ETV Bharat / state

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ಮಾಪಕ, ನಟ ಕೋವಿಡ್​ಗೆ ಬಲಿ

author img

By

Published : Apr 18, 2021, 8:08 PM IST

ಕೊರೊನಾ ಮಹಾಮಾರಿಗೆ ಸ್ಯಾಂಡಲ್​​ವುಡ್​ನ ನಟ ಹಾಗೂ ನಿರ್ಮಾಪಕರೊಬ್ಬರು ಬಲಿಯಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ - 2 ಸಿನಿಮಾ ನಿರ್ಮಾಣ ಮಾಡಿದ್ದ ಅರ್ಜುನ್ ಮಂಜುನಾಥ್ ಸೋಂಕಿನಿಂದ ಇಂದು ಸಾವನ್ನಪ್ಪಿದ್ದಾರೆ.

sandalwood producer arjun manjunath died by corona
ಅರ್ಜುನ್ ಮಂಜುನಾಥ್ ಕೊರೊನಾ ಸೋಂಕಿನಿಂದ ಸಾವು

ಬೆಂಗಳೂರು: ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ - 2 ಮತ್ತು ಈಗ 0% ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್.ಮಂಜುನಾಥ್ (ಅರ್ಜುನ್ ಮಂಜುನಾಥ್) ಕೋವಿಡ್​ಗೆ ಬಲಿಯಾಗಿದ್ದಾರೆ.

sandalwood producer arjun manjunath died by corona
ಅರ್ಜುನ್ ಮಂಜುನಾಥ್ ಕೊರೊನಾ ಸೋಂಕಿನಿಂದ ಸಾವು

1 ವಾರದಿಂದನ್ನು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಮಂಜುನಾಥ್​​ಗೆ ಲಂಗ್ಸ್ ಬ್ಲಾಕ್ ಆಗಿ ಉಸಿರಾಟದ ತೊಂದರೆ ಉಂಟಾಗಿತ್ತು. ಐಸಿಯುನಿಂದ ಹೆಚ್ಚು ಆಮ್ಲಜನಕ ಪೂರೈಸುವ ವೆಂಟಿಲೇಟರ್​ಗೆ ಶಿಫ್ಟ್ ಮಾಡಲಾಗಿತ್ತು ಎಂದು 0% ಲವ್ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದರು. ವೆಂಟಿಲೇಟರ್​​ನಲ್ಲಿದ್ದಾಗ ಹಾರ್ಟ್ ಅಟ್ಯಾಕ್ ಉಂಟಾಗಿದೆ ಎಂದು ಮಾಹಿತಿ ನೀಡಿದರು. 3 ದಿನದಿಂದ ಜಯನಗರದ ಅಶೋಕ ಪಿಲ್ಲರ್ ಬಳಿಯಿರುವ ಬಿಗ್ ಹಾಸ್ಪಿಟಲ್ ದಾಖಲಾಗಿದ್ದರು ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಆರ್.ಆರ್ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದರು. ಇಲ್ಲಿಯ ತನಕ ಹಾಸ್ಪಿಟಲ್ ಹೋಗಿರಲಿಲ್ಲದ ಮಂಜುನಾಥ್​​ಗೆ ಕೋವಿಡ್ ಲಕ್ಷಣಗಳು ಮುಂಚೇನೂ ಕಾಣಿಸಿಕೊಂಡಿತ್ತು. ಆದರೆ ಮೊದಲು ಅಷ್ಟು ಗಮನಹರಿಸಿರಲಿಲ್ಲ ಎಂದು ನಿರ್ಮಾಪಕ ತಿಳಿಸಿದರು.

ಫುಡ್ ಕಿಟ್, ದಿನಸಿ ವಿತರಣೆ ಹೀಗೆ ಕೋವಿಡ್ ಲಾಕ್​ಡೌನ್​​ನಲ್ಲಿ ಸಮಾಜಮುಖಿಯಾಗಿ ಸೇವೆ ಮಾಡಿದ್ದರು. ಸುಮಾರು 5000 ಜನರಿಗೆ ರೇಷನ್, ತರಕಾರಿ ವಿತರಿಸಿದ್ದರು. ಆತ ತುಂಬಾ ಒಳ್ಳೆಯ ಮನುಷ್ಯ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು ಎಂದು ನೆನೆದರು.

ಉತ್ತರ ಕನ್ನಡ ಪ್ರವಾಹ ಸಮಯದಲ್ಲಿ ರೇಷನ್, ಬಟ್ಟೆ ಹಂಚಿದ್ದರು. ಜೂನ್ 22 ಮಂಜುನಾಥ್ ಬರ್ತ್ ಡೇ ಇತ್ತು. 0% ಲವ್ ಫಿಲಂ ರಿಲೀಸ್ ಪ್ಲಾನ್ ಮಾಡಿದ್ದೆವು ಎಂದು ಕೃಷ್ಣಮೂರ್ತಿ ತಿಳಿಸಿದರು. ಡಾ. ಡಿ.ಎಸ್.ಮಂಜುನಾಥ್ ಅವರ ಅಂತಿಮ ವಿಧಿ ವಿಧಾನವನ್ನು ಬೆಂಗಳೂರು ಗ್ರಾಮೀಣ ದೊಡ್ಡೇರಿ ಗ್ರಾಮದ ಚಿತಾಗಾರದಲ್ಲಿ ನೆರವೇರಿಸಲಾಗಿದೆ.

ಬೆಂಗಳೂರು: ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ - 2 ಮತ್ತು ಈಗ 0% ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್.ಮಂಜುನಾಥ್ (ಅರ್ಜುನ್ ಮಂಜುನಾಥ್) ಕೋವಿಡ್​ಗೆ ಬಲಿಯಾಗಿದ್ದಾರೆ.

sandalwood producer arjun manjunath died by corona
ಅರ್ಜುನ್ ಮಂಜುನಾಥ್ ಕೊರೊನಾ ಸೋಂಕಿನಿಂದ ಸಾವು

1 ವಾರದಿಂದನ್ನು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಮಂಜುನಾಥ್​​ಗೆ ಲಂಗ್ಸ್ ಬ್ಲಾಕ್ ಆಗಿ ಉಸಿರಾಟದ ತೊಂದರೆ ಉಂಟಾಗಿತ್ತು. ಐಸಿಯುನಿಂದ ಹೆಚ್ಚು ಆಮ್ಲಜನಕ ಪೂರೈಸುವ ವೆಂಟಿಲೇಟರ್​ಗೆ ಶಿಫ್ಟ್ ಮಾಡಲಾಗಿತ್ತು ಎಂದು 0% ಲವ್ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದರು. ವೆಂಟಿಲೇಟರ್​​ನಲ್ಲಿದ್ದಾಗ ಹಾರ್ಟ್ ಅಟ್ಯಾಕ್ ಉಂಟಾಗಿದೆ ಎಂದು ಮಾಹಿತಿ ನೀಡಿದರು. 3 ದಿನದಿಂದ ಜಯನಗರದ ಅಶೋಕ ಪಿಲ್ಲರ್ ಬಳಿಯಿರುವ ಬಿಗ್ ಹಾಸ್ಪಿಟಲ್ ದಾಖಲಾಗಿದ್ದರು ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಆರ್.ಆರ್ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದರು. ಇಲ್ಲಿಯ ತನಕ ಹಾಸ್ಪಿಟಲ್ ಹೋಗಿರಲಿಲ್ಲದ ಮಂಜುನಾಥ್​​ಗೆ ಕೋವಿಡ್ ಲಕ್ಷಣಗಳು ಮುಂಚೇನೂ ಕಾಣಿಸಿಕೊಂಡಿತ್ತು. ಆದರೆ ಮೊದಲು ಅಷ್ಟು ಗಮನಹರಿಸಿರಲಿಲ್ಲ ಎಂದು ನಿರ್ಮಾಪಕ ತಿಳಿಸಿದರು.

ಫುಡ್ ಕಿಟ್, ದಿನಸಿ ವಿತರಣೆ ಹೀಗೆ ಕೋವಿಡ್ ಲಾಕ್​ಡೌನ್​​ನಲ್ಲಿ ಸಮಾಜಮುಖಿಯಾಗಿ ಸೇವೆ ಮಾಡಿದ್ದರು. ಸುಮಾರು 5000 ಜನರಿಗೆ ರೇಷನ್, ತರಕಾರಿ ವಿತರಿಸಿದ್ದರು. ಆತ ತುಂಬಾ ಒಳ್ಳೆಯ ಮನುಷ್ಯ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು ಎಂದು ನೆನೆದರು.

ಉತ್ತರ ಕನ್ನಡ ಪ್ರವಾಹ ಸಮಯದಲ್ಲಿ ರೇಷನ್, ಬಟ್ಟೆ ಹಂಚಿದ್ದರು. ಜೂನ್ 22 ಮಂಜುನಾಥ್ ಬರ್ತ್ ಡೇ ಇತ್ತು. 0% ಲವ್ ಫಿಲಂ ರಿಲೀಸ್ ಪ್ಲಾನ್ ಮಾಡಿದ್ದೆವು ಎಂದು ಕೃಷ್ಣಮೂರ್ತಿ ತಿಳಿಸಿದರು. ಡಾ. ಡಿ.ಎಸ್.ಮಂಜುನಾಥ್ ಅವರ ಅಂತಿಮ ವಿಧಿ ವಿಧಾನವನ್ನು ಬೆಂಗಳೂರು ಗ್ರಾಮೀಣ ದೊಡ್ಡೇರಿ ಗ್ರಾಮದ ಚಿತಾಗಾರದಲ್ಲಿ ನೆರವೇರಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.