ಹೊಡೆದುಹಾಕಿದ್ದರು.

'ಭಯಪಡಿಸಲು ಕಾರು ಚಲಾಯಿಸಿದೆ....' ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪ್ರಿಯಾಂಕಾ ಪೊಲೀಸರಿಗೆ ಕೊಟ್ಟ ಹೇಳಿಕೆ ಹೀಗಿದೆ. ‘‘ಬೆಳಗ್ಗೆ ಆರ್.ಎಂ.ವಿ ಲೇಔಟ್​ನಿಂದ ಹೊರಟಿದ್ದ ಪ್ರಿಯಾಂಕಾ ಮತ್ತು ಆಕೆಯ ಪತಿ ಪ್ರಮೋದ್, ಉಲ್ಲಾಳ ಜಂಕ್ಷನ್ ಸಿಗ್ನಲ್ ಬಳಿ ಬಂದಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ದರ್ಶನ್ ಎಂಬವರ ಸ್ವಿಫ್ಟ್ ಕಾರು ಅಡ್ಡಲಾಗಿ ದಾರಿ ಬಿಡದೇ ನಿಂತಿತ್ತು. ಎಷ್ಟೇ ಹಾರ್ನ್ ಮಾಡಿದರೂ ದಾರಿ ಬಿಡದೇ ಮೊಂಡಾಟ ಪ್ರದರ್ಶಿಸಿದ್ದರು. ನಂತರ ನಾವು ಅಲ್ಲಿಂದ ಹೊರಟು ಉಳ್ಳಾಲ ಕಡೆಗೆ ತೆರಳಿದೆವು. ಆದರೆ ದರ್ಶನ್​ ಅವರು​ ನಮ್ಮ ಕಾರನ್ನು ಹಿಂಬಾಲಿಸಿದರು‘‘ ಎಂದು ವಿವರಿಸಿದ್ದಾರೆ.

ಮುಂದುವರಿದು ಹೇಳಿಕೆ ನೀಡಿರುವ ಅವರು ‘‘ಗಾಬರಿಗೊಂಡ ನನ್ನ ಪತಿ 112ಕ್ಕೆ ಕರೆ ಮಾಡಿದರು. ಅಷ್ಟರಲ್ಲಿ ನಮ್ಮನ್ನು ಹಿಂಬಾಲಿಸಿ ಬಂದ ದರ್ಶನ್​ ಕಾರಲಿದ್ದವರು ಅಡ್ಡಗಟ್ಟಿ ಗಲಾಟೆ ಮಾಡಿ, ನನ್ನ ಪತಿಯ ಮೇಲೆ ಹಲ್ಲೆ ನಡೆಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಬರುವಂತೆ ಹೇಳಿದರು. ಆದರೆ, ದರ್ಶನ್ ನನ್ನ ಕಾರಿಗೆ ಅಡ್ಡ ಬಂದು ನಿಂತಿದ್ದ. ಆತನಿಗೆ ಭಯಪಡಿಸಲು ನಾನು ಕಾರನ್ನು ಮೂವ್ ಮಾಡಿದ್ದೆ. ಆಗ ಆತ ನನ್ನ ಕಾರಿನ ಬ್ಯಾನೆಟ್ ಮೇಲೆ ಹತ್ತಿ ಕುಳಿತಿದ್ದು ಸ್ವಲ್ಪ ದೂರ ಹೋದ್ರೆ ಇಳಿಯುತ್ತಾನೆ ಅಂತಾ ಮುಂದೆ ಚಲಾಯಿಸಿದ್ದೆ. ಬಳಿಕ ಶಾಂತಿನಿಕೇತನ ಬಳಿ ಕಾರನ್ನು ನಿಲ್ಲಿಸಿದೆ. ಆ ನಂತರದಲ್ಲೂ ಆತನ ಸ್ನೇಹಿತರು ಮತ್ತೆ ನಮ್ಮನ್ನು ಹಿಂಬಾಲಿಸಿದರು. ಕಾಲೇಜೊಂದರ ಬಳಿ ಕಾರು ತಡೆದು, ಏಕಾಏಕಿ ಕಲ್ಲುಗಳಿಂದ ನನ್ನ ಕಾರಿನ ಗ್ಲಾಸ್ ಒಡೆದರು. ಬಳಿಕ ನನ್ನ ಮಾನಕ್ಕೆ ಧಕ್ಕೆ ಆಗುವಂತೆ ವರ್ತಿಸಿದರು' ಎಂದು ಕಾರು ಚಾಲಕಿ ಪ್ರಿಯಾಂಕಾ ತಿಳಿಸಿದ್ದಾರೆ.

ದೂರಿನಲ್ಲಿ ದರ್ಶನ್​ ಹೇಳಿದ್ದೇನು? : ’’ನನ್ನ ಹೆಸರು ದರ್ಶನ್. ನ್ಯಾಚುರಲ್ ಐಸ್ ಕ್ರೀಂ ಹಾಗೂ ಪೆಟ್ ಶಾಪ್ ಇಟ್ಟುಕೊಂಡಿರುವೆ. ಇಂದು ಬೆಳಗ್ಗೆ ಉಲ್ಲಾಳದಲ್ಲಿ ಬರುವಾಗ ರೆಡ್ ಸಿಗ್ನಲ್ ಇದ್ದರೂ ಕಾರು ಚಾಲನೆ‌ ಮಾಡುತ್ತಿದ್ದ ಪ್ರಿಯಾಂಕಾ ಅವರ ಕಾರನ್ನು ಅಡ್ಡ ನಿಲ್ಲಿಸಿದ್ದೆ. ರೆಡ್ ಸಿಗ್ನಲ್ ಇರೋದು ನಿಮಗೆ ಕಾಣಿಸ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದೆ. ಈ ವೇಳೆ ಪ್ರಿಯಾಂಕಾ ದರ್ಪ ತೋರಿಸಿದ್ದರು. ಕೋಪಗೊಂಡು ನಾನು ಅವರ ಕಾರನ್ನು ಫಾಲೋ ಮಾಡಿ ಅಡ್ಡಗಟ್ಟಿ ಬೈದು ಕ್ಷಮೆ ಕೇಳುವಂತೆ ಹೇಳಿದೆ. ಈ ವೇಳೆ, ನಾನ್ಯಾಕೆ ಸಾರಿ ಕೇಳ್ಬೇಕು ಎಂದು ಪ್ರಶ್ನಿಸಿದ್ದರು. ಇದರಿಂದ ಇಷ್ಟೆಲ್ಲ ನಡೆಯಿತು' ಎಂದು ನಡೆದ ಘಟನಾವಳಿ ಬಗ್ಗೆ ದರ್ಶನ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳು ಇಂದು ಕೋರ್ಟ್​​ಗೆ ಹಾಜರು: ಪರಸ್ಪರ ಸಣ್ಣ ಸಾರಿ ಕೇಳಿದರೆ ಗಲಾಟೆ ಸುಖಾಂತ್ಯವಾಗುತ್ತಿತ್ತು. ಆದರೆ. ಸಾರಿ ಕೇಳದ ತಪ್ಪಿಗೆ ಕಾರು ಚಾಲಕಿ ಪ್ರಿಯಾಂಕಾ ಮತ್ತು ಆಕೆಯಿಂದ ಕ್ಷಮೆ ಕೇಳಿಸಲೇಬೇಕು ಎಂದು ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ತಪ್ಪಿಗೆ ದರ್ಶನ್ ಸೇರಿ ಆತನ ಮೂವರು ಸ್ನೇಹಿತರು ಆರೋಪಿಗಳ ಸ್ಥಾನದಲ್ಲಿ ನಿಂತಿದ್ದಾರೆ. ಸದ್ಯ ಜ್ಞಾನಭಾರತಿ ಠಾಣಾ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Watch.. ಬೆಂಗಳೂರಿನಲ್ಲಿ‌ ಮತ್ತೊಂದು ಅಪಘಾತ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕಿ

Last Updated : Jan 21, 2023, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.