ETV Bharat / state

ಕಾರ್ಮಿಕರು ತಂಗಿರುವ ಸ್ಥಳಕ್ಕೆ ಸಚಿವರ ದಿಢೀರ್​ ಭೇಟಿ, ಪರಿಶೀಲನೆ

ಕಾರ್ಮಿಕರು ವಾಸವಾಗಿರುವ ಶಿವಾನಂದ ಸರ್ಕಲ್ ಬಳಿಯ ಜೆಎಂಸಿ ಪ್ರಾಜೆಕ್ಟ್​ನ ನಿರ್ಮಾಣ ಹಂತದ ಕಟ್ಟಡ ಪ್ರದೇಶಗಳಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್​​ ಭೇಟಿ ನೀಡಿದ್ರು. ಈ ವೇಳೆ ಕಾರ್ಮಿಕರು ಮಾಸ್ಕ್ ವಿತರಿಸದೇ ಇರೋದಕ್ಕೆ ಸಚಿವ ಹೆಬ್ಬಾರ್ ಸಿಡಿಮಿಡಿಗೊಂಡರು.

author img

By

Published : Apr 19, 2020, 9:09 PM IST

ಕಾರ್ಮಿಕ ಸಚಿವ ಹೆಬ್ಬಾರ್ ದಿಢೀರ್ ಭೇಟಿ
ಕಾರ್ಮಿಕ ಸಚಿವ ಹೆಬ್ಬಾರ್ ದಿಢೀರ್ ಭೇಟಿ

ಬೆಂಗಳೂರು: ಕಾರ್ಮಿಕರು ತಂಗಿರುವ ನಗರದ ವಿವಿಧ ಪ್ರದೇಶಗಳಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮೊದಲಿಗೆ ಕಾರ್ಮಿಕರು ವಾಸವಾಗಿರುವ ಶಿವಾನಂದ ಸರ್ಕಲ್ ಬಳಿಯ ಜೆಎಂಸಿ ಪ್ರಾಜೆಕ್ಟ್​ನ ನಿರ್ಮಾಣ ಹಂತದ ಕಟ್ಟಡ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಕಾರ್ಮಿಕರ ಅಹವಾಲು ಆಲಿಸಿದರು. ಈ ವೇಳೆ ಕಾರ್ಮಿಕರು ಮಾಸ್ಕ್ ವಿತರಿಸದೇ ಇರೋದಕ್ಕೆ ಸಚಿವರು ಸಿಡಿಮಿಡಿಗೊಂಡರು.

ಕಾರ್ಮಿಕರು ತಂಗಿರುವ ಸ್ಥಳಕ್ಕೆ ಕಾರ್ಮಿಕ ಸಚಿವರ ದಿಢೀರ್ ಭೇಟಿ

ಕೋಟಿ ಕೋಟಿ ವೆಚ್ಚ ಮಾಡಿ ಕಟ್ಟಡ ಕಟ್ಟುತ್ತೀರಾ. ಮಿನಿಮಮ್ ಮಾಸ್ಕ್ ಕೊಟ್ಟಿಲ್ಲ ಅಂದ್ರೆ ಹೇಗೆ? ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧನೂ ಹೆಬ್ಬಾರ್ ಕಿಡಿ‌ಕಾರಿದರು. ಕಾರ್ಮಿಕರ ಹಿತ ಕಾಪಾಡಬೇಕು. ಕಾರ್ಮಿಕರಿಗೆ ಏನಾದ್ರು ಆದರೆ ನೀನು ಒಳಗೆ ಹೋಗ್ತಿಯಾ, ನಿನ್ನ ಕಂಪನಿನೂ ಒಳಗೆ ಹೋಗುತ್ತೆ ಎಂದು ಸೈಟ್ ಎಂಜಿನಿಯರ್​ವೊಬ್ಬರಿಗೆ ಖಡಕ್ ಸೂಚನೆ ಕೊಟ್ಟರು.

ಮನೆಗೆ ಹೋಗುವ ಆಸೆ ಆಗ್ತಾ ಇದೆ:

ಭೇಟಿ ವೇಳೆ ಕಾರ್ಮಿಕ ಸಚಿವರ ಬಳಿ ಕೆಲ ಕಾರ್ಮಿಕರು ನಾವು ನಮ್ಮ ಮನೆಗೆ ಹೋಗಬೇಕೆಂಬ ಆಸೆಯಾಗುತ್ತಿದೆ ಎಂದು ಹೇಳಿಕೊಂಡರು. ನಾಲ್ಕೈದು ತಿಂಗಳು ಆಯ್ತು ಮನೆಗೆ ಹೋಗಿ. ಈಗ ಕೊರೊನಾ ಲಾಕ್​​ಡೌನ್ ಆಗಿದೆ. ಮನೆಗೆ ಹೋಗಬೇಕು ಅಂತ ಆಸೆ ಆಗುತ್ತಿದೆ ಸರ್ ಎಂದಿದ್ದಾರೆ.

ಈ ವೇಳೆ ಸಚಿವರು, ಸ್ವಲ್ಪ ದಿನ ಕಾಯಿರಿ ಎಂದು ಹೇಳಿ ಕಾರ್ಮಿಕರನ್ನು ಸಮಾಧಾನಪಡಿಸಿದರು. ಆದರೆ ಭೇಟಿ ವೇಳೆ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲರಾದರು. ಸಚಿವರ ಸುತ್ತ ಹತ್ತಾರು ಕಾರ್ಮಿಕರು ಗುಂಪು ಸೇರುತ್ತಿರುವುದು ಕಂಡು ಬಂತು.

ಏ. 30ಕ್ಕೆ ಎಲ್ಲಾ ಕಾರ್ಮಿಕರಿಗೆ ಹಣ:

ಈ ತಿಂಗಳ 30ಕ್ಕೆ ಎಲ್ಲಾ ಕಾರ್ಮಿಕರಿಗೂ ವೇತನ ಪಾವತಿ ಮಾಡಲಾಗುತ್ತದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು. ಕೆಲ‌ ಕಡೆ ಸಣ್ಣಪುಟ್ಟ ಲೋಪದೋಷಗಳಾಗಿವೆ. ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸ್ವಲ್ಪ ಅಡೆತಡೆಗಳಿವೆ. ಏನೇ ಪ್ರಯತ್ನ ಮಾಡಿದ್ರೂ ಇಂತಹ ಸ್ಥಳಗಳಲ್ಲಿ ಈ ನಿಯಮಗಳನ್ನು ಕಾಪಾಡಲು ಕಷ್ಟವಿದೆ. ಆದರೆ ಬಡಜನರಿಗೆ ದೇವರ ರಕ್ಷಣೆ ಯಾವಾಗಲೂ ಇದ್ದೇ ಇರುತ್ತದೆ ಎಂದರು.

ಬೆಂಗಳೂರು: ಕಾರ್ಮಿಕರು ತಂಗಿರುವ ನಗರದ ವಿವಿಧ ಪ್ರದೇಶಗಳಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮೊದಲಿಗೆ ಕಾರ್ಮಿಕರು ವಾಸವಾಗಿರುವ ಶಿವಾನಂದ ಸರ್ಕಲ್ ಬಳಿಯ ಜೆಎಂಸಿ ಪ್ರಾಜೆಕ್ಟ್​ನ ನಿರ್ಮಾಣ ಹಂತದ ಕಟ್ಟಡ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಕಾರ್ಮಿಕರ ಅಹವಾಲು ಆಲಿಸಿದರು. ಈ ವೇಳೆ ಕಾರ್ಮಿಕರು ಮಾಸ್ಕ್ ವಿತರಿಸದೇ ಇರೋದಕ್ಕೆ ಸಚಿವರು ಸಿಡಿಮಿಡಿಗೊಂಡರು.

ಕಾರ್ಮಿಕರು ತಂಗಿರುವ ಸ್ಥಳಕ್ಕೆ ಕಾರ್ಮಿಕ ಸಚಿವರ ದಿಢೀರ್ ಭೇಟಿ

ಕೋಟಿ ಕೋಟಿ ವೆಚ್ಚ ಮಾಡಿ ಕಟ್ಟಡ ಕಟ್ಟುತ್ತೀರಾ. ಮಿನಿಮಮ್ ಮಾಸ್ಕ್ ಕೊಟ್ಟಿಲ್ಲ ಅಂದ್ರೆ ಹೇಗೆ? ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧನೂ ಹೆಬ್ಬಾರ್ ಕಿಡಿ‌ಕಾರಿದರು. ಕಾರ್ಮಿಕರ ಹಿತ ಕಾಪಾಡಬೇಕು. ಕಾರ್ಮಿಕರಿಗೆ ಏನಾದ್ರು ಆದರೆ ನೀನು ಒಳಗೆ ಹೋಗ್ತಿಯಾ, ನಿನ್ನ ಕಂಪನಿನೂ ಒಳಗೆ ಹೋಗುತ್ತೆ ಎಂದು ಸೈಟ್ ಎಂಜಿನಿಯರ್​ವೊಬ್ಬರಿಗೆ ಖಡಕ್ ಸೂಚನೆ ಕೊಟ್ಟರು.

ಮನೆಗೆ ಹೋಗುವ ಆಸೆ ಆಗ್ತಾ ಇದೆ:

ಭೇಟಿ ವೇಳೆ ಕಾರ್ಮಿಕ ಸಚಿವರ ಬಳಿ ಕೆಲ ಕಾರ್ಮಿಕರು ನಾವು ನಮ್ಮ ಮನೆಗೆ ಹೋಗಬೇಕೆಂಬ ಆಸೆಯಾಗುತ್ತಿದೆ ಎಂದು ಹೇಳಿಕೊಂಡರು. ನಾಲ್ಕೈದು ತಿಂಗಳು ಆಯ್ತು ಮನೆಗೆ ಹೋಗಿ. ಈಗ ಕೊರೊನಾ ಲಾಕ್​​ಡೌನ್ ಆಗಿದೆ. ಮನೆಗೆ ಹೋಗಬೇಕು ಅಂತ ಆಸೆ ಆಗುತ್ತಿದೆ ಸರ್ ಎಂದಿದ್ದಾರೆ.

ಈ ವೇಳೆ ಸಚಿವರು, ಸ್ವಲ್ಪ ದಿನ ಕಾಯಿರಿ ಎಂದು ಹೇಳಿ ಕಾರ್ಮಿಕರನ್ನು ಸಮಾಧಾನಪಡಿಸಿದರು. ಆದರೆ ಭೇಟಿ ವೇಳೆ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲರಾದರು. ಸಚಿವರ ಸುತ್ತ ಹತ್ತಾರು ಕಾರ್ಮಿಕರು ಗುಂಪು ಸೇರುತ್ತಿರುವುದು ಕಂಡು ಬಂತು.

ಏ. 30ಕ್ಕೆ ಎಲ್ಲಾ ಕಾರ್ಮಿಕರಿಗೆ ಹಣ:

ಈ ತಿಂಗಳ 30ಕ್ಕೆ ಎಲ್ಲಾ ಕಾರ್ಮಿಕರಿಗೂ ವೇತನ ಪಾವತಿ ಮಾಡಲಾಗುತ್ತದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು. ಕೆಲ‌ ಕಡೆ ಸಣ್ಣಪುಟ್ಟ ಲೋಪದೋಷಗಳಾಗಿವೆ. ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸ್ವಲ್ಪ ಅಡೆತಡೆಗಳಿವೆ. ಏನೇ ಪ್ರಯತ್ನ ಮಾಡಿದ್ರೂ ಇಂತಹ ಸ್ಥಳಗಳಲ್ಲಿ ಈ ನಿಯಮಗಳನ್ನು ಕಾಪಾಡಲು ಕಷ್ಟವಿದೆ. ಆದರೆ ಬಡಜನರಿಗೆ ದೇವರ ರಕ್ಷಣೆ ಯಾವಾಗಲೂ ಇದ್ದೇ ಇರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.