ETV Bharat / state

ಕೂತರೂ, ನಿಂತರೂ, ಗೃಹ ಸಚಿವರಿಗೆ RSS ಮತ್ತು ಕೇಸರಿ ಕಾಣಿಸುತ್ತದೆ: ವಾಟಾಳ್​ ನಾಗರಾಜ್

author img

By

Published : Oct 19, 2021, 10:53 PM IST

ಪೊಲೀಸರು ಕೇಸರಿ ಬಟ್ಟೆ ಧರಿಸಿದ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿನ್ನಲೆ ಏನು ಅಂತ ತಿಳಿದುಕೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಆಗ್ರಹಿಸಿದರು.

vatal-nagaraj-protest-against-police-weared-saffron-shawls
ವಾಟಾಳ ನಾಗರಾಜ್

ಬೆಂಗಳೂರು: ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ​ಸಂಘದ ಮೂಲದವರಾಗಿದ್ದಾರೆ. ಅವರಿಗೆ ಕೂತರೂ,ನಿಂತರೂ, ಆರ್​ಎಸ್​ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಕಿಡಿಕಾರಿದರು.

ಕೂತರೂ,ನಿಂತರೂ ಗೃಹ ಸಚಿವರಿಗೆ ಆರ್​ಎಸ್​ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದ ವಾಟಾಳ್​​

ಪೊಲೀಸರು ಕೇಸರಿ ಉಡುಪು ಧರಿಸಿದಕ್ಕೆ ವಿರೋಧ ವ್ಯಕ್ತಪಡಿಸಿ, ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಕರಾಳ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲಿ ಅತ್ಯಂತ ಜವಾಬ್ದಾರಿಯುತ ಮತ್ತು ಶಕ್ತಿಯುತ ಇಲಾಖೆಯಾಗಿದೆ. ರಾಜ್ಯ ಪೊಲೀಸರು ಒಳ್ಳೆಯ ಹೆಸರನ್ನು ಪಡೆದಿದ್ದಾರೆ ಎಂದರು.

ಮೊದಲ ಬಾರಿಗೆ ಪೊಲೀಸರಿಂದ ಕೇಸರಿ ಬಟ್ಟೆ ಬಳಕೆ: ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ದಸರಾ ಹಬ್ಬದ ದಿವಸ ಪೊಲೀಸರು ಕೇಸರಿ ಬಟ್ಟೆಯನ್ನು ಧರಿಸಿದ್ದಾರೆ. ಇಲ್ಲಿಯವರೆಗೂ ಯಾವ ಬಾರಿಯು ಕೇಸರಿ ಉಡುಪನ್ನು ಧರಿಸಿರಲಿಲ್ಲ. ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿನ್ನೆಲೆ ಏನು ಅಂತ ತಿಳಿದುಕೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪೊಲೀಸರಿಗೆ ಪ್ಯಾಂಟ್ ತಂದಿದ್ದು ನಾನು: ಮೊದಲು ಪೊಲೀಸರಿಗೆ ಚಡ್ಡಿ ಇತ್ತು. ಆದರೆ ಪ್ಯಾಂಟ್ ತಂದಿದ್ದು ನಾನು. ಪೊಲೀಸ್ ಇಲಾಖೆಯನ್ನು ಕಲುಷಿತ ಮಾಡಬಾರದು. ಪೊಲೀಸ್​​ ಇಲಾಖೆಯ ಮಧ್ಯ ರಾಜಕೀಯ ತರಬಾರದು. ಪೊಲೀಸ್ ಇಲಾಖೆಗೆ ತಮ್ಮದೆ ಆದಂತಹ ಉಡುಪಿದೆ, ಹೀಗಾಗಿ ಕೇಸರಿ ಉಡುಪು ಧರಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಹೇಳಿದರು.

ಬೆಂಗಳೂರು: ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ​ಸಂಘದ ಮೂಲದವರಾಗಿದ್ದಾರೆ. ಅವರಿಗೆ ಕೂತರೂ,ನಿಂತರೂ, ಆರ್​ಎಸ್​ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಕಿಡಿಕಾರಿದರು.

ಕೂತರೂ,ನಿಂತರೂ ಗೃಹ ಸಚಿವರಿಗೆ ಆರ್​ಎಸ್​ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದ ವಾಟಾಳ್​​

ಪೊಲೀಸರು ಕೇಸರಿ ಉಡುಪು ಧರಿಸಿದಕ್ಕೆ ವಿರೋಧ ವ್ಯಕ್ತಪಡಿಸಿ, ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಕರಾಳ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲಿ ಅತ್ಯಂತ ಜವಾಬ್ದಾರಿಯುತ ಮತ್ತು ಶಕ್ತಿಯುತ ಇಲಾಖೆಯಾಗಿದೆ. ರಾಜ್ಯ ಪೊಲೀಸರು ಒಳ್ಳೆಯ ಹೆಸರನ್ನು ಪಡೆದಿದ್ದಾರೆ ಎಂದರು.

ಮೊದಲ ಬಾರಿಗೆ ಪೊಲೀಸರಿಂದ ಕೇಸರಿ ಬಟ್ಟೆ ಬಳಕೆ: ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ದಸರಾ ಹಬ್ಬದ ದಿವಸ ಪೊಲೀಸರು ಕೇಸರಿ ಬಟ್ಟೆಯನ್ನು ಧರಿಸಿದ್ದಾರೆ. ಇಲ್ಲಿಯವರೆಗೂ ಯಾವ ಬಾರಿಯು ಕೇಸರಿ ಉಡುಪನ್ನು ಧರಿಸಿರಲಿಲ್ಲ. ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿನ್ನೆಲೆ ಏನು ಅಂತ ತಿಳಿದುಕೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪೊಲೀಸರಿಗೆ ಪ್ಯಾಂಟ್ ತಂದಿದ್ದು ನಾನು: ಮೊದಲು ಪೊಲೀಸರಿಗೆ ಚಡ್ಡಿ ಇತ್ತು. ಆದರೆ ಪ್ಯಾಂಟ್ ತಂದಿದ್ದು ನಾನು. ಪೊಲೀಸ್ ಇಲಾಖೆಯನ್ನು ಕಲುಷಿತ ಮಾಡಬಾರದು. ಪೊಲೀಸ್​​ ಇಲಾಖೆಯ ಮಧ್ಯ ರಾಜಕೀಯ ತರಬಾರದು. ಪೊಲೀಸ್ ಇಲಾಖೆಗೆ ತಮ್ಮದೆ ಆದಂತಹ ಉಡುಪಿದೆ, ಹೀಗಾಗಿ ಕೇಸರಿ ಉಡುಪು ಧರಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.