ETV Bharat / state

ಕೃಷಿ ಮಾರಾಟ ಮಂಡಳಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: 48 ಕೋಟಿ ರೂಪಾಯಿ ನುಂಗಿದ ಆರೋಪಿಗಳು ಅರೆಸ್ಟ್​ - ರಾಜ್ಯ ಕೃಷಿ ಮಾರಾಟ ಮಂಡಳಿ

ರಾಜ್ಯವನ್ನೇ ಬೆಚ್ಚಿಬೀಳಿಸುವಂತ ಭ್ರಷ್ಟಾಚಾರ ಆರೋಪ ಪ್ರಕರಣ ನಡೆದಿದೆ. ರಾಜ್ಯ ಕೃಷಿ ಮಾರಾಟ ಮಂಡಳಿ ಉತ್ತರಹಳ್ಳಿ ಬ್ರಾಂಚ್​ನ ಖಾಸಗಿ ಬ್ಯಾಂಕ್​ನಲ್ಲಿ 100 ಕೋಟಿ ಹಣವನ್ನ 50 ಕೋಟಿ ಹಣದಂತೆ ಎರಡು ಠೇವಣಿ ಇಡಲಾಗಿತ್ತು. ಆದರೆ, ಬ್ಯಾಂಕಿನ ಸಿಬ್ಬಂದಿ ‌ನಕಲಿ ಬಾಂಡ್ ಸೃಷ್ಟಿಸಿ 48 ಕೋಟಿ ಹಣವನ್ನ ಹಲವು ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಕೃಷಿ ಮಾರಾಟ ಮಂಡಳಿ,  Six staff arrest who cheated 48 crore deposit money to State Agricultural Marketing Board
ರಾಜ್ಯ ಕೃಷಿ ಮಾರಾಟ ಮಂಡಳಿ
author img

By

Published : Feb 7, 2020, 5:33 PM IST

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಇಟ್ಟಿದ್ದ ಹಣದಲ್ಲಿ 48 ಕೋಟಿ ರೂ. ಠೇವಣಿಯನ್ನು ಗುಳುಂ ಮಾಡಿರುವ ಘಟನೆ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಸೇರಿ ಕೋಟಿ ಕೋಟಿ ಹಣ ಗುಳುಂ ಮಾಡಿರುವ ಆರೋಪದ ಮೇಲೆ ಕೆಲವರನ್ನು ಬಂಧಿಸಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಜಯರಾಮ್, ಮಹಮದ್ ಅಸ್ಲಾಂ, ಮುಸ್ತಾಫಾ, ಭರತ್, ಬಂಧಿತ ಆರೋಪಿಗಳು. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಉತ್ತರಹಳ್ಳಿ ಬ್ರಾಂಚ್​ನ ಖಾಸಗಿ ಬ್ಯಾಂಕ್​ ವೊಂದರಲ್ಲಿ 100 ಕೋಟಿ ಹಣವನ್ನ 50 ಕೋಟಿ ಹಣದಂತೆ ಎರಡು ಠೇವಣಿ ಇಟ್ಟಿದ್ದರು. ಆದರೆ, ಬ್ಯಾಂಕಿನ ಸಿಬ್ಬಂದಿ ‌ನಕಲಿ ಬಾಂಡ್ ಸೃಷ್ಟಿಸಿ 48 ಕೋಟಿ ರೂಪಾಯಿ ಹಣವನ್ನ ಹಲವು ಅಕೌಂಟ್​ಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರ ತಿಳಿದ ರಾಜ್ಯ ಕೃಷಿ ಮಾರಾಟ ಮಂಡಳಿಯ ಐಎಎಸ್ ಅಧಿಕಾರಿ ಕರಿಗೌಡ ಅವರು ಕಮರ್ಷಿಯಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್​ ಆಯುಕ್ತರು ಈ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸದ್ಯ ವಂಚನೆ ಸಂಬಂಧ ಕೆಲವರನ್ನ ಬಂಧಿಸಿದ ಸಿಸಿಬಿ, ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಚೆನ್ನೈನಲ್ಲಿ ತನಿಖೆ ಮುಂದುವರೆಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿ

ಈ ಕುರಿತು ಮಾತನಾಡಿರುವ ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಮಹಾ ಮೋಸವಾಗಿದೆ. ಕೃಷಿ ಮಾರಾಟ ಮಂಡಳಿ ಎಂಡಿ ಹಾಗೂ ಐಎಎಸ್ ಅಧಿಕಾರಿ ಕರಿಗೌಡರು ನೀಡಿದ್ದ ದೂರು ಆಧರಿಸಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಇಟ್ಟಿದ್ದ ಹಣದಲ್ಲಿ 48 ಕೋಟಿ ರೂ. ಠೇವಣಿಯನ್ನು ಗುಳುಂ ಮಾಡಿರುವ ಘಟನೆ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಸೇರಿ ಕೋಟಿ ಕೋಟಿ ಹಣ ಗುಳುಂ ಮಾಡಿರುವ ಆರೋಪದ ಮೇಲೆ ಕೆಲವರನ್ನು ಬಂಧಿಸಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಜಯರಾಮ್, ಮಹಮದ್ ಅಸ್ಲಾಂ, ಮುಸ್ತಾಫಾ, ಭರತ್, ಬಂಧಿತ ಆರೋಪಿಗಳು. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಉತ್ತರಹಳ್ಳಿ ಬ್ರಾಂಚ್​ನ ಖಾಸಗಿ ಬ್ಯಾಂಕ್​ ವೊಂದರಲ್ಲಿ 100 ಕೋಟಿ ಹಣವನ್ನ 50 ಕೋಟಿ ಹಣದಂತೆ ಎರಡು ಠೇವಣಿ ಇಟ್ಟಿದ್ದರು. ಆದರೆ, ಬ್ಯಾಂಕಿನ ಸಿಬ್ಬಂದಿ ‌ನಕಲಿ ಬಾಂಡ್ ಸೃಷ್ಟಿಸಿ 48 ಕೋಟಿ ರೂಪಾಯಿ ಹಣವನ್ನ ಹಲವು ಅಕೌಂಟ್​ಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರ ತಿಳಿದ ರಾಜ್ಯ ಕೃಷಿ ಮಾರಾಟ ಮಂಡಳಿಯ ಐಎಎಸ್ ಅಧಿಕಾರಿ ಕರಿಗೌಡ ಅವರು ಕಮರ್ಷಿಯಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್​ ಆಯುಕ್ತರು ಈ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸದ್ಯ ವಂಚನೆ ಸಂಬಂಧ ಕೆಲವರನ್ನ ಬಂಧಿಸಿದ ಸಿಸಿಬಿ, ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಚೆನ್ನೈನಲ್ಲಿ ತನಿಖೆ ಮುಂದುವರೆಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿ

ಈ ಕುರಿತು ಮಾತನಾಡಿರುವ ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಮಹಾ ಮೋಸವಾಗಿದೆ. ಕೃಷಿ ಮಾರಾಟ ಮಂಡಳಿ ಎಂಡಿ ಹಾಗೂ ಐಎಎಸ್ ಅಧಿಕಾರಿ ಕರಿಗೌಡರು ನೀಡಿದ್ದ ದೂರು ಆಧರಿಸಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.