ETV Bharat / state

ಉರಿತಿರೋ ಬೆಂಕಿಗೆ ಕಾಂಗ್ರೆಸ್​​​ ಪೆಟ್ರೋಲ್​​​ ಸುರಿಯುವ ಕೆಲಸ ಮಾಡಬಾರದು: ಡಿವಿಎಸ್​​ - Union Minister DVS press conference

ಯಾವುದೇ ಕಾಂಗ್ರೆಸ್​ ನಾಯಕರು ಪೆಟ್ರೋಲ್​ ಸುರಿಯುವ ಕೆಲಸ ಮಾಡಬಾರದು. ಮಂಗಳೂರಿಗೆ ನಿಯೋಗ ತೆರಳಲು ಇದು ಸಕಾಲ ಅಲ್ಲ. ಇದರಿಂದ ಪುಡಾರಿಗಳು ಮತ್ತೆ ಗಲಭೆ ಹೆಚ್ಚಿಸುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Union Minister DVS press conference
ಕೇಂದ್ರ ಸಚಿವ ಡಿವಿಎಸ್
author img

By

Published : Dec 20, 2019, 12:57 PM IST

ಬೆಂಗಳೂರು: ಕಾಂಗ್ರೆಸ್ ನಾಯಕರು ಮಂಗಳೂರಿಗೆ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್​ ಮಂಗಳೂರಿಗೆ ನಿಯೋಗ ಹೋಗುವುದು ಕೆಲ ಪುಡಾರಿಗಳಿಗೆ ಮತ್ತೆ ಗಲಭೆಗೆ ಪ್ರಚೋದನೆ ನೀಡಿದಂತೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದಕ್ಷಿಣ ಕನ್ನಡದ ಕಾಂಗ್ರೆಸ್​ ನಾಯಕರಿಗೆ ಶಾಂತಿ ಕಾಪಾಡಲು ಹೇಳಿ. ಇನ್ನು ಜಿಲ್ಲೆಯಲ್ಲಿ ಶಾಂತಿ ನೆಲೆಸಿದ ನಂತರ ಹೋಗಿ ಎಂದು ಹೇಳಿದರು.

ಕಾಂಗ್ರೆಸ್​ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕಾಗಿಯೇ ಈ ರೀತಿಯ ಪ್ರಚೋದನೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

ಬೆಂಗಳೂರು: ಕಾಂಗ್ರೆಸ್ ನಾಯಕರು ಮಂಗಳೂರಿಗೆ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್​ ಮಂಗಳೂರಿಗೆ ನಿಯೋಗ ಹೋಗುವುದು ಕೆಲ ಪುಡಾರಿಗಳಿಗೆ ಮತ್ತೆ ಗಲಭೆಗೆ ಪ್ರಚೋದನೆ ನೀಡಿದಂತೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದಕ್ಷಿಣ ಕನ್ನಡದ ಕಾಂಗ್ರೆಸ್​ ನಾಯಕರಿಗೆ ಶಾಂತಿ ಕಾಪಾಡಲು ಹೇಳಿ. ಇನ್ನು ಜಿಲ್ಲೆಯಲ್ಲಿ ಶಾಂತಿ ನೆಲೆಸಿದ ನಂತರ ಹೋಗಿ ಎಂದು ಹೇಳಿದರು.

ಕಾಂಗ್ರೆಸ್​ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕಾಗಿಯೇ ಈ ರೀತಿಯ ಪ್ರಚೋದನೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

Intro:


ಬೆಂಗಳೂರು: ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗೋದಕ್ಕೆ ಇದು ಸಕಾಲವಲ್ಲ ಸಿದ್ದರಾಮಯ್ಯ, ಜಮೀರ್ ಹೋಗುವ ಮೂಲಕ ಪೆಟ್ರೋಲ್ ಸುರಿಯುವ ಕೆಲಸ ಆಗಬಾರದು ಒಂದೆರಡು ದಿನಗಳ ಕಾಲ ಕಾಂಗ್ರೆಸ್ ನವರು ಅಲ್ಲಿಗೆ ಹೋಗೋದು ಬೇಡ. ದಯವಿಟ್ಟು ಕಾಂಗ್ರೆಸ್ ಮುಖಂಡರು ಅಲ್ಲಿಗೆ ಹೋಗೋದು ಬೇಡ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮನವಿ ಮಾಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾ ಮೂರೂ ಇಸ್ಲಾಮಿಕ್ ರಾಷ್ಟ್ರಗಳು ಆದರೆ ಭಾರತ ಮಾತ್ರ ಸರ್ವಧರ್ಮಗಳ ದೇಶ, ಮೂರು ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ 1971 ರ ಯುದ್ಧದ ಬಳಿಕ ಪಾಕಿಸ್ತಾನದಲ್ಲಿ ಹಿಂದುಗಳ ಮಾರಣಹೋಮ ನಡೆದಿದೆ ಪೌರತ್ವ ಕಾಯ್ದೆಯಡಿ ಮುಸಲ್ಮಾನರು ಸೇರಿ ಯಾವ ಧರ್ಮದ ಜನರಿಗೂ ತೊಂದರೆಯಾಗಲ್ಲ ಯಾವುದೋ ಒಂದು ಜಾತಿ,ಮತಕ್ಕೆ ಕಾಯ್ದೆ ಸೀಮಿತವಾಗಿಲ್ಲ ಮಾನವೀಯತೆಯ ತಿದ್ದುಪಡಿಯಾಗಿದೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.

ದಕ್ಷಿಣ ಕನ್ನಡ ಶಾಂತಯುತವಾಗಿತ್ತು ತಪ್ಪು ಸಂದೇಶದಿಂದ ಆಸ್ಸಾಂನಲ್ಲಿ ಗಲಭೆ ಆರಂಭವಾಯ್ತು ಯಾವಾಗ ಖಾದರ್ ನೇರವಾಗಿ ಇಲ್ಲಿ ಕೂಡ ಬೆಂಕಿ ಹಾಕ್ತಾರೆ ಅನ್ನೋ ಕುಮ್ಮಕ್ಕೆ ನೀಡದರೂ ನಂತರವೇ ಅಲ್ಲಿ ಗಲಭೆ ಶುರುವಾಯಿತು ಕಾಂಗ್ರೆಸ್ ಹಾಗು ಯು.ಟಿ ಖಾದರ್ ಇದಕ್ಕೆ ನೇರ ಕಾರಣ, ತಮ್ಮ ಅಸ್ಥಿತ್ವಕ್ಕಾಗಿ ಇದನ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಗಲಾಟೆ ಮಾಡಲು ಕೇರಳದವರು ಬಂದಿರೋ ಸಾಧ್ಯತೆ ಇದೆ. ಸಣ್ಣಪುಟ್ಟ ಗಲಭೆ ಆದ ತಕ್ಷಣವೇ ಅಲ್ಲಿಂದ ಇಲ್ಲಿಗೆ ಜನ ಬರ್ತಾರೆ ಇಂತಹ ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್ಸಿನವರಿಗಿದೆ ಬೇರೆಡೆಯಿಂದ ಜನ ಬಂದಿದ್ದರಿಂದಲೇ ಇಂತಹ ದೊಡ್ಡ ಗಲಭೆಯಾಗಿದೆ ಎಂದು ಗಲಭೆ ಹಿಂದೆ ಕೇರಳದಿಂದ‌ ಬಂದವರಿದ್ದಾರೆ ಎಂದರು.

ಸಧ್ಯ ಹೊರಗಿನಿಂದ ಬರುವ ನಾಯಕರಿಗೆ ಮಂಗಳೂರಿಗೆ ಪ್ರವೇಶ ನೀಡೋದು ಬೇಡ ಎಂದು ಜಿಲ್ಲಾಡಳಿತಕ್ಕೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಮನವಿ ಮಾಡಿದ್ದು,
ನಾನು ಅದೇ ಜಿಲ್ಲೆಯವನಾಗಿದ್ದು ಕೇಂದ್ರದ ಸಚಿವನಾದರೂ ಕೂಡ ನನಗೂ ಅಲ್ಲಿಗೆ ಅವಕಾಶ ನೀಡಬಾರದು ಅಲ್ಲಿ ಶಾಂತಿ ಸ್ಥಾಪನೆಯಾದ ನಂತರ ಇದರ ಹಿನ್ನೆಲೆಯನ್ನು ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಇರುವ ರಾಜ್ಯದಲ್ಲಿಯೇ ಹೊಟ್ಟೆಕಿಚ್ಚು ಹೊಟ್ಟೆ ಉರಿ ಎಲ್ಲಾ ಇರುವುದು. ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ಅವರ ಸರ್ಕಾರಗಳಿವೆ ಆದಕಾರಣ ಅಲ್ಲಿ ಅವರೆಲ್ಲಾ ಏನು ಮಾಡುವುದಿಲ್ಲ ಬಿಜೆಪಿ ಇರುವ ರಾಜ್ಯಗಳಲ್ಲಿ ಪ್ರಚೋದನೆ ಮಾಡಿ ಸಣ್ಣಪುಟ್ಟ ಗಲಭೆ ನಡೆಸಿ ಹಾಗಾಗಲಿದೆ, ಹೀಗಾಗಲಿದೆ ಎಂದು ರಾಜ್ಯದಲ್ಲಿ ಹಾರಿಕೆಯ ಸುದ್ದಿಗಳನ್ನು ಪೂರ್ಣ ಪ್ರಮಾಣದ ಮಟ್ಟದಲ್ಲಿ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.