ETV Bharat / state

ಯೋಗ ಮತ್ತು ಆಯುರ್ವೇದ ಮೂಲಕ ತಲಸ್ಸೆಮಿಯ ರೋಗದ ನಿವಾರಣೆ ಸಾಧ್ಯ: ತೇಜಸ್ವಿನಿ ಅನಂತಕುಮಾರ್‌

author img

By

Published : May 8, 2023, 5:51 PM IST

ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್‌ ಅವರಿಂದು ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

thalassemia-can-be-cured-through-yoga-and-ayurveda-tejaswini-ananthakumar
ಯೋಗ ಮತ್ತು ಆಯುರ್ವೇದ ಮೂಲಕ ತಲಸ್ಸೆಮಿಯ ರೋಗದ ನಿವಾರಣೆ ಸಾಧ್ಯ: ತೇಜಸ್ವಿನಿ ಅನಂತಕುಮಾರ್‌

ಬೆಂಗಳೂರು: ಯೋಗ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ಮೂಲಕ ತಲಸ್ಸೆಮಿಯಾ ರೋಗವನ್ನು ನಿವಾರಿಸಬಹುದಾಗಿದೆ. ನಮ್ಮ ಪ್ರಾಚೀನ ಪದ್ದತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ ಎಂದು ಅದಮ್ಯ ಚೇತನ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

ಸೋಮವಾರ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಪದ್ಧತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ. ಆಲೋಪತಿ ಮೆಡಿಕಲ್ ಕಂಪನಿಗಳ ಮಾಫಿಯಾದ ಕಪಿ ಮುಷ್ಟಿಯಿಂದಾಗಿ ಸಾಮಾನ್ಯ ಜನರನ್ನು ಸಂರಕ್ಷಿಸಲು ಸಂರಕ್ಷಾ ಸಂಸ್ಥೆ ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ.

ದೇಶದಲ್ಲಿ ಸುಮಾರು 10 ಸಾವಿರ ಮಕ್ಕಳು ತಲಸ್ಸೆಮಿಯಾದಂತಹ ಸಮಸ್ಯೆಗಳೊಂದಿಗೆ ಹುಟ್ಟುತ್ತಾರೆ. ಅದರಲ್ಲಿ 9 ಸಾವಿರ ಮಕ್ಕಳ ರೋಗದ ಚಿಕಿತ್ಸೆ ಪೋಷಣೆಯ ಹೊಣೆ ಹೊತ್ತಿರುವ ಸಂರಕ್ಷಾ ತಲಸ್ಸೆಮಿಯಾ ಮಕ್ಕಳ ಕೇಂದ್ರ ಸರ್ಕಾರದ ರೀತಿಯಲ್ಲಿ ಶ್ರಮಿಸುತ್ತಿದೆ. ಪೀಡಿತರ ಬಾಳನ್ನು ಹಸನುಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಹೀಗಾಯಿತಲ್ಲ ಎಂದು ಕೊರಗುವುದನ್ನು ಬಿಟ್ಟು, ಈ ರೀತಿಯ ಮಕ್ಕಳ ಸೇವೆ ಮಾಡುವ ಅವಕಾಶವನ್ನು ಭಗವಂತ ಒದಗಿಸಿದ್ದಾನೆಂದು ಹೆಮ್ಮೆಪಡಬೇಕು ಎಂದು ಹೇಳಿದರು.

ಸರ್ಕಾರಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಮಚಂದ್ರ ಶೆಟ್ಟಿ ಮಾತನಾಡಿ, ತಲಸ್ಸೆಮಿಯಾ ಎಂಬುದು ಭಾರಿ ಅಪಾಯದ ಕಾಯಿಲೆಯೇನಲ್ಲ, ದೇಹಕ್ಕೆ ಬೇಕಾದ ಕೆಂಪುರಕ್ತ ಕಣಗಳು ಉತ್ಪತ್ತಿಯಾಗದ್ದರಿಂದ ಈ ಕಾಯಿಲೆಯು ಅಪರೂಪದ ಕಾಯಿಲೆಯಾಗಿದೆ. ಹಾಗಾಗಿ ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ಐರನ್ ಕಿಲೇಷನ್ ಥೆರಪಿ ಹಾಗೂ ಕೆಲವಾರು ಔಷದೋಪಚಾರಗಳನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅದರ ಜತೆಗೆ ತಲಸ್ಸೆಮಿಯಾ ಬಾಧಿತ ಮಕ್ಕಳು ಸಂತೋಷದಿಂದ ಇರುವ ಅವಕಾಶವನ್ನು ಹೆಚ್ಚು ಹೆಚ್ಚು ಉಂಟುಮಾಡುವುದು ಹಾಗೂ ಆಯುರ್ವೇದದ ಕೆಲವು ರಸಾಯನಗಳಿಂದ ಚಿಕಿತ್ಸೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಬಹಳ ಪ್ರಯೋಜನಕ್ಕೆ ಬರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ತಲಸ್ಸೆಮಿಯಾ ಮಕ್ಕಳು ಪೋಷಕರು ರಾಷ್ಟ್ರೋತ್ಥಾನ ಪರಿಷತ್‌ನ ಖಜಾಂಜಿ ಕೆ.ಎಸ್. ನಾರಾಯಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ತಲಸ್ಸೆಮಿಯಾ ರೋಗದ ಲಕ್ಷಣ: ತಲಸ್ಸೆಮಿಯಾ ರೋಗದ ಲಕ್ಷಣಗಳು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಆಲಸ್ಯ, ಕಿರಿಕಿರಿ ಉಂಟಾಗುವುದು, ನಿದ್ರಾಹೀನತೆ, ಆಹಾರ ಸೇವನೆಯನ್ನು ತ್ಯಜಿಸುವುದು, ಮಂಕಾದ ಮುಖ, ಹೊಟ್ಟೆ ಉಬ್ಬುವಿಕೆ, ಆಗಾಗ ಕಾಣಿಸಿಕೊಳ್ಳುವ ಅನಾರೋಗ್ಯಗಳು, ಕಡಿಮೆ ತೂಕ ಇವೆಲ್ಲವೂ ರೋಗದ ಮುಖ್ಯ ಲಕ್ಷಣಗಳು.

ರಕ್ತಹೀನತೆ ತಪಾಸಣೆ ರೋಗದ ಪತ್ತೆಗೆ ಸಹಾಯಕ: ರಕ್ತಹೀನತೆ ತಪಾಸಣೆ ತಲಸ್ಸೆಮಿಯಾ ವಾಹಕಗಳನ್ನು ಪತ್ತೆ ಮಾಡುತ್ತದೆ. ರಕ್ತದ ಚಿತ್ರದಲ್ಲಿ ಇದು ಹಿಮೋಗ್ಲೋಬಿನ್ ಮಟ್ಟವನ್ನು ಶೇ.9-12 ಗ್ರಾಂ ನಡುವೆ ತೋರಿಸುತ್ತದೆ. ಎಂಸಿವಿ, ಎಂಸಿಎಚ್ ಮತ್ತು ಆರ್‌ಡಿಡಬ್ಲ್ಯೂನಂತಹ ಇತರ ಹಿಮೋಗ್ರಾಮ್ ನಿಯತಾಂಕಗಳನ್ನು ಸಹ ಪರೀಕ್ಷಿಸಲಾಗುತ್ತದೆ.

ಇದನ್ನೂ ಓದಿ: ಪುಕ್ಕಟೆಯಾಗಿ ಸುದೀಪ್ ನೋಡುತ್ತಿದ್ದೇವೆ, ಅವರು 3 ತಾಸಿನ‌ ನಾಯಕ: ಸತೀಶ್ ಜಾರಕಿಹೊಳಿ

ಬೆಂಗಳೂರು: ಯೋಗ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ಮೂಲಕ ತಲಸ್ಸೆಮಿಯಾ ರೋಗವನ್ನು ನಿವಾರಿಸಬಹುದಾಗಿದೆ. ನಮ್ಮ ಪ್ರಾಚೀನ ಪದ್ದತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ ಎಂದು ಅದಮ್ಯ ಚೇತನ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

ಸೋಮವಾರ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರದಲ್ಲಿ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಪದ್ಧತಿಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ಇವೆ. ಆಲೋಪತಿ ಮೆಡಿಕಲ್ ಕಂಪನಿಗಳ ಮಾಫಿಯಾದ ಕಪಿ ಮುಷ್ಟಿಯಿಂದಾಗಿ ಸಾಮಾನ್ಯ ಜನರನ್ನು ಸಂರಕ್ಷಿಸಲು ಸಂರಕ್ಷಾ ಸಂಸ್ಥೆ ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ.

ದೇಶದಲ್ಲಿ ಸುಮಾರು 10 ಸಾವಿರ ಮಕ್ಕಳು ತಲಸ್ಸೆಮಿಯಾದಂತಹ ಸಮಸ್ಯೆಗಳೊಂದಿಗೆ ಹುಟ್ಟುತ್ತಾರೆ. ಅದರಲ್ಲಿ 9 ಸಾವಿರ ಮಕ್ಕಳ ರೋಗದ ಚಿಕಿತ್ಸೆ ಪೋಷಣೆಯ ಹೊಣೆ ಹೊತ್ತಿರುವ ಸಂರಕ್ಷಾ ತಲಸ್ಸೆಮಿಯಾ ಮಕ್ಕಳ ಕೇಂದ್ರ ಸರ್ಕಾರದ ರೀತಿಯಲ್ಲಿ ಶ್ರಮಿಸುತ್ತಿದೆ. ಪೀಡಿತರ ಬಾಳನ್ನು ಹಸನುಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಹೀಗಾಯಿತಲ್ಲ ಎಂದು ಕೊರಗುವುದನ್ನು ಬಿಟ್ಟು, ಈ ರೀತಿಯ ಮಕ್ಕಳ ಸೇವೆ ಮಾಡುವ ಅವಕಾಶವನ್ನು ಭಗವಂತ ಒದಗಿಸಿದ್ದಾನೆಂದು ಹೆಮ್ಮೆಪಡಬೇಕು ಎಂದು ಹೇಳಿದರು.

ಸರ್ಕಾರಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಮಚಂದ್ರ ಶೆಟ್ಟಿ ಮಾತನಾಡಿ, ತಲಸ್ಸೆಮಿಯಾ ಎಂಬುದು ಭಾರಿ ಅಪಾಯದ ಕಾಯಿಲೆಯೇನಲ್ಲ, ದೇಹಕ್ಕೆ ಬೇಕಾದ ಕೆಂಪುರಕ್ತ ಕಣಗಳು ಉತ್ಪತ್ತಿಯಾಗದ್ದರಿಂದ ಈ ಕಾಯಿಲೆಯು ಅಪರೂಪದ ಕಾಯಿಲೆಯಾಗಿದೆ. ಹಾಗಾಗಿ ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದಿರುವುದರಿಂದ ಐರನ್ ಕಿಲೇಷನ್ ಥೆರಪಿ ಹಾಗೂ ಕೆಲವಾರು ಔಷದೋಪಚಾರಗಳನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅದರ ಜತೆಗೆ ತಲಸ್ಸೆಮಿಯಾ ಬಾಧಿತ ಮಕ್ಕಳು ಸಂತೋಷದಿಂದ ಇರುವ ಅವಕಾಶವನ್ನು ಹೆಚ್ಚು ಹೆಚ್ಚು ಉಂಟುಮಾಡುವುದು ಹಾಗೂ ಆಯುರ್ವೇದದ ಕೆಲವು ರಸಾಯನಗಳಿಂದ ಚಿಕಿತ್ಸೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಬಹಳ ಪ್ರಯೋಜನಕ್ಕೆ ಬರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ತಲಸ್ಸೆಮಿಯಾ ಮಕ್ಕಳು ಪೋಷಕರು ರಾಷ್ಟ್ರೋತ್ಥಾನ ಪರಿಷತ್‌ನ ಖಜಾಂಜಿ ಕೆ.ಎಸ್. ನಾರಾಯಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ತಲಸ್ಸೆಮಿಯಾ ರೋಗದ ಲಕ್ಷಣ: ತಲಸ್ಸೆಮಿಯಾ ರೋಗದ ಲಕ್ಷಣಗಳು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಆಲಸ್ಯ, ಕಿರಿಕಿರಿ ಉಂಟಾಗುವುದು, ನಿದ್ರಾಹೀನತೆ, ಆಹಾರ ಸೇವನೆಯನ್ನು ತ್ಯಜಿಸುವುದು, ಮಂಕಾದ ಮುಖ, ಹೊಟ್ಟೆ ಉಬ್ಬುವಿಕೆ, ಆಗಾಗ ಕಾಣಿಸಿಕೊಳ್ಳುವ ಅನಾರೋಗ್ಯಗಳು, ಕಡಿಮೆ ತೂಕ ಇವೆಲ್ಲವೂ ರೋಗದ ಮುಖ್ಯ ಲಕ್ಷಣಗಳು.

ರಕ್ತಹೀನತೆ ತಪಾಸಣೆ ರೋಗದ ಪತ್ತೆಗೆ ಸಹಾಯಕ: ರಕ್ತಹೀನತೆ ತಪಾಸಣೆ ತಲಸ್ಸೆಮಿಯಾ ವಾಹಕಗಳನ್ನು ಪತ್ತೆ ಮಾಡುತ್ತದೆ. ರಕ್ತದ ಚಿತ್ರದಲ್ಲಿ ಇದು ಹಿಮೋಗ್ಲೋಬಿನ್ ಮಟ್ಟವನ್ನು ಶೇ.9-12 ಗ್ರಾಂ ನಡುವೆ ತೋರಿಸುತ್ತದೆ. ಎಂಸಿವಿ, ಎಂಸಿಎಚ್ ಮತ್ತು ಆರ್‌ಡಿಡಬ್ಲ್ಯೂನಂತಹ ಇತರ ಹಿಮೋಗ್ರಾಮ್ ನಿಯತಾಂಕಗಳನ್ನು ಸಹ ಪರೀಕ್ಷಿಸಲಾಗುತ್ತದೆ.

ಇದನ್ನೂ ಓದಿ: ಪುಕ್ಕಟೆಯಾಗಿ ಸುದೀಪ್ ನೋಡುತ್ತಿದ್ದೇವೆ, ಅವರು 3 ತಾಸಿನ‌ ನಾಯಕ: ಸತೀಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.