ETV Bharat / state

ವಿಜ್ಞಾನ​ ಕಾಂಗ್ರೆಸ್ ಸಮಾರೋಪ:​ ವೇದಿಕೆಯಲ್ಲಿ ಉಪರಾಷ್ಟ್ರಪತಿ ಅಂಗರಕ್ಷಕರು ಎಚ್ಚೆತ್ತುಕೊಂಡಿದ್ದೇಕೆ? - Vice President bodyguards alerted at Science Forum

ಸಮಾರೋಪ ಕಾರ್ಯಕ್ರಮದಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್​ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ಅವರು ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು.

Vice President bodyguards alerted at Science Forum
ಸೈನ್ಸ್​ ಕಾಂಗ್ರೆಸ್​ ವೇದಿಕೆಯಲ್ಲಿ ಎಚ್ಚೆತ್ತುಕೊಂಡಿಡ ಉಪರಾಷ್ಟ್ರಪತಿ ಅಂಗರಕ್ಷಕರು
author img

By

Published : Jan 7, 2020, 9:42 PM IST

Updated : Jan 8, 2020, 1:11 AM IST

ಬೆಂಗಳೂರು: 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಈ ವೇಳೆ ಉಪರಾಷ್ಟ್ರಪತಿಗಳ ಹಿಂಭಾಗದಲ್ಲಿದ್ದ ಅಂಗರಕ್ಷರು ಒಂದೇ ಬಾರಿ ಎಚ್ಚೆತ್ತುಕೊಂಡರು. ಎಲ್ಲರೂ ಗಾಬರಿಯಿಂದ ಒಂದು ಬಾರಿ ವೇದಿಕೆಯ ಕಡೆಗೆ ಗಮನಿಸುವಂತೆ ಅಲ್ಲಿ ಘಟನೆ ನಡೆಯಿತು.

ಸೈನ್ಸ್​ ಕಾಂಗ್ರೆಸ್​ ವೇದಿಕೆಯಲ್ಲಿ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿ ಅಂಗರಕ್ಷಕರು

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್​ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು. ಮತ್ತೊಮ್ಮೆ ಬೆಂಕಿಯ ಜ್ವಾಲೆಯಿಂದ ಅನಾಹುತ ಆಗಬಾರದು ಎಂಬ ಕಾರಣಕ್ಕೆ ಅಂಗರಕ್ಷಕರು ಮತ್ತೆ- ಮತ್ತೆ ದೂರ ಹಿಡಿಯುವಂತೆ ಹೇಳಿದರು.

ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು: ಉಪರಾಷ್ಟ್ರಪತಿ ತಮ್ಮ ಸಮಾರೋಪ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಗೆದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಎಲ್ಲಾ ಸಭಿಕರಿಗೆ ಕನ್ನಡದಲ್ಲೇ ವಂದನೆ ಸಲ್ಲಿಸಿ ಮಾತು ಆರಂಭಿಸಿದರು. '107ನೇ ವಿಜ್ಞಾನ ಕಾಂಗ್ರೆಸ್​ನಲ್ಲಿ ಭಾಗವಹಿಸಿದ ನನಗೆ ತುಂಬಾ ಸಂತೋಷವಾಗಿದೆ' ಎಂದು ಕನ್ನಡದಲ್ಲಿ ಹೇಳಿದರು.

107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಮನರಂಜಿಸಿದ ಪೊಲೀಸ್ ಬ್ಯಾಂಡ್: ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಪೊಲೀಸ್ ಬ್ಯಾಂಡ್, ವಿಜ್ಞಾನ ಮೇಳಕ್ಕೆ ಬಂದ ಗಣ್ಯರು, ಸಾರ್ವಜನಿಕರನ್ನು ಮನರಂಜಿಸಿತು. 'ಗಂಧದ ಗುಡಿ' ಸಿನಿಮಾದ 'ನಾವಾಡುವ ನುಡಿಯೆ ಕನ್ನಡ ನುಡಿ' ಹಾಡನ್ನು ಬ್ಯಾಂಡ್ ನಲ್ಲಿ ನುಡಿಸಿದರು.

ಬೆಂಗಳೂರು: 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಈ ವೇಳೆ ಉಪರಾಷ್ಟ್ರಪತಿಗಳ ಹಿಂಭಾಗದಲ್ಲಿದ್ದ ಅಂಗರಕ್ಷರು ಒಂದೇ ಬಾರಿ ಎಚ್ಚೆತ್ತುಕೊಂಡರು. ಎಲ್ಲರೂ ಗಾಬರಿಯಿಂದ ಒಂದು ಬಾರಿ ವೇದಿಕೆಯ ಕಡೆಗೆ ಗಮನಿಸುವಂತೆ ಅಲ್ಲಿ ಘಟನೆ ನಡೆಯಿತು.

ಸೈನ್ಸ್​ ಕಾಂಗ್ರೆಸ್​ ವೇದಿಕೆಯಲ್ಲಿ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿ ಅಂಗರಕ್ಷಕರು

ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್​ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್ ರಂಗಪ್ಪ ವಿಜ್ಞಾನ ಜ್ಯೋತಿಯನ್ನು ಹಸ್ತಾಂತರಿಸಿದರು. ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯೊಂದು ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರ ಹಿಡಿಯುವಂತೆ ಸೂಚಿಸಿದರು. ಮತ್ತೊಮ್ಮೆ ಬೆಂಕಿಯ ಜ್ವಾಲೆಯಿಂದ ಅನಾಹುತ ಆಗಬಾರದು ಎಂಬ ಕಾರಣಕ್ಕೆ ಅಂಗರಕ್ಷಕರು ಮತ್ತೆ- ಮತ್ತೆ ದೂರ ಹಿಡಿಯುವಂತೆ ಹೇಳಿದರು.

ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು: ಉಪರಾಷ್ಟ್ರಪತಿ ತಮ್ಮ ಸಮಾರೋಪ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಗೆದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಎಲ್ಲಾ ಸಭಿಕರಿಗೆ ಕನ್ನಡದಲ್ಲೇ ವಂದನೆ ಸಲ್ಲಿಸಿ ಮಾತು ಆರಂಭಿಸಿದರು. '107ನೇ ವಿಜ್ಞಾನ ಕಾಂಗ್ರೆಸ್​ನಲ್ಲಿ ಭಾಗವಹಿಸಿದ ನನಗೆ ತುಂಬಾ ಸಂತೋಷವಾಗಿದೆ' ಎಂದು ಕನ್ನಡದಲ್ಲಿ ಹೇಳಿದರು.

107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮಾರೋಪ ಸಮಾರಂಭ

ಮನರಂಜಿಸಿದ ಪೊಲೀಸ್ ಬ್ಯಾಂಡ್: ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಪೊಲೀಸ್ ಬ್ಯಾಂಡ್, ವಿಜ್ಞಾನ ಮೇಳಕ್ಕೆ ಬಂದ ಗಣ್ಯರು, ಸಾರ್ವಜನಿಕರನ್ನು ಮನರಂಜಿಸಿತು. 'ಗಂಧದ ಗುಡಿ' ಸಿನಿಮಾದ 'ನಾವಾಡುವ ನುಡಿಯೆ ಕನ್ನಡ ನುಡಿ' ಹಾಡನ್ನು ಬ್ಯಾಂಡ್ ನಲ್ಲಿ ನುಡಿಸಿದರು.

Intro:ವಿಜ್ಞಾನಮೇಳದ ವೇದಿಕೆಯಲ್ಲಿ ಉಪರಾಷ್ಟ್ರಪತಿ ಅಂಗರಕ್ಷಕರು ಎಚ್ಚೆತ್ತುಕೊಂಡಿದ್ದು ಯಾಕೆ ಗೊತ್ತಾ!


ಬೆಂಗಳೂರು: 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಸಮಾರೋಪ ಸಮಾರಂಭವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆಗೊಳಿಸಿದರು. ಈ ವೇಳೆ ಉಪರಾಷ್ಟ್ರಪತಿಗಳ ಹಿಂಭಾಗದಲ್ಲಿದ್ದ ಅಂಗರಕ್ಷರು ಒಂದೇ ಬಾರಿ ಎಚ್ಚೆತ್ತುಕೊಂಡರು. ಎಲ್ಲರೂ ಗಾಬರಿಯಿಂದ ಒಂದು ಬಾರಿ ವೇದಿಕೆಯ ಕಡೆಗೆ ಗಮನಿಸುವಂತೆ ಅಲ್ಲಿ ಘಟನೆ ನಡೆಯಿತು.
ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನ ನೂತನ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಫ್ರೊ.ವಿಜಯ್ ಲಕ್ಷ್ಮಿ ಸಕ್ಸೇನಾ ಅವರಿಗೆ ಈವರೆಗೆ ಅಧ್ಯಕ್ಷರಾಗಿದ್ದ ಪ್ರೊ.ಕೆ.ಎಸ್ ರಂಗಪ್ಪ ವಿಜ್ಞಾನ ಜ್ಯೋತಿಯನ್ನು ವೇದಿಕೆಯಲ್ಲಿ ಹಸ್ತಾಂತರಿಸಿದರು. ಈ ಜ್ಯೋತಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಜ್ವಾಲೆ ವೇದಿಕೆ ಗಣ್ಯರಿದ್ದ ವೇದಿಕೆ ಮೇಲೆ ಬಿತ್ತು. ಈ ವೇಳೆ ಎಚ್ಚೆತ್ತುಕೊಂಡ ಉಪರಾಷ್ಟ್ರಪತಿಯ ಅಂಗರಕ್ಷಕರೊಬ್ಬರು ಜ್ಯೋತಿಯನ್ನು ದೂರಹಿಡಿಯುವಂತೆ ಸೂಚಿಸಿದರು. ಮತ್ತೊಮ್ಮೆ ಬೆಂಕಿಯ ಜ್ವಾಲೆಯಿಂದ ಅನಾಹುತ ಆಗ್ಬಾರ್ದು ಎಂಬ ಕಾರಣಕ್ಕೆ ಉಪರಾಷ್ಟ್ರಪತಿಯಿರುವ ಜಾಗದಿಂದ ದೂರ ಹಿಡಿಯುವಂತೆ ಅಂಗರಕ್ಷಕರು ಸೂಚಿಸಿದರು.


ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು


ಉಪರಾಷ್ಟ್ರಪತಿ ತಮ್ಮ ಸಮಾರೋಪ ಸಮಾರಂಭದ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಜಿಕೆವಿಕೆ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಗೆದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಎಲ್ಲಾ ಸಭಿಕರಿಗೆ ಕನ್ನಡದಲ್ಲೇ ವಂದನೆ ಸಲ್ಲಿಸಿ ಮಾತು ಆರಂಭಿಸಿದರು.
ವಿಜ್ಞಾನಜ್ಯೋತಿಯನ್ನು ಫ್ರೋ. ರಂಗಪ್ಪ, ಚುನಾಯಿತ ಅಧ್ಯಕ್ಷೆ ಲಕ್ಷಿ ಸಕ್ಸೇನಾ ಅವರಿಗೆ ಹಸ್ತಾಂತರ ಮಾಡಿದ್ರು...
ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯ ನಾಯ್ಡು. 107 ನೇ ಸೈನ್ ಕಾಂಗ್ರೆಸ್ ನಲ್ಲಿ ಭಾಗವಹಿಸಿದ ನನಗೆ ತುಂಬಾ ಸಂತೋಷವಾಗಿದೆ ಎಂದು ಕನ್ನಡದಲ್ಲಿ ಮಾತನಾಡಿದರು.


ಮನರಂಜಿಸಿದ ಪೊಲೀಸ್ ಬ್ಯಾಂಡ್


ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಪೊಲೀಸ್ ಬ್ಯಾಂಡ್, ವಿಜ್ಞಾನ ಮೇಳಕ್ಕೆ ಬಂದ ಗಣ್ಯರು, ಸಾರ್ವಜನಿಕರನ್ನು ಮನರಂಜಿಸಿತು. ನಾವಾಡುವ ನುಡಿಯೆ ಕನ್ನಡ ನುಡಿ ಹಾಡನ್ನು ಪೊಲೀಸ್ ಬ್ಯಾಂಡ್ ನಲ್ಲಿ ನುಡಿಸಿದರು.




ಸೌಮ್ಯಶ್ರೀ
Kn_Bng_01_venkayyanaidu_7202707
Camara visualBody:..Conclusion:..
Last Updated : Jan 8, 2020, 1:11 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.