ETV Bharat / state

ಈಡೇರಿದ ಮೀಸಲಾತಿ ಬೇಡಿಕೆ.. ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ಸಿಕ್ಕಿದೆ.. ಸಚಿವ ಶ್ರೀರಾಮುಲು

author img

By

Published : Oct 8, 2022, 1:37 PM IST

ಸದ್ಯ ಪರಿಶಿಷ್ಟ ಜಾತಿಗಳಿಗೆ 15% ಮೀಸಲಾತಿ ಕೊಡಲಾಗುತ್ತಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಈಗ ಅದು 17%ಗೆ ಹೆಚ್ಚಿಗೆ ಮಾಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ 3% ದಿಂದ 7% ಗೆ ಏರಿಕೆ ಮಾಡಲಾಗಿದೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.

Minhister Shreeramulu
ಸಚಿವ ಶ್ರೀ ರಾಮುಲು

ಬೆಂಗಳೂರು: ಮೀಸಲಾತಿ ಸಂಬಂಧ ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ಸಮಾಧಾನ ಸಿಕ್ಕಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಜಾಗೂ ಪ.ಪಂಗಡದ ಸಮುದಾಯಗಳಲ್ಲಿ 151 ಜಾತಿ ಬರುತ್ತವೆ. ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಇದು ಇಂದಿನ‌ ಹೋರಾಟ ಅಲ್ಲ. ಅನೇಕ ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಇಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಸಿಎಂ ಬೊಮ್ಮಾಯಿಗೆ ಪ. ಪಂಗಡ ಹಾಗೂ ಪ. ಜಾತಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸದ್ಯ ಪರಿಶಿಷ್ಟ ಜಾತಿಗಳಿಗೆ 15% ಮೀಸಲಾತಿ ಕೊಡಲಾಗುತ್ತಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಈಗ ಅದು 17%ಗೆ ಹೆಚ್ಚಿಗೆ ಮಾಡಲಾಗಿದೆ. ಪ.ಪಂಗಡಕ್ಕೆ 3% ದಿಂದ 7% ಗೆ ಏರಿಕೆ ಮಾಡಲಾಗಿದೆ. ನಮ್ಮ‌ ನಾಯಕರು ನುಡಿದಂತೆ ನಡೆದಿದ್ದಾರೆ. ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ನಾನು ಮಾತು ಕೊಟ್ಟಿದ್ದೆ. ನಮ್ಮ ಸರ್ಕಾರ ಬಂದ ಬಳಿಕ ಮೀಸಲಾತಿ ಮಾಡಿಕೊಡುತ್ತೇವೆ ಎಂದಿದ್ದೆ. ಈ ಬಗ್ಗೆ ಹಲವರು ನನ್ನನ್ನು ಗೇಲಿ ಮಾಡುತ್ತಿದ್ದರು. ರಾಮುಲು ಬರೇ ಮಾತನಾಡುತ್ತಾರೆ. ಅವರಿಂದ ಏನು ಆಗಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದರು. ಇದರಿಂದ ನನಗೆ ಬಹಳ ನೋವಾಗುತ್ತಿತ್ತು. ನಾನು ಇಲಾಖೆ ಮಂತ್ರಿಯಾದ ಬಳಿಕ ನಮ್ಮ ಬಂಧುಗಳು ನನಗೆ ಬಯ್ಯುತ್ತಿದ್ದರು ಎಂದರು.

ಸಚಿವ ಶ್ರೀ ರಾಮುಲು ಮಾಧ್ಯಮದೊಂದಿಗೆ ಮಾತನಾಡಿದರು.

ನನಗೆ ಗೇಲಿ ಮಾಡಿದವರಿಗೆ, ನನಗೆ ತಮಾಷೆ ಮಾಡಿದವರಿಗೆ ಇದರಿಂದ ಈಗ ಸಮಾಧಾನ ಆಗಿದೆ. ಯಾವ ಸರ್ಕಾರಗಳೂ ವಾಲ್ಮೀಕಿ ಜಯಂತಿ ಮಾಡುವ ನಿರ್ಧಾರ ಮಾಡಿರಲಿಲ್ಲ.‌ ಯಡಿಯೂರಪ್ಪ ಸರ್ಕಾರ ಆ ನಿರ್ಧಾರ ಕೈಗೊಂಡಿತು. ನಮ್ಮದು ಯಾವತ್ತೂ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಕೊಟ್ಟ ಮಾತನ್ನು ನಮ್ಮ ಸರ್ಕಾರ, ಬಿಜೆಪಿ ಉಳಿಸುವ ಕೆಲಸ ಮಾಡುತ್ತದೆ ಎಂದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ: 2022 ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ನಾಳೆ ವಿಧಾನಸೌಧದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಮಾಜಿಕ ಕ್ಷೇತ್ರದಿಂದ ಬೆಂಗಳೂರಿನ ಎಲ್.‌ಮುನಿಸ್ವಾಮಿ, ಕೃಷಿ ಕ್ಷೇತ್ರದಿಂದ ಎನ್.ನಾಗಪ್ಪ, ಬೆಳಗಾವಿಯ ಸಮಾಜ ಸೇವಕ ನಾಗಪ್ಪ ಹೆಚ್.ಕೋಣಿ, ಕಲಬುರಗಿಯ ರಂಗ ಕಲಾವಿದೆ ಪಿ.ಪದ್ಮ, ಮೈಸೂರಿನ ಸಾಮಾಜ‌ ಸೇವಕ ಸುಭಾಷ್ ಎಸ್.ಹೆಚ್., ಕಲೆ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಉಷಾರಾಣಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ ಐದು ಲಕ್ಷ ನಗದು ಮೊತ್ತ, 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಭೂ ಅಕ್ರಮ ಸಂಬಂಧ ಸಚಿವ ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ: ವಿ ಎಸ್ ಉಗ್ರಪ್ಪ

ಬೆಂಗಳೂರು: ಮೀಸಲಾತಿ ಸಂಬಂಧ ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ಸಮಾಧಾನ ಸಿಕ್ಕಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಜಾಗೂ ಪ.ಪಂಗಡದ ಸಮುದಾಯಗಳಲ್ಲಿ 151 ಜಾತಿ ಬರುತ್ತವೆ. ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಇದು ಇಂದಿನ‌ ಹೋರಾಟ ಅಲ್ಲ. ಅನೇಕ ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಇಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಸಿಎಂ ಬೊಮ್ಮಾಯಿಗೆ ಪ. ಪಂಗಡ ಹಾಗೂ ಪ. ಜಾತಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸದ್ಯ ಪರಿಶಿಷ್ಟ ಜಾತಿಗಳಿಗೆ 15% ಮೀಸಲಾತಿ ಕೊಡಲಾಗುತ್ತಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಈಗ ಅದು 17%ಗೆ ಹೆಚ್ಚಿಗೆ ಮಾಡಲಾಗಿದೆ. ಪ.ಪಂಗಡಕ್ಕೆ 3% ದಿಂದ 7% ಗೆ ಏರಿಕೆ ಮಾಡಲಾಗಿದೆ. ನಮ್ಮ‌ ನಾಯಕರು ನುಡಿದಂತೆ ನಡೆದಿದ್ದಾರೆ. ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ನಾನು ಮಾತು ಕೊಟ್ಟಿದ್ದೆ. ನಮ್ಮ ಸರ್ಕಾರ ಬಂದ ಬಳಿಕ ಮೀಸಲಾತಿ ಮಾಡಿಕೊಡುತ್ತೇವೆ ಎಂದಿದ್ದೆ. ಈ ಬಗ್ಗೆ ಹಲವರು ನನ್ನನ್ನು ಗೇಲಿ ಮಾಡುತ್ತಿದ್ದರು. ರಾಮುಲು ಬರೇ ಮಾತನಾಡುತ್ತಾರೆ. ಅವರಿಂದ ಏನು ಆಗಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದರು. ಇದರಿಂದ ನನಗೆ ಬಹಳ ನೋವಾಗುತ್ತಿತ್ತು. ನಾನು ಇಲಾಖೆ ಮಂತ್ರಿಯಾದ ಬಳಿಕ ನಮ್ಮ ಬಂಧುಗಳು ನನಗೆ ಬಯ್ಯುತ್ತಿದ್ದರು ಎಂದರು.

ಸಚಿವ ಶ್ರೀ ರಾಮುಲು ಮಾಧ್ಯಮದೊಂದಿಗೆ ಮಾತನಾಡಿದರು.

ನನಗೆ ಗೇಲಿ ಮಾಡಿದವರಿಗೆ, ನನಗೆ ತಮಾಷೆ ಮಾಡಿದವರಿಗೆ ಇದರಿಂದ ಈಗ ಸಮಾಧಾನ ಆಗಿದೆ. ಯಾವ ಸರ್ಕಾರಗಳೂ ವಾಲ್ಮೀಕಿ ಜಯಂತಿ ಮಾಡುವ ನಿರ್ಧಾರ ಮಾಡಿರಲಿಲ್ಲ.‌ ಯಡಿಯೂರಪ್ಪ ಸರ್ಕಾರ ಆ ನಿರ್ಧಾರ ಕೈಗೊಂಡಿತು. ನಮ್ಮದು ಯಾವತ್ತೂ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಕೊಟ್ಟ ಮಾತನ್ನು ನಮ್ಮ ಸರ್ಕಾರ, ಬಿಜೆಪಿ ಉಳಿಸುವ ಕೆಲಸ ಮಾಡುತ್ತದೆ ಎಂದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ: 2022 ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ನಾಳೆ ವಿಧಾನಸೌಧದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಮಾಜಿಕ ಕ್ಷೇತ್ರದಿಂದ ಬೆಂಗಳೂರಿನ ಎಲ್.‌ಮುನಿಸ್ವಾಮಿ, ಕೃಷಿ ಕ್ಷೇತ್ರದಿಂದ ಎನ್.ನಾಗಪ್ಪ, ಬೆಳಗಾವಿಯ ಸಮಾಜ ಸೇವಕ ನಾಗಪ್ಪ ಹೆಚ್.ಕೋಣಿ, ಕಲಬುರಗಿಯ ರಂಗ ಕಲಾವಿದೆ ಪಿ.ಪದ್ಮ, ಮೈಸೂರಿನ ಸಾಮಾಜ‌ ಸೇವಕ ಸುಭಾಷ್ ಎಸ್.ಹೆಚ್., ಕಲೆ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಉಷಾರಾಣಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ ಐದು ಲಕ್ಷ ನಗದು ಮೊತ್ತ, 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಭೂ ಅಕ್ರಮ ಸಂಬಂಧ ಸಚಿವ ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ: ವಿ ಎಸ್ ಉಗ್ರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.