ಬೆಂಗಳೂರು : ಬಾಣಸವಾಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬೀರೇಂದರ್ ಕುಮಾರ್ ಬಂಧಿತ ಅರೋಪಿ. ಹಲವು ವರ್ಷಗಳಿಂದ ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬೀರೇಂದರ್ ಕುಮಾರ್ ತಾನು ಕಾವಲು ಕಾಯುತ್ತಿದ್ದ ಮನೆಗಳಿಗೇ ಕನ್ನ ಹಾಕುತ್ತಿದ್ದ. ಕದ್ದ ಮಾಲುಗಳನ್ನ ಮಾರಲು ಹೋದಾಗ, ಈತನ ಮೇಲೆ ಅನುಮಾನ ಬಂದು, ಈತನನ್ನು ಬಂಧಿಸಲಾಗಿದೆ. ಇನ್ನು ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತ ನೀಡಿದ ಸುಳಿವಿನ ಮೇರೆಗೆ ಸುಮಾರು 13 ಲಕ್ಷ ರೂ ಬೆಲೆಬಾಳುವ 265 ಗ್ರಾಂ ಚಿನ್ನದ ಒಡವೆ ಮತ್ತು 2.700 ಕೆ.ಜಿ ಬೆಳ್ಳಿ ಒಡವೆಗಳನ್ನ ವಶಕ್ಕೆ ಪಡೆಯಲಾಗಿದೆ.
ಇನ್ನು ಇದರ ಜೊತೆಗೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಕನ್ನ ಕಳವು ಮತ್ತು ಮನೆಗಳ್ಳತನದ ಒಟ್ಟು 8 ಪ್ರಕರಣಗಳು ಕೂಡ ವಿಚಾರಣೆ ವೇಳೆ ಬಯಲಿಗೆ ಬಂದಿವೆ. ಈತನೊಂದಿಗೆ ಕಳ್ಳತನ ಮಾಡಲು ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ರಮೇಶ್ ಬಿಸ್ವಾಸ್ ಕರಮ್ ಸದ್ಯ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದು, ಈತನನ್ನು ಪತ್ತೆ ಮಾಡಲು ಪೊಲೀಸರು ಶೋಧಕಾರ್ಯ ಮುಂದುವರೆದಿದೆ.
ಓದಿ : 'ಹತ್ತು ರೂಪಾಯಿ ಡಾಕ್ಟರ್'.. 76ರ ಇಳಿ ವಯಸ್ಸಿನಲ್ಲಿಯೂ ದಣಿವರಿಯದ ಸೇವೆ..