ETV Bharat / state

ಬೆಂಗಳೂರಲ್ಲಿ ವಿಕಲಚೇತನ ಮಹಿಳೆ ಕೂದಲು ಎಳೆದಾಡಿ ಹಲ್ಲೆ ಆರೋಪ: ಟ್ರಾಫಿಕ್ ASI ಅಮಾನತು

author img

By

Published : Jan 30, 2022, 3:45 PM IST

Updated : Jan 30, 2022, 5:04 PM IST

ಟೋಯಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ವಿಕಲಚೇತನ ಮಹಿಳೆಯು ಟೋಯಿಂಗ್ ವಾಹನದಲ್ಲಿ ಹೋಗುತ್ತಿದ್ದ ಎಎಸ್ಐ ನಾರಾಯಣ್​ಗೆ ಕಲ್ಲಿನಿಂದ ಹೊಡೆದಿದ್ದಳು.‌ ಇದರಿಂದ‌ ಕೋಪಗೊಂಡ ಅವರು ವಿಕಲಚೇತನಳನ್ನು ಬೂಟುಕಾಲಿನಲ್ಲಿ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

traffic-asi-suspend-for-assault-on-woman-in-bengaluru
ಬುದ್ದಿಮಾಂದ್ಯ ಮಹಿಳೆ ಕೂದಲು ಎಳೆದಾಡಿ ಬೂಟಿನಲ್ಲಿ ತುಳಿದು ಹಲ್ಲೆ

ಬೆಂಗಳೂರು: ವಿಕಲಚೇತನ ಮಹಿಳೆಗೆ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಆರೋಪ ಹಿನ್ನೆಲೆ ಹಲಸೂರು ಗೇಟ್‌ ಸಂಚಾರಿ ಠಾಣೆಯ ಎಎಸ್ಐ ನಾರಾಯಣ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಹಲಸೂರು ಗೇಟ್ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಎಸ್​ಐ ತಲೆದಂಡವಾಗಿದೆ.

ಟೋಯಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ವಿಕಲಚೇತನ ಮಹಿಳೆಯು ಟೋಯಿಂಗ್ ವಾಹನದಲ್ಲಿ ಹೋಗುತ್ತಿದ್ದ ಎಎಸ್ಐ ನಾರಾಯಣ್​ಗೆ ಕಲ್ಲಿನಿಂದ ಹೊಡೆದಿದ್ದಳು.‌ ಇದರಿಂದ‌ ಕೋಪಗೊಂಡ ಅವರು ಮಹಿಳೆ ವಿಕಲಚೇತನಳು ಎಂಬುದನ್ನು ಲೆಕ್ಕಿಸದೇ ಬೂಟುಕಾಲಿನಲ್ಲಿ ಒದ್ದಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೆ ಮುಗಿಯದೆ ಎಸ್​ಜೆ ಪಾರ್ಕ್ ಹೊಯ್ಸಳಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.‌

ವಿಕಲಚೇತನ ಮಹಿಳೆ ಕೂದಲು ಹಿಡಿದು ಎಳೆದಾಡಿ ಹಲ್ಲೆ ಆರೋಪ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ನಡುವೆ ಆಕೆಯ ಕೂದಲೆಳೆದ ಎಎಸ್​ಐ ನಾರಾಯಣ ಮತ್ತೆ ಮಹಿಳೆಯನ್ನು ಕೆಡವಿ ತುಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಎಎಸ್​ಐ ನಾರಾಯಣ ಅವರನ್ನು ಅಮಾನತು ಮಾಡಿದ್ದಾರೆ.

ಓದಿ: ಬಿಜೆಪಿಯಿಂದ ಯಾವ ಶಾಸಕರು ಸಹ ಕಾಂಗ್ರೆಸ್​ಗೆ ಹೋಗುವುದಿಲ್ಲ: ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ವಿಕಲಚೇತನ ಮಹಿಳೆಗೆ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಆರೋಪ ಹಿನ್ನೆಲೆ ಹಲಸೂರು ಗೇಟ್‌ ಸಂಚಾರಿ ಠಾಣೆಯ ಎಎಸ್ಐ ನಾರಾಯಣ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಹಲಸೂರು ಗೇಟ್ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಎಸ್​ಐ ತಲೆದಂಡವಾಗಿದೆ.

ಟೋಯಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ವಿಕಲಚೇತನ ಮಹಿಳೆಯು ಟೋಯಿಂಗ್ ವಾಹನದಲ್ಲಿ ಹೋಗುತ್ತಿದ್ದ ಎಎಸ್ಐ ನಾರಾಯಣ್​ಗೆ ಕಲ್ಲಿನಿಂದ ಹೊಡೆದಿದ್ದಳು.‌ ಇದರಿಂದ‌ ಕೋಪಗೊಂಡ ಅವರು ಮಹಿಳೆ ವಿಕಲಚೇತನಳು ಎಂಬುದನ್ನು ಲೆಕ್ಕಿಸದೇ ಬೂಟುಕಾಲಿನಲ್ಲಿ ಒದ್ದಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೆ ಮುಗಿಯದೆ ಎಸ್​ಜೆ ಪಾರ್ಕ್ ಹೊಯ್ಸಳಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.‌

ವಿಕಲಚೇತನ ಮಹಿಳೆ ಕೂದಲು ಹಿಡಿದು ಎಳೆದಾಡಿ ಹಲ್ಲೆ ಆರೋಪ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ನಡುವೆ ಆಕೆಯ ಕೂದಲೆಳೆದ ಎಎಸ್​ಐ ನಾರಾಯಣ ಮತ್ತೆ ಮಹಿಳೆಯನ್ನು ಕೆಡವಿ ತುಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಎಎಸ್​ಐ ನಾರಾಯಣ ಅವರನ್ನು ಅಮಾನತು ಮಾಡಿದ್ದಾರೆ.

ಓದಿ: ಬಿಜೆಪಿಯಿಂದ ಯಾವ ಶಾಸಕರು ಸಹ ಕಾಂಗ್ರೆಸ್​ಗೆ ಹೋಗುವುದಿಲ್ಲ: ಸಚಿವ ಗೋವಿಂದ ಕಾರಜೋಳ

Last Updated : Jan 30, 2022, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.