ETV Bharat / state

ಸಂಶೋಧಕ ಚಿಮು ಇನ್ನಿಲ್ಲ... ಆದರೆ ಅವರ ಸಾಧನೆ, ಸಂಶೋಧನೆಯ ಹಾದಿ ಹೀಗಿತ್ತು - ಹಿರಿಯ ಸಂಶೋಧಕ ಚಿದಾನಂದಮೂರ್ತಿ ನಿಧನ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಡಾ. ಚಿದಾನಂದ ಮೂರ್ತಿ ಶನಿವಾರ ನಸುಕಿನ ಜಾವ 4 ಗಂಟೆಗೆ ನಿಧರಾಗಿದ್ದು, ಕನ್ನಡ ಸಾಹಿತ್ಯ, ಸಂಶೋಧನೆ ಸೇರಿದಂತೆ ವಿವಿಧ ವಲಯಗಳಿಗೆ ತುಂಬಲಾರದ ನಷ್ಟವಾಗಿದೆ.

Senior Researcher Chidananda Murthy passed away
ರಾಜಕೀಯ ಗಣ್ಯರ ನಮನ
author img

By

Published : Jan 11, 2020, 8:14 AM IST

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ 10 ಮೇ 1931ರಲ್ಲಿ ಚಿದಾನಂದ ಮೂರ್ತಿಯವರು ಜನಿಸಿದರು. ಕನ್ನಡ ಲೇಖಕ, ವಿದ್ವಾಂಸ, ಸಂಶೋಧಕ ಹಾಗೂ ಇತಿಹಾಸ ತಜ್ಞರಾಗಿದ್ದರು.

Senior Researcher Chidananda Murthy passed away
ರಾಜಕೀಯ ಗಣ್ಯರ ನಮನ

ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗೂ ಕನ್ನಡ ಭಾಷೆಗ ಶಾಸ್ತ್ರೀಯ ಸ್ಥಾನ ಗಳಿಸಲು ಇವರು ಮಾಡಿದ ಚಳವಳಿ ಅನನ್ಯ. 1952ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಎಂ.ಎ ಪದವಿ ಪೂರ್ಣಗೊಳಿಸಿದ ಇವರು, ಕುವೆಂಪು, ಪುತೀನ ಹಾಗೂ ರಾಘವಾಚಾರರ ಪ್ರಭಾವಕ್ಕೊಳಗಾಗಿದ್ದರು.

1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1968ರ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.

10 ಅಕ್ಟೋಬರ್​1990ರಲ್ಲಿ ಸ್ವಯಂ ಸೇವಾ ನಿವೃತ್ತಿ ಪಡೆದರು. ಅಮೆರಿಕಾ, ಇಂಗ್ಲೆಂಡ್​, ಇಟಲಿ ಸೇರಿದಂತೆ ಮುಂತಾದ ದೇಶ ಸುತ್ತಿದ್ದು, ವಿಶ್ವಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನದಲ್ಲಿ ಪ್ರಬಂಧ ಕೂಡಾ ಮಂಡಿಸಿದ್ದಾರೆ.

25ಕ್ಕೂ ಹೆಚ್ಚು ಪುಸ್ತಕ ಹಾಗೂ 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನು ಪ್ರಕಟಿಸಿದ್ದಾರೆ. 4 ದಶಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1965ರಲ್ಲಿ ವಿಜ್ಞಾನದ ಮೂಲತತ್ವಗಳು, 1981ರಲ್ಲಿ ವಾಗಾರ್ಥ ಎಂಬ ಎರಡು ಮುಖ್ಯವಾದ ಭಾಷಾ ಸಂಬಂಧವಾದ ಕೃತಿಗಳು ಪ್ರಕಟ ಮಾಡಿದ್ದರು.

ಚಿಮೂ ಅವರ ಕೃತಿಗಳು
ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ ಪ್ರಕಾಶನ (2000)
ವಾಗಾರ್ಥ: ಬಪ್ಕೋ ಪ್ರಕಾಶನ (1981)
ವಚನ ಸಾಹಿತ್ಯ (1975)
ಸಂಶೋಧನಾ ತರಂಗ ಸರಸ: ಸಾಹಿತ್ಯ ಪ್ರಕಾಶನ (1966)
ಪುರಾಣ ಸೂರ್ಯ ಗ್ರಹಣ: ಐಬಿಹೆಚ್ ಪ್ರಕಾಶನ (1982)
ಹೀಗೆ ಹತ್ತು ಹಲವು ಕೃತಿಗಳನ್ನು ನೀಡಿದ್ದಾರೆ.

ಪ್ರಶಸ್ತಿಗಳು:
ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಹೊಸತ ಹೊಸತು ಕೃತಿ), ಪಂಪ ಪ್ರಶಸ್ತಿ. ಆಳ್ವಾಸ್​ ನುಡಿಸಿರಿ ಪ್ರಶಸ್ತಿ

ಚಿಮೂಗೆ ಅಂತಿಮ ನಮನ: ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದವರು. ವಿಶೇಷವಾಗಿ ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ಎಂ.ಚಿದಾನಂದಮೂರ್ತಿ ಕಾರ್ಯನಿರ್ವಹಿಸಿದವರು.

ಶನಿವಾರ 4 ಗಂಟೆ ನಸುಕಿನ ಜಾವ ನಿಧನರಾದರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸ್ವಗೃಹಕ್ಕೆ ತರಲಾಗಿದೆ. ರಾಜಕೀಯ ಗಣ್ಯರು, ಹಿರಿಯ ಸಾಹಿತಿಗಳು ಚಿಮೂ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ 10 ಮೇ 1931ರಲ್ಲಿ ಚಿದಾನಂದ ಮೂರ್ತಿಯವರು ಜನಿಸಿದರು. ಕನ್ನಡ ಲೇಖಕ, ವಿದ್ವಾಂಸ, ಸಂಶೋಧಕ ಹಾಗೂ ಇತಿಹಾಸ ತಜ್ಞರಾಗಿದ್ದರು.

Senior Researcher Chidananda Murthy passed away
ರಾಜಕೀಯ ಗಣ್ಯರ ನಮನ

ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗೂ ಕನ್ನಡ ಭಾಷೆಗ ಶಾಸ್ತ್ರೀಯ ಸ್ಥಾನ ಗಳಿಸಲು ಇವರು ಮಾಡಿದ ಚಳವಳಿ ಅನನ್ಯ. 1952ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಎಂ.ಎ ಪದವಿ ಪೂರ್ಣಗೊಳಿಸಿದ ಇವರು, ಕುವೆಂಪು, ಪುತೀನ ಹಾಗೂ ರಾಘವಾಚಾರರ ಪ್ರಭಾವಕ್ಕೊಳಗಾಗಿದ್ದರು.

1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1968ರ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.

10 ಅಕ್ಟೋಬರ್​1990ರಲ್ಲಿ ಸ್ವಯಂ ಸೇವಾ ನಿವೃತ್ತಿ ಪಡೆದರು. ಅಮೆರಿಕಾ, ಇಂಗ್ಲೆಂಡ್​, ಇಟಲಿ ಸೇರಿದಂತೆ ಮುಂತಾದ ದೇಶ ಸುತ್ತಿದ್ದು, ವಿಶ್ವಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನದಲ್ಲಿ ಪ್ರಬಂಧ ಕೂಡಾ ಮಂಡಿಸಿದ್ದಾರೆ.

25ಕ್ಕೂ ಹೆಚ್ಚು ಪುಸ್ತಕ ಹಾಗೂ 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನು ಪ್ರಕಟಿಸಿದ್ದಾರೆ. 4 ದಶಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1965ರಲ್ಲಿ ವಿಜ್ಞಾನದ ಮೂಲತತ್ವಗಳು, 1981ರಲ್ಲಿ ವಾಗಾರ್ಥ ಎಂಬ ಎರಡು ಮುಖ್ಯವಾದ ಭಾಷಾ ಸಂಬಂಧವಾದ ಕೃತಿಗಳು ಪ್ರಕಟ ಮಾಡಿದ್ದರು.

ಚಿಮೂ ಅವರ ಕೃತಿಗಳು
ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ ಪ್ರಕಾಶನ (2000)
ವಾಗಾರ್ಥ: ಬಪ್ಕೋ ಪ್ರಕಾಶನ (1981)
ವಚನ ಸಾಹಿತ್ಯ (1975)
ಸಂಶೋಧನಾ ತರಂಗ ಸರಸ: ಸಾಹಿತ್ಯ ಪ್ರಕಾಶನ (1966)
ಪುರಾಣ ಸೂರ್ಯ ಗ್ರಹಣ: ಐಬಿಹೆಚ್ ಪ್ರಕಾಶನ (1982)
ಹೀಗೆ ಹತ್ತು ಹಲವು ಕೃತಿಗಳನ್ನು ನೀಡಿದ್ದಾರೆ.

ಪ್ರಶಸ್ತಿಗಳು:
ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಹೊಸತ ಹೊಸತು ಕೃತಿ), ಪಂಪ ಪ್ರಶಸ್ತಿ. ಆಳ್ವಾಸ್​ ನುಡಿಸಿರಿ ಪ್ರಶಸ್ತಿ

ಚಿಮೂಗೆ ಅಂತಿಮ ನಮನ: ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದವರು. ವಿಶೇಷವಾಗಿ ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ಎಂ.ಚಿದಾನಂದಮೂರ್ತಿ ಕಾರ್ಯನಿರ್ವಹಿಸಿದವರು.

ಶನಿವಾರ 4 ಗಂಟೆ ನಸುಕಿನ ಜಾವ ನಿಧನರಾದರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸ್ವಗೃಹಕ್ಕೆ ತರಲಾಗಿದೆ. ರಾಜಕೀಯ ಗಣ್ಯರು, ಹಿರಿಯ ಸಾಹಿತಿಗಳು ಚಿಮೂ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Intro:Body:

[1/11, 7:17 AM] BNG DEEPA: ಸಂಶೋಧಕ, ಸಾಹಿತಿ *ಡಾ.ಚಿದಾನಂದಮೂರ್ತಿ (88 )ನಿಧನ*



ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಡಾ. ಚಿದಾನಂದಮೂರ್ತಿ ನಿಧನ

[1/11, 7:21 AM] BNG DEEPA: *ಸಚಿವ ಸುರೇಶ ಕುಮಾರ್ ಸಂತಾಪ*





ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಅತ್ಯಂತ ಧ್ಯೆರ್ಯವಾಗಿ ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಶ್ರೀ ಎಂ ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ.



ನಾಡಿಗೆ ಅವರ ಸೇವೆ ಅನನ್ಯ. ಅವರ ಬದುಕು, ವ್ಯಕ್ತಿತ್ವ,  ವಿಚಾರ ನಮಗೆ ಎಂದೆಂದಿಗೂ ಸ್ಪೂರ್ತಿದಾಯಕ.  ರಾಷ್ಟ್ರ ಓರ್ವ ಮಹಾನ್ ಪರಿಚಾರಕನನ್ನು ಕಳೆದುಕೊಂಡಿದೆ.  ಅತ್ಯಂತ ಸಜ್ಜನ ವ್ಯಕ್ತಿತ್ವದ ಚಿದಾನಂದಮೂರ್ತಿಗಳ ಆತ್ಮಕ್ಕೆ ಸದ್ಗತಿ ದೊರಕಲಿ.

[1/11, 7:22 AM] BNG DEEPA: ಲೇಖಕ, ಸಂಶೋಧಕ ಡಾ.ಚಿದಾನಂದಮೂರ್ತಿ ನಿಧನ. ಬೆಳಗ್ಗೆ 4 ಗಂಟೆ ವೇಳೆ ಕೊನೆಯುಸಿರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗುವುದು.

[1/11, 7:25 AM] BNG DEEPA: *ವಿಜಯೇಂದ್ರ*



ದೊಡ್ಡ ನಿಧಿಯೊಂದನ್ನು ನಾಡು ಕಳೆದುಕೊಂಡಿದೆ. ಕನ್ನಡ,ಕನ್ನಡಿಗರ ಇತಿಹಾಸದ ವಿಶ್ವಕೋಶ, ಹಿರಿಯ ಲೇಖಕ, ವಿದ್ವಾಂಸ, ಸಂಶೋಧಕ ಡಾ ಎಂ.ಚಿದಾನಂದಮೂರ್ತಿಯವರು ಇನ್ನಿಲ್ಲ ಎಂದು ತಿಳಿದು ತೀವ್ರ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಓಂ ಶಾಂತಿ🙏

[1/11, 7:26 AM] BNG DEEPA: ಅರವಿಂದ ಲಿಂಬಾವಲಿ





ಕನ್ನಡದ ಲೇಖಕ, ವಿದ್ವಾಂಸ, ಸಂಶೋದಕ ಹಾಗೂ ಇತಿಹಾಸ ತಜ್ಞ, ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ಚಳುವಳಿ ಕಟ್ಟಿದ್ದ ಮುತ್ಸದ್ದಿ, ನಾಡೋಜ ಡಾ.ಎಂ.ಚಿದಾನಂದಮೂರ್ತಿ ಅವರ ಅಗಲಿಕೆಯಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಖಃ ಸಹಿಸುವ ಶಕ್ತಿ ದೊರಕಲಿ.

ಓಂಶಾಂತಿ.

[1/11, 7:26 AM] BNG DEEPA: ಚಿದಾನಂದಮೂರ್ತಿಗಳು ೧೯೩೧ನೇ ಮೇ ೧೦ನೆಯ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಹುಟ್ಟಿದರು.

ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆದುವು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಇಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು.

ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹಾ ಪಡೆದರು (೧೯೫೩).

ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತೆ ರಜೆ ಹಾಕಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ೧೯೫೭ರಲ್ಲಿ ಗಳಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗು ರಾಘವಾಚಾರಂತ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಳಗಾದವರು. ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ೧೯೬೪ರಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.