ETV Bharat / state

ಪೊಲೀಸ್ ಕಾನ್​ಸ್ಟೆಬಲ್​ಗೆ ಬೆಂಕಿ ಹಚ್ಚಿ ಹತ್ಯೆ ಪ್ರಕರಣ; ಆರೋಪಿ ಮಹಿಳೆಯ ವಿಚಾರಣೆ

author img

By ETV Bharat Karnataka Team

Published : Dec 21, 2023, 6:04 PM IST

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೆಬಲ್​ಗೆ ಬೆಂಕಿ ಹಚ್ಚಿ ಹತ್ಯೆಗೈದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಡಿಸಿಪಿ ರಾಹುಲ್‌ ಕುಮಾರ್ ಶಹಾಪುರ್
ಡಿಸಿಪಿ ರಾಹುಲ್‌ ಕುಮಾರ್ ಶಹಾಪುರ್

ಬೆಂಗಳೂರು: ಪ್ರೀತಿಸಿದ ಮಹಿಳೆ ಬೇರೆಯವರೊಂದಿಗೆ ಸಲುಗೆ ಬೆಳೆಸಿಕೊಂಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾನ್‌ಸ್ಟೆಬಲ್‌ವೋರ್ವರನ್ನು ಹತ್ಯೆಗೈದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪುಟ್ಟೇ‌ನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದೀಗ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಂಜಯ್ ಸಾವನ್ನಪ್ಪಿದ ಪೊಲೀಸ್​ ಸಿಬ್ಬಂದಿ.

ಮೊದಲು ಆಸ್ಪತ್ರೆಯಲ್ಲಿ ನಡೆದ ವಿಚಾರಣೆಯಲ್ಲಿ ಸಂಜಯ್ ಸ್ವಯಂಪ್ರೇರಿತವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಮತ್ತೊಂದೆಡೆ, ಮೃತನ ಸಂಬಂಧಿಕರು ಮಹಿಳೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎರಡೂ ಕಡೆಯಿಂದಲೂ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸುತ್ತಿದ್ದಾರೆ.

2018 ಬ್ಯಾಚ್​ನ ಸಂಜಯ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆಯೊಂದಿಗೆ ಪರಿಚಯವಾಗಿದೆ.‌ ಈ ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿತ್ತು.‌ ಕೆಲ ತಿಂಗಳ ಬಳಿಕ ಹೋಮ್ ಗಾರ್ಡ್ ಕೆಲಸ ತೊರೆದು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ‌ ಮಾಡುತ್ತಿದ್ದರು. ವಿವಾಹಿತೆಯಾಗಿದ್ದ ಮಹಿಳೆಯನ್ನು ಆಗಾಗ ಸಂಜಯ್ ಭೇಟಿಯಾಗುತ್ತಿದ್ದರು. ಈ ಹಿಂದೆ ಇಬ್ಬರೂ ಏಕಾಂತದ ಕ್ಣಣಗಳನ್ನು ಕಳೆದಿದ್ದರು.

ಡಿ.6 ರಂದು ಇಬ್ಬರು ಜೊತೆಗಿರಬೇಕಾದರೆ ಮಹಿಳೆಗೆ ಅನಾಮಿಕ ಕರೆ ಬಂದಿದೆ.‌ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬೇರೆ ವ್ಯಕ್ತಿಯೊಂದಿಗೆ ಸಲುಗೆ ಬೆಳಸಿಕೊಂಡಿದ್ದೀಯಾ ಎಂದು ಆರೋಪಿಸಿ ಆಕೆಯ ಮೊಬೈಲ್ ಪರಿಶೀಲಿಸಿದಾಗ ವ್ಯಕ್ತಿಯೊಂದಿಗೆ ಮಾತನಾಡಿರುವುದು ರೆಕಾರ್ಡ್ ಆಗಿತ್ತು.‌ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವೆ ಎಂದು ಬೆದರಿಸಿದ್ದಳು. ಬಳಿಕ ಸಂಜಯ್, ಹೋಗಿ ಪೆಟ್ರೋಲ್ ತಂದು ಸುರಿದುಕೊಂಡು ಬೆಂಕಿ ಹಚ್ಚುವುದಾದರೆ ಹಚ್ಚು ಎಂದು ಸವಾಲು ಹಾಕಿದ್ದ. ಮಹಿಳೆ ಕೂಡಲೇ ಬೆಂಕಿ ಕಡ್ಡಿಗೀರಿ ಸುಟ್ಟಿದ್ದಾಳೆ ಎಂದು ಸಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜಯ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತದನಂತರ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ.

ಈ ಬಗ್ಗೆ ಸಂಜಯ್ ಸಂಬಂಧಿ ಹರೀಶ್ ಎಂಬವರು ಪ್ರತಿಕ್ರಿಯಿಸಿದ್ದು, ಒಬ್ಬನೇ ವಾಸ ಮಾಡಿಕೊಂಡಿದ್ದ ಸಂಜಯ್ ಮೇಲಾಗಿರುವ ಘಟನೆಯ ಬಗ್ಗೆ ತಿಳಿದುಕೊಳ್ಳಲು ಮಹಿಳೆಯನ್ನು ಸಂಪರ್ಕಿಸಿದೆ. ಬೆಂಕಿ ಹಚ್ಕೊಂಡಿದ್ದ ಸಂಜಯ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ಆಕೆ ತಿಳಿಸಿದ್ದಳು. ಸಂಜಯ್‌ಗೆ ಮಹಿಳೆ ತನ್ನ ಹೆಸರು ಹೇಳಬೇಡ ಎಂದು ಹೆದರಿಸಿದ್ದಳು. ಆತ ತಾನು ಉಳಿಯಲ್ಲ ಅಂತಾ ಗೊತ್ತಾದಾಗ ಮಹಿಳೆ ಹೆದರಿಸಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ನಗರ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ ಕುಮಾರ್ ಶಹಾಪುರ್ ಮಾತನಾಡಿ, ಡಿಸೆಂಬರ್ 6ರಂದು ಕಾನ್ಸ್‌ಟೆಬಲ್‌ಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಬಂದಿತ್ತು. ಅಡುಗೆ ಮಾಡಬೇಕಾದರೆ ಅನಿಲ ಸೋರಿಕೆಯಾಗಿ ಬೆಂಕಿ ವ್ಯಾಪಿಸಿದ್ದರಿಂದ ಸುಟ್ಟುಗಾಯವಾಗಿದೆ ಎಂದು ಆರಂಭದಲ್ಲಿ ಸಂಜಯ್ ಹೇಳಿಕೆ ನೀಡಿದ್ದರು. ಕಳೆದ ಎರಡು ದಿವಸದ ಹಿಂದೆ ತಮ್ಮ ಹೇಳಿಕೆ ಬದಲಿಸಿ ಪರಿಚಯಸ್ಥ ಮಹಿಳೆಯೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದ್ದರು. ಸದ್ಯ ಆಕೆಯನ್ನು ವಶ ಪಡೆದು ವಿಚಾರಣೆ ನಡೆಸಲಾಗಿದೆ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಸಹೋದರನ ಹತ್ಯೆ

ಬೆಂಗಳೂರು: ಪ್ರೀತಿಸಿದ ಮಹಿಳೆ ಬೇರೆಯವರೊಂದಿಗೆ ಸಲುಗೆ ಬೆಳೆಸಿಕೊಂಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾನ್‌ಸ್ಟೆಬಲ್‌ವೋರ್ವರನ್ನು ಹತ್ಯೆಗೈದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪುಟ್ಟೇ‌ನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದೀಗ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಂಜಯ್ ಸಾವನ್ನಪ್ಪಿದ ಪೊಲೀಸ್​ ಸಿಬ್ಬಂದಿ.

ಮೊದಲು ಆಸ್ಪತ್ರೆಯಲ್ಲಿ ನಡೆದ ವಿಚಾರಣೆಯಲ್ಲಿ ಸಂಜಯ್ ಸ್ವಯಂಪ್ರೇರಿತವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಮತ್ತೊಂದೆಡೆ, ಮೃತನ ಸಂಬಂಧಿಕರು ಮಹಿಳೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎರಡೂ ಕಡೆಯಿಂದಲೂ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸುತ್ತಿದ್ದಾರೆ.

2018 ಬ್ಯಾಚ್​ನ ಸಂಜಯ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆಯೊಂದಿಗೆ ಪರಿಚಯವಾಗಿದೆ.‌ ಈ ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿತ್ತು.‌ ಕೆಲ ತಿಂಗಳ ಬಳಿಕ ಹೋಮ್ ಗಾರ್ಡ್ ಕೆಲಸ ತೊರೆದು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ‌ ಮಾಡುತ್ತಿದ್ದರು. ವಿವಾಹಿತೆಯಾಗಿದ್ದ ಮಹಿಳೆಯನ್ನು ಆಗಾಗ ಸಂಜಯ್ ಭೇಟಿಯಾಗುತ್ತಿದ್ದರು. ಈ ಹಿಂದೆ ಇಬ್ಬರೂ ಏಕಾಂತದ ಕ್ಣಣಗಳನ್ನು ಕಳೆದಿದ್ದರು.

ಡಿ.6 ರಂದು ಇಬ್ಬರು ಜೊತೆಗಿರಬೇಕಾದರೆ ಮಹಿಳೆಗೆ ಅನಾಮಿಕ ಕರೆ ಬಂದಿದೆ.‌ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬೇರೆ ವ್ಯಕ್ತಿಯೊಂದಿಗೆ ಸಲುಗೆ ಬೆಳಸಿಕೊಂಡಿದ್ದೀಯಾ ಎಂದು ಆರೋಪಿಸಿ ಆಕೆಯ ಮೊಬೈಲ್ ಪರಿಶೀಲಿಸಿದಾಗ ವ್ಯಕ್ತಿಯೊಂದಿಗೆ ಮಾತನಾಡಿರುವುದು ರೆಕಾರ್ಡ್ ಆಗಿತ್ತು.‌ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವೆ ಎಂದು ಬೆದರಿಸಿದ್ದಳು. ಬಳಿಕ ಸಂಜಯ್, ಹೋಗಿ ಪೆಟ್ರೋಲ್ ತಂದು ಸುರಿದುಕೊಂಡು ಬೆಂಕಿ ಹಚ್ಚುವುದಾದರೆ ಹಚ್ಚು ಎಂದು ಸವಾಲು ಹಾಕಿದ್ದ. ಮಹಿಳೆ ಕೂಡಲೇ ಬೆಂಕಿ ಕಡ್ಡಿಗೀರಿ ಸುಟ್ಟಿದ್ದಾಳೆ ಎಂದು ಸಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜಯ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತದನಂತರ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ.

ಈ ಬಗ್ಗೆ ಸಂಜಯ್ ಸಂಬಂಧಿ ಹರೀಶ್ ಎಂಬವರು ಪ್ರತಿಕ್ರಿಯಿಸಿದ್ದು, ಒಬ್ಬನೇ ವಾಸ ಮಾಡಿಕೊಂಡಿದ್ದ ಸಂಜಯ್ ಮೇಲಾಗಿರುವ ಘಟನೆಯ ಬಗ್ಗೆ ತಿಳಿದುಕೊಳ್ಳಲು ಮಹಿಳೆಯನ್ನು ಸಂಪರ್ಕಿಸಿದೆ. ಬೆಂಕಿ ಹಚ್ಕೊಂಡಿದ್ದ ಸಂಜಯ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ಆಕೆ ತಿಳಿಸಿದ್ದಳು. ಸಂಜಯ್‌ಗೆ ಮಹಿಳೆ ತನ್ನ ಹೆಸರು ಹೇಳಬೇಡ ಎಂದು ಹೆದರಿಸಿದ್ದಳು. ಆತ ತಾನು ಉಳಿಯಲ್ಲ ಅಂತಾ ಗೊತ್ತಾದಾಗ ಮಹಿಳೆ ಹೆದರಿಸಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ನಗರ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ ಕುಮಾರ್ ಶಹಾಪುರ್ ಮಾತನಾಡಿ, ಡಿಸೆಂಬರ್ 6ರಂದು ಕಾನ್ಸ್‌ಟೆಬಲ್‌ಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಬಂದಿತ್ತು. ಅಡುಗೆ ಮಾಡಬೇಕಾದರೆ ಅನಿಲ ಸೋರಿಕೆಯಾಗಿ ಬೆಂಕಿ ವ್ಯಾಪಿಸಿದ್ದರಿಂದ ಸುಟ್ಟುಗಾಯವಾಗಿದೆ ಎಂದು ಆರಂಭದಲ್ಲಿ ಸಂಜಯ್ ಹೇಳಿಕೆ ನೀಡಿದ್ದರು. ಕಳೆದ ಎರಡು ದಿವಸದ ಹಿಂದೆ ತಮ್ಮ ಹೇಳಿಕೆ ಬದಲಿಸಿ ಪರಿಚಯಸ್ಥ ಮಹಿಳೆಯೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದ್ದರು. ಸದ್ಯ ಆಕೆಯನ್ನು ವಶ ಪಡೆದು ವಿಚಾರಣೆ ನಡೆಸಲಾಗಿದೆ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಸಹೋದರನ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.