ETV Bharat / state

ಅಲ್ಲಿನ ಎಲ್ಲ ಕೈಗಾರಿಕೆಗಳ ಲೈಸೆನ್ಸ್ ಪರಿಶೀಲನೆ ಮಾಡಲಾಗುವುದು: ಮಾಜಿ ಸಚಿವ ಎಂ. ಕೃಷ್ಣಪ್ಪ - hosaguddadahalli factory fire case

ಬ್ಯಾಟರಾಯನಪುರ ಪೊಲೀಸರ ಜೊತೆ ಮಾಜಿ ಸಚಿವ ಎಂ. ಕೃಷ್ಣಪ್ಪ ಪರಿಶೀಲನೆ ನಡೆಸಿ ಬೆಂಕಿಗಾಹುತಿಯಾದ ಫ್ಯಾಕ್ಟರಿ ಹಾಗೂ ಸುಟ್ಟು ಹೋದ ಮನೆ, ವಾಹನಗಳ ಮಾಲೀಕರು ಮತ್ತು ಆಕ್ರೋಶಗೊಂಡ ಸ್ಥಳೀಯರ ಜೊತೆ ಎಂ ಕೃಷ್ಣಪ್ಪ ಮಾತುಕತೆ ನಡೆಸಿದ್ದಾರೆ.

m krishnappa
ಮಾಜಿ ಸಚಿವ ಎಂ. ಕೃಷ್ಣಪ್ಪ
author img

By

Published : Nov 11, 2020, 12:18 PM IST

Updated : Nov 11, 2020, 12:45 PM IST

ಬೆಂಗಳೂರು: ಹೊಸಗುಡ್ಡದಹಳ್ಳಿ ಬಳಿಯ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ ಕೃಷ್ಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿ ಕೆಮಿಕಲ್ ಪ್ಯಾಕ್ಟರಿ ಗೋಡನ್​​ಗೆ ಬಿಬಿಎಂಪಿಯು ಟ್ರೇಡ್ ಲೈಸೆನ್ಸ್ ಕೊಟ್ಟಿರುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತನಿಖೆ ಕೈಗೊಳ್ಳಲಾಗುತ್ತೆ. ಜೊತೆಗೆ ತಲೆಮರೆಸಿಕೊಂಡಿರುವ ಗೋಡೌನ್​ ಮಾಲೀಕ ಎಲ್ಲಿದ್ದಾರೆ ಎಂದು ಪರಿಶೀಲನೆ ಮಾಡಲಿದ್ದೇವೆ ಎಂದರು.

ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಬಳಿ ಎಂ ಕೃಷ್ಣಪ್ಪ ಭೇಟಿ, ಪರಿಶೀಲನೆ

ಇನ್ನೂ ಹೊಸಗುಡ್ಡದಹಳ್ಳಿಯಲ್ಲಿ ಇರುವ ಎಲ್ಲ ಇಂಡಸ್ಟ್ರಿಸ್ ಮಾಲೀಕರ ಬಳಿ ಲೈಸನ್ಸ್ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಕಂಗಾಲಾದ ಅಗ್ನಿಶಾಮಕ ದಳ...!

ಪರಿಹಾರ:

ಹಾನಿಯಾದ ಮನೆಗಳಿಗೆ ಪರಿಹಾರ ನೀಡೋ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ಮಾಡುತ್ತೇವೆ. ಎಷ್ಟು ಹಾನಿಯಾಗಿದೆ ಎಂಬುದನ್ನು ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಸ್ಪಿರಿಟ್ ಆಗಿರೋದ್ರಿಂದ ಇನ್ನೂ ಹೆಚ್ಚು ಸಿಡಿಯಬಹುದು ಅನ್ನೋ ಆತಂಕ ಇದೆ. ಈ ಕುರಿತು ಮುಂದಿನ ದಿನ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ.

ಬೆಂಗಳೂರು: ಹೊಸಗುಡ್ಡದಹಳ್ಳಿ ಬಳಿಯ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ ಕೃಷ್ಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿ ಕೆಮಿಕಲ್ ಪ್ಯಾಕ್ಟರಿ ಗೋಡನ್​​ಗೆ ಬಿಬಿಎಂಪಿಯು ಟ್ರೇಡ್ ಲೈಸೆನ್ಸ್ ಕೊಟ್ಟಿರುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತನಿಖೆ ಕೈಗೊಳ್ಳಲಾಗುತ್ತೆ. ಜೊತೆಗೆ ತಲೆಮರೆಸಿಕೊಂಡಿರುವ ಗೋಡೌನ್​ ಮಾಲೀಕ ಎಲ್ಲಿದ್ದಾರೆ ಎಂದು ಪರಿಶೀಲನೆ ಮಾಡಲಿದ್ದೇವೆ ಎಂದರು.

ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಬಳಿ ಎಂ ಕೃಷ್ಣಪ್ಪ ಭೇಟಿ, ಪರಿಶೀಲನೆ

ಇನ್ನೂ ಹೊಸಗುಡ್ಡದಹಳ್ಳಿಯಲ್ಲಿ ಇರುವ ಎಲ್ಲ ಇಂಡಸ್ಟ್ರಿಸ್ ಮಾಲೀಕರ ಬಳಿ ಲೈಸನ್ಸ್ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಕಂಗಾಲಾದ ಅಗ್ನಿಶಾಮಕ ದಳ...!

ಪರಿಹಾರ:

ಹಾನಿಯಾದ ಮನೆಗಳಿಗೆ ಪರಿಹಾರ ನೀಡೋ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ಮಾಡುತ್ತೇವೆ. ಎಷ್ಟು ಹಾನಿಯಾಗಿದೆ ಎಂಬುದನ್ನು ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಸ್ಪಿರಿಟ್ ಆಗಿರೋದ್ರಿಂದ ಇನ್ನೂ ಹೆಚ್ಚು ಸಿಡಿಯಬಹುದು ಅನ್ನೋ ಆತಂಕ ಇದೆ. ಈ ಕುರಿತು ಮುಂದಿನ ದಿನ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ.

Last Updated : Nov 11, 2020, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.