ETV Bharat / state

ಮಗಳ ಮದ್ವೆ ನಂತರ ಸಿನಿಮಾಗಳಲ್ಲಿ ರವಿಚಂದ್ರನ್ ಬ್ಯುಸಿ, ರವಿ ಬೋಪಣ್ಣನ ಅವತಾರಕ್ಕೆ ರೆಡಿ

ಮಗಳ ಮದುವೆ ನಂತರ ರವಿಚಂದ್ರನ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರವಿ ಬೋಪಣ್ಣ ಹಾಗೂ ಮಲ್ಲ ಚಿತ್ರಗಳ ಶೂಟಿಂಗ್​ನಲ್ಲಿ ಕ್ರೇಜಿಸ್ಟಾರ್ ತೊಡಗಿಸಿಕೊಂಡಿದ್ದಾರೆ.

author img

By

Published : Aug 11, 2019, 2:49 PM IST

ravi

ಬೆಂಗಳೂರು: ಸ್ಯಾಂಡಲ್​ವುಡ್​ನ ಕನಸುಗಾರ ರವಿಚಂದ್ರನ್ ಮಗಳ ಮದುವೆ ನಂತರ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ಮಿಂಚಿದ್ದ ಕ್ರೇಜಿಸ್ಟಾರ್ ಈಗ ರವಿ ಬೋಪಣ್ಣನ ಅವತಾರಕ್ಕೆ ರೆಡಿಯಾಗಿದ್ದಾರೆ.

ಈ ವಿಷಯವನ್ನು ಕ್ರೇಜಿಸ್ಟಾರ್ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಧ್ಯಮಗಳ ಜೊತೆ ಹಂಚಿಕೊಂಡರು.

ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟನೆ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದು ಮಲ್ಲ ಚಿತ್ರ ತಂಡವೇ ಈ ಚಿತ್ರದಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ರವಿ ಬೋಪಣ್ಣ ಚಿತ್ರದಲ್ಲಿ ರವಿಮಾಮ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಲಿದ್ದು, ದೃಶ್ಯಾ ಚಿತ್ರದ ಸ್ಟೈಲ್​ನಲ್ಲೇ ಈ ಸಿನಿಮಾ ಮೂಡಿಬರಲಿದೆಯಂತೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ರವಿಚಂದ್ರನ್​

ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ಕಾವ್ಯ ಶೆಟ್ಟಿ ಈಗಾಗಲೇ ಫೈನಲ್ ಆಗಿದ್ದು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿ ರವಿಚಂದ್ರನ್ ಇದ್ದಾರೆ.

ಚಿತ್ರದ ಶೂಟಿಂಗ್ ಬಹುತೇಕ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಡೆಯಲಿದ್ದು, ಸುಮಾರು 40 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಲು ರಣಧೀರ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೇ ಬೋಪಣ್ಣ ಚಿತ್ರದಲ್ಲಿ ಹೆಬ್ಬುಲಿ ನಂತರ ಕಿಚ್ಚ ಸುದೀಪ್, ರವಿಚಂದ್ರನ್ ಅವರ ಜೊತೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈಗಾಗಲೇ ಕಿಚ್ಚ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದು ನೀವು ಯಾವಾಗ ಕರೆಯುತ್ತಿರೋ ಆವಾಗ ನಾನು ಬಂದು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸುದೀಪ್ ನನಗೆ ಭರವಸೆ ಕೊಟ್ಟಿದ್ದಾನೆ. ಅಲ್ಲದೆ ಆತ ನನಗೆ ಹಿರಿಯ ಮಗನಿದ್ದಂತೆ ಎಂದು ರವಿಮಾಮ ಪ್ರೀತಿಯಿಂದ ಹೇಳಿದರು.

ರವಿ ಬೋಪಣ್ಣ ಚಿತ್ರ ಆಗಲೇ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ಮಡಿಕೇರಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಚಿತ್ರದ ಶೂಟಿಂಗ್ ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ಹಾಕಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ರವಿಚಂದ್ರನ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು ಈಗಾಗಲೇ ಕಂಪೋಸ್ ಕೆಲಸ ಕಂಪ್ಲೀಟ್ ಆಗಿದೆ.

ಈ ಚಿತ್ರದಲ್ಲಿ ಮಲ್ಲ ಚಿತ್ರದ ರೀತಿಯಲ್ಲಿ ಸ್ನೇಹಿತರ ಹಾಡು ಇರಲಿದ್ದು ಚಿತ್ರದಲ್ಲಿ ಸ್ನೇಹಿತನಾಗಿ ನಟ ಮೋಹನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನು ಅವರೇ ಬರೆಯುತ್ತಿದ್ದಾರೆ ಎಂದು ಕ್ರೇಜಿಸ್ಟಾರ್ ತಿಳಿಸಿದರು. ಈ ಸಿನಿಮಾ ಗ್ಯಾರಂಟಿ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ಕ್ರೇಜಿಸ್ಟಾರ್ ಸಕತ್ ಹುಮ್ಮಸ್ಸಿನಿಂದಲೇ ತಿಳಿಸಿದ್ರು.

ಬೆಂಗಳೂರು: ಸ್ಯಾಂಡಲ್​ವುಡ್​ನ ಕನಸುಗಾರ ರವಿಚಂದ್ರನ್ ಮಗಳ ಮದುವೆ ನಂತರ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ಮಿಂಚಿದ್ದ ಕ್ರೇಜಿಸ್ಟಾರ್ ಈಗ ರವಿ ಬೋಪಣ್ಣನ ಅವತಾರಕ್ಕೆ ರೆಡಿಯಾಗಿದ್ದಾರೆ.

ಈ ವಿಷಯವನ್ನು ಕ್ರೇಜಿಸ್ಟಾರ್ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಧ್ಯಮಗಳ ಜೊತೆ ಹಂಚಿಕೊಂಡರು.

ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟನೆ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದು ಮಲ್ಲ ಚಿತ್ರ ತಂಡವೇ ಈ ಚಿತ್ರದಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ರವಿ ಬೋಪಣ್ಣ ಚಿತ್ರದಲ್ಲಿ ರವಿಮಾಮ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಲಿದ್ದು, ದೃಶ್ಯಾ ಚಿತ್ರದ ಸ್ಟೈಲ್​ನಲ್ಲೇ ಈ ಸಿನಿಮಾ ಮೂಡಿಬರಲಿದೆಯಂತೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ರವಿಚಂದ್ರನ್​

ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ಕಾವ್ಯ ಶೆಟ್ಟಿ ಈಗಾಗಲೇ ಫೈನಲ್ ಆಗಿದ್ದು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿ ರವಿಚಂದ್ರನ್ ಇದ್ದಾರೆ.

ಚಿತ್ರದ ಶೂಟಿಂಗ್ ಬಹುತೇಕ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಡೆಯಲಿದ್ದು, ಸುಮಾರು 40 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಲು ರಣಧೀರ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೇ ಬೋಪಣ್ಣ ಚಿತ್ರದಲ್ಲಿ ಹೆಬ್ಬುಲಿ ನಂತರ ಕಿಚ್ಚ ಸುದೀಪ್, ರವಿಚಂದ್ರನ್ ಅವರ ಜೊತೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈಗಾಗಲೇ ಕಿಚ್ಚ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದು ನೀವು ಯಾವಾಗ ಕರೆಯುತ್ತಿರೋ ಆವಾಗ ನಾನು ಬಂದು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸುದೀಪ್ ನನಗೆ ಭರವಸೆ ಕೊಟ್ಟಿದ್ದಾನೆ. ಅಲ್ಲದೆ ಆತ ನನಗೆ ಹಿರಿಯ ಮಗನಿದ್ದಂತೆ ಎಂದು ರವಿಮಾಮ ಪ್ರೀತಿಯಿಂದ ಹೇಳಿದರು.

ರವಿ ಬೋಪಣ್ಣ ಚಿತ್ರ ಆಗಲೇ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ಮಡಿಕೇರಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಚಿತ್ರದ ಶೂಟಿಂಗ್ ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ಹಾಕಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ರವಿಚಂದ್ರನ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು ಈಗಾಗಲೇ ಕಂಪೋಸ್ ಕೆಲಸ ಕಂಪ್ಲೀಟ್ ಆಗಿದೆ.

ಈ ಚಿತ್ರದಲ್ಲಿ ಮಲ್ಲ ಚಿತ್ರದ ರೀತಿಯಲ್ಲಿ ಸ್ನೇಹಿತರ ಹಾಡು ಇರಲಿದ್ದು ಚಿತ್ರದಲ್ಲಿ ಸ್ನೇಹಿತನಾಗಿ ನಟ ಮೋಹನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನು ಅವರೇ ಬರೆಯುತ್ತಿದ್ದಾರೆ ಎಂದು ಕ್ರೇಜಿಸ್ಟಾರ್ ತಿಳಿಸಿದರು. ಈ ಸಿನಿಮಾ ಗ್ಯಾರಂಟಿ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ಕ್ರೇಜಿಸ್ಟಾರ್ ಸಕತ್ ಹುಮ್ಮಸ್ಸಿನಿಂದಲೇ ತಿಳಿಸಿದ್ರು.

Intro:ಸ್ಯಾಂಡಲ್ವುಡ್ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ನಂತರ ಈಗ ಸಾಲು ಸಾಲು ಚಿತ್ರಗಳಲ್ಲಿ ಸಖತ್ ಬಿಜಿಯಾಗಿದ್ದಾರೆ. ರಾಜೇಂದ್ರ ಪೊನ್ನಪ್ಪ ಚಿತ್ರದ ಮುನ್ನವೇ ಈಗ ಕ್ರೇಜಿಸ್ಟಾರ್ ಮತ್ತೊಂದು ಬಿಗ್ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದಾರೆ. ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪ ನಾಗಿ ಮಿಂಚಿದ್ದ ಕ್ರೇಜಿಸ್ಟಾರ್ ಈಗ ರವಿ ಬೊಪ್ಪಣ್ಣನ ಅವತಾರಕ್ಕೆ ಕ್ರೇಜಿಸ್ಟಾರ್ ರೆಡಿಯುತ್ತಿದ್ದಾರೆ. ಇನ್ನು ಈ ವಿಷಯವನ್ನು ಇಂದು ಕ್ರೇಜಿಸ್ಟಾರ್ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ಮಾಡುವ ಮೂಲಕ ಮಾಧ್ಯಮಗಳ ಜೊತೆ ಹಂಚಿಕೊಂಡರು. ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟನೆ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದು ಮಲ್ಲ ಚಿತ್ರ ತಂಡವೇ ಈ ಚಿತ್ರದಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ಇನ್ನು ರವಿ ಬೋಪಣ್ಣ ಚಿತ್ರದಲ್ಲಿ ರವಿಮಾಮ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಲಿದ್ದು. ದುಶ್ಯಾ ಚಿತ್ರದ ಸ್ಟೈಲ್ನಲ್ಲಿ ಈ ಸಿನಿಮಾ ಮೂಡಿಬರಲಿದೆ ಅಂತೆ. ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕರು ಕಾವ್ಯ ಶೆಟ್ಟಿ ಈಗಾಗಲೇ ಫೈನಲ್ ಆಗಿದ್ದು ಮತ್ತೊಂದು ನಾಯಕಿಯ ಹುಡುಕಾಟದಲ್ಲಿ ಕ್ರೇಜಿಸ್ಟಾರ್ ಇದ್ದಾರೆ.




Body:ಏನೋ ಚಿತ್ರದ ಶೂಟಿಂಗ್ ಬಹುತೇಕ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಡೆಯಲಿದ್ದು ಸುಮಾರು 40 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ರಣಧೀರ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಬೋಪಣ್ಣ ಚಿತ್ರದಲ್ಲಿ ಹೆಬ್ಬುಲಿ ನಂತರ ಕಿಚ್ಚ ಸುದೀಪ್ ರವಿಚಂದ್ರನ್ ಅವರ ಜೊತೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈಗಾಗಲೇ ಕಿಚ್ಚ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ನೀವು ಯಾವಾಗ ಕರೆಯುತ್ತಿರೋ ನಾನು ಆವಾಗ ಬಂದು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸುದೀಪ್ ನನಗೆ ಭರವಸೆ ಕೊಟ್ಟಿದ್ದಾನೆ. ಅಲ್ಲದೆ ಕಿಚ್ಚ ಸುದೀಪ್ ನನಗೆ ಹಿರಿಯ ಮಗನಿದ್ದಂತೆ ಎಂದು ರವಿಮಾಮ ಪ್ರೀತಿಯಿಂದ ಕಿಚ್ಚನ ಬಗ್ಗೆ ಹೇಳಿದ್ದರು.


Conclusion:ಇನ್ನೂ ರವಿ ಬೋಪಣ್ಣ ಚಿತ್ರ ಆಗಲೇ ಶೂಟಿಂಗ್ ಆರಂಭವಾಗಬೇಕಿತ್ತು ಆದರೆ ಮಡಿಕೇರಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕ್ರೇಜಿಸ್ಟಾರ್ ಚಿತ್ರದ ಶೂಟಿಂಗ್ ಅನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ಹಾಕಿದ್ದೇನೆ. ಅಲ್ಲದೆ ಚಿತ್ರದಲ್ಲಿ ಮೂರು ಹಾಡುಗಳಿದ್ದು. ರವಿಚಂದ್ರನ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು ಈಗಾಗಲೇ ಕಂಪೋಸ್ ಕೆಲಸ ಕಂಪ್ಲೀಟ್ ಆಗಿದೆ. ಈ ಚಿತ್ರದಲ್ಲಿ ಮಲ್ಲ ಚಿತ್ರದ ರೀತಿಯಲ್ಲಿ ಸ್ನೇಹಿತನರ ಹಾಡು ಇದ್ದು ಚಿತ್ರದಲ್ಲಿ ಸ್ನೇಹಿತನಾಗಿ ನಟ ಮೋಹನ್ ನಟಿಸುತ್ತಿದ್ದಾರೆ ಅಲ್ಲದೆ ಚಿತ್ರಕ್ಕೆ ಸಂಭಾಷಣೆಯನ್ನು ಅವರೇ ಬರೆಯುತ್ತಿದ್ದಾರೆ ಎಂದು ಕ್ರೇಜಿಸ್ಟಾರ್ ತಿಳಿಸಿದರು. ಅಲ್ಲದೆ ಈ ಸಿನಿಮಾದಲ್ಲಿ ಗ್ಯಾರಂಟಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿ ಈ ಚಿತ್ರದ ಮೂಲಕ ಹಣವನ್ನು ಮಾಡಿ ತೋರಿಸ್ತೀನಿ ಎಂದು ಕ್ರೇಜಿಸ್ಟಾರ್ ಸಕ್ಕತ್ ಹುಮ್ಮಸ್ಸಿನಿಂದ ಲೆ ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.