ETV Bharat / state

ಹುನಗುಂದಕ್ಕೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ.. ಡಿಕೆಶಿ ಗೈರು

ಬೆಳಗಲ್​ನಲ್ಲಿ ಎಸ್ ಆರ್ ಕೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.

author img

By

Published : Dec 14, 2022, 11:13 AM IST

Updated : Dec 14, 2022, 11:25 AM IST

ಬಾಗಲಕೋಟೆಯ ಹುನಗುಂದಕ್ಕೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ
siddaramaiah-traveled-to-bagalkots-hunagunda

ಬೆಂಗಳೂರು: ಇಲ್ಲಿನ ಬೆಳಗಲ್​ನಲ್ಲಿ ಎಸ್ ಆರ್ ಕೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವ ಸಲುವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ವಿಮಾನ ಮೂಲಕ ಅವರು ಹುಬ್ಬಳ್ಳಿಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಪ್ರಯಾಣದ ಮೂಲಕ ಹುನಗುಂದಕ್ಕೆ ತೆರಳಲಿದ್ದಾರೆ.

ಡಿಕೆಶಿ ಗೈರು: ಭೂಮಿಪೂಜೆಗೆ ಹುನಗುಂದಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಟ್ಟಿಗೆ ತೆರಳಬೇಕಿತ್ತು. ಆದರೆ, ಎರಡು ದಿನದಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು ಆಗಮಿಸದ ಹಿನ್ನೆಲೆ ಸಿದ್ದರಾಮಯ್ಯ ಏಕಾಂಗಿಯಾಗಿ ತೆರಳಿದ್ದಾರೆ. ನಿನ್ನೆ ಸಿದ್ದರಾಮಯ್ಯಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾನು ಸಹ ಹುನಗುಂದಕ್ಕೆ ಬರುತ್ತೇನೆ. ಇಬ್ಬರೂ ಒಟ್ಟಾಗಿಯೇ ತೆರಳೋಣ ಎಂದಿದ್ದರು. ಆದರೆ ಡಿಕೆಶಿ ದಿಲ್ಲಿಯಿಂದ ಇನ್ನೂ ಆಗಮಿಸದ ಹಿನ್ನೆಲೆ ಒಟ್ಟಾಗಿ ತೆರಳಲು ಸಾಧ್ಯವಾಗಿಲ್ಲ.

ಉಪಸಮಿತಿ ಕಣ್ಣೊರೆಸುವ ತಂತ್ರ.. ಇದೇ ವೆಳೆ ಒಳ ಮೀಸಲಾತಿಗೆ ಉಪ ಸಮಿತಿ ರಚನೆ ವಿಚಾರ ಜೊತೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ನಾಯಕರು, ಬರೀ ಉಪ ಸಮಿತಿ ಮಾಡಿ ಕಣ್ಣೊರೆಸುವ ತಂತ್ರ ಮಾಡಲಾಗುತ್ತಿದೆ. ಇನ್ನೂ ಸದಾಶಿವ ಆಯೋಗ ವರದಿ ಅಸೆಂಬ್ಲಿಯಲ್ಲಿ ಮಂಡನೆ, ಚರ್ಚೆಯೇ ಆಗಿಲ್ಲ. ಮೊದಲು ಅಸೆಂಬ್ಲಿಯಲ್ಲಿ ಇಟ್ಟು ಚರ್ಚೆ ಮಾಡಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಬರೀ ಕಣ್ಣೊರೆಸುವ ತಂತ್ರ ಮಾಡುವುದು ಬೇಡ ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಇಂದು ಸಂಜೆ ಅಮಿತ್ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ಇಲ್ಲಿನ ಬೆಳಗಲ್​ನಲ್ಲಿ ಎಸ್ ಆರ್ ಕೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವ ಸಲುವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ವಿಮಾನ ಮೂಲಕ ಅವರು ಹುಬ್ಬಳ್ಳಿಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಪ್ರಯಾಣದ ಮೂಲಕ ಹುನಗುಂದಕ್ಕೆ ತೆರಳಲಿದ್ದಾರೆ.

ಡಿಕೆಶಿ ಗೈರು: ಭೂಮಿಪೂಜೆಗೆ ಹುನಗುಂದಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಟ್ಟಿಗೆ ತೆರಳಬೇಕಿತ್ತು. ಆದರೆ, ಎರಡು ದಿನದಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು ಆಗಮಿಸದ ಹಿನ್ನೆಲೆ ಸಿದ್ದರಾಮಯ್ಯ ಏಕಾಂಗಿಯಾಗಿ ತೆರಳಿದ್ದಾರೆ. ನಿನ್ನೆ ಸಿದ್ದರಾಮಯ್ಯಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾನು ಸಹ ಹುನಗುಂದಕ್ಕೆ ಬರುತ್ತೇನೆ. ಇಬ್ಬರೂ ಒಟ್ಟಾಗಿಯೇ ತೆರಳೋಣ ಎಂದಿದ್ದರು. ಆದರೆ ಡಿಕೆಶಿ ದಿಲ್ಲಿಯಿಂದ ಇನ್ನೂ ಆಗಮಿಸದ ಹಿನ್ನೆಲೆ ಒಟ್ಟಾಗಿ ತೆರಳಲು ಸಾಧ್ಯವಾಗಿಲ್ಲ.

ಉಪಸಮಿತಿ ಕಣ್ಣೊರೆಸುವ ತಂತ್ರ.. ಇದೇ ವೆಳೆ ಒಳ ಮೀಸಲಾತಿಗೆ ಉಪ ಸಮಿತಿ ರಚನೆ ವಿಚಾರ ಜೊತೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ನಾಯಕರು, ಬರೀ ಉಪ ಸಮಿತಿ ಮಾಡಿ ಕಣ್ಣೊರೆಸುವ ತಂತ್ರ ಮಾಡಲಾಗುತ್ತಿದೆ. ಇನ್ನೂ ಸದಾಶಿವ ಆಯೋಗ ವರದಿ ಅಸೆಂಬ್ಲಿಯಲ್ಲಿ ಮಂಡನೆ, ಚರ್ಚೆಯೇ ಆಗಿಲ್ಲ. ಮೊದಲು ಅಸೆಂಬ್ಲಿಯಲ್ಲಿ ಇಟ್ಟು ಚರ್ಚೆ ಮಾಡಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಬರೀ ಕಣ್ಣೊರೆಸುವ ತಂತ್ರ ಮಾಡುವುದು ಬೇಡ ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಇಂದು ಸಂಜೆ ಅಮಿತ್ ನೇತೃತ್ವದಲ್ಲಿ ಮಹತ್ವದ ಸಭೆ

Last Updated : Dec 14, 2022, 11:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.