ETV Bharat / state

ಮೇಕೆದಾಟು ಪಾದಯಾತ್ರೆ ಸಂಬಂಧ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ಡಿಕೆಶಿ

ಮುಂದೇನು ಮಾಡಬೇಕು, ಯಾವ ರೀತಿ ಪಾದಯಾತ್ರೆ ಮಾಡಬೇಕೆಂದು ಚರ್ಚೆ ನಡೆಯಿತು. ಈಗಾಗಲೇ ಪಾದಯಾತ್ರೆ ಹೆಸರನ್ನ ಬಿಟ್ಟು ವಾಕ್ ಫಾರ್ ವಾಟರ್ ಎಂದಿರೋ ಡಿಕೆಶಿ, ಸಿದ್ದರಾಮಯ್ಯ ಜತೆ ಸರ್ಕಾರಕ್ಕೆ ಠಕ್ಕರ್ ಕೊಡಲು ಚರ್ಚೆ ನಡೆಸಿದ್ದಾರೆ..

author img

By

Published : Jan 5, 2022, 5:02 PM IST

siddaramaiah-and-dk-shivakumar-discussesed-about-mekedatu-project
ಮೇಕೆದಾಟು ಪಾದಯಾತ್ರೆ ಸಂಬಂಧ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ಡಿಕೆಶಿ

ಬೆಂಗಳೂರು : ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಗೆ ಅಡ್ಡಿ ವಿಚಾರವಾಗಿ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾರ್ಯಾಧ್ಯಕ್ಷರಾದ ಆರ್‌ ಧ್ರುವನಾರಾಯಣ, ರಾಮಲಿಂಗರೆಡ್ಡಿ, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕ ಭೀಮಾ ನಾಯಕ್ ಈ ವೇಳೆ ಹಾಜರಿದ್ದರು. ವೀಕೆಂಡ್​ ಕರ್ಫ್ಯೂ ಜಾರಿ ಹಿನ್ನೆಲೆ ಮೇಕೆದಾಟು ಪಾದಯಾತ್ರೆಗೆ ಅಡ್ಡಿ ವಿಚಾರ ಕಾಂಗ್ರೆಸ್ ಉಭಯ ನಾಯಕರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು. ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆಯಿತು.

ಮುಂದೇನು ಮಾಡಬೇಕು, ಯಾವ ರೀತಿ ಪಾದಯಾತ್ರೆ ಮಾಡಬೇಕೆಂದು ಚರ್ಚೆ ನಡೆಯಿತು. ಈಗಾಗಲೇ ಪಾದಯಾತ್ರೆ ಹೆಸರನ್ನ ಬಿಟ್ಟು ವಾಕ್ ಫಾರ್ ವಾಟರ್ ಎಂದಿರೋ ಡಿಕೆಶಿ, ಸಿದ್ದರಾಮಯ್ಯ ಜತೆ ಸರ್ಕಾರಕ್ಕೆ ಠಕ್ಕರ್ ಕೊಡಲು ಚರ್ಚೆ ನಡೆಸಿದ್ದಾರೆ.

ಈ ಚರ್ಚೆ ಮುಗಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಸಂಜೆ 5 ಗಂಟೆಗೆ ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪಾದಯಾತ್ರೆ ಸಂಬಂಧ ಕಾಂಗ್ರೆಸ್ ನಾಯಕರು ಕೈಗೊಂಡಿರುವ ನಿಲುವು ಇಲ್ಲಿ ಪ್ರಕಟವಾಗಲಿದೆ.

ಓದಿ: ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು

ಬೆಂಗಳೂರು : ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಗೆ ಅಡ್ಡಿ ವಿಚಾರವಾಗಿ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾರ್ಯಾಧ್ಯಕ್ಷರಾದ ಆರ್‌ ಧ್ರುವನಾರಾಯಣ, ರಾಮಲಿಂಗರೆಡ್ಡಿ, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕ ಭೀಮಾ ನಾಯಕ್ ಈ ವೇಳೆ ಹಾಜರಿದ್ದರು. ವೀಕೆಂಡ್​ ಕರ್ಫ್ಯೂ ಜಾರಿ ಹಿನ್ನೆಲೆ ಮೇಕೆದಾಟು ಪಾದಯಾತ್ರೆಗೆ ಅಡ್ಡಿ ವಿಚಾರ ಕಾಂಗ್ರೆಸ್ ಉಭಯ ನಾಯಕರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು. ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆಯಿತು.

ಮುಂದೇನು ಮಾಡಬೇಕು, ಯಾವ ರೀತಿ ಪಾದಯಾತ್ರೆ ಮಾಡಬೇಕೆಂದು ಚರ್ಚೆ ನಡೆಯಿತು. ಈಗಾಗಲೇ ಪಾದಯಾತ್ರೆ ಹೆಸರನ್ನ ಬಿಟ್ಟು ವಾಕ್ ಫಾರ್ ವಾಟರ್ ಎಂದಿರೋ ಡಿಕೆಶಿ, ಸಿದ್ದರಾಮಯ್ಯ ಜತೆ ಸರ್ಕಾರಕ್ಕೆ ಠಕ್ಕರ್ ಕೊಡಲು ಚರ್ಚೆ ನಡೆಸಿದ್ದಾರೆ.

ಈ ಚರ್ಚೆ ಮುಗಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಸಂಜೆ 5 ಗಂಟೆಗೆ ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪಾದಯಾತ್ರೆ ಸಂಬಂಧ ಕಾಂಗ್ರೆಸ್ ನಾಯಕರು ಕೈಗೊಂಡಿರುವ ನಿಲುವು ಇಲ್ಲಿ ಪ್ರಕಟವಾಗಲಿದೆ.

ಓದಿ: ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.