ETV Bharat / state

ಆರ್​ಎಸ್​ಎಸ್​ಗೆ ಊಟ ಹಾಕಿಸಲು ನೀನೇನು ಟಾಟಾನಾ, ಬಿರ್ಲಾನಾ: ಡಿಕೆಶಿಗೆ ಅಶೋಕ್​ ಟಾಂಗ್​ - Bangalore news

ಸಂಘದವರಿಗೆ ನೀವೇನು ಊಟ ಹಾಕಿಸೋ ಅಗತ್ಯತೆ ಇಲ್ಲ. ಆ ನೈತಿಕತೆಯೂ ಮಾಜಿ ಸಚಿವ ಡಿ ಕೆ ಶಿವಕುಮಾರ್​ಗೆ ಇಲ್ಲ. ಡಿ.ಕೆ.ಶಿ ಹೇಳಿಕೆ ಅಹಂಕಾರದ ಪರಮಾವಧಿ ಎಂದು ಸಚಿವ ಆರ್​ ಅಶೋಕ್​ ಕಿಡಿಕಾರಿದ್ದಾರೆ.

R.Ashok
ಆರ್.ಅಶೋಕ್​
author img

By

Published : Feb 10, 2020, 12:44 PM IST

ಬೆಂಗಳೂರು: ಆರ್​ಎಸ್​ಎಸ್​ನವರಿಗೆ ಊಟ ಹಾಕ್ತೀವಿ ಅಂತಿರಲ್ಲ. ನೀನೇನು ಟಾಟಾನಾ, ಬಿರ್ಲಾನಾ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಜಿ ಸಚಿವ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧ ಮುಂಬಾಗ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್​

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದವರಿಗೆ ನೀವೇನು ಊಟ ಹಾಕಿಸೋ ಅಗತ್ಯತೆ ಇಲ್ಲ. ಆ ನೈತಿಕತೆಯೂ ನಿಮಗಿಲ್ಲ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ಅಹಂಕಾರದ ಪರಮಾವಧಿ. ಅವರು ಊಟ ಹಾಕುವುದಾದರೆ, ಈಗ ಹಲವು ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದಾರೆ. ಫುಟ್​ಪಾತ್​ನಲ್ಲಿರುವ ಕಾಂಗ್ರೆಸ್ ನವರಿಗೆ ಊಟ ಹಾಕಿಸಲಿ ಎಂದು ವಾಗ್ದಾಳಿ ನಡೆಸಿದರು.

ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಹೆದರಿದ್ದಾರೆ. ಅವರಿಗೆ ಈಗ ಉಳಿದುಕೊಂಡಿರುವುದು ಕನಕಪುರ ಕ್ಷೇತ್ರ ಒಂದೇ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಅಶೋಕ್​ ಟಾಂಗ್ ನೀಡಿದರು.

ಕಪಾಲಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ತೀವ್ರಗೊಂಡಿರೋದು ನಿಜ. ಒಂದೇ ಕೋಮಿಗೆ ಭೂಮಿ ಹಂಚಲಾಗುತ್ತಿದೆ. ಅಲ್ಲದೆ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ‌. ನಾವೆಲ್ಲ ಮುನೇಶ್ವರನ ಆರಾಧಕರು. ಡಿ.ಕೆ. ಶಿವಕುಮಾರ್ ಕೂಡ ಮುನೇಶ್ವರನ ಭಕ್ತರೇ. ಹಾಗಾಗಿ ಮುನೇಶ್ವರಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ‌. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಅಶೋಕ್​ ಸ್ಪಷ್ಟಪಡಿಸಿದರು.

ನಾನು ಕಂದಾಯ ಖಾತೆಯನ್ನು ಉಳಿಸಿಕೊಂಡು ಹೆಚ್ಚುವರಿಯಾಗಿರುವ ಪೌರಾಡಳಿತ ಖಾತೆಯನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಇದೇ ವೇಳೆ ಅಶೋಕ್​ ತಿಳಿಸಿದರು.

ಬೆಂಗಳೂರು: ಆರ್​ಎಸ್​ಎಸ್​ನವರಿಗೆ ಊಟ ಹಾಕ್ತೀವಿ ಅಂತಿರಲ್ಲ. ನೀನೇನು ಟಾಟಾನಾ, ಬಿರ್ಲಾನಾ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಜಿ ಸಚಿವ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧ ಮುಂಬಾಗ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್​

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದವರಿಗೆ ನೀವೇನು ಊಟ ಹಾಕಿಸೋ ಅಗತ್ಯತೆ ಇಲ್ಲ. ಆ ನೈತಿಕತೆಯೂ ನಿಮಗಿಲ್ಲ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ಅಹಂಕಾರದ ಪರಮಾವಧಿ. ಅವರು ಊಟ ಹಾಕುವುದಾದರೆ, ಈಗ ಹಲವು ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದಾರೆ. ಫುಟ್​ಪಾತ್​ನಲ್ಲಿರುವ ಕಾಂಗ್ರೆಸ್ ನವರಿಗೆ ಊಟ ಹಾಕಿಸಲಿ ಎಂದು ವಾಗ್ದಾಳಿ ನಡೆಸಿದರು.

ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಹೆದರಿದ್ದಾರೆ. ಅವರಿಗೆ ಈಗ ಉಳಿದುಕೊಂಡಿರುವುದು ಕನಕಪುರ ಕ್ಷೇತ್ರ ಒಂದೇ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಅಶೋಕ್​ ಟಾಂಗ್ ನೀಡಿದರು.

ಕಪಾಲಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ತೀವ್ರಗೊಂಡಿರೋದು ನಿಜ. ಒಂದೇ ಕೋಮಿಗೆ ಭೂಮಿ ಹಂಚಲಾಗುತ್ತಿದೆ. ಅಲ್ಲದೆ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ‌. ನಾವೆಲ್ಲ ಮುನೇಶ್ವರನ ಆರಾಧಕರು. ಡಿ.ಕೆ. ಶಿವಕುಮಾರ್ ಕೂಡ ಮುನೇಶ್ವರನ ಭಕ್ತರೇ. ಹಾಗಾಗಿ ಮುನೇಶ್ವರಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ‌. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಅಶೋಕ್​ ಸ್ಪಷ್ಟಪಡಿಸಿದರು.

ನಾನು ಕಂದಾಯ ಖಾತೆಯನ್ನು ಉಳಿಸಿಕೊಂಡು ಹೆಚ್ಚುವರಿಯಾಗಿರುವ ಪೌರಾಡಳಿತ ಖಾತೆಯನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಇದೇ ವೇಳೆ ಅಶೋಕ್​ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.