ETV Bharat / state

ವಂಚನೆ ಯತ್ನ ಪ್ರಕರಣದಿಂದ ರಿಲೀಫ್: ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಮಾಪತಿ

author img

By

Published : Jul 14, 2021, 11:09 AM IST

Updated : Jul 14, 2021, 11:35 AM IST

ನಿನ್ನೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ಈ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದರ್ಶನ್ ಅವರ ಜೊತೆ ಸಂಧಾನ ಹಿನ್ನೆಲೆ, ನಿರ್ಮಾಪಕ ಉಮಾಪತಿ ಅವರು ಇಂದು ಪತ್ನಿ ಸಮೇತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

special worship to banashankari devi  from  Producer Umapati
ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಮಾಪತಿ

ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ವಂಚನೆ ಯತ್ನ ಪ್ರಕರಣ ತಣ್ಣಗಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವಿನ ಗೊಂದಲ ಮಂಗಳವಾರ ಅಂತ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಇಂದು ನಿರ್ಮಾಪಕ ಉಮಾಪತಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಮಾಪತಿ

ನಿರ್ಮಾಪಕ ಉಮಾಪತಿ ಈ ಪ್ರಕರಣದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಮನೆ ದೇವರು ಬನಶಂಕರಿ ಅಮ್ಮ ಕಾಪಾಡುತ್ತಾಳೆ ಅಂತಾ ಹೇಳಿದ್ದರು. ಅದರಂತೆ ನಿನ್ನೆಯೇ ದರ್ಶನ್ ಹಾಗೂ ಉಮಾಪತಿ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚಿಸಿ, ಈ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದರ್ಶನ್ ಅವರ ಜೊತೆ ಸಂಧಾನ ಹಿನ್ನೆಲೆ, ನಿರ್ಮಾಪಕ ಉಮಾಪತಿ ಅವರು ಪತ್ನಿ ಸಮೇತ ಬನಶಂಕರಿ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ನೆರವೇರಿಸಿದ್ದಾರೆ.

ಬನಶಂಕರಿ ಅಮ್ಮನ ಭಕ್ತನಾಗಿರುವ ಉಮಾಪತಿ, ಮಂಗಳವಾರ ಮಾತನಾಡುವ ವೇಳೆ ನಾನು ನಿರಪರಾಧಿ. ಬನಶಂಕರಿ ಅಮ್ಮ ನನ್ನನ್ನು ಕಾಪಾಡುತ್ತಾಳೆ ಎಂದು ಹೇಳಿದ್ರು. ಈಗ ಪ್ರಕರಣದಲ್ಲಿ ಕೊಂಚ ರಿಲೀಫ್ ಸಿಗ್ತಿದ್ದಂತೆ, ದೇವಿಗೆ ಉಮಾಪತಿ ಪೂಜೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ವಂಚನೆ ಯತ್ನ ಪ್ರಕರಣ ತಣ್ಣಗಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವಿನ ಗೊಂದಲ ಮಂಗಳವಾರ ಅಂತ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಇಂದು ನಿರ್ಮಾಪಕ ಉಮಾಪತಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಮಾಪತಿ

ನಿರ್ಮಾಪಕ ಉಮಾಪತಿ ಈ ಪ್ರಕರಣದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಮನೆ ದೇವರು ಬನಶಂಕರಿ ಅಮ್ಮ ಕಾಪಾಡುತ್ತಾಳೆ ಅಂತಾ ಹೇಳಿದ್ದರು. ಅದರಂತೆ ನಿನ್ನೆಯೇ ದರ್ಶನ್ ಹಾಗೂ ಉಮಾಪತಿ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚಿಸಿ, ಈ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದರ್ಶನ್ ಅವರ ಜೊತೆ ಸಂಧಾನ ಹಿನ್ನೆಲೆ, ನಿರ್ಮಾಪಕ ಉಮಾಪತಿ ಅವರು ಪತ್ನಿ ಸಮೇತ ಬನಶಂಕರಿ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ನೆರವೇರಿಸಿದ್ದಾರೆ.

ಬನಶಂಕರಿ ಅಮ್ಮನ ಭಕ್ತನಾಗಿರುವ ಉಮಾಪತಿ, ಮಂಗಳವಾರ ಮಾತನಾಡುವ ವೇಳೆ ನಾನು ನಿರಪರಾಧಿ. ಬನಶಂಕರಿ ಅಮ್ಮ ನನ್ನನ್ನು ಕಾಪಾಡುತ್ತಾಳೆ ಎಂದು ಹೇಳಿದ್ರು. ಈಗ ಪ್ರಕರಣದಲ್ಲಿ ಕೊಂಚ ರಿಲೀಫ್ ಸಿಗ್ತಿದ್ದಂತೆ, ದೇವಿಗೆ ಉಮಾಪತಿ ಪೂಜೆ ಸಲ್ಲಿಸಿದ್ದಾರೆ.

Last Updated : Jul 14, 2021, 11:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.