ETV Bharat / state

ರಾಜಧಾನಿಯಲ್ಲಿ ಹೆಚ್ಚಾದವು 'ಉಂಡ ಮನೆಗೆ ಕನ್ನ' ಹಾಕುವ ಕೃತ್ಯಗಳು: ಶೇ.133ರಷ್ಟು ಏರಿಕೆ! - ಲಾಕ್​ಡೌನ್​ ವೇಳೆ ಹೆಚ್ಚಾದ ಅಪರಾಧ ಪ್ರಕರಣ

ಕಳೆದ ವರ್ಷದ ಕೋವಿಡ್‌ ಲಾಕ್‌ಡೌನ್‌ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಈ ವೇಳೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯುವಕ-ಯುವತಿಯರು ಕೆಲಸ ಕಳೆದುಕೊಂಡಿದ್ದರು. ಈ ಪೈಕಿ ಕೆಲವರು ಬದುಕಿನ ಬಂಡಿ ಸಾಗಿಸಲು ವಾಮ ಮಾರ್ಗದ ಮೊರೆ ಹೋಗಿ ಕೆಲಸ ಮಾಡುವ ಸ್ಥಳದಲ್ಲೇ ಮಾಲೀಕರ ಗಮನಕ್ಕೆ ಬಾರದೆ ನಗ-ನಾಣ್ಯ ದೋಚಿರುವ ಅನೇಕ ಪ್ರಕರಣಗಳು ನಡೆದಿವೆ.

ರಾಜಧಾನಿಯಲ್ಲಿ ಕಳೆದ ವರ್ಷ ಸರ್ವೆಂಟ್ಸ್ ಥೆಫ್ಟ್ ಪ್ರಕರಣ ಶೇ.133ರಷ್ಟು ಹೆಚ್ಚಳ
ರಾಜಧಾನಿಯಲ್ಲಿ ಕಳೆದ ವರ್ಷ ಸರ್ವೆಂಟ್ಸ್ ಥೆಫ್ಟ್ ಪ್ರಕರಣ ಶೇ.133ರಷ್ಟು ಹೆಚ್ಚಳ
author img

By

Published : Jan 10, 2022, 3:56 PM IST

Updated : Jan 10, 2022, 4:55 PM IST

ಬೆಂಗಳೂರು: ಕಳೆದ ವರ್ಷ ಕೋವಿಡ್‌-19 ಎರಡನೇ ಅಲೆಯಿಂದ ಜಾರಿಯಾದ ಲಾಕ್‌ಡೌನ್​​ನಿಂದಾಗಿ ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಅದೆಷ್ಟೋ ಕುಟುಂಬಗಳು ತತ್ತರಿಸಿಹೋಗಿದ್ದವು. ಕೈಯಲ್ಲಿ ದುಡ್ಡಿಲ್ಲದೆ ಕೆಲಸ ಮಾಡುವ ಮಾಲೀಕರ ಮನೆಗಳು ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಕಳೆದ ವರ್ಷ ರಾಜಧಾನಿ ಬೆಂಗಳೂರಿನಲ್ಲಿ 195 ಸೇವಕ ಕಳ್ಳತನ ಪ್ರಕರಣಗಳು ವರದಿಯಾದರೆ, ಈ ಪೈಕಿ 95 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂಕಿ-ಸಂಖ್ಯೆ
ಅಂಕಿ-ಸಂಖ್ಯೆ

2020ರಲ್ಲಿ ದಾಖಲಾದ 195 ಪ್ರಕರಣಗಳ ಪೈಕಿ 65 ಪ್ರಕರಣಗಳು ಬಗೆಹರಿದಿವೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇ.133ರಷ್ಟು ಸರ್ವೆಂಟ್ಸ್‌ ಥೆಪ್ಟ್ ಕೇಸ್‌ಗಳು ಅಧಿಕವಾಗಿವೆ. ಅದೇ ರೀತಿ ಸಾಮಾನ್ಯ ಕಳ್ಳತನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ.

ಕಳೆದ ವರ್ಷ 1170 ಸಾಮಾನ್ಯ ಕಳ್ಳತನ ಪ್ರಕರಣಗಳು ವರದಿಯಾದರೆ 343 ಕೇಸ್‌ಗಳನ್ನು ಮಾತ್ರ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಪ್ರಕರಣಗಳು ಶೇ.156ರಷ್ಟು ಏರಿಕೆಯಾಗಿವೆ. 2020ರಲ್ಲಿ 749 ಕೇಸ್‌ಗಳ ಪೈಕಿ 242 ಕೇಸ್‌ಗಳನ್ನು ಪೊಲೀಸರು ಬಗೆಹರಿಸಿದ್ದರು.

ಪೊಲೀಸ್​ ಆಯುಕ್ತರಿಂದ ವಿವರಣೆ

ಲಾಕ್‌ಡೌನ್‌ ಸಾವಿರಾರು ಸಂಖ್ಯೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮೇಲಿನ‌‌ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಲಕ್ಷಾಂತರ ಯುವಕ-ಯುವತಿಯರು ಕೆಲಸ ಕಳೆದುಕೊಂಡಿದ್ದರು. ಈ ಪೈಕಿ ಕೆಲವರು ಬದುಕಿನ ಬಂಡಿ ಸಾಗಿಸಲು ವಾಮ ಮಾರ್ಗದ ಮೊರೆ ಹೋಗಿ ಕೆಲಸ ಮಾಡುವ ಸ್ಥಳದಲ್ಲೇ ಮಾಲೀಕರ ಗಮನಕ್ಕೆ ಬಾರದೆ ನಗ-ನಾಣ್ಯ ದೋಚಿದ್ದರು. ಮತ್ತೊಂದೆಡೆ, ಗಂಡ-ಹೆಂಡತಿ ಕೆಲಸಕ್ಕೆ ಹೋಗುವವರ ಹಾಗೂ ಉನ್ನತ ಹುದ್ದೆಯಲ್ಲಿರುವ ಮನೆಗಳಲ್ಲಿ ನಿಯೋಜಿಸಲಾಗಿದ್ದ ಮನೆಕೆಲಸಗಾರರಿಂದಲೇ ಕಳ್ಳತನ ನಡೆದಿತ್ತು.

'ಅನ್ಯ ರಾಜ್ಯ ಅಥವಾ ಬೇರೆ ಬೇರೆ ಜಿಲ್ಲೆಗಳಿಂದ ಬಂದು ನಗರದಲ್ಲಿ ನೆಲೆ ಕಟ್ಟಿಕೊಂಡಿರುವವರು ಸರ್ವೆಂಟ್ ಥೆಫ್ಟ್‌ನಲ್ಲಿ ಭಾಗಿಯಾಗಿ ತಮ್ಮ ತಮ್ಮ ಊರುಗಳಿಗೆ ಪರಾರಿ ಆಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಖದೀಮರನ್ನು ಬಂಧಿಸುವುದು ಕಷ್ಟವಾಗಿತ್ತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರು: ಕಳೆದ ವರ್ಷ ಕೋವಿಡ್‌-19 ಎರಡನೇ ಅಲೆಯಿಂದ ಜಾರಿಯಾದ ಲಾಕ್‌ಡೌನ್​​ನಿಂದಾಗಿ ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಅದೆಷ್ಟೋ ಕುಟುಂಬಗಳು ತತ್ತರಿಸಿಹೋಗಿದ್ದವು. ಕೈಯಲ್ಲಿ ದುಡ್ಡಿಲ್ಲದೆ ಕೆಲಸ ಮಾಡುವ ಮಾಲೀಕರ ಮನೆಗಳು ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಕಳೆದ ವರ್ಷ ರಾಜಧಾನಿ ಬೆಂಗಳೂರಿನಲ್ಲಿ 195 ಸೇವಕ ಕಳ್ಳತನ ಪ್ರಕರಣಗಳು ವರದಿಯಾದರೆ, ಈ ಪೈಕಿ 95 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂಕಿ-ಸಂಖ್ಯೆ
ಅಂಕಿ-ಸಂಖ್ಯೆ

2020ರಲ್ಲಿ ದಾಖಲಾದ 195 ಪ್ರಕರಣಗಳ ಪೈಕಿ 65 ಪ್ರಕರಣಗಳು ಬಗೆಹರಿದಿವೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇ.133ರಷ್ಟು ಸರ್ವೆಂಟ್ಸ್‌ ಥೆಪ್ಟ್ ಕೇಸ್‌ಗಳು ಅಧಿಕವಾಗಿವೆ. ಅದೇ ರೀತಿ ಸಾಮಾನ್ಯ ಕಳ್ಳತನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ.

ಕಳೆದ ವರ್ಷ 1170 ಸಾಮಾನ್ಯ ಕಳ್ಳತನ ಪ್ರಕರಣಗಳು ವರದಿಯಾದರೆ 343 ಕೇಸ್‌ಗಳನ್ನು ಮಾತ್ರ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಪ್ರಕರಣಗಳು ಶೇ.156ರಷ್ಟು ಏರಿಕೆಯಾಗಿವೆ. 2020ರಲ್ಲಿ 749 ಕೇಸ್‌ಗಳ ಪೈಕಿ 242 ಕೇಸ್‌ಗಳನ್ನು ಪೊಲೀಸರು ಬಗೆಹರಿಸಿದ್ದರು.

ಪೊಲೀಸ್​ ಆಯುಕ್ತರಿಂದ ವಿವರಣೆ

ಲಾಕ್‌ಡೌನ್‌ ಸಾವಿರಾರು ಸಂಖ್ಯೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮೇಲಿನ‌‌ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಲಕ್ಷಾಂತರ ಯುವಕ-ಯುವತಿಯರು ಕೆಲಸ ಕಳೆದುಕೊಂಡಿದ್ದರು. ಈ ಪೈಕಿ ಕೆಲವರು ಬದುಕಿನ ಬಂಡಿ ಸಾಗಿಸಲು ವಾಮ ಮಾರ್ಗದ ಮೊರೆ ಹೋಗಿ ಕೆಲಸ ಮಾಡುವ ಸ್ಥಳದಲ್ಲೇ ಮಾಲೀಕರ ಗಮನಕ್ಕೆ ಬಾರದೆ ನಗ-ನಾಣ್ಯ ದೋಚಿದ್ದರು. ಮತ್ತೊಂದೆಡೆ, ಗಂಡ-ಹೆಂಡತಿ ಕೆಲಸಕ್ಕೆ ಹೋಗುವವರ ಹಾಗೂ ಉನ್ನತ ಹುದ್ದೆಯಲ್ಲಿರುವ ಮನೆಗಳಲ್ಲಿ ನಿಯೋಜಿಸಲಾಗಿದ್ದ ಮನೆಕೆಲಸಗಾರರಿಂದಲೇ ಕಳ್ಳತನ ನಡೆದಿತ್ತು.

'ಅನ್ಯ ರಾಜ್ಯ ಅಥವಾ ಬೇರೆ ಬೇರೆ ಜಿಲ್ಲೆಗಳಿಂದ ಬಂದು ನಗರದಲ್ಲಿ ನೆಲೆ ಕಟ್ಟಿಕೊಂಡಿರುವವರು ಸರ್ವೆಂಟ್ ಥೆಫ್ಟ್‌ನಲ್ಲಿ ಭಾಗಿಯಾಗಿ ತಮ್ಮ ತಮ್ಮ ಊರುಗಳಿಗೆ ಪರಾರಿ ಆಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಖದೀಮರನ್ನು ಬಂಧಿಸುವುದು ಕಷ್ಟವಾಗಿತ್ತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

Last Updated : Jan 10, 2022, 4:55 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.