ETV Bharat / state

ರಾಜ್ಯ ’ದಂತ‘ ಪರಿಷತ್ ಕಾರ್ಯಕಾರಿ ಮಂಡಳಿ ಚುನಾವಣೆ ಫಲಿತಾಂಶಕ್ಕೆ ಹೈಕೋರ್ಟ್ ಬ್ರೇಕ್

author img

By

Published : Feb 25, 2023, 7:37 AM IST

ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

High Court
ಹೈಕೋರ್ಟ್​

ಬೆಂಗಳೂರು : ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಚುನಾವಣಾ ಅಧಿಸೂಚನೆ ಪ್ರಶ್ನಿಸಿ ಪರಿಷತ್ ಸದಸ್ಯ ಡಾ.ರೋಹಿ ರೇಹಿನಾ ಮಲೀಕ್ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಗಂಭೀರ ಲೋಪಗಳು ಉಂಟಾಗಿವೆ. ದಂತ ವೈದ್ಯರಾಗಿರುವ ಪರಿಷತ್ತಿನ ಸಾವಿರಾರು ಸದಸ್ಯ ಹೆಸರು ಮತದಾರರು ಪಟ್ಟಿಯಲ್ಲಿ ಇಲ್ಲ. ದಂತ ವೈದ್ಯ ವೃತ್ತಿಯನ್ನು ತೊರೆದಿರುವ ಹಲವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆಯು ಫೆ.22 ರಂದು ಪೂರ್ಣಗೊಂಡಿದೆ. ಫೆ.24 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅಭಿಪ್ರಾಯ ಪಟ್ಟು ಫಲಿತಾಂಶ ಪ್ರಕಟಿಸದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪಾದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸಲು 2023 ರ ಜನವರಿ 2ರಂದು ಪರಿಷತ್ತಿನ ರಿಜಿಸ್ಟ್ರರ್ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾಧಿಕಾರಿಯು ಜನವರಿ 4ರಂದು ಅಂತಿಮ ಮತದಾರರ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದದರು. ಅದರಂತೆ ಅಂಚೆ ಮತದಾನದ ಮೂಲಕ 2023 ರ ಜನವರಿ 23 ರಿಂದ ಫೆಬ್ರವರಿ 22 ರವರೆಗೆ ಮತದಾನ ನಿಗದಿಪಡಿಸಲಾಗಿತ್ತು. ಫೆಬ್ರವರಿ 24ರಂದು ಮತ ಎಣಿಕೆ ನಿರ್ಧರಿಸಲಾಗಿತ್ತು.

ಆದರೆ, ಚುನಾವಣಾ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು, ಮತದಾರರ ಪಟ್ಟಿಯಿಂದ ಹಲವು ಮತದಾರರನ್ನು ಕೈ ಬಿಡಲಾಗಿದೆ. ದಂತ ವೈದ್ಯಕೀಯ ವೃತ್ತಿಯನ್ನು ತೊರೆದ ಅನೇಕ ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿದೆ. ಬಹುತೇಕ ಮತದಾರರಿಗೆ ಮತಚೀಟಿಯೇ ನೀಡಿಲ್ಲ. ಪರಿಷತ್ತಿನ ಸಾಕಷ್ಟು ಸದಸ್ಯರಿಗೆ ಚುನಾವಣೆ ನಡೆಯುತ್ತಿರುವ ವಿಚಾರವೇ ಗೊತ್ತಿಲ್ಲ. 55 ಸಾವಿರ ಸದಸ್ಯರಿದ್ದು, ಮತದಾರರ ಪಟ್ಟಿಯಲ್ಲಿ ಕೇವಲ 14,623 ಸದಸ್ಯರ ಹೆಸರುಗಳಿವೆ. ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ. ಹಾಗಾಗಿ, ಚುನಾವಣಾ ಅಧಿಸೂಚನೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವರೆಗೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದ್ದರು.

ಮಂಡ್ಯ ವಕೀಲರ ಸಂಘದ ಕುರಿತು ಅಸಮಾಧಾನಗೊಂಡ ಹೈಕೋರ್ಟ್​: 2022ರ ಆಗಸ್ಟ್​ನಲ್ಲಿ ತುಮಕೂರಿನಲ್ಲಿ ನಡೆದ ಲೋಕ ಅದಾಲತ್​ ಗೆ ವಕೀಲರು ತೆರಳದಂತೆ ಮಂಡ್ಯ ವಕೀಲರ ಸಂಘ ತಡೆದಿತ್ತು. ಹೀಗಾಗಿ ಇವರ ವಿರುದ್ಧ ಕರ್ನಾಟಕ ರಾಜ್ಯ ಕಾನೂನುಗಳ ಸೇವೆಗಳ ಪ್ರಾಧಿಕಾರವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಬಳಿಕ ಕೋರ್ಟ್​ ನಿಮ್ಮ ನಡೆಯು ನ್ಯಾಯದಾನಕ್ಕೆ ಅಡ್ಡಿಯಾಗಿದೆ, ನಿಮ್ಮ ಸಂಘದ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿರಿ, ಇದು ಸರಿಯಾದ ವಿಧಾನವೇ ಎಂದು ಪ್ರಶ್ನಿಸಿ ವಿಚಾರಣೆಯನ್ನು ಫೆಬ್ರವರಿ 27 ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ: ತಡೆಯಾಜ್ಞೆ ತೆರವಿಗೆ ಸಿಬಿಐ ಮನವಿ

ಬೆಂಗಳೂರು : ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಚುನಾವಣಾ ಅಧಿಸೂಚನೆ ಪ್ರಶ್ನಿಸಿ ಪರಿಷತ್ ಸದಸ್ಯ ಡಾ.ರೋಹಿ ರೇಹಿನಾ ಮಲೀಕ್ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಗಂಭೀರ ಲೋಪಗಳು ಉಂಟಾಗಿವೆ. ದಂತ ವೈದ್ಯರಾಗಿರುವ ಪರಿಷತ್ತಿನ ಸಾವಿರಾರು ಸದಸ್ಯ ಹೆಸರು ಮತದಾರರು ಪಟ್ಟಿಯಲ್ಲಿ ಇಲ್ಲ. ದಂತ ವೈದ್ಯ ವೃತ್ತಿಯನ್ನು ತೊರೆದಿರುವ ಹಲವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆಯು ಫೆ.22 ರಂದು ಪೂರ್ಣಗೊಂಡಿದೆ. ಫೆ.24 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅಭಿಪ್ರಾಯ ಪಟ್ಟು ಫಲಿತಾಂಶ ಪ್ರಕಟಿಸದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪಾದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸಲು 2023 ರ ಜನವರಿ 2ರಂದು ಪರಿಷತ್ತಿನ ರಿಜಿಸ್ಟ್ರರ್ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾಧಿಕಾರಿಯು ಜನವರಿ 4ರಂದು ಅಂತಿಮ ಮತದಾರರ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದದರು. ಅದರಂತೆ ಅಂಚೆ ಮತದಾನದ ಮೂಲಕ 2023 ರ ಜನವರಿ 23 ರಿಂದ ಫೆಬ್ರವರಿ 22 ರವರೆಗೆ ಮತದಾನ ನಿಗದಿಪಡಿಸಲಾಗಿತ್ತು. ಫೆಬ್ರವರಿ 24ರಂದು ಮತ ಎಣಿಕೆ ನಿರ್ಧರಿಸಲಾಗಿತ್ತು.

ಆದರೆ, ಚುನಾವಣಾ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು, ಮತದಾರರ ಪಟ್ಟಿಯಿಂದ ಹಲವು ಮತದಾರರನ್ನು ಕೈ ಬಿಡಲಾಗಿದೆ. ದಂತ ವೈದ್ಯಕೀಯ ವೃತ್ತಿಯನ್ನು ತೊರೆದ ಅನೇಕ ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿದೆ. ಬಹುತೇಕ ಮತದಾರರಿಗೆ ಮತಚೀಟಿಯೇ ನೀಡಿಲ್ಲ. ಪರಿಷತ್ತಿನ ಸಾಕಷ್ಟು ಸದಸ್ಯರಿಗೆ ಚುನಾವಣೆ ನಡೆಯುತ್ತಿರುವ ವಿಚಾರವೇ ಗೊತ್ತಿಲ್ಲ. 55 ಸಾವಿರ ಸದಸ್ಯರಿದ್ದು, ಮತದಾರರ ಪಟ್ಟಿಯಲ್ಲಿ ಕೇವಲ 14,623 ಸದಸ್ಯರ ಹೆಸರುಗಳಿವೆ. ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ. ಹಾಗಾಗಿ, ಚುನಾವಣಾ ಅಧಿಸೂಚನೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವರೆಗೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದ್ದರು.

ಮಂಡ್ಯ ವಕೀಲರ ಸಂಘದ ಕುರಿತು ಅಸಮಾಧಾನಗೊಂಡ ಹೈಕೋರ್ಟ್​: 2022ರ ಆಗಸ್ಟ್​ನಲ್ಲಿ ತುಮಕೂರಿನಲ್ಲಿ ನಡೆದ ಲೋಕ ಅದಾಲತ್​ ಗೆ ವಕೀಲರು ತೆರಳದಂತೆ ಮಂಡ್ಯ ವಕೀಲರ ಸಂಘ ತಡೆದಿತ್ತು. ಹೀಗಾಗಿ ಇವರ ವಿರುದ್ಧ ಕರ್ನಾಟಕ ರಾಜ್ಯ ಕಾನೂನುಗಳ ಸೇವೆಗಳ ಪ್ರಾಧಿಕಾರವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಬಳಿಕ ಕೋರ್ಟ್​ ನಿಮ್ಮ ನಡೆಯು ನ್ಯಾಯದಾನಕ್ಕೆ ಅಡ್ಡಿಯಾಗಿದೆ, ನಿಮ್ಮ ಸಂಘದ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿರಿ, ಇದು ಸರಿಯಾದ ವಿಧಾನವೇ ಎಂದು ಪ್ರಶ್ನಿಸಿ ವಿಚಾರಣೆಯನ್ನು ಫೆಬ್ರವರಿ 27 ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ: ತಡೆಯಾಜ್ಞೆ ತೆರವಿಗೆ ಸಿಬಿಐ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.