ETV Bharat / state

ಶೇ.50ರಷ್ಟು ರಿಯಾಯಿತಿ ಪಾವತಿಗೆ ಗಡುವು ಮುಕ್ತಾಯ: ವಾಹನ ಸವಾರರಿಂದ ₹9 ಕೋಟಿಗೂ ಹೆಚ್ಚು ದಂಡ​ ಸಂಗ್ರಹ​!

author img

By ETV Bharat Karnataka Team

Published : Sep 10, 2023, 1:08 PM IST

ಶೇ. 50ರಷ್ಟು ರಿಯಾಯಿತಿ ದಂಡ ಪಾವತಿಗೆ ಗಡುವು ಮುಗಿದಿದೆ. 9 ಕೋಟಿ ರೂ.ಗೂ ಹೆಚ್ಚು ಹಣ​ ಸರ್ಕಾರದ ಬೊಕ್ಕಸ ಸೇರಿದೆ.

traffic rules violation
ಸಂಚಾರ ನಿಯಮ‌ ಉಲ್ಲಂಘನೆ

ಬೆಂಗಳೂರು: ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿ ನಿನ್ನೆಗೆ (ಶನಿವಾರ) ಕೊನೆಯಾಗಿದ್ದು, ಒಂದೇ ದಿನದಲ್ಲಿ ಸವಾರರು ಒಂದು ಕೋಟಿ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಹಿಡಿದು ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ.

ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹ ಆಗಿತ್ತು‌. ರಿಯಾಯಿತಿ ದಂಡ ಪಾವತಿಸಲು ನಿನ್ನೆಯೇ ಕೊನೆ ದಿನ. ಫೆಬ್ರವರಿ 11ಕ್ಕೂ ಮುನ್ನದ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳಿಗೆ ಶೇ. 50 ರಷ್ಟು ದಂಡ ಕಟ್ಟುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ರಿಯಾಯಿತಿ ದಂಡ ಪಾವತಿಗೆ ಗಡುವು ಮುಕ್ತಾಯವಾಗುವ 24 ಗಂಟೆ ಅಂತರದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ ಪಾವತಿಸಿದ್ದಾರೆ. ಈ ಮೂಲಕ ಜುಲೈ 6 ರಿಂದ ಸೆ‌.9ರವರೆಗೆ ಈವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಯಾಗಿದೆ.

ಜುಲೈ ತಿಂಗಳಲ್ಲಿ 1,23,178 ಲಕ್ಷ ಕೇಸ್​ಗಳಿಂದ 3,89 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್​ನಲ್ಲಿ 86,587 ಪ್ರಕರಣಗಳಿಂದ 2.82 ಕೋಟಿ ರೂ. ಕಲೆಕ್ಷನ್ ಆಗಿದೆ.​ ಸೆಪ್ಟೆಂಬರ್ 9ಕ್ಕೆ ಕೊನೆಗೊಂಡಂತೆ 83 ಸಾವಿರ ಕೇಸ್​​ಗಳಿಂದ 2.82 ಕೋಟಿ ರೂಪಾಯಿ ಸೇರಿದಂತೆ ಒಟ್ಟು 9 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಸಿಕೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಂಗಳುಪ್ರಕರಣಗಳುಒಟ್ಟು ದಂಡ
ಜುಲೈ1,23,1783,89 ಕೋಟಿ ರೂ.
ಆಗಸ್ಟ್86,5872.82 ಕೋಟಿ ರೂ.
ಸೆಪ್ಟೆಂಬರ್83,0002.82 ಕೋಟಿ ರೂ.

ಇದನ್ನೂ ಓದಿ: 'ಲೋಕ'ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ: ಕಮಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ದಳ ವಿರೋಧಿಗಳಿಗೆ ಇರಿಸುಮುರಿಸು

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೇರೆಗೆ ಸರ್ಕಾರ ಟ್ರಾಫಿಕ್​ ರೂಲ್ಸ್​ ಉಲ್ಲಂಘಿಸಿದವರಿಗೆ ಶೇ. 50 ರಷ್ಟು ದಂಡ ಪಾವತಿಗೆ ಆದೇಶ ಹೊರಡಿಸಿತ್ತು. ಈ ಅವಕಾಶವನ್ನು ವಾಹನ ಸವಾರರು ಉಪಯೋಗಿಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದರು. ಜಲೈ 11 ರಿಂದ ಹಿಡಿದು ಸೆ. 9ರ ವರೆಗೆ ಈ ಅವಕಾಶ ಇತ್ತು. ಇದಕ್ಕೂ ಮುನ್ನ ಇದೇ ರೀತಿ ಎರಡು ಬಾರಿ ಅವಕಾಶ ನೀಡಲಾಗಿತ್ತು. ಆಗ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿತ್ತು. ಮೂರನೇ ಅವಕಾಶ ನಿನ್ನೆಗೆ ಪೂರ್ಣಗೊಂಡಿದೆ. ಸರಿಸುಮಾರು 9 ಕೋಟಿ ರೂ. ದಂಡ ಸರ್ಕಾರದ ಬೊಕ್ಕಸ ತಲುಪಿದೆ.

ಇದನ್ನೂ ಓದಿ: ಕಡಲ ತೀರದಲ್ಲಿ ಯಶ್‌​ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್‌​

ಬೆಂಗಳೂರು: ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿ ನಿನ್ನೆಗೆ (ಶನಿವಾರ) ಕೊನೆಯಾಗಿದ್ದು, ಒಂದೇ ದಿನದಲ್ಲಿ ಸವಾರರು ಒಂದು ಕೋಟಿ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಹಿಡಿದು ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ.

ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹ ಆಗಿತ್ತು‌. ರಿಯಾಯಿತಿ ದಂಡ ಪಾವತಿಸಲು ನಿನ್ನೆಯೇ ಕೊನೆ ದಿನ. ಫೆಬ್ರವರಿ 11ಕ್ಕೂ ಮುನ್ನದ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳಿಗೆ ಶೇ. 50 ರಷ್ಟು ದಂಡ ಕಟ್ಟುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ರಿಯಾಯಿತಿ ದಂಡ ಪಾವತಿಗೆ ಗಡುವು ಮುಕ್ತಾಯವಾಗುವ 24 ಗಂಟೆ ಅಂತರದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ ಪಾವತಿಸಿದ್ದಾರೆ. ಈ ಮೂಲಕ ಜುಲೈ 6 ರಿಂದ ಸೆ‌.9ರವರೆಗೆ ಈವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಯಾಗಿದೆ.

ಜುಲೈ ತಿಂಗಳಲ್ಲಿ 1,23,178 ಲಕ್ಷ ಕೇಸ್​ಗಳಿಂದ 3,89 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್​ನಲ್ಲಿ 86,587 ಪ್ರಕರಣಗಳಿಂದ 2.82 ಕೋಟಿ ರೂ. ಕಲೆಕ್ಷನ್ ಆಗಿದೆ.​ ಸೆಪ್ಟೆಂಬರ್ 9ಕ್ಕೆ ಕೊನೆಗೊಂಡಂತೆ 83 ಸಾವಿರ ಕೇಸ್​​ಗಳಿಂದ 2.82 ಕೋಟಿ ರೂಪಾಯಿ ಸೇರಿದಂತೆ ಒಟ್ಟು 9 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಸಿಕೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಂಗಳುಪ್ರಕರಣಗಳುಒಟ್ಟು ದಂಡ
ಜುಲೈ1,23,1783,89 ಕೋಟಿ ರೂ.
ಆಗಸ್ಟ್86,5872.82 ಕೋಟಿ ರೂ.
ಸೆಪ್ಟೆಂಬರ್83,0002.82 ಕೋಟಿ ರೂ.

ಇದನ್ನೂ ಓದಿ: 'ಲೋಕ'ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ: ಕಮಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ದಳ ವಿರೋಧಿಗಳಿಗೆ ಇರಿಸುಮುರಿಸು

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೇರೆಗೆ ಸರ್ಕಾರ ಟ್ರಾಫಿಕ್​ ರೂಲ್ಸ್​ ಉಲ್ಲಂಘಿಸಿದವರಿಗೆ ಶೇ. 50 ರಷ್ಟು ದಂಡ ಪಾವತಿಗೆ ಆದೇಶ ಹೊರಡಿಸಿತ್ತು. ಈ ಅವಕಾಶವನ್ನು ವಾಹನ ಸವಾರರು ಉಪಯೋಗಿಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದರು. ಜಲೈ 11 ರಿಂದ ಹಿಡಿದು ಸೆ. 9ರ ವರೆಗೆ ಈ ಅವಕಾಶ ಇತ್ತು. ಇದಕ್ಕೂ ಮುನ್ನ ಇದೇ ರೀತಿ ಎರಡು ಬಾರಿ ಅವಕಾಶ ನೀಡಲಾಗಿತ್ತು. ಆಗ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿತ್ತು. ಮೂರನೇ ಅವಕಾಶ ನಿನ್ನೆಗೆ ಪೂರ್ಣಗೊಂಡಿದೆ. ಸರಿಸುಮಾರು 9 ಕೋಟಿ ರೂ. ದಂಡ ಸರ್ಕಾರದ ಬೊಕ್ಕಸ ತಲುಪಿದೆ.

ಇದನ್ನೂ ಓದಿ: ಕಡಲ ತೀರದಲ್ಲಿ ಯಶ್‌​ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್‌​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.