ETV Bharat / state

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಎನ್​​ಪಿಎ ಹೆಚ್ಚಳ... ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದ ಆರ್​ಬಿಐ - Shree Guru Raghavendra Co-operative Bank

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್​​ನ ಎನ್​ಪಿಎ ಹೆಚ್ಚಿದನ್ನು ಗಮನಿಸಿ, ಆರ್​​ಬಿಐ ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದೆ.

Shree Guru Raghavendra Co-operative Bank
Shree Guru Raghavendra Co-operative Bank
author img

By

Published : Jan 14, 2020, 5:46 PM IST

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ, ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ.

ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದ್ದು, ಬ್ಯಾಂಕಿನ ಗ್ರಾಹಕರು ಎಷ್ಟೇ ಠೇವಣಿ ಇಟ್ಟಿದ್ದರೂ, ಮುಂದಿನ ಸೂಚನೆವರೆಗೂ ಕೇವಲ 35,000 ರೂಪಾಯಿ ಅಷ್ಟೇ ಹಿಂಪಡೆಯಬಹುದು.

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಎನ್​​ಪಿಎ ಹೆಚ್ಚಳ

ಸದ್ಯಕ್ಕೆ ಈಗ ಬ್ಯಾಂಕ್ ಆಡಳಿತ ಮಂಡಳಿ ನಗರದ ಆರ್​ಬಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಹೇರಿದ ನಿರ್ಬಂಧಗಳನ್ನು ಸಡಿಲಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಮಾಡುತ್ತಿದೆ. ಸಭೆಯ ನಂತರ ಬ್ಯಾಂಕ್ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬ್ಯಾಂಕ್​ನ ಗ್ರಾಹಕರಾದ ರಾಮಚಂದ್ರು ಮಾತನಾಡಿ, ನಮಗೆ ಬ್ಯಾಂಕ್ ಮೇಲೆ ಪೂರ್ಣ ವಿಶ್ವಾಶವಿದೆ. ನಾನು 7 ಲಕ್ಷ ರೂಪಾಯಿ ಠೇವಣಿಯನ್ನು ಇಟ್ಟಿದ್ದೇನೆ. ಸಮಯಕ್ಕೆ ಸರಿಯಾಗಿ ಬ್ಯಾಂಕ್ ಬಡ್ಡಿಯನ್ನು ನೀಡುತ್ತಿತ್ತು. ಕೆಲ ತಪ್ಪುಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ, ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ.

ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದ್ದು, ಬ್ಯಾಂಕಿನ ಗ್ರಾಹಕರು ಎಷ್ಟೇ ಠೇವಣಿ ಇಟ್ಟಿದ್ದರೂ, ಮುಂದಿನ ಸೂಚನೆವರೆಗೂ ಕೇವಲ 35,000 ರೂಪಾಯಿ ಅಷ್ಟೇ ಹಿಂಪಡೆಯಬಹುದು.

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಎನ್​​ಪಿಎ ಹೆಚ್ಚಳ

ಸದ್ಯಕ್ಕೆ ಈಗ ಬ್ಯಾಂಕ್ ಆಡಳಿತ ಮಂಡಳಿ ನಗರದ ಆರ್​ಬಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಹೇರಿದ ನಿರ್ಬಂಧಗಳನ್ನು ಸಡಿಲಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಮಾಡುತ್ತಿದೆ. ಸಭೆಯ ನಂತರ ಬ್ಯಾಂಕ್ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬ್ಯಾಂಕ್​ನ ಗ್ರಾಹಕರಾದ ರಾಮಚಂದ್ರು ಮಾತನಾಡಿ, ನಮಗೆ ಬ್ಯಾಂಕ್ ಮೇಲೆ ಪೂರ್ಣ ವಿಶ್ವಾಶವಿದೆ. ನಾನು 7 ಲಕ್ಷ ರೂಪಾಯಿ ಠೇವಣಿಯನ್ನು ಇಟ್ಟಿದ್ದೇನೆ. ಸಮಯಕ್ಕೆ ಸರಿಯಾಗಿ ಬ್ಯಾಂಕ್ ಬಡ್ಡಿಯನ್ನು ನೀಡುತ್ತಿತ್ತು. ಕೆಲ ತಪ್ಪುಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Intro:ಬೈಟ್: ರಾಮಚಂದ್ರು, ಬ್ಯಾಂಕ್ ಗ್ರಾಹಕ


Body:ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹೆಚ್ಚಿದ ಎನ್ ಪಿ ಎ: 35,000 ರೂಪಾಯಿ ಮಾತ್ರ ಹಿಂಪಡೆಯಲು ಬ್ಯಾಂಕ್ ಗ್ರಾಹಕರಿಗೆ ಅವಕಾಶ

ಬೆಂಗಳೂರು: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನ ಎನ್ ಪಿ ಎ ಹೆಚ್ಚಿದನ್ನು ಗಮನಿಸಿ ಆರ್ ಬಿ ಐ ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದೆ.

ಆರ್ ಬಿ ಐ ನಿರ್ಬಂಧ ಪ್ರಕಾರ ಬ್ಯಾಂಕಿನ ಗ್ರಾಹಕರು ಎಷ್ಟೇ ಠೇವಣಿ ಇಟ್ಟಿದ್ದರು ಮುಂದಿನ ಸೂಚನೆ ವರೆಗೂ ಕೇವಲ 35,000 ರೂಪಾಯಿ ಅಷ್ಟೇ ಹಿಂಪಡೆಯಬಹುದು (ವಿತ್ಡ್ರಾ). ಇಷ್ಟೇ ಅಲ್ಲದೆ ಎಲ್ಲಾ ವ್ಯವಹಾರಗಳ ಮೇಲೆ ಆರ್ ಬಿ ಐ ನಿರ್ಬಂಧಗಳನ್ನು ಹೇರಿದೆ.

ಸದ್ಯಕ್ಕೆ ಈಗ ಬ್ಯಾಂಕ್ ಆಡಳಿತ ಮಂಡಳಿ ನಗರದ ಆರ್ ಬಿ ಐ ಕಚೇರಿಯಲ್ಲಿ ಆರ್ ಬಿ ಐ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಹೇರಿದ ನಿರ್ಬಂಧಗಳನ್ನು ಸಾಡಿಲಿಕೆ ಮಾಡಲು ಮನವಿಯನ್ನು ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಮಾಡುತ್ತಿದೆ. ಸಭೆಯ ನಂತರ ಬ್ಯಾಂಕ್ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆದಲಿದ್ದಾರೆ ಎಂದು ಹೇಳಿವೆ.

ಇದೆ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಾದ ರಾಮಚಂದ್ರು ಮಾತನಾಡಿ ನಮಗೆ ಬ್ಯಾಂಕ್ ಮೇಲೆ ಪೂರ್ಣ ವಿಶ್ವಾಶವಿದೆ, ನಾನು 7 ಲಕ್ಷ ರೂಪಾಯಿ ಠೇವಣಿಯನ್ನು ಇಟ್ಟಿದ್ದೇನೆ ಸಮಯಕ್ಕೆ ಸರಿಯಾಗಿ ಬಡ್ಡಿ ಬ್ಯಾಂಕ್ ನೀಡುತ್ತಿತ್ತು. ಕೆಲ ತಪ್ಪುಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.