ETV Bharat / state

ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!

author img

By

Published : Dec 23, 2021, 9:16 PM IST

Updated : Dec 23, 2021, 9:21 PM IST

‌ಜೊಮಾಟೊ ಡೆಲಿವರಿ ಬಾಯ್​ನ ಕುತ್ತಿಗೆ ಪಟ್ಟಿ ಹಿಡಿದು ಹೊರದಬ್ಬಿರುವ ಘಟನೆ ಜರುಗಿದ್ದು, ಈ ಸಂಬಂಧ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!
ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!

ಬೆಂಗಳೂರು: ರೆಸ್ಟೋರೆಂಟ್ ಮಹಿಳಾ‌ ಸಿಬ್ಬಂದಿಯೊಬ್ಬರು ‌ಜೊಮಾಟೊ ಡೆಲಿವರಿ ಬಾಯ್​ನ ಕುತ್ತಿಗೆ ಪಟ್ಟಿ ಹಿಡಿದು ಹೊರದಬ್ಬಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಕಳೆದ ಆರು ದಿನಗಳ ಹಿಂದೆ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರೀಲ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ಜರುಗಿದೆ. ‌ಜೊಮಾಟೊ ಡೆಲಿವರಿ ಬಾಯ್ ಸಂಜಯ್ ಎಂಬುವರು ಆರ್ಡರ್​ ಮಾಡಿದ್ದ ಆಹಾರದ ಪೊಟ್ಟಣ ತೆಗೆದುಕೊಳ್ಳಲು ಇಲ್ಲಿಗೆ ಬಂದಿದ್ದರು. ಈ ವೇಳೆ, ರೆಸ್ಟೋರೆಂಟ್ ಸಿಬ್ಬಂದಿ ಜೊಮಾಟೋ ಬಾಯ್ಗೆ ಓಟಿಪಿ ನೀಡಬೇಕು. ಆದರೆ, ಉತ್ತರ ಭಾರತ ಮೂಲದ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ಓಟಿಪಿ ನೀಡಲು ವಿಳಂಬ ಮಾಡಿದ್ದಾರೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!

ಜಗಳ ವಿಕೋಪಕ್ಕೆ ತಿರುಗಿ ಕುತ್ತಿಗೆ ಪಟ್ಟಿ ಹಿಡಿದು ಡೆಲಿವರಿ ಬಾಯ್ ನನ್ನು ಅಲ್ಲಿಂದ ಹೊರದಬ್ಬಿದ್ದಾರೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಕನ್ನಡಪರ ಯುವ ಹೋರಾಟಗಾರರದ ಚೇತನ್ ಗೌಡ ಹಾಗೂ ಪ್ರಜ್ವಲ್ ಗೌಡ ನೇತೃತ್ವದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಕರಣ ಸಂಬಂಧ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಘಟನೆ ಬಗ್ಗೆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ‌ ಹಾಗೆ ಡೆಲಿವರಿ ಬಾಯ್ ಒಂದು ದಿನದ ವೇತನವನ್ನು ರೆಸ್ಟೋರೆಂಟ್ ಕಡೆಯಿಂದಲೇ ಕೊಡಿಸಿರುವುದಾಗಿ ಚೇತನ್ ಗೌಡ ತಿಳಿಸಿದ್ದಾರೆ.

ಬೆಂಗಳೂರು: ರೆಸ್ಟೋರೆಂಟ್ ಮಹಿಳಾ‌ ಸಿಬ್ಬಂದಿಯೊಬ್ಬರು ‌ಜೊಮಾಟೊ ಡೆಲಿವರಿ ಬಾಯ್​ನ ಕುತ್ತಿಗೆ ಪಟ್ಟಿ ಹಿಡಿದು ಹೊರದಬ್ಬಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಕಳೆದ ಆರು ದಿನಗಳ ಹಿಂದೆ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರೀಲ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ಜರುಗಿದೆ. ‌ಜೊಮಾಟೊ ಡೆಲಿವರಿ ಬಾಯ್ ಸಂಜಯ್ ಎಂಬುವರು ಆರ್ಡರ್​ ಮಾಡಿದ್ದ ಆಹಾರದ ಪೊಟ್ಟಣ ತೆಗೆದುಕೊಳ್ಳಲು ಇಲ್ಲಿಗೆ ಬಂದಿದ್ದರು. ಈ ವೇಳೆ, ರೆಸ್ಟೋರೆಂಟ್ ಸಿಬ್ಬಂದಿ ಜೊಮಾಟೋ ಬಾಯ್ಗೆ ಓಟಿಪಿ ನೀಡಬೇಕು. ಆದರೆ, ಉತ್ತರ ಭಾರತ ಮೂಲದ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ಓಟಿಪಿ ನೀಡಲು ವಿಳಂಬ ಮಾಡಿದ್ದಾರೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಫುಡ್ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ!

ಜಗಳ ವಿಕೋಪಕ್ಕೆ ತಿರುಗಿ ಕುತ್ತಿಗೆ ಪಟ್ಟಿ ಹಿಡಿದು ಡೆಲಿವರಿ ಬಾಯ್ ನನ್ನು ಅಲ್ಲಿಂದ ಹೊರದಬ್ಬಿದ್ದಾರೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಕನ್ನಡಪರ ಯುವ ಹೋರಾಟಗಾರರದ ಚೇತನ್ ಗೌಡ ಹಾಗೂ ಪ್ರಜ್ವಲ್ ಗೌಡ ನೇತೃತ್ವದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಕರಣ ಸಂಬಂಧ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಘಟನೆ ಬಗ್ಗೆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ‌ ಹಾಗೆ ಡೆಲಿವರಿ ಬಾಯ್ ಒಂದು ದಿನದ ವೇತನವನ್ನು ರೆಸ್ಟೋರೆಂಟ್ ಕಡೆಯಿಂದಲೇ ಕೊಡಿಸಿರುವುದಾಗಿ ಚೇತನ್ ಗೌಡ ತಿಳಿಸಿದ್ದಾರೆ.

Last Updated : Dec 23, 2021, 9:21 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.