ETV Bharat / state

ಆನೇಕಲ್: ಮಹಿಳೆ ಕೊಲೆಗೈದು ದೇಹ ಸುಟ್ಟುಹಾಕಿ ಪ್ರಿಯಕರ ಪರಾರಿ - ಈಟಿವಿ ಭಾರತ ಕನ್ನಡ

ಮಹಿಳೆಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಆನೇಕಲ್​ ತಾಲೂಕಿನ ಸಂಪಿಗೆ ನಗರದಲ್ಲಿ ನಡೆದಿದೆ.

woman-murdered-and-burnt-in-anekal
ಮಹಿಳೆಯನ್ನು ಕೊಲೆಗೈದು ದೇಹವನ್ನು ಸುಟ್ಟು ಪರಾರಿಯಾದ ಪ್ರಿಯಕರ
author img

By

Published : Apr 5, 2023, 6:40 PM IST

ಆನೇಕಲ್ : ಪ್ರಿಯಕರನೋರ್ವ ಮಹಿಳೆಯನ್ನು ಹತ್ಯೆಗೈದು ಬಳಿಕ ದೇಹವನ್ನು ಸುಟ್ಟು ಪರಾರಿಯಾಗಿರುವ ಘಟನೆ ನಗರದ ಆನೇಕಲ್​​ ತಾಲೂಕಿನ ಸಂಪಿಗೆ ನಗರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಮಂಜುಳಾ (32) ಎಂದು ಗುರುತಿಸಲಾಗಿದೆ. ನಾರಾಯಣ ಕೊಲೆಗೈದು ಪರಾರಿಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಪತಿಯಿಂದ ವಿಚ್ಛೇದನ ಪಡೆದಿದ್ದ ಮಂಜುಳಾ ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ವಾಸವಿದ್ದರು. ಅಪಾರ್ಟ್​ಮೆಂಟ್​ ಒಂದರಲ್ಲಿ ಮಂಜುಳಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಈ ನಡುವೆ ನಾರಾಯಣ ಪ್ರೇಯಸಿ ಮೇಲೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ತೆಗೆದು ಪೀಡಿಸುತ್ತಿದ್ದನಂತೆ. ಕೆಲಸ ತೊರೆಯುಂತೆಯೂ ಒತ್ತಡ ಹಾಕುತ್ತಿದ್ದನಂತೆ. ಆದರೆ ಮಂಜುಳಾ ಕೆಲಸ ತೊರೆಯುವುದಿಲ್ಲ ಎಂದು ಹಠ ಹಿಡಿದಿದ್ದು ನಾರಾಯಣ ಕುಪಿತಗೊಂಡಿದ್ದ.

ಕಳೆದ ಮಾರ್ಚ್​ 29 ರಂದು ಮಾತನಾಡುವ ನೆಪದಲ್ಲಿ ಮಂಜುಳಾರನ್ನು, ಇಬ್ಬರೂ ಯಾವಾಗಲೂ ಬರುತ್ತಿದ್ದ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಕೊಲೆ ಮಾಡಿ ದೇಹವನ್ನು ಸುಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೃತ ಮಹಿಳೆಯ ತಲೆ ಬುರುಡೆ ಮತ್ತು ಬೆನ್ನು ಮೂಳೆ ಪತ್ತೆಯಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಜೋರಾಗಿ ಹಾಡು ಹಾಕಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು: ಟೆಕ್ಕಿಗಳಿಂದ ಥಳಿತ, ವ್ಯಕ್ತಿ ಸಾವು

ಆನೇಕಲ್ : ಪ್ರಿಯಕರನೋರ್ವ ಮಹಿಳೆಯನ್ನು ಹತ್ಯೆಗೈದು ಬಳಿಕ ದೇಹವನ್ನು ಸುಟ್ಟು ಪರಾರಿಯಾಗಿರುವ ಘಟನೆ ನಗರದ ಆನೇಕಲ್​​ ತಾಲೂಕಿನ ಸಂಪಿಗೆ ನಗರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಮಂಜುಳಾ (32) ಎಂದು ಗುರುತಿಸಲಾಗಿದೆ. ನಾರಾಯಣ ಕೊಲೆಗೈದು ಪರಾರಿಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಪತಿಯಿಂದ ವಿಚ್ಛೇದನ ಪಡೆದಿದ್ದ ಮಂಜುಳಾ ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ವಾಸವಿದ್ದರು. ಅಪಾರ್ಟ್​ಮೆಂಟ್​ ಒಂದರಲ್ಲಿ ಮಂಜುಳಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಈ ನಡುವೆ ನಾರಾಯಣ ಪ್ರೇಯಸಿ ಮೇಲೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ತೆಗೆದು ಪೀಡಿಸುತ್ತಿದ್ದನಂತೆ. ಕೆಲಸ ತೊರೆಯುಂತೆಯೂ ಒತ್ತಡ ಹಾಕುತ್ತಿದ್ದನಂತೆ. ಆದರೆ ಮಂಜುಳಾ ಕೆಲಸ ತೊರೆಯುವುದಿಲ್ಲ ಎಂದು ಹಠ ಹಿಡಿದಿದ್ದು ನಾರಾಯಣ ಕುಪಿತಗೊಂಡಿದ್ದ.

ಕಳೆದ ಮಾರ್ಚ್​ 29 ರಂದು ಮಾತನಾಡುವ ನೆಪದಲ್ಲಿ ಮಂಜುಳಾರನ್ನು, ಇಬ್ಬರೂ ಯಾವಾಗಲೂ ಬರುತ್ತಿದ್ದ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಕೊಲೆ ಮಾಡಿ ದೇಹವನ್ನು ಸುಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೃತ ಮಹಿಳೆಯ ತಲೆ ಬುರುಡೆ ಮತ್ತು ಬೆನ್ನು ಮೂಳೆ ಪತ್ತೆಯಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಜೋರಾಗಿ ಹಾಡು ಹಾಕಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು: ಟೆಕ್ಕಿಗಳಿಂದ ಥಳಿತ, ವ್ಯಕ್ತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.