ETV Bharat / state

ಐಎಂಎ ವಂಚನೆ ಪ್ರಕರಣ: ಸಿದ್ದರಾಮಯ್ಯ ಮಧ್ಯ ಪ್ರವೇಶಕ್ಕೆ ಶ್ರೀನಿವಾಸ್​ ಪೂಜಾರಿ ಆಗ್ರಹ ​

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಅದನ್ನು ಸಿಬಿಐ ಗೆ ವಹಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

author img

By

Published : Jun 12, 2019, 7:54 PM IST

ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಬೇಕು

ಬೆಂಗಳೂರು: ಹಿಂದೆ ಸಿದ್ದರಾಮಯ್ಯ ಮೋದಿಗೆ 58 ಇಂಚು ಎದೆ ಇದ್ರೆ ಸಾಲದು ಮಾನವೀಯತೆ ಇರಬೇಕು ಅಂದಿದ್ದರು. ಈಗ ಐಎಂಎನಿಂದ ಕೋಟ್ಯಂತರ ರೂಪಾಯಿ ವಂಚನೆಯಾಗಿದ್ದು ಸಿದ್ದರಾಮಯ್ಯನವರ ಮಾನವೀಯತೆ ಎಲ್ಲಿ ಹೋಯ್ತು ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್​ ಪೂಜಾರಿ ಪ್ರಶ್ನಿಸಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಬೇಕು

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಜಮೀರ್ ಮತ್ತು ರೋಷನ್ ಬೇಗ್ ನಡುವೆ ಕಿತ್ತಾಟದಿಂದ ಸರ್ಕಾರಕ್ಕಾಗಲೀ, ತನಿಖೆಗಾಗಲೀ ಅನುಕೂಲ ಆಗಲ್ಲ. ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ? ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿದ್ದರಾಮಯ್ಯ ಯಾಕೆ ಸಲಹೆ ಕೊಡ್ತಿಲ್ಲ? ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಲಿ. ಇದನ್ನು ಸಿಎಂಗೆ ಸಿದ್ದರಾಮಯ್ಯ ಅವರೇ ಮನವರಿಕೆ ಮಾಡಿಸಲಿ ಎಂದು ಆಗ್ರಹಿಸಿದರು.

ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ದೂರುದಾರರ ಸಂಖ್ಯೆ15 ಸಾವಿರ ದಾಟಿದ್ದರೂ ಸರ್ಕಾರ ಪ್ರಕರಣದ ಕುರಿತು ನಿರ್ಲಿಪ್ತವಾಗಿದೆ ಎಂದು ಪೂಜಾರಿ ಆರೋಪಿಸಿದರು. ವಂಚನೆಯ ರೂವಾರಿ ಮನ್ಸೂರ್ ಖಾನ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದವರು, ಸಿಎಂ ಸೇರಿ ಸಚಿವ ಸಂಪುಟದಲ್ಲಿ ಇರುವವರಿಗೆ ಪರಿಚಯಸ್ಥರು. ನಿಮ್ಮದೇ ಸಚಿವರೊಬ್ಬರು ಚುನಾವಣಾ ಅಫಿಡವಿಟ್ ನಲ್ಲಿ ಐದು ಕೋಟಿ ಸಾಲವನ್ನು ಮನ್ಸೂರ್ ಕಡೆಯಿಂದ ಪಡೆದ ಬಗ್ಗೆ ಉಲ್ಲೇಖಿಸಿದ್ದಾರೆ. ನೀವೂ ಸಹ ಮನ್ಸೂರ್ ಖಾನ್ ಜೊತೆ ಭೋಜನ ಸ್ವೀಕರಿಸಿದ್ದೀರಿ. ಧರ್ಮದ ನೆಪವೊಡ್ಡಿ ಮನ್ಸೂರ್ ಸಾಮಾನ್ಯ ಜನರಿಗೆ ವಂಚನೆ ಎಸಗಿದ್ದಾನೆ. ಆತನ ಪತ್ತೆಗೆ ವಿಳಂಬ ಮಾಡುತ್ತಿದ್ದೀರಿ. ಮನ್ಸೂರ್ ಮತ್ತು ಆತನ ಸಂಪರ್ಕದಲ್ಲಿದ್ದ ಪ್ರಭಾವಿಗಳ ಬಂಧಿಸುವ ಶಕ್ತಿ ನಿಮಗಿಲ್ಲವೆಂದು ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು.

ಬೆಂಗಳೂರು: ಹಿಂದೆ ಸಿದ್ದರಾಮಯ್ಯ ಮೋದಿಗೆ 58 ಇಂಚು ಎದೆ ಇದ್ರೆ ಸಾಲದು ಮಾನವೀಯತೆ ಇರಬೇಕು ಅಂದಿದ್ದರು. ಈಗ ಐಎಂಎನಿಂದ ಕೋಟ್ಯಂತರ ರೂಪಾಯಿ ವಂಚನೆಯಾಗಿದ್ದು ಸಿದ್ದರಾಮಯ್ಯನವರ ಮಾನವೀಯತೆ ಎಲ್ಲಿ ಹೋಯ್ತು ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್​ ಪೂಜಾರಿ ಪ್ರಶ್ನಿಸಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಬೇಕು

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಜಮೀರ್ ಮತ್ತು ರೋಷನ್ ಬೇಗ್ ನಡುವೆ ಕಿತ್ತಾಟದಿಂದ ಸರ್ಕಾರಕ್ಕಾಗಲೀ, ತನಿಖೆಗಾಗಲೀ ಅನುಕೂಲ ಆಗಲ್ಲ. ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ? ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿದ್ದರಾಮಯ್ಯ ಯಾಕೆ ಸಲಹೆ ಕೊಡ್ತಿಲ್ಲ? ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಲಿ. ಇದನ್ನು ಸಿಎಂಗೆ ಸಿದ್ದರಾಮಯ್ಯ ಅವರೇ ಮನವರಿಕೆ ಮಾಡಿಸಲಿ ಎಂದು ಆಗ್ರಹಿಸಿದರು.

ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ದೂರುದಾರರ ಸಂಖ್ಯೆ15 ಸಾವಿರ ದಾಟಿದ್ದರೂ ಸರ್ಕಾರ ಪ್ರಕರಣದ ಕುರಿತು ನಿರ್ಲಿಪ್ತವಾಗಿದೆ ಎಂದು ಪೂಜಾರಿ ಆರೋಪಿಸಿದರು. ವಂಚನೆಯ ರೂವಾರಿ ಮನ್ಸೂರ್ ಖಾನ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದವರು, ಸಿಎಂ ಸೇರಿ ಸಚಿವ ಸಂಪುಟದಲ್ಲಿ ಇರುವವರಿಗೆ ಪರಿಚಯಸ್ಥರು. ನಿಮ್ಮದೇ ಸಚಿವರೊಬ್ಬರು ಚುನಾವಣಾ ಅಫಿಡವಿಟ್ ನಲ್ಲಿ ಐದು ಕೋಟಿ ಸಾಲವನ್ನು ಮನ್ಸೂರ್ ಕಡೆಯಿಂದ ಪಡೆದ ಬಗ್ಗೆ ಉಲ್ಲೇಖಿಸಿದ್ದಾರೆ. ನೀವೂ ಸಹ ಮನ್ಸೂರ್ ಖಾನ್ ಜೊತೆ ಭೋಜನ ಸ್ವೀಕರಿಸಿದ್ದೀರಿ. ಧರ್ಮದ ನೆಪವೊಡ್ಡಿ ಮನ್ಸೂರ್ ಸಾಮಾನ್ಯ ಜನರಿಗೆ ವಂಚನೆ ಎಸಗಿದ್ದಾನೆ. ಆತನ ಪತ್ತೆಗೆ ವಿಳಂಬ ಮಾಡುತ್ತಿದ್ದೀರಿ. ಮನ್ಸೂರ್ ಮತ್ತು ಆತನ ಸಂಪರ್ಕದಲ್ಲಿದ್ದ ಪ್ರಭಾವಿಗಳ ಬಂಧಿಸುವ ಶಕ್ತಿ ನಿಮಗಿಲ್ಲವೆಂದು ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು.

Intro:ಬೆಂಗಳೂರು:ಹಿಂದೆ ಸಿದ್ದರಾಮಯ್ಯ ಮೋದಿಗೆ 58 ಇಂಚು ಎದೆ ಇದ್ರೆ ಸಾಲದು ಮಾನವೀಯತೆ ಇರಬೇಕು ಅಂದಿದ್ದರು ಈಗ ಎಲ್ಲಿ ಹೋಯ್ತು ಅವರ ಮಾನವೀಯತೆ ಕೋಟ್ಯಾಂತರ ರೂಪಾಯಿ ವಂಚನೆ ಆಗಿದೆ ಜನ ಬೀದಿಗೆ ಬಿದ್ದಿದ್ದಾರೆ ಕೂಡಲೇ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.
Body:



ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಸಚಿವ ಜಮೀರ್ ಮತ್ತು ರೋಷನ್ ಬೇಗ್ ನಡುವೆ ಕಿತ್ತಾಟದಿಂದ ಸರ್ಕಾರಕ್ಕಾಗಲೀ, ತನಿಖೆಗಾಗಲೀ ಅನುಕೂಲ ಆಗಲ್ಲ ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿದಾರೆ? ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿದ್ದರಾಮಯ್ಯ ಯಾಕೆ ಸಲಹೆ ಕೊಡ್ತಿಲ್ಲ? ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಲಿ
ಇದನ್ನು ಸಿಎಂಗೆ ಮನವರಿಕೆ ಮಾಡಲಿ ಎಂದು ಆಗ್ರಹಿಸಿದರು.

ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ದೂರುದಾರರ ಸಂಖ್ಯೆ15 ಸಾವಿರ ದಾಟಿದೆ ಆದರೆ ಸರ್ಕಾರ ಪ್ರಕರಣದ ಕುರಿತು ನಿರ್ಲಿಪ್ತವಾಗಿದೆ ವಂಚನೆಯ ರೂವಾರಿ ಮನ್ಸೂರ್ ಖಾನ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದವರು ಸಿಎಂ ಸೇರಿ ಸಚಿವ ಸಂಪುಟದಲ್ಲಿ ಇರುವವರಿಗೆ ಪರಿಚಯಸ್ಥರು ನಿಮ್ಮದೇ ಸಚಿವರೊಬ್ರು ಚುನಾವಣಾ ಅಫಿಡವಿಟ್ ನಲ್ಲಿ ಐದು ಕೋಟಿ ಸಾಲ ಮನ್ಸೂರ್ ನಿಂದ ಪಡೆದ ಬಗ್ಗೆ ಉಲ್ಲೇಖಿಸಿದ್ದಾರೆ ನೀವು ಸಹ ಮನ್ಸೂರ್ ಖಾನ್ ಜೊತೆ ಭೋಜನ ಸ್ವೀಕರಿಸಿದ್ದಾರೆ ಧರ್ಮದ ನೆಪವೊಡ್ಡಿ ಮನ್ಸೂರ್ ಸಾಮಾನ್ಯ ಜನರಿಗೆ ವಂಚನೆ ಎಸಗಿದ್ದಾನೆ ಆತನ ಪತ್ತೆಗೆ ವಿಳಂಬ ಗತಿ ಅನುಸರಿಸ್ತಿದೀರ ಮನ್ಸೂರ್ ಬಂಧನಕ್ಕೆ ನಿಮಗೆ ದಾಕ್ಷಿಣ್ಯ ಅಡ್ಡವಾಗ್ತಿದೆ ಮನ್ಸೂರ್ ಮತ್ತು ಆತನ ಸಂಪರ್ಕದಲ್ಲಿದ್ದ ಪ್ರಭಾವಿಗಳ ಬಂಧಿಸುವ ಶಕ್ತಿ ನಿಮಗಿಲ್ಲ ಎಂದು ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದರು.

ಜಿಂದಾಲ್ ಗೆ 3667 ಎಕರೆ ಸರ್ಕಾರಿ ಭೂಮಿಯನ್ನುಬಶುದ್ಧ ಕ್ರಯಕ್ಕೆ ಮಾರಾಟ ಒಪ್ಪಂದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಮಾರಾಟ ಒಪ್ಪಂದ ರದ್ದು ಮಾಡುವಂತೆ ಆಗ್ರಹಿಸಿ ಇದೇ 14 ರಿಂದ ಅಹೋರಾತ್ರಿ ಧರಣಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬಿಜೆಪಿ ನಾಯಕರು, ಮುಖಂಡರಿಂದ ಅಹೋರಾತ್ರಿ ಧರಣಿ ನಡೆಸಲಿದ್ದೇವೆ ನಮ್ಮ ಪ್ರತಿಭಟನೆ ಎಚ್ಚರಿಕೆಗೆ ಎಚ್ಚೆತ್ತುಕೊಂಡು ಈಗ ಆದೇಶ ಪುನರ್ ಪರಿಶೀಲಿಸುವ ನಿರ್ಧಾರವನ್ನು ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ ಆದರೆ ನಮ್ಮ ಬೇಡಿಕೆ ಜಿಂದಲಾ್ ಗೆ ಭೂಮಿ ಮಾರಾಟ ಮಾಡಲ್ಲ ಎಂದು ಅಂತಿಮ ಆದೇಶವನ್ನು ಹೊರಡಿಸಬೇಕು ಎನ್ನುವುದಾಗಿದೆ ಮೂರು ದಿನ ಬೆಂಗಳೂರಿನ ಮೌರ್ಯ ವೃತ್ತದಲ್ಲಿ 105 ಶಾಸಕರು, 18 ಪರಿಷತ್ ಸದಸ್ಯರು, 25 ಸಂಸದರು ಅಹೋರಾತ್ರಿ ಧರಣಿ ನಡೆಸುವುದು ಸಣ್ಣ ವಿಷಯ ಅಲ್ಲ ಆಗ ಏನಾದರೂ ಹೆಚ್ಚುಕಡಿಮೆ ಆದರೆ ಸರ್ಕಾರವೇ ಹೊಣೆಯಾಗಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇವತ್ತು ರಾಜ್ಯದಲ್ಲಿ ಬರ ನಿರ್ವಹಣೆ ಸರಿಯಾಗಿ ಆಗ್ತಿಲ್ಲ
ಸಿಎಂ ಗ್ರಾಮವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ
ಹಿಂದೆ ಗ್ರಾಮವಾಸ್ತವ್ಯ ಮಾಡಿದ ಗ್ರಾಮಗಳಲ್ಲಿ ಯಾವುದೇ ಸಮಸ್ಯೆಗಳು ಪರಿಹಾರವಾಗಿಲ್ಲ ಕೇವಲ ಪ್ರಚಾರಕ್ಕಾಗಿ ಗ್ರಾಮವಾಸ್ತವ್ಯ ಮಾಡಬಾರದು, ಹಿಂದೆ ಮನೆಯಲ್ಲಿ ಗ್ರಾಮ ವಾಸ್ತವ್ಯ ಈಗ ಶಾಲೆಯಲ್ಲಿ ವಾಸ್ತವ್ಯ ಮಾಡಲು ಹೊರಟಿದ್ದಾರೆ ಇದರಿಂದ ಏನೂ ಪ್ರಯೋಜನೆ ಇಲ್ಲ ಎಂದು ಟೀಕಿಸಿದರು.

ಕೊಡಗಿನಲ್ಲಿ ನೆರೆ ಪೀಡಿತರಿಗೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಸರಿಯಾಗಿ ಬಳಕೆ ಆಗಿಲ್ಲ ಕೊಡಗಿನಲ್ಲಿ ನೆರೆ ಬಂದ್ರೆ ಎದುರಿಸಲು ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ ಕೊಡಗಿನಲ್ಲಿ ಮತ್ತೆ ನೆರೆ ಬಂದರೆ ರಾಜ್ಯ ಸರ್ಕಾರ ಮತ್ತೆ ಕೇಂದ್ರವನ್ನು ದೂಷಿಸುವುದನ್ನು ಬಿಟ್ಟು ಇನ್ನೇನು ಮಾಡಲ್ಲ ಎಂದರು.
Conclusion:-ಪ್ರಶಾಂತ್ ಕುಮಾರ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.