ETV Bharat / state

ಕಾಂಗ್ರೆಸ್​​ನಲ್ಲಿ ರಾಜರಂತಿದ್ದ ಶಾಸಕರು ಬಿಜೆಪಿಗೆ ಹೋಗಿ ಭಿಕ್ಷೆ ಬೇಡ್ತಿದ್ದಾರೆ: ದಿನೇಶ್ ಗುಂಡೂರಾವ್ ವ್ಯಂಗ್ಯ - ಅನರ್ಹ ಶಾಸಕರ ವಿರುದ್ಧ ದಿನೇಶ್​ ಗುಂಡೂರಾವ್​ ವಾಗ್ದಾಳಿ

ಪಕ್ಷಕ್ಕೆ ಕೈಕೊಟ್ಟು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಕಾಂಗ್ರೆಸ್​ ಶಾಸಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಲೇವಡಿ ಮಾಡಿದ್ದಾರೆ.

ದಿನೇಶ್ ಗುಂಡೂರಾವ್
author img

By

Published : Sep 17, 2019, 5:17 PM IST

ಬೆಂಗಳೂರು: ಅನರ್ಹ ಶಾಸಕರು ಕಾಂಗ್ರೆಸ್​ನಲ್ಲಿ ರಾಜರಂತೆ ಇದ್ದರು,ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು‌ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್​, ಅನರ್ಹ ಶಾಸಕರು ಏನೇ ಮಾಡಿದ್ರೂ ಮುಕ್ತ ಅವಕಾಶ ನೀಡಲಾಗಿತ್ತು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾನೂನಾತ್ಮಕವಾಗಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಶಾಸಕರನ್ನ ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರಿಗೆ ಬಿಜೆಪಿಯವರು ಕೈ ಕೊಡ್ತಾರೆ ಅಂತ ಮೊದಲೇ ತಿಳಿ ಹೇಳಿದ್ದೆವು. ಮತ್ತೆ ಪಕ್ಷಕ್ಕೆ ಅವರನ್ನ ವಾಪಸ್ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.

ದಿನೇಶ್ ಗುಂಡೂರಾವ್

ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು. ಇವತ್ತಿನ ಸರ್ಕಾರಕ್ಕೆ ಹೋಲಿಸಿದರೆ ಮೈತ್ರಿ ಸರ್ಕಾರ ನೂರು ಪಾಲು ಚೆನ್ನಾಗಿತ್ತು. ಇವತ್ತು ರಾಜ್ಯದಲ್ಲಿ ಸರ್ಕಾರ ಸತ್ತು ಬಿದ್ದಿದ್ದು, ಬಿಜೆಪಿಯವರು ಪೊರಕೆ ಹಿಡಿದು ಸ್ವಚ್ಚತೆ ಅಂತ ಫೋಸ್ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸಂಸದ ನಾರಾಯಣಸ್ವಾಮಿಗೆ ಪಾವಗಡದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಣೆ ಬಗ್ಗೆ ಮಾತನಾಡಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ. ಒಬ್ಬ ಸಂಸದರಿಗೆ ಹೀಗಾದರೆ ಹೇಗೆ, ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು ಎಂದರು.

ಬೆಂಗಳೂರು: ಅನರ್ಹ ಶಾಸಕರು ಕಾಂಗ್ರೆಸ್​ನಲ್ಲಿ ರಾಜರಂತೆ ಇದ್ದರು,ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು‌ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್​, ಅನರ್ಹ ಶಾಸಕರು ಏನೇ ಮಾಡಿದ್ರೂ ಮುಕ್ತ ಅವಕಾಶ ನೀಡಲಾಗಿತ್ತು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾನೂನಾತ್ಮಕವಾಗಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಶಾಸಕರನ್ನ ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರಿಗೆ ಬಿಜೆಪಿಯವರು ಕೈ ಕೊಡ್ತಾರೆ ಅಂತ ಮೊದಲೇ ತಿಳಿ ಹೇಳಿದ್ದೆವು. ಮತ್ತೆ ಪಕ್ಷಕ್ಕೆ ಅವರನ್ನ ವಾಪಸ್ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.

ದಿನೇಶ್ ಗುಂಡೂರಾವ್

ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು. ಇವತ್ತಿನ ಸರ್ಕಾರಕ್ಕೆ ಹೋಲಿಸಿದರೆ ಮೈತ್ರಿ ಸರ್ಕಾರ ನೂರು ಪಾಲು ಚೆನ್ನಾಗಿತ್ತು. ಇವತ್ತು ರಾಜ್ಯದಲ್ಲಿ ಸರ್ಕಾರ ಸತ್ತು ಬಿದ್ದಿದ್ದು, ಬಿಜೆಪಿಯವರು ಪೊರಕೆ ಹಿಡಿದು ಸ್ವಚ್ಚತೆ ಅಂತ ಫೋಸ್ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸಂಸದ ನಾರಾಯಣಸ್ವಾಮಿಗೆ ಪಾವಗಡದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಣೆ ಬಗ್ಗೆ ಮಾತನಾಡಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ. ಒಬ್ಬ ಸಂಸದರಿಗೆ ಹೀಗಾದರೆ ಹೇಗೆ, ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು ಎಂದರು.

Intro:newsBody:ಅನರ್ಹರು ಕಾಂಗ್ರೆಸ್ನಲ್ಲಿ ರಾಜರಂತೆ ಇದ್ದರು ಬಿಜೆಪಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ: ದಿನೇಶ್ ಗುಂಡೂರಾವ್



ಬೆಂಗಳೂರು: ಅನರ್ಹ ಶಾಸಕರು ಕಾಂಗ್ರೆಸ್ ನಲ್ಲಿ ರಾಜರಂತೆ ಇದ್ದರು, ಇದೀಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು‌ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಅನರ್ಹ ಶಾಸಕರು ಎನೇ ಮಾಡಿದ್ರೂ ಮುಕ್ತ ಅವಕಾಶ ನೀಡಲಾಗಿತ್ತು. ಆದರೆ, ಇವತ್ತು ಅವರ ಪರಿಸ್ಥಿತಿ ಏನಾಗಿದೆ. ಬಿಜೆಪಿಯವರ ಮುಂದೆ ಭಿಕ್ಷೆ ಬೇಡುವಂತಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾನೂನಾತ್ಮಕವಾಗಿ ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿದ್ದಾರೆ. ಶಾಸಕರನ್ನ ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಿ ಹೋದರು ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷಾಂತರಿಗಳು ಅನ್ನೋದು ರಾಜ್ಯಕ್ಕೆ ಗೊತ್ತಿದೆ. ಬಿಜೆಪಿಯವರು ಕೈಕೊಡ್ತಾರೆ ಅಂತ ಮೊದಲೇ ತಿಳಿ ಹೇಳಿದ್ದೆವು. ನಾವು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ‌. ಅನರ್ಹ ಶಾಸಕರು ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ. ಮತ್ತೆ ಪಕ್ಷಕ್ಕೆ ಅವರನ್ನ ವಾಪಸ್ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ. ಈಗಲೂ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಅದ್ದೂರಿ ಗಾಂಧಿ ಜಯಂತಿಗೆ ತೀರ್ಮಾನ
ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು. ರಾಷ್ಟ್ರೀಯತೆ ಎಂಬ ಪದ ಕೇವಲ ರಾಜಕೀಯ ಲಾಭಕ್ಕೆ ಬಳಕೆಯಾಗ್ತಿದೆ. ಆದ್ರೆ, ಗಾಂಧೀಜಿಯವರ ರಾಷ್ಟ್ರೀಯತೆ ಕಲ್ಪನೆ ಬಹಳ ಉದಾರವಾದುದು. ಗಾಂಧಿ ಜಯಂತಿ ಕೇವಲ ಸ್ವಚ್ಚತೆಗೆ ಸೀಮಿತವಾಗಿದೆ. ಅವತ್ತು ಪೊರಕೆ ಹಿಡಿದು ಫೋಸ್ ಕೊಡೋಕೆ ಸೀಮಿತ ಆಗ್ತಿದೆ.
ಮೈತ್ರಿ ಸರ್ಕಾರ ಚೆನ್ನಾಗಿತ್ತು
ಇವತ್ತಿನ ಸರ್ಕಾರಕ್ಕೆ ಹೋಲಿಸಿದರೆ ಮೈತ್ರಿ ಸರ್ಕಾರ ನೂರು ಪಾಲು ಚೆನ್ನಾಗಿತ್ತು. ಇವತ್ತು ಸರ್ಕಾರ ಸತ್ತು ಬಿದ್ದಿದೆ. ಕೇವಲ ಹಿಂದಿನ ಸರ್ಕಾರದ ಯೋಜನೆಗಳನ್ನ ತನಿಖೆಗೆ ನೀಡುವುದೇ ದೊಡ್ಡ ಕೆಲಸವಾಗಿದೆ. ಪೊರಕೆ ಹಿಡಿದು ಸ್ವಚ್ಚತೆ ಅಂತ ಫೋಸ್ ಕೊಡ್ತಾರೆ. ನಾವು ಅಂತಹ ಕೆಲಸವನ್ನ ಮಾಡಲ್ಲ. ಗಾಂಧಿ ಆದರ್ಶವನ್ನ ಮನವರಿಕೆ ಮಾಡಿಕೊಡುವ ಕೆಲಸ ಮಾಡ್ತೇವೆ. ಇವತ್ತು ಧರ್ಮವನ್ನೂ ವಿಭಜಿಸುವ ಕೆಲಸ ನಡೆಯುತ್ತಿದೆ. ಇದನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಸಭೆ ಮಾಡಿದ್ದೇವೆ
ನಾರಾಯಣಸ್ವಾಮಿ ನಿರಾಕರಣೆ ವಿಚಾರ
ಸಂಸದ ನಾರಾಯಣಸ್ವಾಮಿಗೆ ಪ್ರವೇಶ ನಿರಾಕರಣೆ ವಿಚಾರ ಮಾತನಾಡಿ, ಪಾವಗಡದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಲಾಗಿದೆ. ಇದೊಂದು ತಲೆ ತಗ್ಗಿಸುವ ವಿಚಾರ. ಒಬ್ಬ ಸಂಸದರಿಗೇ ಈಗಾದರೆ ಹೇಗೆ? ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು. ಸಮಾಜದಲ್ಲಿರುವ ಕೆಟ್ಟ ಪದ್ಧತಿ ಹೋಗಿಸಬೇಕು. ಎಲ್ಲರೂ ಸೇರಿ ಇದರ ಬಗ್ಗೆ ಗಮನಹರಿಸಬೇಕು. ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಮಾಜ ಸುಧಾರಣೆ ಒಂದೇ ದಿನದಲ್ಲಿ ಆಗಲ್ಲ. ಸುಧಾರಣೆಗೆ ಸಮಯ ತೆಗೆದುಕೊಳ್ಳುತ್ತದೆ. ಕೆಲವರು ಏರುಪೇರನ್ನ ಬಯಸುತ್ತಾರೆ. ಅದನ್ನ ಉಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ದಿನೇಶ್ ವಾಗ್ದಾಳಿ ನಡೆಸಿದರು.

ಸುಪ್ರೀಂನಲ್ಲಿ ಅನರ್ಹರ ಕೇಸ್ ಮುಂದೂಡಿಕೆ ವಿಚಾರ ಮಾತನಾಡಿ, ನ್ಯಾ.ಶಾಂತನಗೌಡರ್ ಹಿಂದಕ್ಕೆ ಸರಿದಿದ್ದಾರೆ. ರಮೇಶ್ ಕುಮಾರ್ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಶಾಸಕರ ರಾಜೀನಾಮೆ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಸಕರನ್ನ ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರು ಪಕ್ಷಾಂತರಿಗಳು ಅನ್ನೋದು ರಾಜ್ಯಕ್ಕೆ ಗೊತ್ತಿದೆ. ನಾವು ಮೊದಲೇ ಶಾಸಕರಿಗೆ ಎಚ್ಚರಿಸಿದ್ದೆವು. ಬಿಜೆಪಿಯವರು ಕೈಕೊಡ್ತಾರೆ ಅಂತ ತಿಳಿಸಿದ್ದೆವು. ಇವತ್ತು ಎಂತ ಅನ್ಯಾಯವಾಗ್ತಿದೆ ನೋಡಿ. ಇಲ್ಲಿ ಎಲ್ಲ ಮುಕ್ತ ಅವಕಾಶ ಅವರಿಗೆ ನೀಡಿದ್ದೆವು. ಅಲ್ಲಿ ಹೋಗಿ ಈಗ ಅವರ ಪರಿಸ್ಥಿತಿ ಏನಾಗಿದೆ ಎಂದರು.
ಅನರ್ಹರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬರುವ ವಿಚಾರ ಮಾತನಾಡಿ, ನಾವು ಈಗಾಗಲೇ ಬಹಳ ಸ್ಪಷ್ಡವಾಗಿ ಹೇಳಿದ್ದೇವೆ. ಪಕ್ಷಕ್ಕೆ ಅವರನ್ನ ವಾಪಸ್ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ. ಈಗಲೂ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅನರ್ಹರನ್ನ ಪಕ್ಷಕ್ಕೆ ಕರೆದುಕೊಳ್ಳುವ ವಿಚಾರವೇ ಇಲ್ಲ ಎಂದರು.
ಜೆಡಿಎಸ್ ಸ್ವತಂತ್ರ ಸ್ಪರ್ಧೆ
ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಹೆಚ್‌ಡಿಡಿ ಹೇಳಿಕೆ ವಿಚಾರ ಮಾತನಾಡಿ, ಇದು ಹೆಚ್‌.ಡಿ ದೇವೇಗೌಡರ ನಿಲುವು. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಆದರೆ, ಉಪಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ. ಸ್ವತಂತ್ರವಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.
Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.